ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: ೦1

 

ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ:  ಪಿರ್ಯಾದಿದಾರರಾದ  ಹರಿಪ್ರಸಾದ್ ಪ್ರಾಯ: 27 ವರ್ಷ ತಂದೆ: ಗುಮ್ಮಣ್ಣ ಪೂಜಾರಿ ವಾಸ:ಈಂದಡಿಮಾರ್ ಮನೆ, ಕಾಯರ್ತಡ್ಕ ಅಂಚೆ, ಕಳೆಂಜ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ: 23-09-2021 ರಂದು ತಮ್ಮ ಬಾಬ್ತು  ಕೆಎ 21 ಡಬ್ಲೂ 0110 ನೇ ಮೋಟಾರ್‌ ಸೈಕಲ್‌ ನಲ್ಲಿ ಉಜಿರೆಗೆ ಬಂದು ಕೆಲಸ ಮುಗಿಸಿಕೊಂಡು ವಾಪಸ್ಸು ಉಜಿರೆಯಿಂದ ಸೋಮತ್ತಡ್ಕ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವ ಸಮಯ ಸುಮಾರು ರಾತ್ರಿ 7.50 ಗಂಟೆಗೆ ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಉಜಿರೆ ಶ್ರೀ ವಿಘ್ನೇಶ್ವರ ಆಟೋ ಗ್ಯಾರೇಜ್‌ ಬಳಿ ತಲುಪುತ್ತಿದ್ದಂತೆ ಪಿರ್ಯಾದಿದಾರರ ವಿರುದ್ಧ ದಿಕ್ಕಿನಿಂದ ಅಂದರೆ ಚಾರ್ಮಾಡಿ ಕಡೆಯಿಂದ ಉಜಿರೆ ಕಡೆಗೆ  KA01 MS 6657 ನೇ  ಕಾರನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಮೋಟಾರ್‌ ಸೈಕಲ್‌ ಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು, ಪಿರ್ಯಾದಿದಾರರಿಗೆ ಎಡಕಾಲಿನ ಮಣಿಗಂಟಿಗೆ, ಬಲಕಾಲಿಗೆ,  ಬೆನ್ನಿಗೆ, ಗುದ್ದಿದ ಗಾಯವಾಗಿದ್ದು ಉಜಿರೆ ಬೆನಕ ಆಸ್ಪತ್ರೆಯಲ್ಲಿ ದಾಖಲಾಗಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಕೆ.ಎಮ್‌.ಸಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 72/2021, ಕಲಂ; 279,337 ಐಪಿಸಿ ಮತ್ತು 134(ಎ)(ಬಿ) ಐ.ಎಂ.ವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಹಲ್ಲೆ ಪ್ರಕರಣ: 1

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ನಿಶಾನ್ ಪ್ರಾಯ: 30 ವರ್ಷ ತಂದೆ: ಅಬೂಬಕ್ಕರ್, ವಾಸ: ಶಾಂತಿಯಂಗಡಿ ಮನೆ, ಬಿ ಮೂಡ ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ: 24.09.2021 ರಂದು ಪಿರ್ಯಾದಿದಾರರು ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಕೈಕಂಬ ಎಂಬಲ್ಲಿರುವ ಗೂಡಂಗಡಿಯಲ್ಲಿದ್ದ ಸಮಯ ಸಂಜೆ ಸುಮಾರು 18:00 ಗಂಟೆಗೆ ಸಿರಾಜ್, ಉಬೈದುಲ್ಲಾ @ ಮುನ್ನಾ, ನೌಶೀರ್ , ನಿಸಾರ್ ಎಂಬವರುಗಳು ಪಿರ್ಯಾದಿದಾರರ ಗೂಡಂಗಡಿಯ ಒಳಗೆ ಹೋಗಿ ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಅವರ ಪೈಕಿ ಉಬೈದುಲ್ಲಾನ ಅಲ್ಲೇ ರಸ್ತೆಯ ಪಕ್ಕದಲ್ಲಿದ್ದ ಕಲ್ಲಿನಿಂದ ಪಿರ್ಯಾದಿದಾರರಿಗೆ ಹೊಡೆದು ಸಿರಾಜ್ ನು ಕೈಯಿಂದ ಪಿರ್ಯಾದಿದಾರರಿಗೆ ಹಲ್ಲೆ ಮಾಡಿರುತ್ತಾರೆ. ನಿಸಾರನು ಪಿರ್ಯಾದಿದಾರರ ಗೂಡಂಗಡಿಯ ಮುಂದೆ ಮೋಟಾರ್ ಸೈಕಲನ್ನು ನಿಲ್ಲಿಸಿದ್ದು, ಪಿರ್ಯಾದಿದಾರರ ಗೂಡಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಅಬೂಬಕ್ಕರ್ ರವರು  ನೀನು ಯಾಕೆ ಇಲ್ಲಿ ಮೋಟಾರ್ ಸೈಕಲ್ ನಿಲ್ಲಿಸಿದ್ದಿಯಾ? ಎಂಬುದಾಗಿ ಪ್ರಶ್ನಿಸಿದ್ದಕ್ಕೆ ಸಿರಾಜನು ಅದನ್ನು ಕೇಳಲಿಕ್ಕೆ ನೀನು ಯಾರು ಎಂದು ಮರುಉತ್ತರಿಸಿದಾಗ ಪಿರ್ಯಾದಿದಾರರು ಯಾಕೆ ಹಾಗೇ ಹೇಳುತ್ತಿಯಾ ಅಂತ ಕೇಳಿದ್ದಕ್ಕೆ  ಸುಮಾರು  4 ಜನ ಸೇರಿಕೊಂಡುಏಕ ಏಕಿ ಗೂಡಂಗಡಿ ಹೋಟೆಲಿಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ಮಾಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ.  113/20021   ಕಲಂ:  ಕಲಂ:  504, 323, 324 ಜೊತೆಗೆ 34 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 2

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಬಂಟ್ವಾಳ ನಗರ ಪೊಲೀಸ್ ಠಾಣೆ:  ದಿನಾಂಕ: 24.09.2021 ರಂದು ಪಿರ್ಯಾದಿದಾರರಾದ ಸಂದೀಪ್ ಕುಮಾರ್  ಪ್ರಾಯ: 40 ವರ್ಷ ತಂದೆ: ವಜ್ರ ಪೂಜಾರಿ, ವಾಸ: ತಾಳೀಪಡ್ಪು ಕಕ್ಕೆಪದವು ಮನೆ, ತೆಂಕಕಜೆಕಾರು ಗ್ರಾಮ,  ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ತನ್ನ ಬಾಬ್ತು KA-19-AC-2128 ನೇ ಪಿಕಪ್ ವಾಹನವನ್ನು ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಕೊಡಂಗೆ ಎಂಬಲ್ಲಿ ರಸ್ತೆಯಲ್ಲಿ ನಿಲ್ಲಿಸಿ ಕೆಳಗಡೆ ಹೋಗಿ ವಾಪಾಸು ಸೆಂಟ್ರಿಂಗ್ ಸಾಮಾನುಗಳನ್ನು ಮೇಲಕ್ಕೆ ತರುತ್ತಿರುವ ಸಮಯ ಸುಮಾರು 14:30 ಗಂಟೆಗೆ ಐತ್ತಪ್ಪ ಆಳ್ವ ರವರ ಬಾಬ್ತು ಜಮೀನಿನಲ್ಲಿ ಜಲ್ಲಿ ಲೋಡ್ ಎಂದು ಬಂದಿದ್ದ KA-19-3688 ನೇ ಲಾರಿಯನ್ನು ಅದರ ಚಾಲಕ ಬಾಲಪ್ಪ ಎ ಜವೂರ್ ಎಂಬಾತನು ನಿಲ್ಲಿಸಿ ಲಾರಿಯು ಮುಂದಕ್ಕೆ ಹೋಗದಂತೆ ಕಲ್ಲನ್ನು ಚದ್ರದಡಿಗೆ ಇಡುವರೇ ಪ್ರಯತ್ನಿಸಿದಾಗ ಲಾರಿಯು ಮುಂದಕ್ಕೆ ಚಲಿಸಿದಾಗ ಅದನ್ನು ನಿಲ್ಲಿಸುವ ಸಲುವಾಗಿ ಲಾರಿಗೆ ಹತ್ತಿದಾಗ ಆಯತಪ್ಪಿ ಲಾರಿಯ ಯಾವುದೋ ಭಾಗ ಶರೀರಕ್ಕೆ ತಾಗಿ ನೆಲಕ್ಕೆ ಬಿದ್ದು ಗಂಭೀರ ಗಾಯಗೊಂಡು ರಕ್ತ ಕಾರಿ ಮೃತಪಟ್ಟಿದ್ದು, ಸದ್ರಿ ಲಾರಿಯು ಮುಂದಕ್ಕೆ ಚಲಿಸಿ ಪಿರ್ಯಾದಿದಾರರ ಬಾಬ್ತು ಪಿಕಪ್ ನ ಮುಂದಿನ ಎಡಭಾಗಕ್ಕೆ ಡಿಕ್ಕಿ ಹೊಡೆದು ನಿಂತಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ.  112/20021   ಕಲಂ: 304(A) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಳ್ಯ ಪೊಲೀಸ್ ಠಾಣೆ : ದಿನಾಂಕ 22.09.2021 ರಂದು ಸುಳ್ಯ ಪೊಲೀಸ್‌ ಠಾಣೆಯಲ್ಲಿ  ಅ.ಕ್ರ 75/2021  498 (ಎ) ಮತ್ತು 34 ಐಪಿಸಿ 3&4 DP Act 1961.ನಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 25-09-2021 11:35 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080