Feedback / Suggestions

ಅಪಘಾತ ಪ್ರಕರಣ: 1

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಇಲ್ಯಾಸ್ ಅಬ್ದುಲ್ ರಹಿಮಾನ್,  ಪ್ರಾಯ 47 ವರ್ಷ ತಂದೆ : ದಿ|| ಇಬ್ರಾಹೀಂ ವಾಸ : ದಾಸರಗುಡ್ಡೆ ಮನೆ, ನಂದಾವರ, ಸಜಿಪ ಮುನ್ನೂರು ಗ್ರಾಮ ಬಂಟ್ವಾಳ ತಾಲೂಕು ರವರು ದಿನಾಂಕ 12-07-2022 ರಂದು ಬಾವ ಅಬೂಬಕ್ಕರ್ ಸಿದ್ದಿಕ್ ರವರೊಂದಿಗೆ ಕೆಲಸ ಮುಗಿಸಿಕೊಂಡು ಅಮ್ಟೂರು ಕಡೆಯಿಂದ ಬೊಳ್ಳಾಯಿ ಕಡೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಾ ಸಮಯ ಸುಮಾರು ರಾತ್ರಿ 21:00 ಗಂಟೆಗೆ ಬಂಟ್ವಾಳ ತಾಲೂಕು ಸಜಿಪಮೂಡ ಗ್ರಾಮದ ಬೊಳ್ಳಾಯಿಯ ಜಾಡಕೋಡಿ ಎಂಬಲ್ಲಿಗೆ ತಲುಪಿದಾಗ ಪಿರ್ಯಾದಿದಾರರ ಹಿಂದಿನಿಂದ ಅಂದರೆ ಅಮ್ಟೂರು ಕಡೆಯಿಂದ KA-19-MC-1202 ನೇ ಆಟೋರಿಕ್ಷಾವನ್ನು ಅದರ ಚಾಲಕ ಸೌಕತ್ ಹುಸೈನ್ ರವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು  ಹೋಗಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಬೂಬಕ್ಕರ್ ಸಿದ್ದಿಕ್ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ಬಲಕೈ ಬೆರಳುಗಳಿಗೆ ರಕ್ತಗಾಯ ಹಾಗೂ ಕಾಲುಗಳಿಗೆ ಸಣ್ಣಪುಟ್ಟ ತರಚಿದ ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಅ.ಕ್ರ 78/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಹಲ್ಲೆ ಪ್ರಕರಣ: 1

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ತನ್ನ ಗಂಡ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದು ಮನೆ ವಾರ್ತೆ ಕೆಲಸ ಮಾಡಿಕೊಂಡಿರುವುದಾಗಿದೆ. ಅತ್ತೆರವರ ಅಣ್ಣನ ಮಗ ರಮೇಶ್ ರವರು ದಿನಾಂಕ  13-07-2022 ರಂದು ಮದ್ಯಾಹ್ನ 3.00 ಗಂಟೆಗೆ ಆರೋಪಿ ಪಿರ್ಯಾದಿದಾರರ ಮನೆಗೆ ಬಂದು ಪಿರ್ಯಾದಿದಾರರ ಜೊತೆ ನೀನು  ಯಾಕೆ ಕಾಲ್ ರಿಸೀವ್ ಮಾಡುವುದಿಲ್ಲ  ಎಂದು ಕೇಳಿ ಪಿರ್ಯಾದಿದಾರರಿಗೆ ಹಲ್ಲೆ ನಡೆಸಿದಾಗ ಪಿರ್ಯಾದುದಾರರು  ಕೆಳಗೆ ಬಿದ್ದು ಎಡಕೈ ಮತ್ತು ಬಲಕೈ ಕೋಲು ಕೈಗೆ  ಚರ್ಮ ಸುಲಿದ ಗಾಯವಾಗಿದ್ದು ಆರೋಪಿಯು ಮನೆಯ ಒಳಗಡೆ ಇದ್ದ ಒಂದು ಕತ್ತಿಯನ್ನು ತಂದು ಪಿರ್ಯಾದಿದಾರರ  ತಲೆಗೆ ಕಡಿದು ತಲೆಯಲ್ಲಿ ರಕ್ತ ಬಂದಿದ್ದು ಪಿರ್ಯಾದಿದಾರರು ಮತ್ತು ಮಗ ಜೋರಾಗಿ ಬೊಬ್ಬೆ  ಹೊಡೆದಾಗ  ಪಕ್ಕದ ಮನೆಯಲ್ಲಿ ವಾಸವಾಗಿದ್ದ ಪಿರ್ಯಾದಿದಾರರ ಮೈದುನ ಮತ್ತು ಅತ್ತೆ ಓಡಿ ಬರುವುದನ್ನು ಕಂಡ ಆರೋಪಿ ರಮೇಶನು ಕತ್ತಿಯನ್ನು ಬಿಸಾಡಿ ಆತನು ಬಂದಿದ್ದ ಮೋಟಾರು ಸೈಕಲಿನಲ್ಲಿ ಹೋಗಿರುತ್ತಾರೆ ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಅ,ಕ್ರ  51/2022 ಕಲಂ 448, 504, 354, 324, 307 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಜೀವಬೆದರಿಕೆ ಪ್ರಕರಣ: 1

 

ವಿಟ್ಲ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ದಿನೇಶ್‌ ಎಂ ಪ್ರಾಯ 37 ವರ್ಷ ತಂದೆ:ನಾರಾಯಣ ನಾಯ್ಕ್‌ ವಾಸ:ಮಣಿಮುಂಡ ಮನೆ,ಕೇಪು ಗ್ರಾಮ ಬಂಟ್ವಾಳ ತಾಲೂಕು ರವರು ಹಾಗೂ ಅವರ ಪರಿಚಯದ ಪೆರುವಾಯಿ ನಿವಾಸಿ ಈಶ್ವರ ನಾಯ್ಕ್ ಎಂಬವರು ಜೊತೆಯಲ್ಲಿ ಕೆಲಸ ಮಾಡಿಕೊಂಡಿದ್ದವರು ದಿನಾಂಕ: 12-07-2022 ರಂದು ಅಡ್ಯನಡ್ಕ ಪೇಟೆಗೆ ಬಂದು ವಾಪಾಸು ಮನೆಗೆ ಹೋಗುವರೇ ಬಂಟ್ವಾಳ ತಾಲೂಕು ಕೇಪು ಗ್ರಾಮದ ಅಡ್ಯನಡ್ಕ ಸೊಸೈಟಿಯ ಬಳಿ ಬಸ್ಸಿಗಾಗಿ ಕಾಯುತ್ತಿದ್ದ ಸಮಯ ಈಶ್ವರ ನಾಯ್ಕ್ರವರು ಪಿರ್ಯಾಧಿಯ ಬಳಿಗೆ ಬಂದು ನೀನು ನನ್ನ ಜೊತೆ ಯಾಕೆ ಕೆಲಸಕ್ಕೆ ಬರುವುದಿಲ್ಲ ಎಂದು ಕೇಳಿದಾಗ ಪಿರ್ಯಾಧಿ ಬೇರೆ ಕೆಲಸ ಇದೆ ಎಂದು ಹೇಳಿದಕ್ಕೆ ಆಪಾದಿತ ಪಿರ್ಯಾಧಿಯನ್ನು ಉದ್ದೇಶಿಸಿ ಕೆಟ್ಟ ಭಾಷೆಯಿಂದ ಬೈದು, ಕೈಯಿಂದ ಬೆನ್ನಿಗೆ ಹೊಡೆದು ಇಬ್ಬರೊಳಗೆ ಉರುಡಾಟವಾಗಿ ಆಪಾದಿತ ತನ್ನ ಕೈಚೀಲದಲ್ಲಿದ್ದ ಕತ್ತಿಯಿಂದ ಪಿರ್ಯಾಧಿದಾರರ ಎಡ ಕಣ್ಣಿನ ಬಳಿ, ಎಡ ಕೈ ಅಂಗೈ ಮೇಲ್ಬಾಗಕ್ಕೆ ಬಲಕಾಲಿನ ತೊಡೆಗೆ ಕಡಿದನು ಬಳಿಕ ಪಿರ್ಯಾಧಿ ಸಂಬಂಧಿ ರಚವಿಚಂದ್ರ ಹಾಗೂ ಸಾರ್ವಜನಿಕರು ಬರುವುದನ್ನು ಕಂಡು ಆಪಾದಿತ ತನ್ನ ಕೈಯಲ್ಲಿದ್ದ ಕತ್ತಿಯನ್ನು ಬಿಸಾಡಿ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಓಡಿ ಹೋಗಿರುತ್ತಾನೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 118/2022  ಕಲಂ: 323, 324, 504, 506 ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 14-07-2022 11:14 AM Updated By: Dakshina Kannada District Police


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : DAKSHINA KANNADA DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080