Feedback / Suggestions

ಅಪಘಾತ ಪ್ರಕರಣ: 1

ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮಹಮ್ಮದ್ ಶಾಫಿ ಪ್ರಾಯ 38 ವರ್ಷ ತಂದೆ: ಅಂದುಞ ಬ್ಯಾರಿವಾಸ: ಜೋಗಿಮಠ ಗಮಿ ಮನೆ ವಿಟ್ಲ ಕಸಬಾ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಫಿರ್ಯಾದುದಾರರು ದಿನಾಂಕ: 02-06-2021 ರಂದು ವಿಟ್ಲ ಪೇಟೆಯ  ಅಂಗಡಿಗೆ ಬಂದು ತನ್ನ ನೆರೆಕರೆಯವರ ಮರಣದ ಕಾರ್ಯಕ್ರಮಕ್ಕೆ ತನ್ನ ಬಾಬ್ತು ಮಾರುತಿ ಓಮಿನಿ ವಾಹನದಲ್ಲಿ ಹೊರಟು ನೀರಕಣಿ- ಸೇರಾಜೆ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ವಾಹನವನ್ನು ಚಲಾಯಿಸಿಕೊಂಡು ಹೋಗುತ್ತಿರುವ ಸಮಯ ಬೆಳಗ್ಗೆ ಸುಮಾರು 09-00 ಗಂಟೆಗೆ ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಸೇರಾಜೆ ಎಂಬಲ್ಲಿಗೆ ತಲುಪಿದಾಗ ತನ್ನ ವಾಹನದಿಂದ ಸುಮಾರು 15 ಅಡಿ ಮುಂದುಗಡೆ ಒಂದು ಕೆಎ 19 ಇಎಮ್ 6619 ನೇ ಮಾಸ್ಟ್ರೋ ದ್ವಿಚಕ್ರ ವಾಹನದಲ್ಲಿ ಅದರ ಸವಾರ ಫಿರ್ಯಾದುದಾರರ ಪರಿಚಯದ ರುಫಿನಾ ಕೋಸೆಸ್ ಪಿಂಟೋ ರವರನ್ನು  ಸಹಸವಾರರಾಗಿ ಕುಳ್ಳಿರಿಸಿ  ದ್ವಿಚಕ್ರ ವಾಹನವನ್ನು ಒಮ್ಮೆಲೆ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿದ ಪರಿಣಾಮ ಸಹಸವಾರರಾಗಿ ಕುಳಿತಿದ್ದ ರುಫಿನಾ ಕೋಸೆಸ್ ಪಿಂಟೋ ರವರು ಹತೋಟಿ ತಪ್ಪಿ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದವರನ್ನು ಆರೈಕೆ ಮಾಡಿ ನೋಡಿದಾಗ ತಲೆಯ ಹಿಂಬದಿ , ಬಾಯಿಗೆ , ಹಣೆಯ ಎದುರು ಭಾಗ ತೀವ್ರ ತರವಾದ ಗಾಯಗೊಂಡು ಅವರು ಮಾತನಾಡುವ ಸ್ಥಿತಿಯಲ್ಲಿಲ್ಲದವರನ್ನು ಗಾಯಾಳುವಿನ ತಮ್ಮ ಸಿರಿಲ್ ಪಿಂಟೋ ರವರು ವಾಹನವೊಂದರಲ್ಲಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿರುತ್ತಾರೆ.ನಂತರ ಗಾಯಾಳು ರುಫಿನಾ ಕೋಸೆಸ್ ಪಿಂಟೋರವರು ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆಯಲ್ಲಿದ್ದು ಚಿಕಿತ್ಸೆ  ಫಲಕಾರಿಯಾಗದೇ ಈ ದಿನ ದಿನಾಂಕ: 04-06-2021 ರಂದು 18-30 ಗಂಟೆಗೆ ಮೃತಪಟ್ಟ ಬಗ್ಗೆ ನನಗೆ ಸಿರಿಲ್ ಪಿಂಟೋರವರಿಂದ ತಿಳಿದು ಬಂದು ಅಪಘಾತದ ಬಗ್ಗೆ ಕಾನೂನಿನ ಅರಿವು ತಿಳಿಯದ ಕಾರಣ ಈ ದಿನ ಮಹಮ್ಮದ್ ಶಾಫಿ ರವರೊಂದಿಗೆ ಬಂದು ತಡವಾಗಿ ದೂರು ನೀಡಿರುವುದಾಗಿದೆ.ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 77/2021  ಕಲಂ: 279,304(ಎ) ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

ಬಂಟ್ವಾಳ ನಗರ ಪೊಲೀಸ್ ಠಾಣೆ : ದಿನಾಂಕ 04.06.2021 ರಂದು ಸಮಯ ಬೆಳಿಗ್ಗೆ 10.30 ಗಂಟೆಗೆ ಪಾಣೆಮಂಗಳೂರು ಗ್ರಾಮದ ಮೆಲ್ಕಾರ್ ಎಂಬಲ್ಲಿ NEW M3 HARDWARE & ELECRICALS ಅಂಗಡಿಯ ಮಾಲೀಕನು ಅಂಗಡಿಯನ್ನು ತೆರೆದು ಕೋವಿಡ್‌ 19  ಸಾಂಕ್ರಾಮಿಕ ರೋಗವನ್ನು ತಡೆಯುವ ನಿಮಿತ್ತ ಹೊರಡಿಸಲಾಗಿರುವ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಸಾಮಾಜಿಕ ಅಂತರವನ್ನು ಕಾಪಾಡದೇ ವ್ಯಾಪಾರವನ್ನು ಮಾಡುತ್ತಿರುವುದು ಕಂಡು ಬಂದಿದ್ದು, ಆತನ ಹೆಸರು ವಿಳಾಸ ಕೇಳಲಾಗಿ ಅಬ್ದುಲ್ ಜಬ್ಬಾರ್ ಪ್ರಾಯ:32 ವರ್ಷ ತಂದೆ: ಅಹಮ್ಮದ್ ವಾಸ: ಪಲ್ಲಮಜಲು ಮನೆ, ಬಿ ಮೂಡ ಗ್ರಾಮ ಮೊಡಂಕಾಪು ಅಂಚೆ ಬಂಟ್ವಾಳ ತಾಲೂಕು ಆಗಿರುತ್ತದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣಾ ಅಕ್ರ:64/2021 ಕಲಂ: 5(1) ಕರ್ನಾಟಕ ಸಾಂಕ್ರಾಮಿಕ ರೋಗಗಳ ಆಧ್ಯಾದೇಶ ಕಾಯ್ದೆ.ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಬೆಳ್ಳಾರೆ ಪೊಲೀಸ್ ಠಾಣೆ : ದಿನಾಂಕ 04-06-2021 ರಂದು ಪಂಚರೊಂದಿಗೆ 17-00 ಗಂಟೆಗೆ ಸುಳ್ಯ ತಾಲೂಕು ಅಮರಪಡ್ನೂರು ಗ್ರಾಮದ ಅಲಗಿನಡ್ಕ ಎಂಬಲ್ಲಿ ಸರಕಾರಿ ಸ್ಥಳದಲ್ಲಿ ಅಕ್ರಮವಾಗಿ ಕೋಳಿ ಅಂಕ ಜೂಜಾಟ ನಡೆಸುತ್ತಿದ್ದಾಗ ಧಾಳಿ ನಡೆಸಿದ ಬೆಳ್ಳಾರೆ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷರಾದ ಶ್ರೀ ಆಂಜನೇಯ ರೆಡ್ಡಿ ಜಿವಿ, ಹಾಗೂ ಸಿಬ್ಬಂದಿಗಳು ಅಕ್ರಮ ಕೋಳಿ ಅಂಕ ಜೂಜಾಟದಲ್ಲಿ ನಿರತರಾಗಿದ್ದವರ ಪೈಕಿ ನವೀನ್ ಕುಮಾರ್, 48 ವರ್ಷ, ತಂದೆ: ಗುಡ್ಡಪ್ಪ ಗೌಡ, ವಾಸ: ನಡುಗಲ್ಲು ಮನೆ, ಅಮರಪಡ್ನೂರು ಗ್ರಾಮ, ಸುಳ್ಯ ತಾಲೂಕುರವರನ್ನು ವಶಕ್ಕೆ ಪಡೆದುಕೊಂಡು ಜೂಜಾಟಕ್ಕೆ ಬಳಸಿದ ವಿವಿಧ ಬಣ್ಣ, ಗಾತ್ರದ ಹುಂಜ ಕೋಳಿಗಳು-2, ಇವುಗಳ ಅಂದಾಜು ಮೌಲ್ಯ ರೂ 1,000/- ಕೋಳಿ ಕಾಲುಗಳಿಗೆ ಕಟ್ಟಿದ ಬಾಳುಗಳು-2, ಬಾಳು ಕಟ್ಟಲು ಉಪಯೋಗಿಸಿದ ನೂಲುಗಳು-2, ಸ್ಥಳದಲ್ಲಿದ್ದ ದ್ವಿ-ಚಕ್ರ ವಾಹನ ನಂ KA21W3839 ಮೌಲ್ಯ ರೂ 30,000/- ನ್ನು ಪಂಚರ ಸಮಕ್ಷಮ 17-15 ಗಂಟೆಯಿಂದ 18-15 ಗಂಟೆಯ ವರೆಗೆ ಮಹಜರು ನಡೆಸಿ ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ವಶಕ್ಕೆ ಪಡೆದ ಆರೋಪಿ ಹಾಗೂ ಸ್ವತ್ತುಗಳನ್ನು ಹಾಜರುಪಡಿಸಿ ವಶಕ್ಕೆ ಪಡೆದ ಹಾಗೂ ದಾಳಿಯ ವೇಳೆ ಓಡಿ ಪರಾರಿಯಾದ ಆರೋಪಿಗಳಾದ 1) ನಿತಿನ್ ಪಡ್ಪು, ತಂದೆ: ಬೆಳಿಯಪ್ಪ ಗೌಡ, ಅಮರ ಪಡ್ನೂರು ಗ್ರಾಮ, 2) ದಾಸಪ್ಪ ಗೌಡ ಮುಲ್ಕುಂಜ, 3) ಬಾಬು ಪೂಜಾರಿ ಬಿನ್: ಶೀನಪ್ಪ ಪೂಜಾರಿ, ವಾಸ: ಕೆಬುಲಾಡಿ, 4) ಸಹನ್ ಕುಮಾರ್ @ ಮುನ್ನ, ಬಿನ್: ಜಗದೀಶ ರೈ, ವಾಸ: ಹೊಸಮನೆ, ಮುಪ್ಪೇರಿಯ ಗ್ರಾಮ, ಸುಳ್ಯ ತಾಲೂಕು. 5) ವಿಜೇತ್, ಬಿನ್: ಬಾಲಕೃಷ್ಣ, ವಾಸ: ಕೊಳಂಬೆ ಮನೆ ಅಮರಪಡ್ನೂರು ಗ್ರಾಮರವರು ಕೋವಿಡ್-19 ಗೆ ಸಂಬಂಧಿಸಿದ ಲಾಕ್ ಡೌನ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಸಾಂಕ್ರಾಮಿಕ ರೋಗ ಹರಡಬಹುದೆಂಬುದಾಗಿ ತಿಳಿದಿದ್ದರೂ ನಿರ್ಲಕ್ಷ್ಯವಹಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ, ಹಾಗೂ ಮಾಸ್ಕ್ ಧರಿಸದೇ ಗುಂಪಾಗಿ ಸೇರಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಜೂಜಾಟದಲ್ಲಿ ತೊಡಗಿದ್ದುದರಿಂದ ವಶಕ್ಕೆ ಪಡೆದುಕೊಂಡ ಆರೋಪಿ ಹಾಗೂ ಓಡಿ ಪರಾರಿಯಾದ ಆರೋಪಿಗಳ ವಿರುದ್ದ ಬೆಳ್ಳಾರೆ ಪೊಲೀಸ್ ಠಾಣಾ  ಅಕ್ರ 28/2021 ಕಲಂ 87 KP Act & ಕಲಂ  269 IPC & Sec 5(4) The Karnataka Epidemic Diseases Act 2020 ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 2

ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪ್ರಜ್ವಲ್ ಎಂ ಆರ್ (23) ತಂದೆ: ರಾಜೇಶ್ ನಾಥ್ ವಾಸ: ದೇಶಕೋಡಿ ಮನೆ, ಮರ್ಕಂಜ ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರ ಚಿಕ್ಕಪ್ಪ ನಿತೀಶ್ ಎಂ ಆರ್ (32) ತಂದೆ: ದಿ, ರಘುನಾಥ, ಎಂಬವನು ಮಾನಸಿಕ ಒತ್ತಡದಿಂದ ಬಳಲುತ್ತಿದ್ದು, ಕಳೆದ ಒಂದು ವರ್ಷದಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು,  ದಿನಾಂಕ 04.06.2021 ರಂದು ಪಿರ್ಯಾದುದಾರರ ತೋಟವಾದ ಸುಳ್ಯ ತಾಲೂಕು ಮರ್ಕಂಜ ಗ್ರಾಮದ ದೇಶಕೋಡಿ ಎಂಬಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿರುವುದನ್ನು ಪಿರ್ಯಾದುದಾರರು ಬೆಳಿಗ್ಗೆ 07:00 ಗಂಟೆಗೆ ಕಂಡು, ಇತರ ಸಹಾಯದಿಂದ ನಿತೇಶ್ ರವರನ್ನು ಸುಳ್ಯ ಕೆ,ವಿ,ಜಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಪರಿಕ್ಷೀಸಿದ ಅಲ್ಲಿನ ವೈದ್ಯರು ನಿತೀಶ್ ರವರು ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ ಯುಡಿಅರ್‌ ನಂಬ್ರ 23/2021 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ತ್ರೇಸ್ಯ ಎಂ.ವಿ. ವಾಸ: ಕೊಪ್ಪದ ಬೈಲು ಮನೆ ಕೊಯ್ಯೂರು ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರ ಗಂಡ ವಿಜಯ ಕಿಶೋರ್‌ (43)ರವರು ಅನಾರೋಗ್ಯದಿಂದ ಬಳಲುತ್ತಿದ್ದವರು ದಿನಾಂಕ:04-06-2021 ರಂದು 14-30 ಗಂಟೆಯಿಂದ 18-30 ಗಂಟೆಯ ಮಧ್ಯ ಸಮಯದಲ್ಲಿ ತನ್ನ ಮನೆಯಾದ ಬೆಳ್ತಂಗಡಿ ತಾಲೂಕು ಕೊಯ್ಯೂರು ಗ್ರಾಮದ ಕೊಪ್ಪದ ಬೈಲು ಎಂಬಲ್ಲಿಯ ಮನೆಯ ಮೇಲ್ಚಾವಣಿಗೆ ಹಾಕಿದ ಕೊಂಡಿಗೆ ಲುಂಗಿಯನ್ನು ಕಟ್ಟಿ ಅದರ ಇನ್ನೊಂದು ತುದಿಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣಾ ಯುಡಿಆರ್‌ ನಂ: 19/2021 ಕಲಂ: 174 Cr.P.C.ಯಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 05-06-2021 11:41 AM Updated By: Dakshina Kannada District Police


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : DAKSHINA KANNADA DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080