Feedback / Suggestions

ಅಪಘಾತ ಪ್ರಕರಣ: 2

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಆಕಾಶ್ ಪ್ರಾಯ: 20 ವರ್ಷತಂದೆ: ವಿಠ್ಠಲ ವಾಸ: ನಡುವಿನ ಓಣಿ ಮುಗುಳಿ ಗ್ರಾಮ, ಅಗಸನಹಳ್ಳಿ , ಗರಗ ಅಂಚೆ ಧಾರವಾಡ ತಾಲೂಕು ಮತ್ತು ಜಿಲ್ಲೆ ರವರು ದಿನಾಂಕ 08.12.2021 ರಂದು KA 19 AB 0232 ನೇ  ಕಾರಿನಲ್ಲಿ ಮಂಜುನಾಥ್ ರವರನ್ನು ಕುಳ್ಳಿರಿಸಿಕೊಂಡು ರಾತ್ರಿ ಮಂಗಳೂರಿನಿಂದ ಹೊರಟು ಕಲ್ಲಡ್ಕ ಕಡೆಗೆ ಚಲಾಯಿಸಿಕೊಂಡು ಬರುತ್ತಾ ದಿನಾಂಕ: 09.12.2021 ರಂದು ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮದ ನರಹರಿ ನಗರ ಎಂಬಲ್ಲಿಗೆ ತಲುಪಿದಾಗ ಕಲ್ಲಡ್ಕ ಕಡೆಯಿಂದ KA 45 5077 ನೇ ಪಿಕಪ್ ವಾಹನವನ್ನು ಅದರ ಚಾಲಕ ರೋಹಿತ್ ರವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್ ಸೈಡಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ವಾಹನಗಳೆರಡೂ ಜಖಂಗೊಂಡಿದ್ದು, ಅಪಘಾತದಲ್ಲಿ ಪಿರ್ಯಾದಿದಾರರ ಎಡಕಣ್ಣಿನ ಕೆಳಬದಿ, ಕುತ್ತಿಗೆ, ಬಲಕೈತಟ್ಟಿಗೆ, ತರಚಿದ ಗಾಯ, ಮೈಕೈಗೆ ಗುದ್ದಿದ ಗಾಯವಾಗಿರುವುದಲ್ಲದೇ, ಮಂಜುನಾಥ್ ರವರ ತಲೆಗೆ ರಕ್ತಗಾಯ , ಭುಜಕ್ಕೆ ಕಾಲಿಗೆ ಗುದ್ದಿದ ಗಾಯವಾಗಿದ್ದು ಗಾಯಾಳುಗಳು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ  ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 137/2021  ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಅಶೋಕ (34) ತಂದೆ:ಓಬಯ್ಯ ಪೂಜಾರಿ,  ಹಿಪ್ಪೆ ಮನೆ,ಬೆಳಾಲು ಗ್ರಾಮ,ಬೆಳ್ತಂಗಡಿ ತಾಲೂಕು ರವರು ದಿನಾಂಕ: 09-12-2021 ರಂದು ತನ್ನ ಬಾಬ್ತು ಕೆಎ 70 ಎಚ್ 2777 ರಲ್ಲಿ ಪತ್ನಿ ಲಕ್ಷ್ಮಿಯವರನ್ನು ಹಿಂಬದಿ ಸವಾರಳನ್ನಾಗಿ ಕುಳ್ಳಿರಿಸಿಕೊಂಡು ಉಜಿರೆಯಿಂದ ಕಕ್ಕಿಂಜೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವ ಸಮಯ ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಉಜಿರೆ ಪೈ ಪೆಟ್ರೋಲ್ ಪಂಪ್ ಬಳಿ ತಲುಪುತ್ತಿದ್ದಂತೆ ಅವರ ವಿರುದ್ದ ಧಿಕ್ಕಿನಿಂದ ಅಂದರೆ  ಕಕ್ಕಿಂಜೆಯಿಂದ ಉಜಿರೆ ಕಡೆಗೆ ಕೆಎ 21 ಕೆ 5473 ನೇ ಮೋಟಾರು ಸೈಕಲನ್ನು ಅದರ ಸವಾರ ದುಡುಕುತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದರಾರರ ಮೋಟಾರು ಸೈಕಲಿಗೆ ಢಿಕ್ಕಿ ಹೊಡೆದ ಪರಿಣಾಮ ಸಹಸವಾರೆ ಲಕ್ಷ್ಮಿಯವರಿಗೆ ಬಲ ಕಾಲಿನ ಕೋಲು ಕಾಲಿಗೆ ಮೂಳೆಮುರಿತದ ತೀವ್ರ ಗಾಯವಾಗಿರುತ್ತದೆ, ಹಾಗೂ ಢಿಕ್ಕಿ ಹೊಡೆದ ಮೋಟಾರು ಸೈಕಲ್  ಸವಾರನಿಗೂ ಸಣ್ಣಪುಟ್ಟ ಗಾಯವಾಗಿದ್ದು ಗಾಯಾಳುಗಳು ಚಿಕಿತ್ಸೆ ಬಗ್ಗೆ ಉಜಿರೆ ಬೆನಕ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 91/2021, ಕಲಂ; 279, 338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಯತ್ನ ಪ್ರಕರಣ: 1

 

ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಪುರುಷೋತ್ತಮ ಪ್ರಾಯ: 39 ವರ್ಷ ತಂದೆ: ದಿ/ಭೋಜ ಬಂಗೇರ ವಾಸ: ಶ್ರೀ ದೇವಿ ನಿಲಯ ಗೋಳಿ ಪಲ್ಕೆ  ಪಡುಪೆರಾರ  ಅಂಚೆ ಮತ್ತು ಗ್ರಾಮ ಮಂಗಳೂರು ತಾಲೂಕು ತಾಲೂಕುರವರು ಪುತ್ತೂರು ನ್ಯಾಯಾಲಯ ಸಂಕೀರ್ಣದಲ್ಲಿರುವ ಅಂಚೆ ಕಛೇರಿಯಲ್ಲಿ ಪ್ರಭಾರ ಉಪ ಅಂಚೆ ಪಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ: 09-12-2021 ರಂದು ಸಂಜೆ ಸುಮಾರು 5:00 ಗಂಟೆಗೆ ಪಿರ್ಯಾದಿದಾರರು ಎಂದಿನಂತೆ  ಕಛೇರಿಯನ್ನು ಮುಚ್ಚಿ ಬೀಗ ಹಾಕಿ ಮನೆಗೆ ಹೋಗಿರುತ್ತಾರೆ. ದಿನಾಂಕ: 10-12-2021 ರಂದು ಬೆಳಿಗ್ಗೆ ಸುಮಾರು 9:00 ಗಂಟೆಗೆ   ಪಿರ್ಯಾದಿದಾರರು ಕಛೇರಿಗೆ ಬಂದಾಗ ಕಛೇರಿಯ ಕಿಟಕಿಯ ಸರಳನ್ನು ತುಂಡು ಮಾಡಿರುವುದು ಕಂಡು ಬಂದಿರುತ್ತದೆ. ಅಲ್ಲದೇ ಕಛೇರಿಯ ಒಳಗಿದ್ದ ಭದ್ರತಾ ತಿಜೋರಿಯನ್ನು ಕೂಡಾ ಮುರಿಯಲು ಪ್ರಯತ್ನ ನಡೆಸಿರುವುದು ಕಂಡು ಬಂದಿರುತ್ತದೆ. ಕಛೇರಿಯ ಯಾವುದೇ ದಾಖಲೆಗಳು ಮತ್ತು ತಿಜೋರಿಯಲ್ಲಿದ್ದ ಹಣ ಕಳವಾಗಿರುವುದಿಲ್ಲ . ದಿನಾಂಕ: 09-12-2021 ರ ಸಂಜೆ 5 ಗಂಟೆಯಿಂದ ದಿನಾಂಕ: 10-12-2021 ರ ಬೆಳಿಗ್ಗೆ 9:00 ಗಂಟೆಯ ಮಧ್ಯಾವಧಿಯಲ್ಲಿ  ಯಾರೋ ಕಳ್ಳರು ಕಛೇರಿಯ ಬೀಗ ಮುರಿದು ಕಛೇರಿಯ ಒಳಗಿದ್ದ ಭದ್ರತಾ ತಿಜೋರಿಯನ್ನು ಮುರಿಯಲು ಪ್ರಯತ್ನಿಸಿರುತ್ತಾರೆ  ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಅ.ಕ್ರ: 110-2021  ಕಲಂ: 454, 457, 380, 511 ಐ.ಪಿ.ಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

 

ಬೆಳ್ತಂಗಡಿ ಠಾಣಾ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ನರೇಂದ್ರ  ಪ್ರಾಯ: 50 ವರ್ಷ, ತಂದೆ: ದಿ: ಕರಿಯಪ್ಪ, ವಾಸ:  ಮಲೆ ಮನೆ ಗ್ರಾಮ,  ಮೂಡಿಗೆರೆ ತಾಲೂಕು , ಚಿಕ್ಕಮಂಗಳೂರು  ಜಿಲ್ಲೆ ಬೆಳ್ತಂಗಡಿ ತಾಲೂಕು ರವರ ಮಗ ಸಮರ್ಥ್(17) ಎಂಬಾತನು  ಬೆಳ್ತಂಗಡಿಯ ಗುರುದೇವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡಿಕೊಂಡಿದ್ದು, ಸಂಜಯನಗರದ ಪಿಜಿಯಲ್ಲಿ ತನ್ನ ಊರಿನ  ಪರಿಚಯದ ಕೃತಿಕ್ ಎಂಬಾತನ ಜೊತೆ ವಾಸವಾಗಿದ್ದವನು, ದಿನಾಂಕ:10-12-2021 ರಂದು ಮದ್ಯಾಹ್ನ ನಂತರ ಕಾಲೇಜಿಗೆ ಹೋಗದೇ ಕೃತಿಕ್  ನನ್ನು ಕರೆದುಕೊಂಡು  ನದಿ ನೀರಿ ನಲ್ಲಿ ಈಜುವರೇ ಲಾಯಿಲ ಗ್ರಾಮದ ಸೋಮವತಿ  ನದಿ ಕಿನಾರೆ ಬಳಿ ಹೋಗಿದ್ದು,  ಕೃತಿಕ್  ನು ಈಜು ಬಾರದ ಕಾರಣ ಸ್ವಲ್ಪ ನೀರಿಗೆ ಇಳಿದಿದ್ದು, ಸಮರ್ಥ ನು ಈಜು ಬರುತ್ತದೆ ಎಂದು ತಿಳಿಸಿ ಆಳವಾದ ನೀರಿಗೆ ಇಳಿದವನು ಮದ್ಯಾಹ್ನ 01-30 ಗಂಟೆಯಿಂದ 02-30 ಗಂಟೆಯ ಮದ್ಯದ ಅವಧಿಯಲ್ಲಿ ಆಕಸ್ಮಿಕವಾಗಿ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಈ ಬಗ್ಗೆ ಬೆಳ್ತಂಗಡಿ ಠಾಣಾ UDR ನಂಬ್ರ: 40/2021 ಕಲಂ: 174 ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 11-12-2021 10:59 AM Updated By: Dakshina Kannada District Police


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : DAKSHINA KANNADA DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080