ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಕೆ. ವಾಮನ ನಾಯಕ್‌, ಪ್ರಾಯ 61 ವರ್ಷ, ತಂದೆ: ದಿ|| ಗೋವಿಂದ ನಾಯಕ್‌, ವಾಸ: ಶಾರದಾ ನಿವಾಸ, ಪರ್ಲಡ್ಕ, ಪುತ್ತೂರು ಕಸ್ಬಾ ಗ್ರಾಮ, ಪುತ್ತೂರು ತಾಲೂಕು  ರವರು ನೀಡಿದ ದೂರೇನೆಂದರೆ ದಿನಾಂಕ 08-02-2021 ರಂದು ಆರೋಪಿ ಮೋಟಾರ್‌ ಸೈಕಲ್‌ ಸವಾರ ವಿನ್ಯಾಸ್‌ ಡಿ.ಎಸ್‌ ಎಂಬವರು KA-21-EB-0719 ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲ್‌ನ್ನು ಪರ್ಲಡ್ಕ-ದರ್ಬೆ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಪರ್ಲಡ್ಕ ಕಡೆಯಿಂದ ದರ್ಬೆ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸ್ಬಾ ಗ್ರಾಮದ ಪರ್ಲಡ್ಕ ಎಂಬಲ್ಲಿ ಸರಕಾರಿ ಶಾಲೆಯ ಮುಂದುಗಡೆ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ಕೆ. ವರುಣ್‌ ಗೋವಿಂದ್‌ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಪರ್ಲಡ್ಕ ಕಡೆಯಿಂದ ದರ್ಬೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-K-3769 ನೇ ನೋಂದಣಿ ನಂಬ್ರದ ಸ್ಕೂಟರ್‌ಗೆ ಹಿಂದಿನಿಂದ ಅಪಘಾತವಾದ ಪರಿಣಾಮ, ಪಿರ್ಯಾದಿದಾರರು ಮತ್ತು ಸಹಸವಾರ ಸ್ಕೂಟರ್‌ ಸಮೇತ ರಸ್ತೆಗೆ ಬಿದ್ದು, ಪಿರ್ಯಾದುದಾರರಿಗೆ ಬಲಕಾಲಿನ ಕೋಲು ಕಾಲಿಗೆ ಗುದ್ದಿದ ಗಾಯ ಮತ್ತು ಸಹಸವಾರನಿಗೆ ಎರಡೂ ಕಾಲು ಮತ್ತು ಕೈಯ ಮೊಣಗಂಟಿಗೆ, ಸೊಂಟ ಹಾಗೂ ಬೆನ್ನಿಗೆ ಗುದ್ದಿದ ಗಾಯವಾಗಿ, ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ನಂತರ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾರೆ. ಆರೋಪಿ ಸವಾರನಿಗೂ ಗಾಯವಾಗಿರುತ್ತದೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  30/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ಳಾರೆ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಸತ್ಯನಾರಾಯಣ.ಸಿ.ಕೆ, ಪ್ರಾಯ 41 ವರ್ಷ, ತಂದೆ: ಕೊರಗಪ್ಪ ನಾಯ್ಕ, ವಾಸ: ಅಯ್ಯನಕಟ್ಟೆ ಮನೆ, ಬಾಳಿಲ ಗ್ರಾಮ, ಸುಳ್ಯ ತಾಲೂಕು ಈ ಪ್ರಕರಣದ ಸಾರಾಂಶವೇನೆಂದರೆ ದಿನಾಂಕ 08-02-2021 ರಂದು ಈ ಪ್ರಕರಣದ ಪಿರ್ಯಾದಿದಾರ ಪತ್ನಿ  ಶ್ರೀಮತಿ ಸತ್ಯವತಿಯವರು ಚಾಲಕರಾಗಿ ಹಾಗೂ ಪಿರ್ಯಾದಿದಾರರು ಪ್ರಯಾಣಿಕರಾಗಿ ಪಂಜ ಕಡೆಯಿಂದ ಅಯ್ಯನಕಟ್ಟೆ ಕಡೆಗೆ ಪ್ರಯಾಣಿಸುತ್ತಿದ್ದ ಮಾರುತಿ ಸಿಫ್ಟ್ ಕಾರು ನಂ KA21P-7078 ನೇಯದ್ದಕ್ಕೆ ಸುಳ್ಯ ತಾಲೂಕು ಬಾಳಿಲ ಗ್ರಾಮದ ಅಯ್ಯನಕಟ್ಟೆ ಎಂಬಲ್ಲಿ ಸಂಜೆ 5-30 ಗಂಟೆಗೆ ತಿಮ್ಮಪ್ಪ ಗೌಡ ಎಂಬವರು ಚೊಕ್ಕಾಡಿ ಕಡೆಯಿಂದ ನಿಂತಿಕಲ್ಲು ಕಡೆಗೆ ತನ್ನ ಬಾಬ್ತು ಮೋಟಾರು ಸೈಕಲ್ ನಂ KA21U-6798 ನೇಯದ್ದನ್ನು ಮುಖ್ಯರಸ್ತೆಯಲ್ಲಿ ಪಿರ್ಯಾದುದಾರರು ಪ್ರಯಾಣಿಸುತ್ತಿದ್ದ ಕಾರು ಬರುತ್ತಿರುವುದು ಕಾಣುತ್ತಿದ್ದರೂ, ನಿರ್ಲಕ್ಷ್ಯತನದಿಂದ ಏಕಾಏಕಿ ಕವಲು ರಸ್ತೆಯಿಂದ ಮುಖ್ಯ ರಸ್ತೆಗೆ ಮೋಟಾರು ಸೈಕಲ್ ನ್ನು ಸವಾರಿ ಮಾಡಿದ ಪರಿಣಾಮ ಮೋಟಾರು ಸೈಕಲ್ ಪಿರ್ಯದುದಾರರು ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಉಂಟಾಗಿ ಜಖಂ ಉಂಟಾಗಿರುವುದಲ್ಲದೇ ಮೋಟಾರು ಸೈಕಲ್ ಮಗುಚಿ ಬಿದ್ದು ಸವಾರ ತಿಮ್ಮಪ್ಪ ಗೌಡರಿಗೆ ಗಾಯ ಉಂಟಾಗಿರುತ್ತದೆ ಈ ಬಗ್ಗೆ ಬೆಳ್ಳಾರೆ  ಪೊಲೀಸ್ ಠಾಣೆ.  ಆ.ಕ್ರ 07/2021 ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 1

 

ಕಡಬ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮಹಮ್ಮದ್ ಅನೀಸ್ ಪ್ರಾಯ;41 ವರ್ಷ, ತಂದೆ: ಹಸೈನಾರ್‌ ವಾಸ: ನೂಜಿಲ ಮನೆ, ಕುಂತೂರು ಗ್ರಾಮ  ಪೆರಾಬೆ ಅಂಚೆ ಕಡಬ ತಾಲೂಕು ರವರು ಕುಂತೂರು ಪೇಟೆಯಲ್ಲಿ ದಿನಸಿ ಅಂಗಡಿ ವ್ಯಾಪಾರ ಮಾಡಿಕೊಂಡಿದ್ದು ದಿನಾಂಕ:08.02.2021 ರಂದು ಸಂಜೆ ಮನೆಗೆ ತೆರಳಿ ಮನೆಯ ಕುಟುಂಬದವರೊಂದಿಗೆ ರಾತ್ರಿ 10.00 ಗಂಟೆಗೆ ಊಟ ಮಾಡಿ ಮನೆಯ ಬಾಗಿಲುಗಳ ಚಿಲಕವನ್ನು ಹಾಕಿಕೊಂಡು ಪಿರ್ಯಾದುದಾರರು ಮತ್ತು ಅವರ ಪತ್ನಿ ಹಾಗೂ ಮಕ್ಕಳು ಮನೆಯ ಮೇಲಿನ ಮಾಳಿಗೆಯ ಕೋಣೆಯಲ್ಲಿ ಮಲಗಿಕೊಂಡಿದ್ದು ಮನೆಯ ಕೆಳನೆಲ ಮಾಳಿಗೆಯ ಒಂದು ಕೋಣೆಯಲ್ಲಿ ಪಿರ್ಯಾದಿಯ ತಾಯಿ ಹಾಗೂ ಮತ್ತೂಂದು ಕೋಣೆಯಲ್ಲಿ ಪಿರ್ಯಾದಿ ತಂದೆಯವರು ಮಲಗಿಕೊಂಡಿರುವಾಗ ರಾತ್ರಿ 02.00 ಗಂಟೆ ಸಮಯಕ್ಕೆ ಯಾರೋ ಕಳ್ಳರು ಮನೆಗೆ ನುಗ್ಗಿ ಕೋಣೆಯಲ್ಲಿ ಮಲಗಿಕೊಂಡಿದ್ದ ಪಿರ್ಯಾದುದಾರರ ತಾಯಿಯವರ ಕಾಲಿನ ಚೈನ್‌ನ್ನು ತೆಗೆಯುತ್ತಿರುವುದನ್ನು ಕಂಡು ಪಿರ್ಯಾದಿಯ ತಾಯಿ ಜೋರಾಗಿ ಬೊಬ್ಬೆ ಹಾಕಿದಾಗ ಯಾರೋ ಕಳ್ಳರು ಮನೆಯಿಂದ ಓಡಿ ಹೋಗಿರುತ್ತಾರೆ. ನಂತರ ನೋಡಲಾಗಿ ಪಿರ್ಯಾದುದಾರರ ತಾಯಿಯವರು ಬಲಕಾಲಿಗೆ ಧರಿಸಿದ್ದ 20 ಗ್ರಾಂ ತೂಕದ ಚಿನ್ನದ ಸರ ಮತ್ತು ತಾಯಿಯವರು ಮಲಗಿದ್ದ ಕೋಣೆಯಲ್ಲಿ ಗೋಡೆಗೆ ನೇತುಹಾಕಿದ್ದ 60 ಗ್ರಾಂ ತೂಕದ ಚಿನ್ನದ ಕುತ್ತಿಗೆ ಸರ ಮತ್ತು ಮನೆಯ ಮೇಲಿನ ಮಾಳಿಗೆಯಲ್ಲಿ  ಪಿರ್ಯಾದುದಾರರ ಪತ್ನಿಯು ಧರಸಿದ್ದ 20 ಗ್ರಾಂ ತೂಕದ ಕುತ್ತಿಗೆಯ ಚಿನ್ನದ ಸರವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿರುತ್ತದೆ. ಹಾಗೂ ಪಿರ್ಯಾದಿಯ ಪಕ್ಕದ ಮನೆಯ ನಿವಾಸಿಯಾದ ಸೈಮನ್‌ ಎಂಬವರ ಮನೆಯಲ್ಲಿ 5000/- ಹಣವನ್ನು ಕಳವು ಮಾಡಿರುವುದಾಗಿರುತ್ತದೆ. ಕಳವಾದ ಚಿನ್ನಾಭರಣಗಳ ಒಟ್ಟು ತೂಕ 100 ಗ್ರಾಂ ಆಗಿದ್ದು ಅಂದಾಜು ಮೌಲ್ಯ 2.40.000/-ಆಗಬಹುದು  ಒಟ್ಟು ಕಳುವಾದ ಅಂದಾಜು ಮೌಲ್ಯ 2,45,000 ರೂ ಆಗುತ್ತದೆ ಈ ಬಗ್ಗೆ ಕಡಬ ಠಾಣಾ ಅ.ಕ್ರ 12/2021 ಕಲಂ 457, 380 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶಿವರಾಜ್ ಪ್ರಾಯ:31 ವರ್ಷ ತಂದೆ: ದಿ| ಸೀತಾರಾಮ ಪೂಜಾರಿ ವಾಸ: ಮಂಡಾಡಿ ಮನೆ, ಬಿ ಕಸಬಾ ಗ್ರಾಮ ಬಂಟ್ವಾಳ ತಾಲೂಕು ರವರು ಹೋಟೇಲ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ಪಿರ್ಯಾದಿದಾರರ ತಂದೆಯ ಅಕ್ಕನ ಮಗನಾದ ನೀರಜ್ @ ನೀಲಯ್ಯ ಪ್ರಾಯ:32 ವರ್ಷ ತಂದೆ: ದಿ| ಶಾಂತಪ್ಪ ಪೂಜಾರಿ ವಾಸ:ಪಂತಡ್ಕ ಕೊಡಾಜೆ ಮನೆ, ನೆಟ್ಲ ಮುಡ್ನೂರು ಗ್ರಾಮ ಬಂಟ್ವಾಳ ತಾಲೂಕು ನು ಆತನ ತಾಯಿಗೆ ಉದರಸೋಲೆ ಬಂದ ಬಗ್ಗೆ ದೇರಳಕಟ್ಟೆ ಆಸ್ಪತ್ರೆಯಲ್ಲಿ ದಾಖಲಿಸಿ ದಿ:08-02-2021 ರಂದು ಸಂಜೆ 4.00 ಗಂಟೆಗೆ ಆಸ್ಪತ್ರೆಯಿಂದ ಹೊರಡುವಾಗ ಆಸ್ಪತ್ರೆಯಲ್ಲಿದ್ದ ಸ್ವಪ್ನಳಿಗೆ ತಾಯಿ ಇನ್ನು ಬದುಕುವ ಬಗ್ಗೆ ಖಾತ್ರಿಯಿಲ್ಲ ಎಂದು ತಿಳಿಸಿರುತ್ತಾನೆ. ಬಳಿಕ ರಾತ್ರಿ 7.24 ಗಂಟೆಗೆ ಸ್ವಪ್ನಳಿಗೆ ಕರೆ ಮಾಡಿರುತ್ತಾನೆ. ಆದಾದ ಬಳಿಕ ಈತನು ತಾಯಿ ಬದುಕಿ ಉಳಿಯುವ ಸಾಧ್ಯತೆ ಕಡಿಮೆಯೆಂದು ತಿಳಿದು ಜೀವನದಲ್ಲಿ ಜಿಗುಪ್ಸೆಗೊಂಡು ದಿ:08-02-2021 ಸಂಜೆ 7.25 ರಿಂದ ದಿನಾಂಕ: 09-02-2021 ರ ಬೆಳಿಗ್ಗೆ 9.00 ಗಂಟೆಯ ಮಧ್ಯೆ ಬಿ ಮೂಡ ಗ್ರಾಮದ ನೇತ್ರಾವತಿ ನದಿ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 06-2021 ಕಲಂ  174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವಿಟ್ಲ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಭರತ್‌ಕುಮಾರ್ ಪ್ರಾಯ 28 ವರ್ಷ ತಂದೆ:ನಾರಾಯಣ ನಾಯ್ಕ್‌ ವಾಸ:ಕೊಜಪ್ಪ ಮನೆ, ಬೆರಿಪದವು ಅಂಚೆ ಬಾಯಾರು ಗ್ರಾಮ ಕಾಸರಗೂಡು ಜಿಲ್ಲೆ ರವರ ಮಾವ ಮಹಾಲಿಂಗ ನಾಯ್ಕ(63)ರವರು ಕಳೆದ 20 ವರ್ಷಗಳಿಂದ ಅಡಿಕೆ ಕೂಯ್ಯುವ ಕೆಲಸವನ್ನು ಮಾಡಿಕೊಂಡಿದ್ದವರು ದಿನಾಂಕ:08-02-2021 ರಂದು ಮಹಾಲಿಂಗ್‌ ನಾಯ್ಕ್‌ ರವರು ಬಂಟ್ವಾಳ ತಾಲೂಕು ಪುಣಚ ಗ್ರಾಮದ ಪೊಯ್ಯಮೂಲೆ ಎಂಬಲ್ಲಿನ ತಮ್ಮ ಅಡಿಕೆ ತೋಟದಲ್ಲಿ ಅಡಿಕೆ ಕೊಯ್ಯೂತ್ತಿರುವ ಸಮಯ  ಅಡಿಕೆ ಮರದಿಂದ ಆಕಸ್ಮಿಕವಾಗಿ ನೆಲಕ್ಕೆ ಬಿದ್ದು ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಆದರ್ಶ ಆಸ್ವತ್ರೆಗೆ ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಎ ಜೆ ಆಸ್ವತ್ರೆಗೆ ಕರೆದು ಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿದ್ದು  ಗಾಯಾಳು ಚಿಕಿತ್ಸೆ ಪಡೆಯುತ್ತಿರುವ ಸಮಯ ದಿನಾಂಕ:09.02.2021 ರಂದು ಮೃತಪಟ್ಟಿರುತ್ತಾರೆ ಈ ಬಗ್ಗೆ ವಿಟ್ಲ ಠಾಣಾ ಯು ಡಿ ಅರ್ ನಂಬ್ರ 05/2021  ಕಲಂ 174   ಸಿ ಅರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 10-02-2021 02:54 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080