ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

ಪುಂಜಾಲಕಟ್ಟೆ ಪೊಲೀಸ್ ಠಾಣೆ: ದಿನಾಂಕ: 06.07.2021 ರಂದು ಪಿರ್ಯಾದಿದಾರರಾದ ವಿಘ್ನೇಶ್ ಆಚಾರ್ಯ, ಪ್ರಾಯ: 22 ವರ್ಷ, ತಂದೆ: ಶ್ರೀಧರ ಆಚಾರ್ಯ, ವಾಸ; ಹರ್ಷಿತಾ ನಿಲಯ, ನಯನಾಡು ಅಂಚೆ, ಪಿಲಾತಬೆಟ್ಟು ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರು ತನ್ನ ತಂದೆಯ ಬಾಬ್ತು KA19Q7142 ನೇ ಬಜಾಜ್ M80 ದ್ವಿಚಕ್ರ ವಾಹನದಲ್ಲಿ ತಂದೆ ಶ್ರೀಧರ ಆಚಾರ್ಯ ಎಂಬವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಮನೆಯಿಂದ ಅಗತ್ಯ ಕೆಲಸದ ನಿಮಿತ್ತ ಪುಂಜಾಲಕಟ್ಟೆಗೆ ಹೊರಟು ಸಮಯ ಸುಮಾರು 09.00 ಗಂಟೆಗೆ ಬಂಟ್ವಾಳ ತಾಲೂಕು ಪಿಲಾತಬೆಟ್ಟು ಗ್ರಾಮದ ಪುಂಜಾಲಕಟ್ಟೆ ಸರಕಾರಿ ಅಸ್ಪತ್ರೆ ಹತ್ತಿರ ತಲುಪುತ್ತಿದ್ದಂತೆ ಎದುರಿನಿಂದ ಹೋಗುತ್ತಿದ್ದ ಆಟೋ ರಿಕ್ಷಾ ನಂಬ್ರ  KA21B7395 ನೇದನ್ನು ಅದರ ಚಾಲಕ ಆದಂ ಎಂಬವರು ಯಾವುದೇ ಮುನ್ಸೂಚನೆ ನೀಡದೇ ನಿರ್ಲಕ್ಷ್ಯತನದಿಂದ ಒಮ್ಮೆಲೇ ಬಲಕ್ಕೆ ತಿರುಗಿಸಿದ ಪರಿಣಾಮ ಪಿರ್ಯಾದಿದಾರರು ಸವಾರಿ ಮಾಡಿಕೊಂಡು ಬರುತ್ತಿದ್ದ ದ್ವಿಚಕ್ರ ವಾಹನ ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಹಾಗೂ ಸಹ ಸವಾರ ರಸ್ತೆಗೆ ಬಿದ್ದು, ಸಹಸವಾರರಿಗೆ ಎಡಕಾಲಿಗೆ ಗುದ್ದಿದ ನೋವು ಉಂಟಾಗಿ ಚಿಕಿತ್ಸೆ ಬಗ್ಗೆ ತುಂಬೆ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 41/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಉಪ್ಪಿನಂಗಡಿ ಪೊಲೀಸ್ ಠಾಣೆ: ದಿನಾಂಕ; 09-07-2021ರಂದು ಬೆಳಿಗ್ಗೆ 09.00ಗಂಟೆ ಸಮಯಕ್ಕೆ ಕಡಬ ತಾಲೂಕು ಶಿರಾಡಿ ಗ್ರಾಮದ ಪರೋಟಿ ಎಂಬಲ್ಲಿ ಪಿರ್ಯಾದಿದಾರರಾದ ಅಮಿತ್‌ ಆಚಾರ್‌. ವಿ, ಪ್ರಾಯ 43 ವರ್ಷ ತಂದೆ. ಬಿ.ವಿ.ಆಚಾರ್‌, ವಾಸ:  ನಂಬ್ರ: 298 4 ನೇ ಮುಖ್ಯ ರಸ್ತೆ,  ಇಸ್ರೋ ಲೇ ಔಟ್‌ ಬೆಂಗಳೂರು ಎಂಬವರು ತನ್ನ ಬಾಬ್ತು ಕಾರು ಮಹೇಂದ್ರ xuv500  KA 05 MU 8414 ನೇ ಕಾರಿನಲ್ಲಿ ನನ್ನ ತಾಯಿ  ನಿರ್ಮಲಾ ಬಿ ಆಚಾರ್‌,  ಪತ್ನಿ ರೇಖಾ ಅಮಿತ್‌  ರವರನ್ನು ಕುಳ್ಳಿರಿಸಿಕೊಂಡು ಬೆಂಗಳೂರಿನಿಂದ ಹೊರಟು ಕಾರನ್ನು  ಬೆಂಗಳೂರು–ಮಂಗಳೂರು ರಾ.ಹೆ.75 ರಲ್ಲಿ ಚಲಾಯಿಸಿಕೊಂಡು ಬರುತ್ತಿರುವಾದ ಮಂಗಳೂರು ಕಡೆಯಿಂದ  ಬೆಂಗಳೂರು ಕಡೆಗೆ ಕೆಎ 41 ಎಂಸಿ 8618 ನೇ ಹುಂಡೈ ಕಾರು ನೇದನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸಿಕೊಂಡು ಬರುತ್ತಿದ್ದು ಕಾರಿಗೆ ಡಿಕ್ಕಿ  ಹೊಡೆದು ಎರಡೂ ವಾಹನಗಳ ಮುಂಭಾಗ ಜಖಂಗೊಂಡಿರುವುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 65/2021 ಕಲಂ:279, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಜೀವ ಬೆದರಿಕೆ ಪ್ರಕರಣ: 1

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಡಾ|| ಪುಷ್ಪಲತಾ, ಆಡಳಿತ ವೈದ್ಯಾಧಿಕಾರಿಯವರು ತಾಲೂಕು ಆಸ್ಪತ್ರೆ ಬಂಟ್ವಾಳ ರವರ ದೂರಿನಂತೆ ದಿನಾಂಕ: 08.07.2021 ರಂದು ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ  ಸಂಜೆ 16:30 ಗಂಟೆಯಿಂದ ಡಾ|| ಕಿಶೋರ್ ರವರು ಕರ್ತವ್ಯ ನಿರತ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ಸದ್ರಿ ಆಸ್ಪತ್ರೆಯಲ್ಲಿ ಈಗಾಗಲೇ ಹೆರಿಗೆಗೆಂದು ಒಳರೋಗಿಯಾಗಿ ದಾಖಲಾಗಿದ್ದ ಫಾತಿಮಾ ಸಿಯಾನಾ ಎಂಬವರ ಗಂಡ ಉಮ್ಮರ್ ಫಾರೂಕ್ ರವರು ರಾತ್ರಿ ಸಮಾರು 11:00 ಗಂಟೆಗೆ ಆಸ್ಪತ್ರೆಯ ಒಳಗೆ ಬಂದು ತನ್ನ ಹೆಂಡತಿಯನ್ನು ನೋಡಬೇಕು ಒಳಗೆಬಿಡಿ ಎಂದು ಡಿ ದರ್ಜೆಯ  ನೌಕರರಾದ ದಾಮೋದರ್ ರವರನ್ನು ಕೇಳಿದ್ದು,  ದಾಮೋದರ್ ರವರು ರಾತ್ರಿ ಸಮಯ ಮಹಿಳೆಯ ವಾರ್ಡ್ ಗೆ  ಹೋಗಲು ಅವಕಾಶ ಇರುವುದಿಲ್ಲ ಎಂಬುದಾಗಿ ತಿಳಿಸಿದಾಗ ಉಮ್ಮರ್ ಫಾರೂಕ್ ರವರು ದಾಮೋದರ್ ರವರನ್ನು ಕೈಯಿಂದ ದೂಡಿ ಒಳಗೆ ಹೋಗಿರುತ್ತಾನೆ. ಬಳಿಕ ದಾಮೋದರ್ ರವರು ಕರ್ತವ್ಯ ನಿರತ ವೈದ್ಯರಾದ ಡಾ|| ಕಿಶೋರ್ ರವರಿಗೆ ತಿಳಿಸಿದಾಗ ವೈದ್ಯರು ಬಂದು ರಾತ್ರಿ ಸಮಯದಲ್ಲಿ ಹೆರಿಗೆ ವಾರ್ಡ್ ಗೆ ಹೋಗಲು ಅವಕಾಶ ಇರುವುದಿಲ್ಲ ಎಂದು ಹೇಳಿದಾಗ ಆತನು ಅವಾಚ್ಯ ಶಬ್ದಗಳಿಂದ ಬೈದು ನಿಮಗೆ ಯಾಕೆ ಒಳಗೆ ಬಿಡಲು ಆಗುವುದಿಲ್ಲ ನಾನು ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಕೈಯಿಂದ ದೂಡಿದಾಗ ಅಲ್ಲೇ ಇದ್ದ ಶುಶೂಕಿಯವರಾದ ಪ್ರಭಾವತಿ, ಜಲಜ ಮತ್ತು ದಾಮೋದರ್ ಹಾಗೂ ಆತನ ಹೆಂಡತಿ ಹಲ್ಲೆ ಮಾಡದಂತೆ ತಡೆದಿರುತ್ತಾರೆ. ಬಳಿಕ ವೈದ್ಯರಿಗೆ ನೀನು ಹೊರಗೆ ಬಾ ನಿನ್ನನ್ನು ನೋಡಿಕೊಳ್ಳುತ್ತೇನೆ. ಎಂಬುದಾಗಿ ಬೆದರಿಕೆ ಹಾಕಿ ಹೋಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 78/2021  ಕಲಂ: 323, 504, 506, 353  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

ಸುಬ್ರಹ್ಮಣ್ಯ ಪೊಲೀಸ್ ಠಾಣೆ : ದಿನಾಂಕ 08-07-2021 ರಂದು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ  ಕಲಂ; 354(A), 506 IPC , ಕಲಂ: 8, 12 ಪೋಕ್ಸೋ ಕಾಯ್ದೆ-2012 ಹಾಗೂ ಕಲಂ:3(1)(w)(i) SC/ST PA Amandment Act -2015 ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 10-07-2021 12:03 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080