Feedback / Suggestions

ಅಪಘಾತ ಪ್ರಕರಣ: 1

 

ಬೆಳ್ಳಾರೆ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಕೆ ಜಯಲಕ್ಷ್ಮೀ ಪ್ರಾಯ 52 ವರ್ಷ, ಗಂಡ: ಲೋಕನಾಥ ಎಂ, ವಾಸ: ಮರ್ದೂರು ಮನೆ, ಎಡಮಂಗಲ ಗ್ರಾಮ, ಕಡಬ ತಾಲೂಕು, ರವರು ಸಮುದಾಯ ಆರೋಗ್ಯ ಕೇಂದ್ರ ಕಡಬದಲ್ಲಿ ನರ್ಸ್ ಕೆಲಸ ಮಾಡಿಕೊಂಡಿದ್ದು ದಿನಾಂಕ 06-07-2022 ರಂದು ಬೆಳಿಗ್ಗೆ 7-30 ಗಂಟೆಗೆ ಮನೆಯಿಂದ ತನ್ನ ಗಂಡನವರ ಬಾಬ್ತು ಮಾರುತಿ 800 ಕಾರು ನಂಬ್ರ ಕೆಎ-19-Z-428 ನೇಯದರಲ್ಲಿ ಕೆಲಸದ ನಿಮಿತ್ತ ಕಡಬಕ್ಕೆ ಹೋದವರು ಅಲ್ಲಿ ಕೆಲಸ ಮುಗಿಸಿಕೊಂಡು ಮಧ್ಯಾಹ್ಮ 14-15 ಗಂಟೆಗೆ ವಾಪಾಸ್ ತನ್ನ ಮನೆ ಕಡೆಗೆ ಮಾರುತಿ 800 ಕಾರಿನಲ್ಲಿ ಹೊರಟು ಕಾರನ್ನು ಚಲಾಯಿಸುತ್ತಾ ಪುಳಿಕುಕ್ಕು-ಎಡಮಂಗಲ ರಸ್ತೆಯಲ್ಲಿ ಪುಳಿಕುಕ್ಕು ಕಡೆಯಿಂದ ಎಡಮಂಗಲ ಕಡೆಗೆ ಹೋಗುತ್ತಾ ಸಮಯ ಸುಮಾರು 14-50 ಗಂಟೆಗೆ ಕಡಬ ತಾಲೂಕು ಎಡಮಂಗಲ ಗ್ರಾಮದ ಎಡಮಂಗಲ ಎಂಬಲ್ಲಿಯ ರೈಲ್ವೆ ಸ್ಠೇಶನ್ ಕ್ರಾಸ್ ಬಳಿ ತಲುಪಿದಾಗ ಎದುರುಗಡೆಯಿಂದ ಅಂದರೆ ಎಡಮಂಗಲ ಕಡೆಯಿಂದ ಪುಳಿಕುಕ್ಕು ಕಡೆಗೆ ಅಲ್ಟೋ ಕಾರು ಚಾಲಕ ರಂಜನ್ ರವರು ಅಲ್ಟೋ ಕಾರು ನಂಬ್ರ ಕೆಎ-04-ಎಂಜೆ-3300 ನೇಯದರಲ್ಲಿ ಶೋಭಿತ್ ಮತ್ತು ರಾಮಣ್ಣ ಎಂಬವರನ್ನು ಕುಳ್ಳಿರಿಸಿಕೊಂಡು ಅಜಗಾರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರು ಚಲಾಯಿಸುತ್ತಿದ್ದ ಮಾರುತಿ 800 ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರ ಬಲಕಾಲಿನ ಮೊಣಗಂಟಿಗೆ ಗುದ್ದಿದ ನಮೂನೆಯ ರಕ್ತ ಗಾಯ ಮತ್ತು ಎದೆಗೆ ಗುದ್ದಿದ ನಮೂನೆಯ ಗಾಯ, ಬಲಕೈಗೆ ತರಚಿದ ನಮೂನೆಯ ಗಾಯ ಹಾಗೂ ಆಲ್ಟೋ ಕಾರಿನಲ್ಲಿದ್ದ ಶೋಭಿತ್ ನವನಿಗೆ ತಲೆಗೆ ಗುದ್ದಿದ ಮತ್ತು ಹಣೆಗೆ ರಕ್ತ ಗಾಯಗಳಾಗಿ ಚಿಕಿತ್ಸೆಯ ಬಗ್ಗೆ ಕಾಣಿಯೂರಿನ ಕ್ಲಿನಿಕ್ ಗೆ ಹೋಗಿದ್ದು, ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಯ ಸೂಚಿಸಿದ್ದು. ಅಲ್ಲಿಂದ ಅಂಬ್ಯುಲೆನ್ಸ್ ಒಂದರಲ್ಲಿ ಚಿಕಿತ್ಸೆಯ ಬಗ್ಗೆ ಪುತ್ತೂರಿನ ಆದರ್ಶ ಆಸ್ಪತ್ರೆಗೆ ಹೋಗಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ಒಳರೋಗಿಗಳನ್ನಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡಿರುವುದಾಗಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್‌ ಠಾಣಾ ಅ.ಕ್ರ: 55/2022 ಕಲಂ 279,  337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಕುಮಾರ್ ಟಿ ಸಿ ಪ್ರಾಯ 40 ವರ್ಷ ತಂದೆ ಚಿಕ್ಕ ಮೊಗ, ಕೈ ಕುಂಜೆ ಮಾದವ ಕಾಪೌಂಡ್ ಮನೆ ಬಿ ಮೂಡ ಗ್ರಾಮ  ಬಂಟ್ವಾಳ ತಾಲೂಕು ರವರು ಪಂಜಿಕಲ್ಲು ಗ್ರಾಮ ಪಂಚಾಯತ್ ನಲ್ಲಿ ಗ್ರಾಮ ಕರಣಿಕ ರಾಗಿದ್ದು,  ಮೇಲಾಧಿಕಾರಿಯವರ ಆದೇಶದಂತೆ ಗ್ರಾಮದಲ್ಲಿ ಮಳೆ ಗಾಳಿಯಿಂದ ತೊಂದರೆಗಳಾದ ಬಗ್ಗೆ ಮಾಹಿತಿ ಬಂದಲ್ಲಿ ತಕ್ಷಣಕ್ಕೆ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿ ವರದಿ ಮಾಡುವಂತೆ ಆದೇಶಿಸಿದಂತೆ ಪಿರ್ಯಾದಿದಾರರು  ಮಾಹಿತಿ ಬಂದ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಬಗ್ಗೆ ಮೇಲಾಧಿಕಾರಿಯವರಿಗೆ ವರದಿ ನೀಡುತ್ತಿದ್ದು. ದಿನಾಂಕ 05-07-22 ರಂದು ಸಂಜೆ 5.45 ಗಂಟೆಗೆ ಪಂಜಿಕಲ್ಲು ಗ್ರಾಮದ ಮುಕುಡ ಶ್ರೀಮತಿ ಬೆನಡಿಕ್ಟ ಕಾರ್ಲೋ ರವರು ಮೊಬೈಲ್ ನಂಬ್ರ 9880874405 ನೇದರಿಂದ ಪಿರ್ಯಾದಿದಾರರ  ಮೊಬೈಲ್ ಗೆ  ಕರೆ  ಮಾಡಿ   ಮನೆಯ ಅಂಗಳದ ಬದಿಯಲ್ಲಿರುವ ಸುಮಾರು 50-60 ಅಡಿ ಎತ್ತರದ  ಧರೆ ಮಳೆಯಿಂದ  ಕುಸಿತಗೊಂಡು ಅಂಗಳಕ್ಕೆ ಮಣ್ಣು ಜಾರಿರುವುದಾಗಿ ಹೇಳಿದ್ದು ಕೂಡಲೇ ಪಿರ್ಯಾದಿದಾರರು  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ  ಎತ್ತರದ ಧರೆಯು ಕುಸಿದು ಮನೆಯ ಅಂಗಳಕ್ಕೆ ಬಿದ್ದು  ಅಡಿಕೆ ಒಣಗಿಸಲು ಮಾಡಿದ್ದ ಟರ್ಪಾಲಿನಿಂದ ರಚಿಸಿದ ಶೆಡ್  ಜಖಂ ಗೊಂಡಿದ್ದು. ಅಂಗಳದ ಬದಿಯಲ್ಲಿ ಬೆನಡಿಕ್ಟ  ಕಾರ್ಲೋ ರವರ ಹಂಚು ಛಾವಣಿಯ ಹಳೆಯ ಮನೆಯು ಇದ್ದು ಅದರಲ್ಲಿ ರಬ್ಬರ್  ಟ್ಯಾಪಿಂಗ್ ಮಾಡುವ  ಕೆಲಸದವರು ವಾಸ ಮಾಡಿಕೊಂಡಿರುವುದಾಗಿ ತಿಳಿಸಿರುತ್ತಾರೆ ಪಿರ್ಯಾದಿದಾರರು ಎತ್ತರದ  ಧರೆಯನ್ನು ಪರಿಶೀಲಿಸಲಾಗಿ ಅದು ಇನ್ನೂ ಸ್ವಲ್ಪ ಸ್ವಲ್ಪವೇ  ಕುಸಿಯುತ್ತಲೇ ಇದ್ದುದರಿಂದ ಹಳೆ ಮನೆಯಲ್ಲಿ ವಾಸವಾಗಿರುವ ರಬ್ಬರ್  ಟ್ಯಾಪಿಂಗ್ ಕಾರ್ಮಿಕರನ್ನು ಅಲ್ಲಿಂದ  ತೆರವುಗೊಳಿಸುವಂತೆ ಮೌಖಿಕವಾಗಿ ಸೃಷ್ಟ ಸೂಚನೆಯನ್ನು ನೀಡಿರುತ್ತಾರೆ. ನಿನ್ನೆ ದಿನಾಂಕ  06-07-22  ರಂದು ವಿಪರೀತ ಮಳೆ ಇದ್ದುದರಿಂದ ಸಂಜೆ 5.00 ಗಂಟೆಗೆ ಪಿರ್ಯಾದಿದಾರರು  ಬೆನಡಿಕ್ಟ ಕಾರ್ಲೋರವರಿಗೆ ಪೋನು ಮಾಡಿ ಮಳೆ ಮತ್ತೆ  ಜೋರಾಗಿ ಸುರಿಯುತ್ತಿದೆ ಜಾಗ್ರತೆ ವಹಿಸಿ ಕಾರ್ಮಿಕರನ್ನು ತೆರವುಗೊಳಿಸಿ ಎಂದು ಹೇಳಿದ್ದು.  ಸಂಜೆ ಸುಮಾರು 6.45 ಗಂಟೆಯ ಸಮಯಕ್ಕೆ ಬೆನಡಿಕ್ಟ  ಕಾರ್ಲೋ ರವರ ಮನೆಯ ಸಮೀಪದ ಕುಸಿತಗೊಂಡಿದ್ದ ಗುಡ್ಡೆಯು  ಪುನ; ಕುಸಿತವಾಗಿ ಮಣ್ಣು ಜಾರಿ ಸುಮಾರು 60 ಮೀಟರ್ ತನಕ ಜಾರಿ ಹಳೆಯ ಹಂಚಿನ ಮನೆಯಲ್ಲಿ ವಾಸವಿದ್ದ 5 ಜನ ಕಾರ್ಮಿಕರು  ಕಟ್ಟಡದ ಒಳಗೆ ಸಿಲುಕಿಕೊಂಡಿರುವುದಾಗಿ ಮಾಹಿತಿ ಬಂದು ಪಿರ್ಯಾದಿದಾರರು  ಕೂಡಲೇ ಸ್ಥಳಕ್ಕೆ  ತೆರಳಿ ನೋಡಲಾಗಿ ಗುಡ್ಡೆಯು ಕುಸಿತಗೊಂಡು  ಮಣ್ಣು ಮನೆಯ ಹಂಚಿನ ಕಟ್ಟಡದ ಮೇಲೆ ಬಿದ್ದುದರಿಂದ ಪೂರ್ವ- ಪಶ್ಚಿಮವಾಗಿ ಇದ್ದ ಮನೆಯ ಪೂರ್ವದ ಕಡೆ ಮಣ್ಣು  ಬಿದ್ದು  ಹೆಚ್ಚು ಜಖಂಗೊಂಡಿದ್ದು, ಅಲ್ಲಿ ಕೋಣೆಗಳಲ್ಲಿ  4 ಜನ ಕಾರ್ಮಿಕರು ಸಿಲುಕಿಕೊಂಡು ಓರ್ವ ಜೋರಾಗಿ ಶಬ್ದ ಕೇಳಿ ಹೊರಗೆ ಓಡಿ ತಪ್ಪಿಸಿಕೊಂಡಿರುವುದಾಗಿ ತಿಳಿದು  ಕೂಡಲೇ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳ, ರಾಷ್ರೀಯ ವಿಪತ್ತು ನಿರ್ವಾಹಣಾ ದಳ, ರಾಜ್ಯ ವಿಪತ್ತು ನಿರ್ವಾಹಣಾ ದಳ, ಜಿಲ್ಲಾ ಮಟ್ಟದ ,ತಾಲೂಕು ಮಟ್ಟದ ಅಧಿಕಾರಿಯವರು ಹಾಗೂ ಸ್ಥಳೀಯರು ಸೇರಿ ಕಟ್ಟಡದ ಒಳಗೆ ಸಿಲುಕಿಗೊಂಡ  ಕಾರ್ಮಿಕರನ್ನು ಜೆ.ಸಿ.ಬಿ ಮತ್ತು ಹಿಟಾಚಿ ಯಂತ್ರಗಳನ್ನು ಬಳಸಿ ತೆರವು ಕಾರ್ಯಾಚರಣೆ ನಡೆಸಿ, ಸಂಜೆ ಸುಮಾರು  7.30 ಗಂಟೆಯಿಂದ ರಾತ್ರಿ 11.30 ಗಂಟೆಯ ತನಕ ಸರ್ಚ್ ಲೈಟ್, ಮನೆಯ  ವಿದ್ಯುತ್ ಲೈಟ್ ಹಾಗೂ ವಿಪತ್ತು ನಿರ್ವಹಣಾ ದಳದವರಲ್ಲಿದ್ದ ಬೆಳಕಿನ ವ್ಯವಸ್ಥೆ ಯಿಂದ  ಕಾರ್ಯಾಚರಣೆ ನಡೆಸಿ ಹೊರಗೆ ತೆಗೆದಿದ್ದು 3 ಜನರು ಜೀವಂತ ಇದ್ದವರನ್ನು ವಿವಿಧ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಕಳುಹಿಸಿ  ಓರ್ವ ವ್ಯಕ್ತಿಯು ಮೃತ ಪಟ್ಟಿದ್ದು . ಮೃತ ದೇಹವನ್ನು ಅಲ್ಲಿಂದ ಆಸ್ಪತ್ರೆಗೆ ಕಳುಹಿಸಿಕೊಟ್ಟು ಒಳಗೆ ಸಿಲುಕೊಂಡ ಕಾರ್ಮಿಕರ ಹೆಸರನ್ನು ತಿಳಿಯಲಾಗಿ ಬಿಜು ಪಾಲಕ್ಕಾಡು, ಜೋನಿ ಕಣ್ಣೂರು , ಬಾಬು ಕೊಟ್ಟಾಯಂ, ಸಂತೋಷ್  ಆಲಪುರ ಹಾಗೂ ಶಬ್ದ ಕೇಳಿ ಹೊರಗೆ ಓಡಿಕೊಂಡ ಬಂದ ವ್ಯಕ್ತಿ ಅಖಿಲ್ ಎಂದು ತಿಳಿಯಿತು. ಈ ಪೈಕಿ ಬಿಜು ಪಾಲಕ್ಕಾಡ್ ಸ್ಥಳದಲ್ಲಿಯೇ ಮೃತಪಟ್ಟವನಾಗಿರುವುದಾಗಿದೆ , ಅಲ್ಲದೆ ಅಂಗಳದಲ್ಲಿ ನಿಲ್ಲಿಸಿದ್ದ  ಒಂದು ಮಾರುತಿ 800 ಕಾರು ಮತ್ತು ಒಂದು ಬೈಕು  ಮಣ್ಣು ಕುಸಿದ ರಭಸಕ್ಕೆ  ಹಳೆಯ ಮನೆಯ ಗೋಡೆಗೆ ತಾಗಿ ಗೋಡೆ ಸಮೇತ ಜಖಂಗೊಂಡಿರುತ್ತದೆ. ಮಣ್ಣು ಕುಸಿದಿರುವುದರಿಂದ  ಮನೆ ವಾಹನ ಜಖಂಗೊಂಡು ಸುಮಾರು 3,00,000/- ನಷ್ಟ ಉಂಟಾಗಬಹುದು. ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದವರ ಪೈಕಿ  ಸಂತೋಷ್ ಮತ್ತು ಬಾಬು ಕೊಟ್ಟಾಯಂ ರವರು ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಮೃತ ಪಟ್ಟಿರುವುದಾಗಿ ತಿಳಿಯಿತು ದಿನಾಂಕ 05-07-2022 ರಂದು ಸಂಜೆ ಗುಡ್ಡ ಕುಸಿತದ ಬಗ್ಗೆ ಭೇಟಿ ನೀಡಿ ಪರಿಶೀಲಿಸಿ ಹಳೆ ಮನೆ ಕಟ್ಟಡದಲ್ಲಿ ವಾಸವಿದ್ದ ಕಾರ್ಮಿಕರನ್ನು ತೆರವು ಗೊಳಿಸುವಂತೆ, ಜಾಗ್ರತೆ ವಹಿಸುವಂತೆ ಮೌಖಿಕವಾಗಿ ಸೃಷ್ಟ ಸೂಚನೆಗಳನ್ನು ನೀಡಿದ್ದರೂ  ಕೂಡ ಬೆನಡಿಕ್ಟ  ಕಾರ್ಲೋರವರವರು ಯಾವುದೇ ಮುಂಜಾಗ್ರತೆ  ಕ್ರಮವನ್ನು  ವಹಿಸದೆ ಬೇಜವಾಬ್ದಾರಿ ಮತ್ತು ನಿರ್ಲಕ್ಷ ತೋರಿಸಿದ್ದುದರಿಂದ ದಿನಾಂಕ 06-07-2022 ರಂದು  ಸಂಜೆ ಸುಮಾರು 6.45 ಗಂಟೆಗೆ ಅದೇ ಗುಡ್ಡ ಪುನಃ ಕುಸಿತ ಗೊಂಡು ಮಣ್ಣು ಹಳೆಯ ಹಂಚು ಛಾವಣಿ ಮನೆಯ  ಮೇಲೆ ಬಿದ್ದುದರಿಂದ ಮನೆಯ  ಒಳಗೆ ಇದ್ದ ಕಾರ್ಮಿಕರು ಮಣ್ಣಿನಲ್ಲಿ ಸಿಲುಕಿಕೊಂಡು ಗಾಯಗೊಂಡು ಆ ಪೈಕಿ 3 ಜನ ಮೃತ ಪಡಲು  ಬೆನಡಿಕ್ಟ  ಕಾರ್ಲೋರವರ ಕಾರಣರಾಗಿರುತ್ತಾರೆ ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಅ,ಕ್ರ 49/2022 ಕಲಂ-337,304(A) ಯಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 08-07-2022 12:25 PM Updated By: Dakshina Kannada District Police


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : DAKSHINA KANNADA DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080