Feedback / Suggestions

ಅಪಘಾತ ಪ್ರಕರಣ: 3

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಚಿರಾಗ್‌ ನಾಯ್ಕ ಟಿ, ಪ್ರಾಯ 20 ವರ್ಷ, ತಂದೆ: ಸುರೇಂದ್ರ ನಾಯ್ಕ್, ವಾಸ: ತೆಂಕಿಲ-ಕಟ್ಟತ್ತಾರು ಮನೆ, ಪುತ್ತೂರು ಕಸಬಾ ಗ್ರಾಮ, ಪುತ್ತೂರು ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 17-06-2022 ರಂದು 14-20 ಗಂಟೆಗೆ ಆರೋಪಿ ಮೋಟಾರ್‌ ಸೈಕಲ್‌ ಸವಾರ ಶಾಹಿರ್‌ ಎಂಬವರು KA-21- S-7157  ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲನ್ನು ಪುತ್ತೂರು-ಬಪ್ಪಳಿಗೆ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಬಪ್ಪಳಿಗೆ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸಬಾ  ಗ್ರಾಮದ ಬ್ರಹ್ಮಶ್ರೀ ಹಾಲ್‌ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್‌ ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಚಿರಾಗ್‌ ನಾಯ್ಕ ಟಿ ರವರು ಸವಾರರಾಗಿ ಪುತ್ತೂರು ಕಡೆಯಿಂದ ತೆಂಕಿಲ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ  KA-21-Y-5414 ನೋಂದಣಿ ನಂಬ್ರದ ಸ್ಕೂಟರಿಗೆ ಅಪಘಾತವಾಗಿ, ಎರಡೂ ವಾಹನಗಳ ಸವಾರರು ವಾಹನದೊಂದಿಗೆ ರಸ್ತೆಗೆ ಬಿದ್ದ ಪರಿಣಾಮ, ಪಿರ್ಯಾದುದಾರರಿಗೆ ಬಲ ಕೈ, ಭುಜಕ್ಕೆ ಗುದ್ದಿದ ಗಾಯವಾಗಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಆರೋಪಿ ಸವಾರನನ್ನು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ:  111/2022  ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಗ್ರಾಮಾಂತರ  ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಫಿರ್ಯಾದಿದಾರರು ಅಬ್ದುಲ್ ಮಜೀದ್, ಪ್ರಾಯ: 38 ವರ್ಷ, ತಂದೆ: ಇಸುಬು, ವಾಸ:  ಬಾಳಾಯ ಮನೆ, ಸರ್ವೆ ಗ್ರಾಮ, ಪುತ್ತೂರು ತಾಲೂಕು ರವರು ದಿನಾಂಕ 16.06.2022 ರಂದು ಸಂಜೆ ಅವರ ಬಾಬ್ತು ಮೋಟಾರು ಸೈಕಲಿನಲ್ಲಿ ನೈತಾಡಿ ಮಾರ್ಗವಾಗಿ ಸರ್ವೆಯಲ್ಲಿರುವ ಮನೆಗೆ ಹೋಗುತ್ತಾ ಪುತ್ತೂರು ತಾಲೂಕು ಮುಂಡೂರು ಗ್ರಾಮದ ಮುಂಡೂರು ಜಂಕ್ಷನ್ ಬಳಿಗೆ ಸಂಜೆ 5.30 ಗಂಟೆಗೆ ತಲುಪಿದಾಗ ಫಿರ್ಯಾದಿದಾರರ ಮುಂದಿನಿಂದ ನೈತಾಡಿ ಮಾರ್ಗವಾಗಿ ಸರ್ವೆ ಕಡೆಗೆ ಸವಾರನೊಬ್ಬನು ಹಿಂಬದಿ ಸವಾರನನನ್ನು ಕುಳ್ಳಿರಿಸಿಕೊಂಡು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಕೆಎ-21-ಆರ್-4440  ನೇ ಸ್ಕೂಟರ್ ಅದರ ಸವಾರನ ಅಜಾಗರೂಕತೆ ನಿರ್ಲಕ್ಷ್ಯತನದಿಂದ ಆಯತಪ್ಪಿ ಸ್ಕೂಟರ್ ಸಮೇತ ಸವಾರ ಮತ್ತು ಹಿಂಬದಿ ಸವಾರ ರಸ್ತೆಯ ಬಲ ಮಗ್ಗುಲಿಗೆ ಮಗುಚಿ ಬಿದ್ದಾಗ ಫಿರ್ಯಾದಿದಾರರು ಮತ್ತು ಅಲ್ಲಿದ್ದ ಇತರರು ಸ್ಕೂಟರ್ ಸವಾರ ಮತ್ತು ಹಿಂಬದಿ ಸವಾರನನ್ನು ಎಬ್ಬಿಸಿ ಉಪಚರಿಸಿ ನೋಡಿದಾಗ ಸದ್ರಿಯವರು ಫಿರ್ಯಾದಿದಾರರ ಪರಿಚಯದ ಸರ್ವೆ ಕೂಡು ರಸ್ತೆಯ ಮಹಮ್ಮದ್ ಹನೀಫ್ ಮತ್ತು ಅಬ್ದುಲ್ ರಜಾಕ್ ಆಗಿದ್ದು ಈ ಅಪಘಾತದಿಂದ ಹಿಂಬದಿ ಸವಾರ ಅಬ್ದುಲ್ ರಜಾಕ್ ರವರ ಬಲ ಕಾಲಿನ ಕೋಲು ಕಾಲಿಗೆ ಗುದ್ದಿದ ಮತ್ತು ಬಲ ಹಾಗೂ ಎಡ ಕೈಯ ಮೊಣ ಕೈಗೆ ತರಚಿದ ಗಾಯಗಳಾಗಿದ್ದು, ಸದ್ರಿಯವರನ್ನು ಫಿರ್ಯಾದಿದಾರರು ಸ್ಕೂಟರ್ ಸವಾರ ಮಹಮ್ಮದ್ ಹನೀಫ್ ರವರ ಜೊತೆಯಲ್ಲಿ ಆಟೋ ರಿಕ್ಷಾವೊಂದರಲ್ಲಿ ಚಿಕಿತ್ಸೆಯ ಬಗ್ಗೆ ಪುತ್ತೂರಿನ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿಗೆ ಕರೆದುಕೊಂಡು ಹೋಗಲು ತಿಳಿಸಿದಂತೆ ಆಂಬುಲೆನ್ಸ್ ನಲ್ಲಿ ಮಹಮ್ಮದ್ ಹನೀಫ್ ರವರು ಅಬ್ದುಲ್ ರಜಾಕ್ ರವರನ್ನು ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನೀಡಿ ಒಳರೋಗಿಯನ್ನಾಗಿ ದಾಖಲಿಸಿಕೊಂಡಿದ್ದು ಈ ಬಗ್ಗೆ ಪುತ್ತೂರು ಗ್ರಾಮಾಂತರ  ಠಾಣಾ : 71/2022  ಕಲo:279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವೇಣೂರು ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಇಸ್ಮಾಯಿಲ್ (39), ತಂದೆ: ಇಸುಬು ಬ್ಯಾರಿ, ವಾಸ: ಕುಂಡದಬೆಟ್ಟು ಮನೆ, ನಿಟ್ಟಡೆ ಗ್ರಾಮ, ಬೆಳ್ತಂಗಡಿ ತಾಲೂಕು ರವರ ಮಕ್ಕಳಾದ ರಂಝೀನಾ(13) ಮತ್ತು ಮಿಶ್ರಿಯಾ(10) ಎಂಬುವವರು ಕುಂಡದಬೆಟ್ಟು ಅರೇಬಿಕ್ ಮದರಸಾಕ್ಕೆ ವಿದ್ಯಾಬ್ಯಾಸಕ್ಕೆ ಹೋಗುತ್ತಿದ್ದು, ಅದರಂತೆ ದಿನಾಂಕ 17.06.2022 ರಂದು ಫಿರ್ಯಾದಿದಾರರು ಅವರ ಮನೆಯಲ್ಲೇ ಇದ್ದು ಸಂಜೆ ಅವರ ಮಕ್ಕಳನ್ನು ಮನೆಯಿಂದ ಕುಂಡದಬೆಟ್ಟು ಮದರಸಕ್ಕೆ ಬಿಡಲು ಕಾಲ್ನಡಿಗೆಯಲ್ಲಿ ಮಾರ್ಗದ ಬದಿಯ ಪಾದಚಾರಿ ರಸ್ತೆಯಲ್ಲಿ ಹೋಗುತ್ತಾ ಸಂಜೆ 5.50 ಗಂಟೆಗೆ  ಕುಂಡದಬೆಟ್ಟು ಶಾಲೆಯ ಬಳಿ ತಲುಪುತ್ತಿದ್ದಂತೆ ಗುರುವಾಯನಕೆರೆ- ಮೂಡುಬಿದ್ರೆ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ  ಮೂಡುಬಿದ್ರೆ ಕಡೆಯಿಂದ ಕಾರೊಂದನ್ನು ಅದರ ಚಾಲಕ ದುಡುಕುತನ  ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ  ತೀರಾ ಎಡಬದಿಗೆ ಬಂದು ಆತನು ಕಾರನ್ನು ಮಣ್ಣು ರಸ್ತೆಗೆ ಇಳಿಸಿದ್ದು ಇರದ ಪರಿಣಾಮ ಫಿರ್ಯಾದಿದಾರರ ಇಬ್ಬರು ಮಕ್ಕಳಿಗೂ ಕಾರು ಡಿಕ್ಕಿಯಾಗಿರುತ್ತದೆ. ಡಿಕ್ಕಿಯ ರಭಸಕ್ಕೆ ಫಿರ್ಯಾದಿದಾರರ ಎರಡು ಮಕ್ಳಳು ಮಣ್ಣುರಸ್ತೆಗೆ ಬಿದ್ದಿರುತ್ತಾರೆ, ತಕ್ಷಣ ಅಲ್ಲೇ ಅಂಗಡಿ ಬಳಿ ಇದ್ದ ಮುನೀರ್ ಮತ್ತು ಹನೀಪ್ ರವರು ಬಂದಿದ್ದು ಅವರೆಲ್ಲರೂ ಸೇರಿ ಮಕ್ಕಳನ್ನು ಎತ್ತಿ ಉಪಚರಿಸಲಾಗಿ ಫಿರ್ಯಾದಿದಾರರ ಮಗಳು ರಂಝೀನಾಳಿಗೆ ಎದೆಗೆ ಗುದ್ದಿದ ಗಾಯ ಮತ್ತು ಎಡಕಾಲಿನ ಕೋಲು ಕಾಲಿಗೆ ರಕ್ತಗಾಯವಾಗಿರುತ್ತದೆ  ಹಾಗೂ ಮಿಶ್ರಿಯಾಳಿಗೆ ಎಡಕೆನ್ನೆಗೆ ರಕ್ತಗಾಯ ಎಡಭುಜಕ್ಕೆ ಗುದ್ದಿದ ಗಾಯವಾಗಿರುತ್ತದೆ, ತಕ್ಷಣ ಅವರೆಲ್ಲರೂ ಮುನೀರ್ ರವರ ಕಾರಿನಲ್ಲಿ ಗಾಯಾಳುಗಳನ್ನು ಬೆಳ್ತಂಗಡಿ ಅಭಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಒಳರೋಗಿಯಾಗಿ ದಾಖಲುಮಾಡಿರುತ್ತಾರೆ, ಫಿರ್ಯಾದಿದಾರರ ಮಕ್ಕಳಿಗೆ ಅಪಘಾತವೆಸಗಿದ ಕಾರಿನ ನೊಂದಣಿ ಸಂಖ್ಯೆ ಕೆಎ 21 ಎನ್ 7969 ಆಗಿರುತ್ತದೆ, ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 36-2022 ಕಲಂ:279,337 ಐಪಿಸಿ ಜೊತೆಗೆ 134 ಎ & ಬಿ ಐ.ಎಂ.ವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪೊಲೀಸ್ ಉಪನಿರೀಕ್ಷಕ ತನಿಖೆ -1 ಬಂಟ್ವಾಳ ನಗರ ಪೊಲೀಸ್ ಬಂಟ್ವಾಳ ರವರು ಸಿಬ್ಬಂದಿಗಳೊಂದಿಗೆ ದಿನಾಂಕ: 17.06.2022  ರಂದು ನರಹರಿ ಪರ್ವತಕ್ಕೆ ಹೋಗುವ ರಸ್ತೆಯಲ್ಲಿ ಚಲಿಸಿ ಮುಂದಕ್ಕೆ ಸಾಗಿದಾಗ ರಸ್ತೆಯ  ಬದಿಯಲ್ಲಿ ಇಬ್ಬರು ಇದ್ದು ನಾವು ಜೀಪನ್ನು ಸದ್ರಿ ಸ್ಥಳದಲ್ಲಿ ನಿಲ್ಲಿಸುತ್ತಿದ್ದಂತೆ ಅಲ್ಲಿದ್ದ ಇಬ್ವರು ಓಡಲು ಯತ್ನಿಸಿದಾಗ  ಸುತ್ತುವರಿದು ಹಿಡಿದು ಅವರಲ್ಲಿ ಒಬ್ಬಾತನನ್ನು ವಿಚಾರಿಸಿದಾಗ ಆತನು ತನ್ನ ಹೆಸರು ಮಹಮ್ಮದ್ ರಫೀಕ್ ,@ ಮುನ್ನಾ, ಪ್ರಾಯ: 44 ವರ್ಷ, ಎಂದು ತಿಳಿಸಿದ್ದು ಆಗ ಆತನ ಕೈಯಲ್ಲಿದ್ದ ಬಿಳಿ ತೊಟ್ಟೆಯ ಬಗ್ಗೆ ವಿಚಾರಿಸಿದಾಗ ಆತನು ತಡವರಿಸುತ್ತಾ ಗಾಂಜಾ ಎಂದು ತಿಳಿಸಿದ್ದು  ಸದ್ರಿ ತೊಟ್ಟೆಯನ್ನು ಬಿಡಿಸಿದಾಗ ಅದರಲ್ಲಿ ಹಳದಿ ಬಣ್ಣದ ತೊಟ್ಟೆ ಕಂಡು ಬಂದಿದ್ದು ಅದನ್ನು ತೆರೆದಾಗ ಅದರಲ್ಲಿ  ಮಾದಕ ಗಾಂಜಾ ಇರುವುದು ಕಂಡು ಬಂತು. ಮತ್ತು ಮತ್ತೊಬ್ಬನಲ್ಲಿ  ವಿಚಾರಿಸಿದಾಗ ತಾರಾನಾಥ ಪೂಜಾರಿ, @ ಪುಟ್ಟ, ಪ್ರಾಯ: 27 ವರ್ಷ, ಎಂದು ತಿಳಿಸಿದ್ದು  ಅವರ ಬಳಿ ಒಟ್ಟು 355 ಗ್ರಾಮ್ ತೂಕದ ಗಾಂಜಾ ಪತ್ತೆಯಾಗಿದ್ದು ಅವರನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 62/2022  ಕಲಂ: 8 (C), 20(b)(ii)(A) NDPS Act ಯಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 18-06-2022 11:37 AM Updated By: Dakshina Kannada District Police


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : DAKSHINA KANNADA DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080