ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಧನುಷ್(25) ತಂದೆ : ಕುಮಾರ ವಾಸ: ವರಕಾಯಿ ಮನೆ, ಸಜಿಪಮುನ್ನೂರು ಗ್ರಾಮ, ಬಂಟ್ವಾಳ ತಾಲೂಕು ಎಂಬವರು ದಿನಾಂಕ 21-04-2021 ರಂದು ತನ್ನ ಸ್ನೇಹಿತ ಸನತ್ ಕುಮಾರ್ ರವರೊಂದಿಗೆ ಅವರ ಬಾಬ್ತು KA-19-EX-3331 ನೇ ಮೋಟಾರ್ ಸೈಕಲಿನಲ್ಲಿ ಸಹ ಸವಾರನಾಗಿ ಕುಳಿತುಕೊಂಡು ಸಜಿಪದಿಂದ ಮಂಗಳೂರು ಕಡೆಗೆ ಹೋಗುತ್ತಾ ಸಮಯ ಸುಮಾರು ಬೆಳಿಗ್ಗೆ 07-55 ಗಂಟೆಗೆ ಬಂಟ್ವಾಳ ತಾಲೂಕು ಪಾಣೆಮಂಗಳೂರು ಗ್ರಾಮದ ಮೇಲ್ಕಾರ್ ಉಲ್ಲಾಸ್ ಹೋಟೇಲ್ ಎದುರು ತಲುಪಿದಾಗ ಹಿಂದಿನಿಂದ ಆಟೋರಿಕ್ಷಾವೊಂದನ್ನು ಅದರ ಚಾಲಕ ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿ ಸ್ಥಳದಲ್ಲಿ ನಿಲ್ಲಿಸದೇ ಪರಾರಿಯಾಗಿರುತ್ತಾರೆ. ಗಾಯಗೊಂಡ ಪಿರ್ಯಾದಿದಾರರು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಹೊರರೋಗಿಯಾಗಿಯೂ ಸವಾರ ಸನಾತ್ ಕುಮಾರ್ ರವರು ಮಂಗಳೂರು ಕಂಕನಾಡಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 65/2021  ಕಲಂ 279, 337  ಐಪಿಸಿ  ಮತ್ತು 134(A&B) IMV Act ನಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

 

ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಲವ ಕೆ ,ಪ್ರಾಯ 21 ವರ್ಷ , ತಂದೆ; ದಿ| ಕುಂಞ ,ಕುದ್ಮಾರು ಮನೆ ,ಕುದ್ಮಾರು ಗ್ರಾಮ ,ಕಡಬ ತಾಲೂಕು  ಎಂಬವರ ದೂರಿನಂತೆ ಅವರ ಅಣ್ಣ  ನವೀನ ಕೆ ,ಪ್ರಾಯ 27 ವರ್ಷ  ಎಂಬವನು ಕಡಬ ತಾಲೂಕು ಸವಣೂರು ಗ್ರಾಮದ ಕಂಪ ಎಂಬಲ್ಲಿಯ ಪ್ರವೀಣ್ ನಾಯಕ್ ಎಂಬವರ ಮನೆಯಲ್ಲಿ  ಕೆಲಸ ಮಾಡುತ್ತಿದ್ದವನು ರಾತ್ರಿ ವೇಳೆ ಮಲಗಲು ಪಿರ್ಯಾದಿದಾರರ ವಾಸದ ಮನೆ ಕುದ್ಮಾರಿಗೆ ಬರುತ್ತಿದ್ದು ವಿಪರೀತ ಮದ್ಯಸೇವನೆ ಮಾಡುತ್ತಿದ್ದು ದಿನಾಂಕ 23-07-2021 ರಂದು ಬೆಳಿಗ್ಗೆ 06-00 ಗಂಟೆಗೆ ಕೆಲಸಕ್ಕೆಂದು ಹೋಗಿದ್ದು  ಸಂಜೆ 4-00 ಗಂಟೆಗೆ ವೇಳೆಗೆ ಕಂಪದ ಹ್ಯಾರಿಸ್ ಎಂಬವರು ಪೋನ್ ಮಾಡಿ ಪ್ರವೀಣ್ ನಾಯಕ್ ರವರು ಮನೆಗೆ ಬಂದಾಗ  ನವೀನ ಕಾಣಿಸುತ್ತಿಲ್ಲವಾಗಿ  ತಿಳಿಸಿದ್ದು  ನಂತರ ಹುಡುಕಾಟ ನಡೆಸಿದಾಗ ದಿನಾಂಕ 24-07-2021 ರಂದು ಪ್ರವೀಣ್ ನಾಯಕ್ ರವರ ತೋಟದ ಮಧ್ಯೆ ಇರುವ ಕೆರೆಯಲ್ಲಿ ನವೀನ ಧರಿಸುವ ಚಪ್ಪಲಿ ಕಂಡುಬಂದಿದ್ದು ಬಳಿಕ ಅಗ್ನಿಶಾಮಕದಳದವರನ್ನು  ಕರೆಯಿಸಿ ಹುಡುಕಾಡಲಾಗಿ  11.00 ಗಂಟೆ ವೇಳೆಗೆ  ನೀರಿನ ಆಳದಲ್ಲಿ ಮೃತದೇಹ ಪತ್ತೆಯಾಗಿದ್ದು ಮೃತ ನವೀನ ತೋಟದಲ್ಲಿ ಕೆಲಸ ಮಾಡುತ್ತಿದ್ದವನು ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಈಜು  ಬಾರದೇ ಮುಳುಗಿ ಆಥವಾ ನೀರಿಗೆ ಹಾರಿ ಅಥವಾ ಇನ್ಯಾವುದೋ ಕಾರಣದಿಂದ ಮೃತಪಟ್ಟದ್ದಾಗಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ಯು.ಡಿ.ಆರ್  ಕ್ರಮಾಂಕ  18/2021  ಕಲಂ 174 (3) & (IV)  ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಧರ್ಮಸ್ಥಳ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಎಂ.ಧರನೇಂದ್ರ ಜೈನ್ (43) ತಂದೆ: ಸುಂದರ ಆರಿಗ       ವಾಸ: ಮೇಲೂರು ಮನೆ   ಕಾಂಚನ ಪುತ್ತೂರು ತಾಲೂಕು   ಎಂಬವರ ದೂರಿನಂತೆ    ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಧರ್ಮಸ್ಥಳದಲ್ಲಿ ಸುಮಾರು ಮೂರು ವರ್ಷಗಳಿಂದ ಶಾರದಾ ಕ್ಲಿನಿಕ್‌ನಡೆಸಿಕೊಂಡಿದ್ದು ದಿನಾಂಕ: 16-07-2021 ರಂದು ಸಮಯ ಸುಮಾರು 20.00 ಗಂಟೆ ಸಮಯಕ್ಕೆ ಪಿರ್ಯಾದುದಾರರು ಕ್ಲಿನಿಕ್‌ ನ  ಎದುರು ಒಬ್ಬ ಅಪರಿಚಿತ ಹೆಂಗಸು ಅಸೌಖ್ಯದಿಂದ ಬಳಲುತ್ತಿದ್ದವರನ್ನು ಖಾಸಗಿ  ಅಂಬುಲ್ಯಾನ್ಸ್  ಚಾಲಕ ಜಲೀಲ್ ಎಂಬವರಿಗೆ ಕರೆ ಮಾಡಿ   ಚಿಕಿತ್ಸೆಯ ಬಗ್ಗೆ ಳುಹಿಸಿಕೊಟ್ಟಿದ್ದು. ಬೆಳ್ತಂಗಡಿ ಸಾರ್ವಜನಿಕ ಆಸ್ಬತ್ರೆಯವರು ಹೆಚ್ಚಿನ ಚಿಕಿತ್ಸೆಯ ಬಗ್ಗೆ 108 ಅಂಬ್ಯುಲೆನ್ಸ್ ನಲ್ಲಿ ಮಂಗಳೂರು ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಬತ್ರೆಗೆ ಕಳುಹಿಸಿಕೊಟ್ಟಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 17-07-2021 ರಂದು ಬೆಳಿಗ್ಗೆ 9-15 ಗಂಟೆ ಸಮಯಕ್ಕೆ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಯು ಡಿ ಆರ್  43/2021 ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 25-07-2021 11:11 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080