ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

 

ಬೆಳ್ಳಾರೆ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಚೆನ್ನಪ್ಪ ಗೌಡ @ ಚಂದ್ರಹಾಸ, 52 ವರ್ಷ, ಬಿನ್: ಪೂವಪ್ಪ ಗೌಡ, ವಾಸ: ಅಗಳಿ ಮನೆ, ಕಾಯಿಮಣ ಗ್ರಾಮ, ಮತ್ತು ಅಂಚೆ, ಕಡಬ ತಾಲೂಕು ರವರು ದಿನಾಂಕ 05-01-2022 ರಂದು ಅವರ ಬಾಬ್ತು ಪಿಕಪ್ ವಾಹನ ನಂ KA21-6161 ನೇಯದ್ದನ್ನು ಕಾಣಿಯೂರು-ಸವಣೂರು ರಸ್ತೆಯಲ್ಲಿ ಚಲಾಯಿಸಿಕೊಂಡು ಬರುತ್ತಾ ಕಾಣಿಯೂರು ಸಿ.ಎ ಬ್ಯಾಂಕ್ ಬಳಿ ಸಿಗ್ನಲ್ ಹಾಕಿ ರಸ್ತೆಯ ಎಡ ಬದಿಗೆ ಚಲಾಯಿಸುತ್ತಿದ್ದ ವೇಳೆ 10-45 ಗಂಟೆಗೆ ಹಿಂದಿನಿಂದ ಮೋಟಾರು ಸೈಕಲ್ ನಂ KA21EB 9833 ನೇಯದ್ದನ್ನು ಅದರ ಸವಾರನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಪಿರ್ಯಾದುದಾರರು ಚಲಾಯಿಸುತ್ತಿದ್ದ ಪಿಕಪ್ ವಾಹನದ ಎಡ ಬದಿಯಿಂದಾಗಿ ಬಂದು ಎಡ ಭಾಗದ ಮುಂದಿನ ಟೈರ್ ಬಳಿ ಮಡ್ ಗಾರ್ಡ್ ಗೆ ಡಿಕ್ಕಿ ಹೊಡೆದು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಪರಿಣಾಮ ಮೋಟಾರು ಸೈಕಲ್ ಹಾಗೂ ಪಿಕಪ್ ವಾಹನ ಜಖಂಗೊಂಡು ಮೋಟಾರು ಸೈಕಲ್ ಸವಾರರಿಗೆ ಗಾಯ ಉಂಟಾಗಿರುತ್ತದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ. 01/2022 ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ರೇಣುಕಾ, ಪ್ರಾಯ 39 ವರ್ಷ, ಗಂಡ: ಸಿದ್ದಪ್ಪ ಗೌಡ, ವಾಸ: ಮರಿಕೆ ಕಾಲೊನಿ ಮನೆ, ರಾಮನಗರ, ಉಪ್ಪಿನಂಗಡಿ ಗ್ರಾಮ, ಪುತ್ತೂರು ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 02-01-2022 ರಂದು 05-15 ಗಂಟೆಗೆ ಆರೋಪಿ ಖಾಸಗಿ ಬಸ್‌ ಚಾಲಕ ಮುನಿಸ್ವಾಮಿ ಜಾರ್ಜ್‌ ಎಂಬವರು KA-20-C-8538 ನೇ ನೋಂದಣಿ ನಂಬ್ರದ ಬಸ್ಸನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಹೈವೇ ಜಂಕ್ಷನ್‌ ಎಂಬಲ್ಲಿ ಏಕಮುಖ ರಸ್ತೆಯನ್ನು ತಪ್ಪಿಸಿ, ರಸ್ತೆಯ ಇನ್ನೊಂದು ಭಾಗದಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ಸವಾರರಾಗಿ, ವೈಶಾಲಿ ರವರು ಸಹಸವಾರರಾಗಿ KA-21-EB-1877 ನೇ ನೋಂದಣಿ ನಂಬ್ರದ ಸ್ಕೂಟರಿನಲ್ಲಿ ಮನೆ ಕಡೆಯಿಂದ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನಕ್ಕೆ ಹೋಗಲು ಹೆದ್ದಾರಿಯ ಡಿವೈಡರ್‌ ಮಧ್ಯದ ರಸ್ತೆಯಲ್ಲಿ ರಸ್ತೆಯ ಬಲಭಾಗಕ್ಕೆ ಹೋಗಲು ಕಾಯುತ್ತಿದ್ದ ಸಮಯ, ಸ್ಕೂಟರಿನ ಬಲಭಾಗಕ್ಕೆ ಬಸ್ಸಿನ ಎಡಭಾಗವು ಅಪಘಾತವಾಗಿ ಸವಾರರಿಬ್ಬರೂ ರಸ್ತೆಗೆ ಬಿದ್ದು, ಗಾಯಗೊಂಡು ಪುತ್ತೂರು ಪ್ರಗತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  03/2022 ಕಲಂ: 279,337 ಐಪಿಸಿ & u/s 134(A)&(B) IMV Act ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಬ್ರಹ್ಮಣ್ಯ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ರಾಮಣ್ಣ ಗೌಡ , ಪ್ರಾಯ 72 ವರ್ಷ, ತಂದೆ:ದಿ| ಕೃಷ್ಣಪ್ಪ ಗೌಡ ವಾಸ: ದೊಡ್ಡಡ್ಕ ಮನೆ, ನೆಲ್ಲೂರು ಕೆಮ್ರಾಜೆ ಗ್ರಾಮ,ಸು:ಳ್ಯ ದ.ಕ ಜಿಲ್ಲೆ ರವರು ದಿನಾಂಕ:05.01.2022 ರಂದು ಸುಮಾರು ಸಂಜೆ 03 ಗಂಟೆಗೆ ಗುತ್ತಿಗಾರು ಪೆಟ್ರೋಲ್ ಬಂಕ್ ಹತ್ತಿರ ನಡೆದುಕೊಂಡು ಹೊಗುತ್ತಿದ್ದಾಗ ಸುಬ್ರಹ್ಮಣ್ಯ ಕಡೆಯಿಂದ ಕೆಎ 21 ಡಬ್ಲೂ 7010 ನೇ ಮೋಟಾರ್ ಸೈಕಲ್  ನ್ನು ಅದರ ಸವಾರ ಪುನೀತ್ ಮುತ್ಲಾಜೆಯವರು ನಿರ್ಲಕ್ಷತನದಿಂಧ  ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿ ಪಾದಚಾರಿಯಾದ ಪಿರ್ಯಾದುದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ಎಡಕಾಲಿನ ಕೊಲು ಕಾಲಿಗೆ ಹಾಗೂ ಬಲಕೈ ಕೊಲು ಕೈ ಗೆ ರಕ್ತದ ಗಾಯ ಹಾಗೂ ಸೋಂಟದ ಭಾಗಕ್ಕೆ ಗುದ್ದಿದ ಗಾಯವಾಗಿರುತ್ತದೆ. ಈ ಬಗ್ಗೆ ಪ್ರಥಮ ಚಿಕಿತ್ಸೆಯನ್ನು  ಸುಳ್ಯ ಸರಕಾರಿ ಆರೋಗ್ಯ ಕೇಂದ್ರದಲ್ಲಿ ಪಡೆದುಕೊಂಡು ವೈದ್ಯಾದಿಕಾರಿಯವರ ಸೂಚನೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಅ.ಕ್ರ ನಂಬ್ರ: 02-2022 ಕಲಂ: 279, 338 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

 

ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ವನಿತಾ (48) ಗಂಡ: ಗಂಗಾಧರ ಗೌಡ ವಾಸ: ಗುಡ್ಡನ ಮನೆ, ನೆಲ್ಲೂರು ಕೆಮ್ರಾಜೆ ಗ್ರಾಮ, ಸುಳ್ಯ ತಾಲೂಕು ರವರ ಗಂಡ ಗಂಗಾಧರ ಗೌಡ (53) ಎಂಬವರು ದಿನಾಂಕ 06.01.2022 ರಂದು ಸಮಯ ಸುಮಾರು 08:00 ಗಂಟೆಗೆ ಸುಳ್ಯ ತಾಲೂಕು ನೆಲ್ಲೂರು ಕೆಮ್ರಾಜೆ ಗ್ರಾಮದ ಗುಡ್ಡನ ಮನೆಯ ಹತ್ತಿರವಿರುವ ಸೋಮಶೇಖರ ಎಂಬವರ ತೋಟಕ್ಕೆ ಕೆಲಸಕ್ಕೆಂದು ಹೋಗಿದ್ದು, ಎದೆನೋವಿನಿಂದ ಬಳುತ್ತಿದ್ದವರನ್ನು ಸಮಯ ಸುಮಾರು 10:20 ಗಂಟೆಗೆ ಸುಳ್ಯ ಕೆ,ವಿ,ಜಿ ಆಸ್ಪತ್ರೆಗೆ ಹೊರಟು  ಸಮಯ ಸುಮಾರು 11:10 ಗಂಟೆಗೆ ಕೆ,ವಿ ಜಿ ಆಸ್ಪತ್ರೆಗೆ ಬಂದಾಗ  ಅಲ್ಲಿನ ವೈದ್ಯರು ಗಂಗಾಧರ ಗೌಡರನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಯುಡಿಆರ್ ನಂ: 02/2022 ಕಲಂ: 174 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 07-01-2022 10:24 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080