Feedback / Suggestions

ಕಾಣೆ ಪ್ರಕರಣ: 1

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಕಮಲ ಪ್ರಾಯ 47 ವರ್ಷ ಗಂಡ: ರಾಮ ಪೂಜಾರಿ  ವಾಸ: ಪಡೆಂಕಿಲ್ ಮಾರು ಮನೆ ಅಮ್ಟಾಡಿ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರ ಮಗನಾದ ಸುನೀಲ್ ಈತನು ದಿನಾಂಕ 07-10-2021 ರಂಧು ಬೆಳಿಗ್ಗೆ 8.00 ಗಂಟೆಗೆ ಕೆಲಸಕ್ಕೆಂದು ಹೋದವನು  ರಾತ್ರಿಯೂ ಮನೆಗೆ ಬಾರದ ಕಾರಣ ಆತನ ಮೊಬೈಲ್ ಗೆ ಪಿರ್ಯಾಧಿದಾರರು ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದ್ದು,   ಪಿರ್ಯಾದಿದಾರರ ಮಗ ಮನೆಗೆ ಬಾರದೇ ಇದ್ದು,  ಈ ಬಗ್ಗೆ ಎಲ್ಲಾ ಕಡೆ ಹುಡುಕಾಡಿ, ಸಂಬಂಧಿಕರಲ್ಲಿ ವಿಚಾರಿಸಲಾಗಿ ಎಲ್ಲಿಯೂ ಸಿಕ್ಕಿರುವುದಿಲ್ಲ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆ ಅ.ಕ್ರ ನಂ: 16-2021 ಕಲಂ: ಗಂಡಸು ಕಾಣೆ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

ಬಂಟ್ವಾಳ ನಗರ ಪೊಲೀಸ್ ಠಾಣೆ : ದಿನಾಂಕ 08-10-2021 ರಂದು ಬಂಟ್ವಾಳ ನಗರ ಪೊಲೀಸ್ ಠಾಣೆ ಅ.ಕ್ರ ನಂ: 116-2021 ಕಲಂ:  366 (a), 376(g), 506 ಐಪಿಸಿ ಮತ್ತು ಕಲಂ: 04. 06 Posco Act ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಸುಳ್ಯ ಪೊಲೀಸ್ ಠಾಣೆ : ದಿನಾಂಕ 08.10.2021 ರಂದು ಸುಳ್ಯ ಪೊಲೀಸ್ ಠಾಣೆಯಲ್ಲಿ  ಅ.ಕ್ರ 79/2021 ಕಲಂ 323,324 ಜೊತೆಗೆ 34 ಐಪಿಸಿ ಮತ್ತು The SC & ST (Prevention of Atrocities) Amendment Act 2015 (U/s-3(1)(r),3(1)(s))ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

 

ಅಸ್ವಾಭಾವಿಕ ಮರಣ ಪ್ರಕರಣ: 1

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ವಿಘ್ನೆಶ್ ಪ್ರಾಯ:45 ವರ್ಷ ತಂದೆ; ಜನಾರ್ಧನ ವಾಸ; ಕನ್ಯಾಡಿ-2 ಧರ್ಮಸ್ಥಳ ಗ್ರಾಮ ಬೆಳ್ತಂಗಡಿ ತಾಲೂಕು  ಎಂಬವರ ದೂರಿನಂತೆ ಮಾಹಿತಿ ಕಛೇರಿಯ ಬಳಿ ಇರುವ ಕೆ ಎಸ್ ಆರ್ ಟಿ ಸಿ ಬಸ್ಸು ನಿಲ್ದಾಣದ ಬಳಿ ದಿನಾಂಕ: 08/10/2021 ರಂದು ಬೆಳಗ್ಗೆ 8.00 ಗಂಟೆಯ ಸಮಯಕ್ಕೆ ಸುಮಾರು 50 ರಿಂದ 55 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತ ದೇಹವು ಪತ್ತೆಯಾಗಿದ್ದು ಸದ್ರಿ ವ್ಯಕ್ತಿಯು ಯಾವುದೋ ಖಾಯಿಲೆಯಿಂದ  ಮೃತ ಪಟ್ಟಂತೆ ಕಂಡು ಬರುತ್ತಿದ್ದು.ಈ ಬಗ್ಗೆ ಧರ್ಮಸ್ಥಳ ಪೊಲೀಸ್    ಯು ಡಿ ಆರ್  49/2021 ಕಲಂ:174       ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

 

ಕೊಲೆ ಪ್ರಕರಣ: 1

ವೇಣೂರು ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಜಗನ್ನಾಥ್ (36),  ತಂದೆ: ಸಂಜೀವ ಶೆಟ್ಟಿ, ವಾಸ: ಎಸ್‌ವಿಎಸ್‌ ಕಾಲೇಜಿನ ಬಳಿ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಮೃತ ಸಂಜೀವ ಶೆಟ್ಟಿ(65)  ಇವರು  ಬೆಳ್ತಂಗಡಿ ತಾಲೂಕು ಕರಿಮಣೇಲು ಗ್ರಾಮದ ನೂಯಿ ಮನೆ ಎಂಬಲ್ಲಿ ಒಬ್ಬರೇ ವಾಸವಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ, ಇವರ ಮನೆಯ ಹತ್ತಿರದಲ್ಲಿ ಇವರ ಅಳಿಯ ಶ್ರೀಶ ಎಂಬವನು ಕೂಡಾ ಪ್ರತ್ಯೇಕವಾಗಿ ವಾಸವಾಗಿದ್ದು, ಅವರಿಬ್ಬರಿಗೂ ಜಾಗದ ವಿಚಾರದಲ್ಲಿ ಆಗಾಗ ಗಲಾಟೆಯಾಗುತ್ತಿದ್ದು, ದಿನಾಂಕ 07.10.2021  ರಂದು 19:00 ಗಂಟೆಯಿಂದ ಮರುದಿನ ಬೆಳಿಗ್ಗೆ 10:00 ಗಂಟೆಯ ಮಧ್ಯಕಾಲದಲ್ಲಿ  ಆರೋಪಿ ಶ್ರೀಷಾ ಇವರು ಸಂಜೀವ ಶೆ್ಟ್ಟಿಯವರ ಮನೆಯ ಒಳಗೆ ಬಂದು ಜಗಳ ತೆಗೆದು ಸಂಜೀವ ಶೆಟ್ಟಿಯವರ ಬೆನ್ನಿಗೆ ಮತ್ತು ಕುತ್ತಿಗೆಗೆ  ಕತ್ತಿಯಿಂದ ಕಡಿದು ತೀವ್ರ ಗಾಯಗೊಳಿಸಿದ್ದರಿಂದ ಸಂಜೀವ ಶೆಟ್ಟಿಯವರು ಅವರಿಗಾದ ತೀವ್ರ ಗಾಯದಿಂದ ತನ್ನ ಮನೆಯ ಒಳಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ: 63-2021 ಕಲಂ: 302 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 09-10-2021 10:33 AM Updated By: Dakshina Kannada District Police


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : DAKSHINA KANNADA DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080