ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರೋಹಿತ್ (18), ತಂದೆ:ಲಿಂಗಪ್ಪ ನಾಯ್ಕ  ವಾಸ: ಪಣಿಕಲ್ ಮನೆ, ಕಡಿರುದ್ಯಾವರ ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ: 24-02-2021 ರಂದು ತನ್ನ ಬಾಬ್ತು ಮೋಟಾರು ಸೈಕಲ್ ನಂಬ್ರ ಕೆಎ 70 ಹೆಚ್ 4138 ನೇದರಲ್ಲಿ ಸಹ ಸವಾರರನ್ನಾಗಿ ಅಪ್ಪು ನಾಯ್ಕರವರನ್ನು ಕುಳ್ಳುರಿಸಿಕೊಂಡು, ಮುಂಡಾಜೆ ಉಜಿರೆ ರಸ್ತೆಯಲ್ಲಿ ಉಜಿರೆ ಕಡೆಗೆಸವಾರಿ ಮಾಡಿಕೊಂಡು ಹೋಗುತ್ತಿರುವ  ಸಮಯ ಸುಮಾರು ಬೆಳಿಗ್ಗೆ 11-30 ಗಂಟೆಗೆ ಬೆಳ್ತಂಗಡಿ ತಾಲೂಕು ಮುಂಡಾಜೆ ಗ್ರಾಮದ ಸೋಮಂತಡ್ಕ ಎಂಬಲ್ಲಿಗೆ ತಲುಪುತ್ತಿದ್ದಂತೆ, ಪಿರ್ಯಾದಿದಾರರ  ಹಿಂದಿನಿಂದ ಅಂದರೆ ಮುಂಡಾಜೆ ಕಡೆಯಿಂದ ಉಜಿರೆ ಕಡೆಗೆ ಕೆಎ 01 ಎಂಸಿ 5957 ನೇ ಬೊಲೆರೋ ಜೀಪನ್ನು ಅದರ ಚಾಲಕ ದುಡುಕುತನದಿಂದ ಒಮ್ಮೆಲೇ ಚಲಾಯಿಸಿ, ಪಿರ್ಯಾದಿದಾರರ ಮೋಟಾರು ಸೈಕಲ್ಲಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ , ಹಿಂಬದಿ ಸವಾರ ಅಪ್ಪು ನಾಯ್ಕ ರಿಗೆ, ಬಲ ಕೋಲು ಕಾಲಿಗೆ,  ಬಲ ಕೋಲು ಕೈಗೆ ಗುದ್ದಿದ ರಕ್ತ ಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ಮಂಗಳೂರು  ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 13/2021, ಕಲಂ; 279,337 ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕೊಲೆ ಬೆದರಿಕೆ ಪ್ರಕರಣ: 1

ಪುತ್ತೂರು ನಗರ  ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ವಿಠಲ್ ಶೆಟ್ಟಿ ಪ್ರಾಯ: 76 ವರ್ಷ, ತಂದೆ: ಅಮ್ಮು ಶೆಟ್ಟಿ, ವಾಸ: ಉರಮಾಲು ಮನೆ, ಚಿಕ್ಕಮುಡ್ನೂರು ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ಫಿರ್ಯಾದಿರವರು ದಿನಾಂಕ 12.02.2021ರಂದು ಬೆಳಿಗ್ಗೆ  8.00 ಗಂಟೆಗೆ ತನ್ನ ಹೆಂಡತಿಯೊಂದಿಗೆ ಅಡಿಕೆ ತೋಟಕ್ಕೆ ಹೋಗಿ ವಾಪಸು ಬರುವ ಸಮಯ ಆರೋಪಿ ಅನಿತಾ ಬಾಲಕೃಷ್ಣ ಭಂಡಾರಿ ಇವರು ಜೆಸಿಬಿ ಯಂತ್ರವನ್ನು ತರಿಸಿ ಫಿರ್ಯಾದಿದಾರರ ಭೂಮಿಗೆ ಅತಿಕ್ರಮಣ ಮಾಡಿ ಜೆಸಿಬಿಯಿಂದ ಕೆಲಸ ಮಾಡಿಸಿದ್ದು, ಫಿರ್ಯಾದಿದಾರರು ಆಕ್ಷೇಪಿಸಿದಾಗ ಜೆಸಿಬಿ ಕೆಲಸಗಾರನು ಕೆಲಸವನ್ನು ನಿಲ್ಲಿಸಿದ್ದು,  ನಂತರ ಸುಮಾರು   9.15 ಗಂಟೆಗೆ ಆರೋಪಿಯು ಇತರರೊಂದಿಗೆ ,ಕತ್ತಿ, ಪಿಕಾಸಿ, ಕಬ್ಬಿಣದ ರಾಡ್‌ ಹಿಡಿದು ಬಂದು ಮತ್ತೆ ಜೆಸಿಬಿಯನ್ನು ತರಿಸಿ ಕೆಲಸವನ್ನು ಪ್ರಾರಂಭಿಸಿದ್ದು, ಇದಕ್ಕೆ ಫಿರ್ಯಾದಿದಾರರು ಆಕ್ಷೇಪಿಸಿದಾಗ ಆರೋಪಿಯು ಬೆದರಿಕೆ ಹಾಕಿದ್ದು,  ನಂತರ ದಿನಾಂಕ 16.02.2021 ರಂದು ಮಧ್ಯಾಹ್ನ 1.45 ಗಂಟೆಗೆ ಫಿರ್ಯಾದಿದಾರರು ಮನೆಯ ಹೊರಾಂಗಣದಲ್ಲಿ ಕುಳಿತಿರುವ ಸಮಯ,  ಕಾರು ನಂಬ್ರ KA 19 MJ 7996 ನೇ ಕಾರಿನಲ್ಲಿ ಆರೋಪಿ ಮತ್ತೆ   ಫಿರ್ಯಾದಿದಾರರ ಜಾಗಕ್ಕೆ ಬಂದಾಗ ಫಿರ್ಯಾದಿದಾರರು  ಎದ್ದು ಮನೆಯ ಒಳಗೆ ಹೋಗಲು ಪ್ರಯತ್ನಿಸಿದಾಗ  ಆರೋಪಿ ಕಾರಿನಿಂದ ಇಳಿದು ಫಿರ್ಯಾದಿದಾರರನ್ನು ತಡೆದು, ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು , ನಿನ್ನನ್ನು ಮತ್ತು ನಿನ್ನ ಹೆಂಡತಿಯನ್ನು ಕೊಲ್ಲದೇ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಪುತ್ತೂರು ನಗರ  ಪೊಲೀಸ್ ಠಾಣೆ  ಅ.ಕ್ರ: 11/2021  ಕಲಂ:447, 341,504,506 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 25-02-2021 10:30 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080