ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ದಯಾನಂದ  ಪ್ರಾಯ: 39 ವರ್ಷ ಗಂಡ: ಜನಾರ್ಧನಾ ಪೂಜಾರಿ, ವಾಸ: ಕಿನ್ನಿಬೆಟ್ಟು  ಮನೆ, ಅಮ್ಟಾಡಿ  ಗ್ರಾಮ ಕಿನ್ನಿಬೆಟ್ಟು ಅಂಚೆ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 17-8-2021 ರಂದು ಪಿರ್ಯಾದಿದಾರರ ತಮ್ಮ ದಿವಾಕರರವರು ಅವರ ಬಾಬ್ತು KA-19-Y-4477 ನೇ ಮೋಟಾರು ಸೈಕಲಿನಲ್ಲಿ ಮಂಗಳೂರಿನಿಂದ ತನ್ನ ಮನೆಗೆ ಬರುತ್ತಾ ಸಮಯ ಸುಮಾರು ಮಧ್ಯಾಹ್ನ 15-30 ಗಂಟೆಗೆ ಬಂಟ್ವಾಳ ತಾಲೂಕು ಬಡಗ ಬೆಳ್ಳೂರು ಗ್ರಾಮದ ಕಲ್ಪನೆ ತರವು ಎಂಬಲ್ಲಿಗೆ ತಲುಪಿದಾಗ ಎದುರಿನಿಂದ ಬರುತ್ತಿದ್ದ KA-19-MD-4237 ನೇ ಕಾರನ್ನು ಅದರ ಚಾಲಕ ದಯಾನಂದ ಪ್ರಸಾದ್ ರವರು  ಅತೀ ವೇಗ ಅಜಾಗರೂಕತೆ ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್ ಸೈಡಿಗೆ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ದಿವಾಕರರವರ ಬಲ ಕಾಲಿಗೆ ರಕ್ತಗಾಯ ಹಾಗೂ ಮೈಕೈಗೆ ಗುದ್ದಿದ ನೋವಾಗಿದ್ದು ಮಂಗಳೂರು ಎ.ಜೆ.ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 80/2021  ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಶ್ರಫ್(42) ತಂದೆ:ದಿ.ಹಸನಬ್ಬ ವಾಸ:ಅಫ್ರಜ್ ಮಂಜಿಲ್,  ಚಿಲಿಂಬಿ, ಮದ್ದಡ್ಕ, ಕುವೆಟ್ಟು ಗ್ರಾಮ,ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ: 18-08-2021 ರಂದು ತನ್ನ ಬಾಬ್ತು ಕಾರಿನಲ್ಲಿ ಉಪ್ಪಿನಂಗಡಿ ಗುರುವಾಯನ ಕೆರೆ ರಸ್ತೆಯಲ್ಲಿ ಗುರುವಾಯನ ಕೆರೆಗೆ ಬರುತ್ತಾ ಸಮಯ ಸುಮಾರು ರಾತ್ರಿ 7:00 ಗಂಟೆಗೆ ಬೆಳ್ತಂಗಡಿ ತಾಲೂಕು ಕಳಿಯ ಗ್ರಾಮದ ಪರಪ್ಪು ಎಂಬಲ್ಲಿಗೆ ತಲುಪುತ್ತಿದ್ದಂತೆ ಪಿರ್ಯಾದಿದಾರರ ಎದುರಿನಿಂದ ಹೋಗುತ್ತಿದ್ದ ಅಂದರೆ ಉಪ್ಪಿನಂಗಡಿ ಕಡೆಯಿಂದ ಗುರುವಾಯನಕೆರೆ ಕಡೆಗೆ ಕೆ ಎ 21 ಆರ್‌ 8785 ನೇ ಮೋಟಾರ್‌ ಸೈಕಲನ್ನು ಅದರ ಸವಾರ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಪಿರ್ಯಾದಿದಾರರ ವಿರುದ್ದ ದಿಕ್ಕಿನಿಂದ ಅಂದರೆ  ಗುರುವಾಯನ ಕೆರೆ ಕಡೆಯಿಂದ  ಕೆಎ 70 ಎಚ್‌ 6004 ನೇ ನೇ ಮೋಟಾರ್‌ ಸೈಕಲನ್ನು ಅದರ ಸವಾರ ದುಡುಕುತನದಿಂದ ಸವಾರಿ ಮಾಡಿಕೊಂಡು  ಬಂದು ಪಿರ್ಯಾದಿದಾರರ ಎದುರಿನಿಂದ ಹೋಗುತ್ತಿದ್ದ ಕೆಎ 21 ಆರ್‌ 8785 ನೇ ಮೋಟಾರು ಸೈಕಲ್‌ಗೆ ಢಿಕ್ಕಿ ಹೊಡೆದನು ಪರಿಣಾಮ ಎರಡೂ ಮೋಟಾರ್‌ ಸೈಕಲ್‌ ಸವಾರರು ರಸ್ತೆಗೆ ಬಿದ್ದು, ಅಪಘಾತಗೊಂಡ ಮೋಟಾರ್‌ ಸೈಕಲ್‌ ಸವಾರ ಡೆಲ್ಸನ್‌ ಮೋನಿಸ್‌ ಗೆ  ಬಲ ಕಾಲಿನ ಕೋಲು ಕಾಲಿಗೆ, ಬಲ ಕೈ ಬೆರಳುಗಳಿಗೆ ಗುದ್ದಿದ ರಕ್ತ ಗಾಯ, ಹಾಗೂ ಡಿಕ್ಕಿ ಹೊಡೆದ ಮೋಟಾರ್‌ ಸೈಕಲ್‌ ಸವಾರ ರಾಜೇಶ್‌ಗೆ ಕೈ ಕಾಲುಗಳಿಗೆ ತರಚಿದ ಗಾಯವಾಗಿರುತ್ತದೆ, ಗಾಯಾಳುಗಳು ಪೈಕಿ ಡೆಲ್ಸನ್‌ ಮೋನೀಸ್‌ ರವರು ಮಂಗಳೂರು ಪಾಧರ್‌ಮುಲ್ಲಾರ್‌ ಆಸ್ಪತ್ರೆಯಲ್ಲಿ ಹಾಗೂ ರಾಜೇಶ್‌ ಗುರುವಾಯನಕೆರೆ ಆಭಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 63/2021, ಕಲಂ; 279,337ಭಾದಂಸಂ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಬಾಲಕೃಷ್ಣ ಶೆಟ್ಟಿ (54) ವಾಸ:ಶೀನಪ್ಪ ಶೆಟ್ಟಿ ವಾಸ:ಪರಾರಿ ಮನೆ ನೆಲ್ಯಾಡಿ ಗ್ರಾಮ ಕಡಬ ತಾಲೂಕು ಎಂಬವರ ದೂರಿನಂತೆ ಫಿರ್ಯಾಧಿ ಶ್ರೀ ಬಾಲಕೃಷ್ಣ ಶೆಟ್ಟಿ (54) ಎಂಬವರ ಬಾಬ್ತು ಸ್ವಾಧೀನದ  ಕಡಬ ತಾಲೂಕು ನೆಲ್ಯಾಡಿ ಗ್ರಾಮದ ಪರಾರಿ ಎಂಬಲ್ಲಿನ ತಮ್ಮ ಜಾಗದಲ್ಲಿ ಸುಮಾರು 14 ವರ್ಷದ ಹಿಂದೆ ಶ್ರೀಗಂಧದ ಮರವನ್ನು ನೆಟ್ಟಿದ್ದು ದಿನಾಂಕ:03.08.2021 ರಂಧು ರಾತ್ರಿ 11-45 ಗಂಟೆಗೆ ಫಿರ್ಯಾಧಿ ಹಾಗೂ ಮನೆಯವರೆಲ್ಲಾ ಮಲಗಿದ್ದು ದಿನಾಂಕ:04.08.2021 ರಂದು ಬೆಳಿಗ್ಗೆ ಸುಮಾರು 09-00 ಗಂಟೆಗೆ ಫಿರ್ಯಾಧಿಯು ತನ್ನ ತೊಟಕ್ಕೆ ಹೋದಾಗ ತೋಟದ ಬದಿಯಲ್ಲಿದ್ದ ಶ್ರೀಗಂಧದ ಮರವನ್ನು ಯಾರೋ ಕಳ್ಳರು ಬುಡದಿಂದ ಕಡಿದು ತುಂಡು ಮಾಡಿ ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳುವಾದ ಶ್ರೀಗಂಧದ ಮರದ ಅಂದಾಜು ಮೌಲ್ಯ 15,000/- ರೂ ಆಗಬಹುದು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 77/2021  ಕಲಂ:379 IPC & 86KF Act ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 20-08-2021 11:31 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080