Feedback / Suggestions

ಅಪಘಾತ ಪ್ರಕರಣ: 3

ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪಾಂಡುರಂಗ ಪ್ರಾಯ 59 ವರ್ಷ ತಂದೆ:ವೆಂಕಟರಮಣ ಆಚಾರ್ಯ ವಾಸ: ಸಿದ್ದಿ ವಿನಾಯಕ ದೇವಸ್ಥಾನದ ಹತ್ತಿರ ಮದೂರ ಗ್ರಾಮ ಕಾಸರಗೂಡು ಜಿಲ್ಲೆ ಎಂಬವರ ದೂರಿನಂತೆ ಪಿರ್ಯಾಧಿದಾರರು ದಿನಾಂಕ:09-10-2021 ರಂದು ತಮ್ಮ ಮನೆಯಿಂದ ತನ್ನ ಬಾಬ್ತು KL-14-Z-2043ನೇ ಸ್ಕೂಟರನಲ್ಲಿ ಹಿಂಬಂದಿ ಸವಾರಳನ್ನಾಗಿ ಅವರ ಹೆಂಡತಿ ಕಲಾವತಿರವರನ್ನು ಕುಳ್ಳಿರಿಸಿಕೊಂಡು ಹೆಂಡತಿಯ ತಂಗಿಯ ಮನೆಯಾದ ಕಲ್ಲಡ್ಕಕ್ಕೆ ಹೋಗುವರೇ ಕುದ್ದುಪದವು-ವಿಟ್ಲ ಮಾರ್ಗವಾಗಿ ಸ್ಕೂಟರನ್ನು ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು 14.00 ಗಂಟೆಗೆ ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಮಜ್ಜೊನಿ ಕ್ರಾಸ್‌ ಬಳಿ ತಲುಪಿದಾಗ ಕಲ್ಲಡ್ಕ ಕಡೆಯಿಂದ ವಿಟ್ಲ ಕಡೆಗೆ KA-19-AD-0757ನೇ ಬಸ್ಸನ್ನು ಅದರ ಚಾಲಕ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ತೀರ ಬಲಬದಿಗೆ ಬಂದು ಪಿರ್ಯಾಧಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾಧೀ ಹಾಗೂ ಅವರ ಹೆಂಡತಿ ಡಾಮಾರು ರಸ್ತೆಗೆ ಎಸೆಯಲ್ಪಟ್ಟು ಪಿರ್ಯಾಧಿಯ ಬಲಕಾಲಿನ ತೊಡೆಯ ಭಾಗಕ್ಕೆ ತೀವೃ ತರಹದ ಸ್ವರೂಪದ ರಕ್ತಗಾಯ ಹಾಗೂ ಬಲ ಮೊಣಕೈ ಬೆರಳಿಗೆ ರಕ್ತಗಾಯವಾಗಿರುತ್ತದೆ. ಸಹ ಸವಾರಳಾದ ಕಲಾವತಿರವರಿಗೆ ಬಲ ಭುಜಕ್ಕೆ ರಕ್ತಗಾಯ ಹಾಗೂ ಬಲತೊಡೆಗೆ ಗುದ್ದಿದ ಗಾಯವಾಗಿರುತ್ತದೆ. ಗಾಯಾಳುಗಳು ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ಲಾಕ್‌ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 131/2021  ಕಲಂ: 279,337 ಬಾಧಂಸಂಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಪುತ್ತೂರು ನಗರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸೃಜನ್  ಎಸ್ ಪ್ರಾಯ: 19 ವರ್ಷ  ತಂದೆ: ಸುರೇಂದ್ರ ವಾಸ: ಆದರ್ಶನಗರ ಲಾಯಿಲ ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ಫಿರ್ಯಾದಿರವರು  ದಿನಾಂಕ: 10-10-2021 ರಂದು ಪಿರ್ಯಾದಿದಾರರ ಸ್ನೇಹಿತನ ಬಾಬ್ತು ಕಾರಿನಲ್ಲಿ ಪಿರ್ಯಾದಿದಾರರ ಸ್ನೇಹಿತರಾದ ಆದಿತ್ಯ, ಲತೀಶ್  ಹಾಗೂ ಹೆಸರು ವಿಳಾಸ ತಿಳಿಯದ ಇನ್ನಿಬ್ಬರನ್ನು ಪುತ್ತೂರು ತಾಲೂಕು ನರಿಮೊಗ್ರು ಗ್ರಾಮದ ನರಿಮೊಗ್ರು ಶಾಲೆಯಲ್ಲಿ ನಡೆಯುವ ವಿದ್ಯಾರ್ಥಿಗಳ ಶಿಬಿರಕ್ಕೆ ಬಿಟ್ಟು ವಾಪಾಸ್ಸು ಪಿರ್ಯಾದಿದಾರರ ಮನೆಗೆ ಹೋಗುವರೇ ಕಾರನ್ನು ಚಲಾಯಿಸಿಕೊಂಡು ಹೋಗುತ್ತಾ ಸಮಯ ಸುಮಾರು 13:30 ಗಂಟೆ ಸಮಯಕ್ಕೆ ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ ಸಾಲ್ಮರ ಎಂಬಲ್ಲಿಗೆ ತಲುಪಿದಾಗ ಒಂದು ಮೋಟಾರು ಸೈಕಲನ್ನು ಅದರ  ಸವಾರನು ಸಹ ಸವಾರೆಯನ್ನು    ಕುಳ್ಳಿರಿಸಿಕೊಂಡು ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ ಅಪಘಾತವೆಸಗಿದಾಗ ಅಲ್ಲಿ ಸೇರಿದ ಅಪರಿಚಿತ  ನಾಲ್ಕು ಜನರು ಪಿರ್ಯಾದಿದಾರರ ಎಡಭುಜಕ್ಕೆ , ಎಡ ಎದೆಗೆ , ಬಲಕೆನ್ನೆಗೆ  ಆರೋಪಿಗಳು ಕೈಯಿಂದ ಮತ್ತು ಕಾಲಿನಿಂದ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ಬೈದು ಆರೋಪಿಗಳೆಲ್ಲರೂ ಪಿರ್ಯಾದಿದಾರರಿಗೆ ಜೀವ ಬೆದರಿಕೆ ಒಡ್ಡಿರುತ್ತಾರೆ , ಪಿರ್ಯಾದಿದಾರರು ಹಲ್ಲೆಯಾದ ನೋವಿನ ಬಗ್ಗೆ ಚಿಕಿತ್ಸೆಯನ್ನು ಪಡೆಯಲು ಪುತ್ತೂರು ಸರ್ಕಾರಿ ಅಸ್ಪತ್ರೆಗೆ ತೆರಳಿ ಪ್ರಥಮ ಚಿಕಿತ್ಸೆಯನ್ನು ಪಡೆದು ಬಳಿಕ ಹೆಚ್ಚಿನ ಚಿಕಿತ್ಸೆ ಬಗ್ಗೆ ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ  ಅ.ಕ್ರ: ಕಲಂ: 76/2021 ಕಲಂ: 279,323,  504,506 ಜೊತೆಗೆ 34 ಐ.ಪಿ.ಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಬ್ದುಲ್‌ಖಾದರ್,ಪ್ರಾಯ: 47 ವರ್ಷ,ತಂದೆ: ಅಬೂಬಕ್ಕರ್, ವಾಸ: ಬಲ್ನಾಡ ಅಂಗಡಿ ಮನೆ.ಬಲ್ನಾಡು ಗ್ರಾಮ, ಪುತ್ತೂರು ಎಂಬವರ ದೂರಿನಂತೆ ದಿನಾಂಕ:-10.10.2021ರಂದು ಫಿರ್ಯಾದುದಾರರು ತನ್ನ ಮನೆಯಿಂದ ಬಲ್ನಾಡು ವಿನಾಯಕ ನಗರದಲ್ಲಿರುವ ಅಂಗಡಿಯ ಕಡೆಗೆ ಪುತ್ತೂರು-ಉಜ್ರುಪಾದೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಾ ಬೆಳಿಗ್ಗೆ ಸುಮಾರು 8.00 ಗಂಟೆಗೆ  ಬಲ್ನಾಡು  ಉಳ್ಳಾಳ್ತಿ  ಕಾಂಪ್ಲೆಕ್ಸ್‌ನಿಂದ ಸ್ವಲ್ಪ ಮುಂದಕ್ಕೆ  ತಲುಪಿದಾಗ  ಪುತ್ತೂರು-ಉಜ್ರುಪಾದೆ   ರಸ್ತೆಯಲ್ಲಿ ಪುತ್ತೂರು ಕಡೆಯಿಂದ ಉಜ್ರುಪಾದೆ ಕಡೆಗೆ ಲಾರಿಯೊಂದನ್ನು ಅದರ ಚಾಲಕ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಉಜ್ರುಪಾದೆ ಕಡೆಯಿಂದ ಪುತ್ತೂರು ಕಡೆಗೆ ಫಿರ್ಯಾದುದಾರರ ಪರಿಚಯದ ಬಲ್ನಾಡು ಪಳ್ಳಿಕೆರೆಯ ಅಬ್ದುಲ್ ಅಝೀಝ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಮೋಟಾರ್ ಸೈಕಲಿಗೆ ಢಿಕ್ಕಿ ಹೊಡೆದಿದ್ದು, ಈ ಅಪಘಾತದಿಂದಾಗಿ  ಸದ್ರಿ ಮೋಟಾರ್‌ಸೈಕಲ್ ಮಗುಚಿಬಿದ್ದು ಅದರ ಸವಾರನಾದ ಅಬ್ದುಲ್ ಅಝೀಝ್ ಎಂಬವನು ರಸ್ತೆಗೆ ಎಸೆಯಲ್ಪಟ್ಟು ಸದ್ರಿ ಲಾರಿಯು  ಆತನ  ಮೇಲೆಯೇ ಚಲಿಸಿದ್ದು, ಈ ಅಪಘಾತದಿಂದಾಗಿ  ಮೋಟಾರ್ ಸೈಕಲ್ ಸವಾರನಾದ ಅಬ್ದುಲ್ ಅಝೀಝ್‌ನ ತಲೆಯು ಹುಡಿಯಾಗಿದ್ದು, ಆತನ ದೇಹದಲ್ಲಿ ಯಾವುದೇ ಚಲನೆ ಕಂಡು ಬರಲಿಲ್ಲ. ಈ ಅಪಘಾತವುಂಟು ಮಾಡಿದ ಲಾರಿಯ ನಂಬರ್  KA20 AB 1808 ಆಗಿದ್ದು, ಅದರ ಚಾಲಕನ ಹೆಸರು ಸುಧಾಕರ ಶೆಟ್ಟಿ ಎಂಬುದಾಗಿರುತ್ತದೆ. ಅದೇ ರೀತಿ ಅಬ್ದುಲ್ ಅಝೀಝ್ ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್ ನಂಬ್ರ KA21 U 6149 ಆಗಿರುತ್ತದೆ. ಬಳಿಕ  ಅಬ್ದುಲ್ ಅಝೀಝ್‌ನನ್ನು ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿಯ ವೈದ್ಯಾಧಿಕಾರಿಯವರು ಅಬ್ದುಲ್ ಅಝೀಝ್‌ನನ್ನು ಪರೀಕ್ಷಿಸಿ, ಸದ್ರಿಯವನು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಆ.ಕ್ರ 84/21  ಕಲಂ: 279 304(ಎ)ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

 

ಕಾಣೆ ಪ್ರಕರಣ: 1

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸಚಿನ್ ಆಚಾರ್ಯ, ಪ್ರಾಯ: 22 ವರ್ಷ ತಂದೆ: ಸತೀಶ್ ಆಚಾರ್ಯ ವಾಸ: ನಾಗಶ್ರೀ ಕಂಪೌಂಡು, ಅಜೆಕಳ  ಬೈಪಾಸ್ ರೋಡ್ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರ ತಂದೆ: ಕೆ. ಸತೀಶ್ ಆಚಾರ್ಯ  ರವರು ದಿನಾಂಕ: 09.10.2021 ರಂದು ಮದ್ಯಾಹ್ನ 3:0 ಗಂಟೆಗೆ ವಾಕಿಂಗ್ ಹೋಗಿ ಬರುತ್ತೇನೆಂದು ಹೇಳಿ ಹೋದವರು ಸಂಜೆಯಾದರು ಮನೆಗೆ ಬಾರದಿದ್ದು, ನಂತರ  ಈ ದಿನದ ವರೆಗೆ  ನೆರೆಯವರಲ್ಲಿ, ಸಂಬಂಧಿಕರಲ್ಲಿ ವಿಚಾರಿಸಲಾಗಿ ಎಲ್ಲಿಯೂ ಸಿಕ್ಕಿರುವುದಿಲ್ಲ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 118/2021 ಕಲಂ ಮನುಷ್ಯೆ ಕಾಣೆ ಪ್ರಕರಣ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

ವಿಟ್ಲ ಪೊಲೀಸ್ ಠಾಣೆ : ದಿನಾಂಕ:10-10-2021 ರಂದು ವಿಟ್ಲ ಪೊಲೀಸ್‌ ಠಾಣೆಯಲ್ಲಿ ಅ.ಕ್ರ 130/2021  ಕಲಂ: 354 ಬಾಧಂಸಂಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಉಪ್ಪಿನಂಗಡಿ ಪೊಲೀಸ್ ಠಾಣೆ : ದಿನಾಂಕ 10-10-2021 ರಂದು  ಹಿತೋಷ್  ಕುಮಾರ್  ಹೆಚ್,ಸಿ 838 ರವರು  ಪಿ.ಸಿ 2509 ಯೋಗರಾಜ್ ರವರೊಂದಿಗೆ ಇಲಾಖಾ ಜೀಪು  ಕೆ.ಎ 19 ಜಿ 367 ನೇದರಲ್ಲಿ ರೌಂಡ್ಸ್ ಕರ್ತವ್ಯದಲ್ಲಿ ನೆಲ್ಯಾಡಿ ಪೆರಿಯಶಾಂತಿ ಕಾಪಿನ ಬಾಗಿಲು ಕಡೆಗಳಲ್ಲಿ ಸಂಚರಿಸಿ ಕೊಂಡು  ಕಾಪಿನ ಬಾಗಿಲು ಎಂಬಲ್ಲಿಗೆ ಸಮಯ 11.00 ಗಂಟೆಗೆ  ತಲುಪಿದಾಗ ಕಡಬ ತಾಲೂಕು ಶಿರಾಡಿ ಗ್ರಾಮದ ಕಲಪ್ಪಾರು ಎಂಬಲ್ಲಿರುವ ಜೋಸೆಫ್ ಎಂಬವರ ರಬ್ಬರ್ ತೋಟದಲ್ಲಿ ಅಕ್ರಮವಾಗಿ ದನವನ್ನು ಕಡಿದು ಮಾಂಸ ಮಾಡುತ್ತಿದ್ದಾರೆ ಎಂಬುದಾಗಿ ಬಂದ ಮಾಹಿತಿಯಂತೆ ಕಾಪಿನ ಬಾಗಿಲಿನಿಂದ ಹೊರಟು ಸಮಯ ಸುಮಾರು 11.45 ಗಂಟೆಗೆ ಘಟನಾ ಸ್ದಳಕ್ಕೆ ತಲುಪಿದಾಗ ಪೊಲೀಸ್ ಜೀಪನ್ನು ಹಾಗೂ ಸಮವಸ್ತ್ರ ದಲ್ಲಿದ್ದ ಪೊಲೀಸರನ್ನು ಕಂಡು ಆರೋಪಿಗಳು ರಬ್ಬರ್ ತೋಟದಲ್ಲಿ ಓಡಿ ಪರಾರಿಯಾಗಿದ್ದು ಹತ್ತಿರ ಹೋಗಿ ನೋಡಲಾಗಿ ಜೋಸೆಫ್ ರವರ ಬಾಬ್ತು ಹಂಚು ಛಾವಣಿಯ ಮನೆಯ ಅಂಗಳದ ಬದಿಯಲ್ಲಿನ ತೆಂಗಿನ ಮರದ ಬುಡದಲ್ಲಿ ದನವನ್ನು ಕಡಿದ ಮಾಂಸವಿದ್ದು  ಹಾಗೂ ತೂಕದ ತಕ್ಕಡಿ ಹಾಗೂ ಅಳತೆ ಕಲ್ಲುಗಳು, ಅಲ್ಲದೇ ಒಂದು ಕಾರು ಹಾಗೂ ಐದು ದ್ವಿಚಕ್ರ ವಾಹನಗಳು ಜೋಸೆಫ್ ರವರ ಅಂಗಳದಲ್ಲಿ ನಿಂತಿರುವುದು ಕಂಡು ಬಂದಿದ್ದು, ಆರೋಪಿತರು ಅಕ್ರಮವಾಗಿ ಗೋಹತ್ಯೆ ನಡೆಸಿ ಮಾಂಸ ಮಾಡಿರುವುದಾಗಿದೆ,  ಮಾಂಸವು ಸುಮಾರು 50 ಕೆ.ಜಿ ಆಗಬಹುದು ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ ಕ್ರ 101/2021  ಕಲಂ:, 12  KARNATAKA PREVENTION OF SLAUGHTER AND PRESERVATION OF CATTLE ORDINANCE-2020 U/s 11 (1)(L) PREVENTION OF CRUELTY TO ANIMALS ACT   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

 

 

ಅಸ್ವಾಭಾವಿಕ ಮರಣ ಪ್ರಕರಣ: 1

ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಗಿರೀಶ್‌.ಬಿ (36) ತಂದೆ:ನಾರಾಯಣ ಗೌಡ ವಾಸ: ಬರಮೇಲು ಮನೆ ಕನಕಮಜಲು ಅಂಚೆ ಮತ್ತು ಗ್ರಾಮ  ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರ ತಂದೆ ನಾರಾಯಣ ಗೌಡರವರು ಕಳೆದ 35 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದವರು ಕಳೆದ 5 ವರ್ಷಗಳ ಹಿಂದೆ ಮನೆಯ ಬಳಿಯ ಬಾವಿಯೊಂದಕ್ಕೆ ಬಿಳಲು ಯತ್ನಿಸಿದವರನ್ನು ಮನೆಯವರು ರಕ್ಷಿಸಿದ್ದು, ನಂತರ ತಂದೆಯವರು ಆಗಾಗ ನನಗೆ ಬದುಕಲು ಇಷ್ಟ ಇಲ್ಲ ನಾನು ಸಾಯುತ್ತೇನೆಂದು ಹೇಳುತ್ತಿದ್ದು, ಪಿರ್ಯಾದಿದಾರರು ದಿನಾಂಕ:08.10.2021 ರಂದು ಬೆಳಿಗ್ಗೆ ಪುತ್ತೂರಿಗೆ ಹೋಗಿ ವಾಪಾಸು ಮನೆಗೆ ಸಂಜೆ 4:15 ಗಂಟೆಗೆ ಬಂದಾಗ ತಂದೆಯವರು ಅವರು ಮಲಗುವ ಸ್ಥಳದಲ್ಲಿಯೇ ಮಲಗಿದ್ದು, ಅವರ ಬಳಿಗೆ ಹೋಗಿ ಊಟ ಮಾಡಿದೆಯ ಎಂದು ವಿಚಾರಿಸಿದಾಗ ತಂದೆಯವರ ಬಾಯಿಯಿಂದ ಯಾವುದೋ ವಿಷಪದಾರ್ಥದ ವಾಸನೆ ಬರುತ್ತಿತ್ತು. ಅಲ್ಲದೇ ತಂದೆಯವರು ಅಸ್ವಸ್ಥಗೊಂಡಿದ್ದು ಕಂಡು ಬಂದಿರುತ್ತದೆ. ಕೂಡಲೇ ಪಿರ್ಯಾದಿದಾರು ನಾರಾಯಣ ಗೌಡರವರನ್ನು ಕಾರೊಂದರಲ್ಲಿ ಸುಳ್ಯ ಸರಕಾರಿ ಆಸ್ವತ್ರೆಗೆ ಕರೆ ತಂದಾಗ ಅಲ್ಲಿನ ವೈದ್ಯಾದಿಕಾರಿಯವರು ಪರೀಕ್ಷಿಸಿದ್ದು, ಅವರು ಸೂಚಿಸಿದ ಮೇರೆಗೆ ಹೆಚ್ಚಿನ ಚಿಕಿತ್ಸೆ ಬಗ್ಗೆ  ಸುಳ್ಯ ಕೆ.ವಿ.ಜಿ ಆಸ್ವತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿದ್ದು, ದಿನಾಂಕ: 10.10.2021ರಂದು ಮದ್ಯಾಹ್ನ 2:00ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ವೈದ್ಯಾದಿಕಾರಿಯವರು ತಿಳಿಸಿದ್ದು. ಈ ಬಗ್ಗೆ ಸುಳ್ಯ ಪೊಲೀಸು ಠಾಣೆ  ಯುಡಿಅರ್  ನಂಬ್ರ 43/21 ಕಲಂ 174 ಸಿಅರ್‌ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 11-10-2021 10:36 AM Updated By: Dakshina Kannada District Police


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : DAKSHINA KANNADA DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080