ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಆಗ್ನೇಸ್ ಪಾಯಸ್, ಪ್ರಾಯ 75 ವರ್ಷ, ಗಂಡ:  ದಿ|| ಕಾಮಿಲ್ ಪಾಯಸ್, ವಾಸ: ಸಾಲ್ಮರ ಮನೆ, ಚಿಕ್ಕಮುಡ್ನೂರು ಗ್ರಾಮ ಮತ್ತು ಅಂಚೆ, ಪುತ್ತೂರು ಎಂಬವರ ದೂರಿನಂತೆ ದಿನಾಂಕ 21-01-2022 ರಂದು 19-30 ಗಂಟೆಗೆ ಆರೋಪಿ ಮೋಟಾರ್ ಸೈಕಲ್ ಸವಾರ ತೇಜಸ್ ಎಂಬವರು KA-21-X-3352 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲನ್ನು ಎಪಿಎಂಸಿ-ಪಡೀಲ್-ಪುತ್ತೂರು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಎಪಿಎಂಸಿ ಕಡೆಯಿಂದ ಪಡೀಲ್ ಕಡೆಗೆ ಚಲಾಯಿಸಿಕೊಂಡು ಹೋಗಿ , ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ ಕೊಟೇಚಾ ಹಾಲ್ ಬಳಿ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿದ ಪರಿಣಾಮ, ಪಡೀಲ್ ಕಡೆಯಿಂದ ಸಾಲ್ಮರ ಕಡೆಗೆ ರಸ್ತೆಯ ಬಲ ಬದಿಯಲ್ಲಿ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದುದಾರರಿಗೆ ಮೋಟಾರ್ ಸೈಕಲ್ ಅಪಘಾತವಾಗಿ ಪಿರ್ಯಾದುದಾರರು ಮಣ್ಣು ರಸ್ತೆಗೆ ಬಿದ್ದು, ಎಡಕಾಲಿನ ಮೊಣಗಂಟಿಗೆ ಹಾಗೂ ಎಡಕಾಲಿನ ಕೋಲು ಕಾಲಿಗೆ ರಕ್ತಗಾಯ ಮತ್ತು ಗುದ್ದಿದ ಗಾಯ, ಬಲಕಾಲಿನ ಪಾದದ ಬಳಿ ಮತ್ತು ಬೆನ್ನಿಗೆ ಗುದ್ದಿದ ಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  13/2022 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ದೇವರಾಜ ಎಂ ಕೆ, ಪ್ರಾಯ 25 ವರ್ಷ, ತಂದೆ: ಕೃಷ್ಣೇಗೌಡ, ವಾಸ: ಮೂಲೆಕಾಳೇನಹಳ್ಳಿ ಗ್ರಾಮ, ಸಿಂಗಪುರ ಅಂಚೆ, ಕಸಬಾ ಹೋಬಳಿ, ಹೊಳೆನರಸೀಪುರ ತಾಲೂಕು, ಹಾಸನ ಎಂಬವರ ದೂರಿನಂತೆ ದಿನಾಂಕ 27-01-2022 ರಂದು 21-30 ಗಂಟೆಗೆ ಆರೋಪಿ ಆಪೆ ಗೂಡ್ಸ್ ವಾಹನ ಚಾಲಕ ಮೊಹಮ್ಮದ್ ಜೈನುದ್ದೀನ್ ಮನ್ಸೂರ್ ಎಂಬವರು KA-20-AA-4767 ನೇ ನೋಂದಣಿ ನಂಬ್ರದ ಆಪೆ ಗೂಡ್ಸ್ ವಾಹನದಲ್ಲಿ ಮೊಹಮ್ಮದ್ ಫೈಝಲ್ ಮತ್ತು ಸೋನು ಕುಮಾರ್ ಎಂಬವರನ್ನು ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಬಂಟ್ವಾಳ ತಾಲೂಕು ಪೆರ್ನೆ ಗ್ರಾಮದ ಪೆರ್ನೆ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್ ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ಮಂಗಳೂರು ಕಡೆಯಿಂದ ನಂಜನಗೂಡು ಕಡೆಗೆ ಕಲ್ಲಿದ್ದಲು ಹೇರಿಕೊಂಡು ಚಲಾಯಿಸಿಕೊಂಡು ಹೋಗುತ್ತಿದ್ದ KA-02-AG-8025 ನೇ ನೋಂದಣಿ ನಂಬ್ರದ ಲಾರಿಯ ಬಲಭಾಗಕ್ಕೆ ಅಪಘಾತವಾಗಿ, ಆಪೆ ವಾಹನದಲ್ಲಿದ್ದ ಚಾಲಕನಿಗೆ ಎರಡೂ ಕಾಲಿನ ಮೊಣಗಂಟಿಗೆ, ಮುಖಕ್ಕೆ ರಕ್ತಗಾಯ ಮತ್ತು ಇತರ ಇಬ್ಬರಿಗೆ  ದೇಹದ ಭಾಗಗಳಿಗೆ ಸಣ್ಣಪುಟ್ಟ ಗಾಯವಾಗಿ ಚಿಕಿತ್ಸೆ ಬಗ್ಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  14/2022 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಗ್ರಾಮಾಂತರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಂದು ಕುಂಞ  ಪ್ರಾಯ: 52 ವರ್ಷ, ತಂದೆ: ದಿ| ಮಹಮ್ಮದ್ ಬ್ಯಾರಿ, ವಾಸ: ಹಸಂತ್ತಡ್ಕ ಮನೆ, ಬಲ್ನಾಡು ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ಫಿರ್ಯಾದಿದಾರರಾದ ಅಂದು ಕುಂಞ,  ಪ್ರಾಯ: 52 ವರ್ಷ, ತಂದೆ: ದಿ| ಮಹಮ್ಮದ್ ಬ್ಯಾರಿ, ವಾಸ: ಹಸಂತ್ತಡ್ಕ ಮನೆ, ಬಲ್ನಾಡು ಗ್ರಾಮ, ಪುತ್ತೂರು ತಾಲೂಕುರವರು ವ್ಯಾಪಾರ ಕೆಲಸ  ಮಾಡಿಕೊಂಡಿದ್ದು, ಈ ದಿನ ದಿನಾಂಕ 27.01.2022 ರಂದು ಕೆಲಸ ನಿಮಿತ್ತ ಕಾವು ಎಂಬಲ್ಲಿಗೆ ಹೋಗಿ ಕೆಲಸ ಮುಗಿಸಿ ಮರಳಿ ಪುತ್ತೂರು ಕಡೆಗೆ ಬರುವಾಗ ಸಮಯ ಸುಮಾರು ರಾತ್ರಿ 8:45 ಗಂಟೆಗೆ ಪುತ್ತೂರು ತಾಲೂಕು ಒಳಮೊಗ್ರು ಗ್ರಾಮದ ಕುಂಬ್ರ ಹಾಲಿನ ಸೊಸೈಟಿ ಎದುರು ಮಾಣಿ-ಮೈಸೂರು ಹೆದ್ದಾರಿಯಲ್ಲಿ ಕೆಎ-19-ಇಇ-7346 ನೇ ಸ್ಕೂಟರನ್ನು ಫಿರ್ಯಾದಿದಾರರ  ಅಣ್ಣ ಅದ್ರಾಮ ಬ್ಯಾರಿ ಹೆಚ್. ಎಂಬುವರು ಪುತ್ತೂರಿನಿಂದ ಸುಳ್ಯ ಕಡೆಗೆ ಚಲಾಯಿಸಿಕೊಂಡು ಬರುವಾಗ ಎದುರಿನಿಂದ ಅಂದರೆ, ಸುಳ್ಯದಿಂದ ಪುತ್ತೂರಿನ ಕಡೆಗೆ ಕೆಎ-21-ವೈ-6981 ನೇ ಪಲ್ಸರ್ ಮೋಟಾರ್ ಸೈಕಲನ್ನು ಅದರ ಚಾಲಕನು ನಿರ್ಲಕ್ಷ್ಯ ಮತ್ತು ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ ಫಿರ್ಯಾದಿದಾರರ ಅಣ್ಣ ಚಲಾಯಿಸುತ್ತಿದ್ದ ಸ್ಕೂಟರಿಗೆ ಡಿಕ್ಕಿಯನ್ನುಂಟು ಮಾಡಿದ್ದು, ಸ್ಕೂಟರ್ ಸವಾರ ರಸ್ತೆಗೆ ಬಿದ್ದ ಪರಿಣಾಮ ಕಣ್ಣು, ಮೂಗು, ಹಣೆ, ತಲೆ, ಬಾಯಿಗೆ ಹಾಗೂ ಎಡಕೈಗೆ ರಕ್ತ ಹಾಗೂ ಗುದ್ದಿದ ಗಾಯವಾಗಿರುತ್ತದೆ. ಫಿರ್ಯಾದಿದಾರರು ಮತ್ತು ಸಾರ್ವಜನಿಕರು ಗಾಯಾಳು ಅದ್ರಾಮ ಬ್ಯಾರಿ ಹೆಚ್. ರವರನ್ನು ಎಬ್ಬಿಸಿ ಉಪಚರಿಸಿ ಚಿಕಿತ್ಸೆ ಬಗ್ಗೆ ಆಟೋರೀಕ್ಷಾವೊಂದರಲ್ಲಿ ಪುತ್ತೂರು ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ಪ್ರಥಮ  ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆ ಬಗ್ಗೆ  ಮಂಗಳೂರಿಗೆ ಕರೆದುಕೊಂಡು ಹೋಗಲು ಸೂಚಿಸಿದ ಮೇರೆಗೆ, ಫಿರ್ಯಾದಿದಾರರು  ಗಾಯಾಳು ಅದ್ರಾಮ ಬ್ಯಾರಿ ಹೆಚ್ ರವರನ್ನು ಆಂಬ್ಯುಲೆನ್ಸ್‌ ನಲ್ಲಿ ಮಂಗಳೂರಿನ ಎ.ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಚಿಕಿತ್ಸೆಯನ್ನು ನೀಡಿ ಒಳ ರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಈ ಅಪಘಾತದ ಪರಿಣಾಮ ಎರಡೂ ವಾಹನಗಳು ಜಖಂಗೊಡಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ  ಠಾಣಾ ಅಕ್ರ: 16/2022  ಕಲo: 279, 337   ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಜೀವ ಬೆದರಿಕೆ ಪ್ರಕರಣ: 1

  • ಬಂಟ್ವಾಳ ನಗರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸದಕತುಲ್ಲಾ ಪ್ರಾಯ 35 ವರ್ಷ ತಂದೆ: ಎನ್ ಮೊಹಿದ್ದಿನಬ್ಬ ವಾಸ: 3-37 ನಂದಾವರ ಮನೆ ಸಜಿಪ ಮುನ್ನೂರು ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾಧಿದಾರರು ಪಾಣೆಮಂಗಳೂರು ಗ್ರಾಮದ ಮೇಲ್ಕಾರ ಎಂಬಲ್ಲಿರುವ ಕಮರ್ಷಿಯಲ್ಲ್ ಕಾಂಪ್ಲೆಕ್ಸ್ ನಲ್ಲಿರುವ ಬಟ್ಟೆ ಅಂಗಡಿಯನ್ನು 7 ವರ್ಷಗಳ ಹಿಂದೆ ತಿಂಗಳ ಬಾಡಿಗೆಗಾಗಿ ನಿಸಾರ ಅಹಮ್ಮದ್ ರವರಿಂದ ಪಡೆದಿರುವುದಾಗಿದೆ. ಪಿರ್ಯಾಧಿದಾರರಿಗೆ ದಿನಾಂಕ 28-01-2022 ರಂದು ಬೆಳ್ಳಿಗೆ 10.10 ಗಂಟೆಗೆ ಅಹಮ್ಮದ್ ಗಾರ್ಮೆಂಟ್ಸ್ ಅಂಗಡಿಯನ್ನು ತೆರೆಯುವಂತೆ ನಿಸಾರ ಅಹಮ್ಮದ್ ತಿಳಿಸಿದಂತೆ ಪಿರ್ಯಾಧಿದಾರರು ಸದ್ರಿ ಅಂಗಡಿಯನ್ನು ತೆರೆಯುತ್ತಿರುವ ಸಮಯ ನಿಸಾರ ಅಹಮ್ಮದ ಏಕಾಏಕಿ ಅಂಗಡಿಯ ಹತ್ತಿರ ಬಂದು ಯಾಕೆ ಅಂಗಡಿಯನ್ನು ತಡವಾಗಿ ತೆರೆಯುತ್ತೀಯಾ, ಎಂದು ಹೇಳಿ, ಆತನ ಕಿಚೈನ್ ನಲ್ಲಿದ್ದ ಹರಿತವಾದ ಸ್ವತ್ತಿನಿಂದ ಪಿರ್ಯಾಧಿದಾರರ ಎಡಕಣ್ಣಿನ ಕೆಳಭಾಗ, ಮೂಗಿನ ಬಲಭಾಗ, ಎಡಕಿವಿಯ ಮೇಲ್ಭಾಗ, ಬಲಕಣ್ಣಿನ ಬಲಬದಿ, ಬಲಗಲ್ಲ, ಎಡ ಕುತ್ತಿಗೆ ಮತ್ತು ಕುತ್ತಿಗೆಯ ಹಿಂಭಾಗ, ಎದೆಯ ಭಾಗಕ್ಕೆ ಗೀರಿ ನಿನ್ನನ್ನು ನೋಡಿಕೊಳ್ಳುತ್ತೇನೆ, ನಿನ್ನನ್ನು ಕೊಲ್ಲುತ್ತೇನೆ, ನಿನ್ನನ್ನು ಶೂಟ್ ಮಾಡುತ್ತೇನೆ ಎಂಬುದಾಗಿ ಪಿರ್ಯಾಧಿದಾರರನ್ನು ಬೆದರಿಸಿರುತ್ತಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 10/2022  ಕಲಂ: 324, 506 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 29-01-2022 10:17 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080