Feedback / Suggestions

ಅಪಘಾತ ಪ್ರಕರಣ: 1

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಶೇಕ್‌ ಹಸನ್‌ , ಪ್ರಾಯ 42 ವರ್ಷ, ತಂದೆ: ಶೇಕ್‌ ಇಸ್ಮಾಯಿಲ್‌, ವಾಸ: ಮುರ ಮನೆ, ಕಬಕ ಗ್ರಾಮ, ಪುತ್ತೂರು ತಾಲೂಕು ರವರು ನೀಡಿದ ದೂರೇನೆಂದರೆ ದಿನಾಂಕ 07-05-2021 ರಂದು ಆರೋಪಿ ಮೋಟಾರ್‌ ಸೈಕಲ್‌ ಸವಾರ ಸದಕೇಶ ಎಂಬವರು KA-04-JQ-9357 ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲನ್ನು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಬಕ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಕಬಕ ಗ್ರಾಮದ ಮುರ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಹೆದ್ದಾರಿಯನ್ನು ದಾಟಿ ಇನ್ನೊಂದು ಬದಿಗೆ ತಲುಪಿದ ಪಿರ್ಯಾದುದಾರರ ತಂದೆ ಶೇಕ್‌ ಇಸ್ಮಾಯಿಲ್‌ ಎಂಬವರಿಗೆ ಅಪಘಾತವಾಗಿ ಶೇಕ್‌ ಇಸ್ಮಾಯಿಲ್‌ ರಸ್ತೆಗೆ ಬಿದ್ದು, ಬಲಕೋಲು ಕಾಲು, ಬಲಪಾದ, ತಲೆಗೆ, ಕುತ್ತಿಗೆಗೆ ಗುದ್ದಿದ ಹಾಗೂ ರಕ್ತಗಾಯಗೊಂಡವರನ್ನು  ಚಿಕಿತ್ಸೆ ಬಗ್ಗೆ ಪುತ್ತೂರು ಪ್ರಗತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  83/2021 ಕಲಂ: 279, 337 ಐಪಿಸಿ & ಕಲಂ:  134(ಎ)&(ಬಿ) ಐಎಂವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಜೀವಬೆದರಿಕೆ ಪ್ರಕರಣ: 1

 

ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ರತ್ನಾ ಕೆ ಗಂಡ: ಆನಂದ ಗೌಡ ವಾಸ: ಕೊಡೆಂಕಿರಿ ಮನೆ ಎಡಮಂಗಲ ಗ್ರಾಮ ಕಡಬ ತಾಲೂಕು ರವರು ದಿನಾಂಕ 06-05-2021 ರಂದು ಅವರ ಸಾಕುದನಗಳನ್ನು ಮೇಯಲು ಕಟ್ಟಲೆಂದು ಹೋಗಿ ವಾಪಾಸ್ಸು ಮನೆ ಕಡೆಗೆ ಬರುತ್ತಿರುವಾಗ ಅವರ ಭಾವನ ಮಗ ಆರೋಪಿತ  ಪುನೀತ್  ಎಂಬವರು ಪಿರ್ಯಾದಿದಾರರನ್ನು ಅಡ್ಡಗಟ್ಟಿ " ನೀನು ಈ ದಾರಿಯಾಗಿ ಹೋಗಬಾರದು " ಎಂದು ಹೇಳುತ್ತಾ ಅಲ್ಲಿದ್ದ ಕಲ್ಲೊಂದನ್ನು ಹೆಕ್ಕಿ ಪಿರ್ಯಾದಿದಾರರ ಕಾಲಿಗೆ ಬಿಸಾಡಿದ್ದು ಇದರಿಂದಾಗಿ ಪಿರ್ಯಾದಿದಾರರ ಎಡಕಾಲಿನ ಪಾದದ ಬಳಿ ಕಲ್ಲು ತಾಗಿ ಗುದ್ದಿದ ನಮೂನೆಯ ಗಾಯವುಂಟಾಗಿದ್ದು  ಬಳಿಕ ಆರೋಪಿ ಪುನೀತ್ ಪಿರ್ಯಾದಿದಾರರನ್ನು ಹಿಡಿದು ಮೈಗೆ ಕೈ ಹಾಕಿ ದೂಡಿ ಹಾಕಿ ಪಿರ್ಯಾದಿದಾರರು ಹಲ್ಲೆ ನಡೆಸಿದಾಗ ಬೊಬ್ಬೆ ಕೇಳೆ ಪಿರ್ಯಾದಿದಾರರ ಮಗಳು ಅಲ್ಲಿಗೆ ಬಂದಾಗ ಆರೋಪಿ ಅವಳಿಗೂ ಹಲೆಲ ನಡೆಸಿ ಅವಾಚ್ಯ ಶಬ್ದದಿಂದ ಬೈದು ನೀನು ನಡಿ ಎನ್ನುತ್ತಾ ಅವಳನ್ನು ದೂಡಿಹಾಕಿದ್ದು ಇದೇ ವೇಳೆಗೆ ಆರೋಪಿ ಪುನೀತನ ತಾಯಿ ಸರಸ್ವತಿ ಅವರ ಮನೆಯಿಂದ ಕತ್ತಿಯೊಂದನ್ನು ಹಿಡಿದುಕೊಂಡು ಬಂದು ಅವರನ್ನೆಲ್ಲಾ ಕೊಲ್ಲಬೇಕು ,, ಅವರನ್ನು ಬದುಕಲು ಬಿಡಬೇಡಿ ಕಡಿಯಿರಿ ಎಂದು ಹೇಳಿದ್ದು ಈ ವೇಳೆ ಅಲ್ಲಿಗೆ ಬಂದ ಪಿರ್ಯಾದಿದಾರರ ಗಂಡ ಆನಂದ ರವರನ್ನು ಕಂಡು  ಅವರಿಬ್ಬರೂ " ನಾವು ಈ ದಾರಿಯನ್ನು ಮುಂದಕ್ಕೆ ಬಂದ್ ಮಾಡುತ್ತೇವೆ ನೀವು ಇನ್ನು ಮುಂದೆ ಈ ದಾರಿಯಾಗಿ ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ" ಎಂಬುದಾಗಿ ಜೀವಬೆದರಿಕೆ ಹಾಕಿ ರುವುದಾಗಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ  ಅಕ್ರ 22/2021 ಕಲಂ 341,504,324,355,323,506 ಜೊತೆಗೆ 34 ಐಪಿಸಿ

 

ಅಸ್ವಾಭಾವಿಕ ಮರಣ ಪ್ರಕರಣ: 2

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಅನಿಲ್ ಕುಮಾರ್ (34) ತಂದೆ:ಕೃಷ್ಣಪ್ಪ ಪೂಜಾರಿ ವಾಸ:ಹೊಯಿಗೆ ಗದ್ದೆ ಮನೆ, ಅಮ್ಟೂರು ಗ್ರಾಮ ಬಂಟ್ವಾಳ ರವರ ತಂದೆಯವರಾದ ಕೃಷ್ಣಪ್ಪ ಪೂಜಾರಿರವರು ಇತ್ತಿಚಿನ ದಿನಗಳಲ್ಲಿ ಕೆಲಸಕ್ಕೆ ಹೊಗದೆ ಮನೆಯಲ್ಲಿಯೇ ಇದ್ದರು. ಪಿರ್ಯಾದುದಾರರ ತಂದೆಯ ಕುಟುಂಬದವರು ಎಲ್ಲರು ವಿಷ ಪಧಾರ್ಥ ಸೇವಿಸಿ ಮೃತಪಟ್ಟಿದ್ದು ಈ ಬಗ್ಗೆ ಪಿರ್ಯಾದಿದಾರರ ತಂದೆಯವರು ಸುಮಾರು 2 ತಿಂಗಳಿನಿಂದ ಕೊರಗುತ್ತಿದ್ದರು. ಇದೆ ವಿಚಾರದಲ್ಲಿ ಪಿರ್ಯಾದಿದಾರರ ತಂದೆಯವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 06.05.2021 ರಂದು ಮನೆಯಲ್ಲಿ ಯಾವುದೊ ವಿಷ ಪಧಾರ್ಥ ಸೇವನೆ ಮಾಡಿ ಅಸ್ವಸ್ಥರಾದ ಬಗ್ಗೆ ಪಿರ್ಯಾದುದಾರರಿಗೆ ಅವರ ಪತ್ನಿಯು ಪೋನ್ ಕರೆಮಾಡಿ ತಿಳಿಸಿದ್ದು, ಪಿರ್ಯಾದಿದಾರರು ಮನೆಗೆ ಬಂದು ಒಂದು ಕಾರಿನಲ್ಲಿ ಚಿಕಿತ್ಸೆಯ ಬಗ್ಗೆ ಕಲ್ಲಡ್ಕ ಪುಷ್ಪರಾಜ ಆಸ್ಪತ್ರೆಗೆ  ಕರೆದುಕೊಂಡು ಬಂದು ವೈಧ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ:07.05.2021 ರಂದು ಮೃತಪಟ್ಟಿದ್ದು ಮೃತಪಟ್ಟಿರುತ್ತಾರೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 19-2021 ಕಲಂ  174 ಸಿ ಆರ್ ಪಿ ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಉಪ್ಪಿನಂಗಡಿ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಸತೀಶ್‌ ನಾಯಕ್‌,  ಪ್ರಾಯ  34 ವರ್ಷತಂದೆ,. ಗಣಪತಿ ನಾಯಕ್‌,. ವಾಸ: 1-52(1) ಮಂಜುಕೃಪಾ ಮನೆ, ಕಲ್ಲೇರಿ, ಕರಾಯ ಗ್ರಾಮ  ಬೆಳ್ತಂಗಡಿ ತಾಲೂಕು ರವರ ಪತ್ನಿ ಶ್ರೀಮತಿ ಮೈಥಿಲಿ ಪ್ರಾಯ 26 ವರ್ಷ ಎಂಬವರು ದಿನಾಂಕ:07-05-2021ರಂದು ಬೆಳಿಗ್ಗೆ 09.30 ಗಂಟೆಯಿಂದ ಬೆಳಿಗ್ಗೆ 11.00 ಗಂಟೆಯ ಮದ್ಯದ ಅವಧಿಯಲ್ಲಿ ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಕಲ್ಲೇರಿ ಎಂಬಲ್ಲಿ ಯಾವುದೋ ಕಾರಣದಿಂದ  ಮನನೊಂದು ತನ್ನ ಮನೆಯ   ಬೆಡ್‌ ರೂಂ ನ ಪ್ಯಾನ್‌ಗೆ  ಚೂಡಿದಾರದ ಶಾಲ್‌ನ ಒಂದು ತುದಿಯನ್ನು ಇನ್ನೊಂದು ತುದಿಯನ್ನು ತನ್ನ ಕುತ್ತಿಗೆಗೆ  ನೇಣು ಬಿಗಿದುಕೊಂಡು  ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ ಈ ಬಗ್ಗೆ ಉಪ್ಪಿನಂಗಡಿ ಪೊಲೀಸು ಠಾಣೆ.  ಯುಡಿಆರ್‌   16/2021 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 08-05-2021 10:57 AM Updated By: Dakshina Kannada District Police


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : DAKSHINA KANNADA DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080