Feedback / Suggestions

ಅಪಘಾತ ಪ್ರಕರಣ: 3

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಬಿ ದುರ್ಗಾದಾಸ್ ಕಾಮತ್ ಪ್ರಾಯ: 47 ವರ್ಷ ತಂದೆ: ದಿ|| ಕೇಶವ್ ಕಾಮತ್ ವಾಸ: ಶಾಲಾ ರಸ್ತೆ ಪಾಣೆಮಂಗಳೂರು, ಪಾಣೆಮಂಗಳೂರು ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ:20.03.2022 ರಂದು ಪಿರ್ಯಾದಿದಾರರು ಬಂಟ್ವಾಳ ತಾಲೂಕು ಪಾಣೆಮಂಗಳೂರು ಗ್ರಾಮದ ಅಕ್ಕರಂಗಡಿ ಎಂಬಲ್ಲಿ ವಾಕಿಂಗ್ ಮಾಡುವ ಸಮಯ ಸುಮಾರು ಬೆಳಿಗ್ಗೆ 06:00 ಗಂಟೆಗೆ ಪಿರ್ಯಾದಿದಾರರ ಹಿಂದಿನಿಂದ KA-19-J-1095 ನೇ ಮೋಟಾರ್ ಸೈಕಲ್ ನ್ನು ಅದರ ಸವಾರ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮುಂದೆ ವಾಕಿಂಗ್ ಹೋಗುತ್ತಿದ್ದ ಪ್ರಭಾಕರ್ ಪೈ ರವರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಎಸೆಯಲ್ಪಟ್ಟು ರಸ್ತೆಗೆ ಬಿದ್ದು ಅಪಘಾತವಾಗಿದ್ದು ಅಪಘಾತದಲ್ಲಿ ಪ್ರಭಾಕರ್ ಪೈರವರಿಗೆ ತಲೆಗೆ ಕಾಲಿಗೆ ಗುದ್ದಿದ ಹಾಗೂ ರಕ್ತಗಾಯವಾಗಿದ್ದು ಬಿಸಿ ರೋಡ್ ಸೋಮಾಯಾಜಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಕೆಎಂಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಹಾಗೂ ಮೋಟಾರ್ ಸೈಕಲ್ ಸವಾರನಿಗೂ ಮೈ-ಕೈ ಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ 33/2022 ಕಲಂ 279,337 IPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುಂಜಾಲಕಟ್ಟೆ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ . ಇಸಾಕ್,ಪ್ರಾಯ: 33 ವರ್ಷ, ತಂದೆ: ಉಸ್ಮಾನ್, ವಾಸ: ಅಳಕೆ ಮನೆ, ತಣ್ಣೀರು ಪಂಥ ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ಈ ದಿನ ದಿನಾಂಕ: 20.03.2022 ರಂದು ತನ್ನ ತಮ್ಮ ಮುಸ್ತಾಫನ ಬಾಬ್ತು ಮೋಟಾರ್ ಸೈಕಲ್ ನಂಬ್ರ KA 21EB 9784 ನೇದರಲ್ಲಿ ಸಹಸವಾರನಾಗಿ ಕುಳಿತುಕೊಂಡು ಸಮಯ ಸುಮಾರು ಬೆಳಿಗ್ಗೆ 8.15 ಗಂಟೆಗೆ ಬೆಳ್ತಂಗಡಿ ತಾಲೂಕು ತಣ್ಣೀರು ಪಂಥ ಗ್ರಾಮದ ಅಳಕೆ ಬೊಳ್ಳನಡ್ಕ ಎಂಬಲ್ಲಿ ಮಣ್ಣು ರಸ್ತೆಯಲ್ಲಿ ಹೋಗುತ್ತಿದ್ದ ಸಮಯ ಮೋಟಾರ್ ಸೈಕಲ್ ಸವಾರ ಮುಸ್ತಾಫ ಮನೆಕಡೆಗೆ ಹೋಗುವ ತಿರುವು ರಸ್ತೆಯಲ್ಲಿ ನಿರ್ಲಕ್ಷ್ಯತನದಿಂದ ಮೋಟಾರ್ ಸೈಕಲ್ ಸವಾರಿ ಮಾಡಿದಾಗ ರಸ್ತೆಯಲ್ಲಿ ಒಮ್ಮೆಲೇ ನಾಯಿಯೊಂದು ಅಡ್ಡ ಬಂದಿದ್ದು, ಮೋಟಾರ್ ಸೈಕಲ್ ಸವಾರ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಸವಾರ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿ ಇದ್ದ ಮಣ್ಣಿನ ದಿಬ್ಬಕ್ಕೆ ಮೋಟಾರ್ ಸೈಕಲ್ ಸಮೇತ ಸವಾರ ಹಾಗೂ ಪಿರ್ಯಾದಿದಾರರು ಬಿದ್ದ ಪರಿಣಾಮ ಪಿರ್ಯಾದಿದಾರರ ಬಲಕೈಯ ಕೋಲು ಕೈಗೆ , ಬಲಕಾಲಿಗೆ ಹಾಗೂ ಎಡಕಾಲಿನ ಮಣಿಗಂಟು ಬಳಿ ಗುದ್ದಿದ ನೋವುಂಟಾಗಿ ಚಿಕಿತ್ಸೆ ಬಗ್ಗೆ ಪುತ್ತೂರು ಹಿತಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 20/2022 ಕಲಂ: 279, 337 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಬ್ರಹ್ಮಣ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶ್ರೀಮತಿ ತಿರುಮಲೇಶ್ವರಿ   ಪ್ರಾಯ: 53 ವರ್ಷ, ತಂದೆ: ಮೋನಪ್ಪ ಗೌಡ,   ವಾಸ: ಹುಲಿ ಮನೆ, ಕಂದ್ರಪ್ಪಾಡಿ, ದೇವಚಳ್ಳ   ಗ್ರಾಮ,  ಸುಳ್ಯ  ತಾಲೂಕು, ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ: 19-03-2022 ರಂದು ಸಂಜೆ 4:15 ಗಂಟೆಗೆ ಅವರ ಮನೆಯಾದ ಸುಳ್ಯ ತಾಲೂಕು ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ, ಹುಲಿಮನೆ ಎಂಬಲ್ಲಿಂದ ಅವರ ಮಗಳು ವಂದನಾ ಚಾಲಕಳಾಗಿ ಅವರ ಬಾಬ್ತು ಕೆಎ 21 ವಿ 4979 ನೇ ಸ್ಕೂಟಿಯಲ್ಲಿ ಸಹಸವಾರರಾಗಿ ಅವರ ಅಣ್ಣನ ಮನೆಗೆ ಹೋಗುವರೇ ಮನೆಯಿಂದ ಹೊರಟಿದ್ದು, ಸುಮಾರು 4:30 ಗಂಟೆಗೆ ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದ ಚಿಲ್ತಡ್ಕ ಎಂಬಲ್ಲಿಗೆ ತಲುಪುವಾಗ ಎದುರುಗಡೆಯಿಂದ ಅಂದರೆ ಗುತ್ತಿಗಾರು ಕಡೆಯಿಂದ ಒಂದು ಕಪ್ಪು ಬಣ್ಣದ ಕಾರನ್ನು ಅದರ ಚಾಲಕನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಬದಿಗೆ ಬಂದಾಗ ಪಿರ್ಯಾದಿದಾರರ ಮಗಳ ದ್ವಿ ಚಕ್ರ ವಾಹನದ ಸೈಡ್ ಮಿರರ್ ಗೆ ತಾಗಿ ವಾಹನ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಕುತ್ತಿಗೆಯ ಹಿಂಬದಿಗೆ ಮತ್ತು ಗಲ್ಲಕ್ಕೆ ಗಾಯವಾಗಿದ್ದು ಅವರನ್ನು ಗುತ್ತಿಗಾರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಸುಳ್ಯ ಕೆವಿಜಿ ಮೆಡಿಕಲ್ ಆಸ್ಪತ್ರೆಗೆ ಹೋಗಿ ಅಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಆ್ಯಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯಾಧಿಕಾರಿಯವರು ಪಿರ್ಯಾದಿದಾರರನ್ನು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಅ.ಕ್ರ ನಂಬ್ರ  : 33-2022 ಕಲಂ:   279, 337 ಐಪಿಸಿ ಮತ್ತು ಕಲಂ: 134 (a & b) ಐಎಮ್ ವಿ ಕಾಯ್ದೆ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಹಲ್ಲೆ ಪ್ರಕರಣ: 1

  • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮಹಮ್ಮದ್‌ ಶಫೀಕ್‌ ಪ್ರಾಯ 17 ತಂದೆ:ಅಬ್ದುಲ್‌ ರಹಿಮಾನ ವಾಸ:ಕುಳ್ಯಾಲು ಮನೆ, ಕೊಳ್ನಾಡು ಗ್ರಾಮ,ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾಧಿದಾರರು ದಿನಾಂಕ:19-03-2022 ರಂದು ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಕುಳ್ಯಾರು ಎಂಬಲ್ಲಿರುವ ತನ್ನ ಮನೆಯ ಪಕ್ಕದಲ್ಲಿರುವ ಖಾಲಿ ಸ್ಥಳದಲ್ಲಿ ಪಿರ್ಯಾಧಿ, ನೆರೆಕರೆಯವರು ಹಾಗೂ ಗೆಳೆಯರು ಕ್ರಿಕೇಟ್‌ ಆಡುತ್ತಿರುವಾಗ ಅಪಾದಿತ ಕಬೀರ್‌ ಮತ್ತು ಫಿರ್ಯಾಧಿಗೆ ಆಟದ ವಿಚಾರದಲ್ಲಿ ಮನಸ್ತಾಪವಾಗಿದ್ದು, ನಂತರ ಪಿರ್ಯಾಧಿ ಸಂಜೆ 5.00 ಗಂಟೆಗೆ ಮನೆಯ ಕಡೆಗೆ ಹೋಗುತ್ತಿರುವಾಗ ಆಪಾದಿತ ಕಬೀರ್‌ ಕೋಪಗೊಂಡು ಪಿರ್ಯಾಧಿ ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ ಅವ್ಯಾಚವಾಗಿ ಬೈದು ಮುಷ್ಠಿಮಾಡಿ ಕೈಯಿಂದ ಮೂಗಿನ ಭಾಗಕ್ಕೆ ಹೊಡೆದ ಪರಿಣಾಮ ಮೂಗಿನಲ್ಲಿ ರಕ್ತ ಸುರಿಯುತ್ತಿದ್ದು . ಅಲ್ಲಿ ಸೇರಿದವರು ಉಪಚರಿಸಿ ಪಿರ್ಯಾಧಿಯನ್ನು ವಿಟ್ಲ ಸಮುದಾಯ ಆರೋಗ್ಯ ಕೆಂದ್ರಕ್ಕೆ ಕರೆದುಕೊಂಡು ಬಂದಿದ್ದು. ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ  ಮೇಲ್ದರ್ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದಂತೆ ಪಿರ್ಯಾಧಿದಾರರ ತಂದೆ ಪಿರ್ಯಾಧಿಯನ್ನು ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 46/2022 ಕಲಂ:341,504,323 ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

  • ಕಡಬ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಚೇತನ ಕೆ  ಪ್ರಾಯ 33 ವರ್ಷ, ತಂದೆ:ಹೊನ್ನಪ್ಪ ಗೌಡ , ವಾಸ: ಕಾಯಾರ ಮನೆ, ದೋಳ್ಪಾಡಿ  ಗ್ರಾಮ, ಕಡಬ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರ ಮೊದಲನೆ ತಮ್ಮನಾದ ವಿಕ್ರಮ ಪ್ರಾಯ 31 ವರ್ಷ ಎಂಬುವರು 02 ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕೆತ್ಸೆ ಪಡೆಯುತ್ತಿದ್ದರು.ದಿನಾಂಕ: 18-03-2022 ರಂದು ವಿಕ್ರಮನಿಗೆ  ವಿಪರೀತ ಹೊಟ್ಟೆನೋವು ಮನೆಯಲ್ಲಿ ತಿಳಿಸಿದ ಮೇರೆಗೆ ವಿಕ್ರಮನನ್ನು ಕಾಣಿಯೂರು ಅಶ್ವಿನಿ ಕ್ಲಿನಿಕ್ ಗೆ ಚಿಕೆತ್ಸೆಯ ಬಗ್ಗೆ ಕರೆದುಕೊಂಡು ಹೋದಲ್ಲಿ ವೈದ್ಯರು ನೋಡಿ ಔಷದವನ್ನು ನೀಡಿರುತ್ತಾರೆ. ನಂತರ ಮನೆಗೆ ಬಂದು ಔಷದವನ್ನು ಪಡೆದುಕೊಂಡು ವಿಶ್ರಾಂತಿಯಲ್ಲಿರುವಾಗ ಮತ್ತೆ ವಿಪರೀತ ಹೊಟ್ಟೆನೋವು ಬಂದಿರುವುದಾಗಿ ತಿಳಿಸಿರುತ್ತಾನೆ. ನಂತರ  ವಿಕ್ರಮನನ್ನು  ಪುತ್ತೂರು ಧನ್ವಂತರಿ ಆಸ್ಪತ್ರೆ ಗೆ ಕರೆದುಕೊಂಡು ಹೋಗಿ ಚಿಕೆತ್ಸೆ ಗೆ ದಾಖಲಿಸಿದಾಗ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕೆತ್ಸೆಗೆ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿರುತ್ತಾರೆ. ಅದರಂತೆ ಪಿರ್ಯಾದುದಾರರು  ತಮ್ಮ ವಿಕ್ರಮನನ್ನು ಮಂಗಳೂರಿನ ಎ ಜೆ ಆಸ್ಪತ್ರೆಗೆ ದಾಖಲಿಸಿದ್ದು ದಿನಾಂಕ: 18-03-2022 ರಿಂದ ಒಳರೋಗಿಯಾಗಿ ಚಿಕೆತ್ಸೆ  ಪಡೆಯುತ್ತಿದ್ದವರು ಚಿಕೆತ್ಸೆ ಫಲಕಾರಿಯಾಗದೇ ದಿನಾಂಕ:19-03-2022 ರಂದು ರಾತ್ರಿ ಸಮಯ 08:05 ಗಂಟೆಗೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿರುತ್ತಾರೆ. ಈ ಬಗ್ಗೆ ಕಡಬ ಠಾಣಾ ಯು ಡಿ ಆರ್  12/2022 ಕಲಂ. 174   CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

Last Updated: 21-03-2022 10:35 AM Updated By: Dakshina Kannada District Police


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : DAKSHINA KANNADA DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080