ಅಪಘಾತ ಪ್ರಕರಣ: ೦1
ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಜಾಕಿರ್ ಹುಸೇನ್, ಪ್ರಾಯ 52 ವರ್ಷ, ತಂದೆ: ಅಬ್ದುಲ್ ರಹಿಮಾನ್ , ವಾಸ: ಕೋಡಿಯಲ್ ಮನೆ, ಕಣಿಯೂರು ಗ್ರಾಮ, ಬೆಳ್ತಂಗಡಿ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 27-06-2021 ರಂದು ಆರೋಪಿ ಅಟೋರಿಕ್ಷಾ ಚಾಲಕ ಚಿದಾನಂದ ಎಂಬವರು KA-21-B-4469 ನೇ ನೋಂದಣಿ ನಂಬ್ರದ ಅಟೋರಿಕ್ಷಾವನ್ನು ಪಿಲಿಗೂಡು-ಕಣಿಯೂರು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಕಣಿಯೂರು ಕಡೆಯಿಂದ ಪಿಲಿಗೂಡು ಕಡೆಗೆ ಚಲಾಯಿಸಿಕೊಂಡು ಹೋಗಿ, ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಪಿಲಿಗೂಡು ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತಪ್ಪು ಬದಿಗೆ ಚಲಾಯಿಸಿ, ಮಹಮ್ಮದ್ ಸಹೀದ್ ಎಂಬವರು ಪಿಲಿಗೂಡು ಕಡೆಯಿಂದ ಕಣಿಯೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-EA-2841 ನೇ ನೋಂದಣಿ ನಂಬ್ರದ ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಮಹಮ್ಮದ್ ಸಹೀದ್ ರವರು ರಸ್ತೆಗೆ ಬಿದ್ದು, ತಲೆಗೆ, ಮೂಗಿಗೆ, ಕೆನ್ನೆಗೆ, ಬಲಕಾಲಿನ ಮೊಣಗಂಟಿಗೆ, ಎಡಕಾಲಿಗೆ, ಹೊಟ್ಟೆಗೆ ಗಾಯಗಳಾಗಿದ್ದು, ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 93/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಜೀವಬೆದರಿಕೆ ಪ್ರಕರಣ: ೦2
ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮಹಮ್ಮದ್ ಶರೀಫ್ ಪ್ರಾಐ:24 ವರ್ಷ ತಂದೆ: ಇಸ್ಮಾಯಿಲ್ ಸಿ ಎಮ್ ವಾಸ: ಚೆನ್ನಿಗುಡ್ಡೆ ಮನೆ ಮುಂಡಾಜೆ ಗ್ರಾಮ ಬೆಳ್ತಂಗಡಿ ತಾಲೂಕು ರವರು ದಿನಾಂಕ: 27-06-2021 ರಂದು ತನ್ನ ಪತ್ನಿ ಹಾಗೂ ಚಿಕ್ಕಪ್ಪನ ಮಗ ಶಕೀರ್ ನೊಂದಿಗೆ ಚಿಕ್ಕಪ್ಪನ ಮನೆಯಲ್ಲಿ ಊಟ ಮುಗಿಸಿ ವಾಪಾಸು ಬರುವಾಗ ಮುಂಡಾಜೆ ಗ್ರಾಮದ ಚೆನ್ನಿಗುಡ್ಡೆಯ ಶ್ರೀ ಮಂಜುಶ್ರೀ ಭಜನಾ ಮಂದಿರದ ಬಳಿ ತಲುಪಿದಾಗ 3 ಬೈಕಿನಲ್ಲಿ ಬಂದ 6 ಜನ ಅಪರಿಚಿತರು ಪಿರ್ಯಾದುದಾರರನ್ನು ತಡೆದು ನಿಲ್ಲಿಸಿ ಅವರ ಪೈಕಿ ಒಬ್ಬನು ಬೈಕಿನಿಂದ ಇಳಿದು ಹಲ್ಲೆ ನಡೆಸಿದಾಗ ಪಿರ್ಯಾದುದಾರರು ತಡೆಯಲು ಹೋದಾಗ ಅಪರಿಚಿತರ ಪೈಕಿ ಇಬ್ಬರು ಪಿರ್ಯಾದುದಾರರ ಕೆನ್ನೆಗೆ ಹಾಗೂ ತಲೆಗೆ ಕೈಯಿಂದ ಹಲ್ಲೆ ನಡೆಸಿ ದೂಡಿಹಾಕಿದರು. ನಂತರ ಇನ್ನಿಬ್ಬರು ಶಾಕೀರ್ ನಿಗೆ ಹೆಲ್ಮೆಟ್ ನಿಂದ ತಲೆಗೆ ಹಾಗೂ ಬಲ ಕೈಗೆ ಹಲ್ಲೆ ನಡೆಸಿದಾಗ ಶಾಕೀರ್ ಗೆ ಅಪರಿಚಿತರ ಪೈಕಿ ಒಬ್ಬನ ಪರಿಚಯ ಸಿಕ್ಕಿ ಧನು @ ದಿನೇಶ ಎಂದು ಕರೆದು ಏಕೆ ನಮಗೆ ಹಲ್ಲೆ ನಡೆಸುತ್ತೀರಿ ಎಂಬುದಾಗಿ ಕೇಳಿದಾಗ ಆರೋಪಿಗಳು ಅವ್ಯಾಚ ಶಬ್ದಗಳಿಂದ ಬೈದು ಈಗ ಬದುಕಿದ್ದಿಯಾ ದೂರು ನೀಡಿದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಒಡ್ಡಿ ಹೋಗಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ ಕ್ರ 36/2021 ಕಲಂ;143,147,148,341,354,323,324,504,506 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬೆಳ್ಳಾರೆ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ವಾಗೀಶ್ವರಿ ಕೆ ಪ್ರಾಯ 59 ವರ್ಷ, ಕಿರಿಯ ಆರೋಗ್ಯ ಸಹಾಯಕಿ, ಪ್ರಾಥಮಿಕ ಆರೋಗ್ಯ ಕೆಂದ್ರ ಪಾಲ್ತಾಡಿ, ಉಪಕೇಂದ್ರ ಸವಣೂರು. ದ.ಕ. ಜಿಲ್ಲೆ. ರವರು ದಿನಾಂಕ 28.06.2021 ರಂದು ಸಾರ್ವಜನಿಕರ ಕೋವಿಡ್-19 ಟೆಸ್ಟ್ ಬಗ್ಗೆ ಆಶಾ ಕಾರ್ಯಕರ್ತೆ ಗೀತಾ ಮತ್ತು ಸರಸ್ವತಿ ಹಾಗೂ ಲ್ಯಾಬ್ ಟೆಕ್ನಿಶೀಯಿನ್ ಭಾರತಿ ಹಾಗೂ ಗ್ರಾಮ ಪಂಚಾಯತು ಸವಣೂರು ಇಲ್ಲಿಯ ಪ್ರಭಾರ ಪಿ.ಡಿ.ಓ ಮನ್ಮಥ ಹಾಗೂ ಕೋವಿಡ್ ಕಾರ್ಯಪಡೆ ಸದಸ್ಯ ಸುರೇಶ್ ರೈ ಸೂಡಿಮುಳ್ಳು ರವರೊಂದಿಗೆ ಸವಣೂರು ಪೇಟೆಯಲ್ಲಿನ ಅಂಗಡಿ ವಠಾರಗಳಲ್ಲಿ ಕೋವಿಡ್-19 ಟೆಸ್ಟ್ ಬಗ್ಗೆ ಸಂಚರಿಸಿ ಕಡಬ ತಾಲೂಕು ಸವಣೂರು ಗ್ರಾಮದ ಪಣೆಮಜಲು ಬಸ್ಸು ನಿಲ್ದಾಣದ ಬಳಿ ತಲುಪಿದಾಗ ಅಗರಿ ನಿವಾಸಿ ಮೇಘರಾಜ ಎಂಬವನು ಫಿರ್ಯಾದಿದಾರರ ಬಳಿ ಬಂದು ನೀವು ಇಲ್ಲಿಯ ಜನರನ್ನು ಕ್ವಾರಂಟೈನ್ ಮಾಡ್ತಿರಾ ನೀವು ಇಲ್ಲಿ ಬಂದು ರೋಗ ತಡೆಗಟ್ಟುವ ಅಗತ್ಯವಿಲ್ಲ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದು ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಹೇಳಿ ಜೀವ ಬೆದರಿಕೆ ಒಡ್ಡಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿದೆ ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ಅ.ಕ್ರ 33/2021 ಕಲಂ 353, 504, 506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ
ಇತರೆ ಪ್ರಕರಣ: ೦2
ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಪೊಲೀಸ್ ಉಪ ನಿರೀಕ್ಷಕರು ಪುಂಜಾಲಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 28.06.2021 ರಂದು ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಡೊಂಬಯ್ಯ ಪೂಜಾರಿ ಎಂಬಾತನು ಬಂಟ್ವಾಳ ತಾಲೂಕು, ಉಳಿ ಗ್ರಾಮದ ಕಕ್ಕೆಪದವು, ಅಂಕರೋಡಿ ಎಂಬಲ್ಲಿ ತನ್ನ ಮನೆ ಸಮೀಪ ಡಾಮಾರು ರಸ್ತೆಯ ಬದಿಯಲ್ಲಿರುವ ಸಾರ್ವಜನಿಕ ನೀರು ಸರಬರಾಜಿನ ಪಂಪ್ ಶೆಡ್ನ ಬಳಿ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆಯದೇ ಮದ್ಯಪಾನ ಮಾಡಲು ಅನುವು ಮಾಡಿಕೊಡುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ಸದ್ರಿ ಸ್ಥಳಕ್ಕೆ ದಾಳಿ ನಡೆಸಿ ಮದ್ಯ ಸೇವನೆ ಮಾಡಲು ಅನುಮಾಡಿಕೊಟ್ಟ ಆರೋಪಿ ಡೊಂಬಯ್ಯ ಪೂಜಾರಿ ಮತ್ತು ಮದ್ಯ ಸೇವನೆ ಮಾಡಲು ಬಂದಿದ್ದ ಆರೋಪಿ ಲೋಕೇಶ್ ಎಂಬವರನ್ನು ವಶಕ್ಕೆ ಪಡೆದು ಆಪಾದಿತರೊಗಳಿಂದ 90ML Mysore Lancer Whisky ಮಧ್ಯ ತುಂಬಿದ ಪ್ಯಾಕೇಟ್ಗಳು ಒಟ್ಟು-7, ಗಾಜಿನ ಗ್ಲಾಸು-1 ಹಾಗೂ ಬಿಳಿ ಬಣ್ಣ ಪ್ಲಾಸ್ಟಿಕ್ ಚೀಲವನ್ನು ಪಂಚರ ಸಮಕ್ಷಮ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಸ್ವಾಧೀನಪಡಿಸಿಕೊಂಡ ಸೊತ್ತುಗಳ ಅಂದಾಜು ಮೌಲ್ಯ ರೂ-280/- ಆಗಬಹುದು. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ಅ.ಕ್ರ 37/2021 ಕಲಂ: 15(ಎ),32(3) ಕರ್ನಾಟಕ ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬಂಟ್ವಾಳ ನಗರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಆಬ್ದುಲ್ ರಹಿಮಾನ ಪ್ರಾಯ 45 ತಂದೆ: ಸುಲೈಮಾನ ವಾಸ: ನಂದಾವರ ಬಸ್ತಿಗುಡ್ಡೆ ಸಜಿಪ ಮುನ್ನೂರು ರು ಗ್ರಾಮ ಬಂಟ್ವಾಳ ರವರು ಸಜಿಪ ಮುನ್ನೂರು ಗ್ರಾಮದ ನಂದಾವರ ಬಸ್ತಿ ಗುಡ್ಡೆ ಮನೆಯ ವಠಾರದಲ್ಲಿ ತಿಂಡಿ ತಿನಿಸುಗಳ ಮಾರಾಟ ಮಾಡುವ ಅಂಗಡಿ ಇದ್ದು ದಿನಾಂಕ 28-06-2021 ರಂದು ಪಿರ್ಯಾಧಿದಾರರ ಮಗ ಸುಹೈಲ್ ಅಂಗಡಿಯಲ್ಲಿರುವಾಗ ಜಾಸಿಲ್ ಎಂಬುವನು ಪಿರ್ಯಾಧಿದಾರರ ಅಂಗಡಿಗೆ ಬಂದು ಸಿಗರೇಟು ಕೇಳಿದ್ದು ಆಗ ಪಿರ್ಯಾಧಿದಾರರ ಮಗ ಇಲ್ಲವೆಂದು ಹೇಳಿದಾಗ ಆರೋಪಿತನು ಅಂಗಡಿಯಲ್ಲಿ ತಿಂಡಿ-ತಿನಿಸುಗಳನ್ನು ಹಾಗೂ ಸಾಮಾನುಗಳನ್ನು ಚೆಲ್ಲಾಪಿಲ್ಲಿಯಾಗಿ ಮಾಡಿ ಪಿರ್ಯಾಧಿದಾರರ ಮಗನಿಗೆ ಅಲ್ಲಿಯೇ ಇದ್ದ ಕೊಡಪಾನದಿಂದ ತಲೆಗೆ ಹೊಡೆದು ಜಖಂಗೊಳಿಸಿರುತ್ತಾನೆ ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣಾ ಅಕ್ರ: 73/2021 ಕಲಂ: 447, 324 ಐಪಿಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ
ಅಸ್ವಾಭಾವಿಕ ಮರಣ ಪ್ರಕರಣ: ೦1
ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಮಧು ಶ್ರೀ ಪ್ರಾಯ:38 ವರ್ಷ ಗಂಡ: ಜಗದೀಶ್ ರಾವ್ ವಾಸ: ಧರ್ಮಸ್ಥಳ ಮನೆ ವೈಶಾಲಿ ವಸತಿ ಗೃಹದ ಹಿಂಬದಿ ಧರ್ಮಸ್ಥಳ ಗ್ರಾಮ ಬೆಳ್ತಂಗಡಿ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ;28-06-2021 ರಂದು ಪಿರ್ಯಾದುದಾರರು ಮನೆಯಲ್ಲಿದ್ದ ಸಮಯ ನೆರೆಯ ಲಲಿತಾ ಎಂಬವರು ಬಂದು ಪಿರ್ಯಾದುದಾರರ ಮನೆಯ ಹಿಂಬದಿಯ ಗುಡ್ಡೆದ ಮೇಲೆ ಇರುವ ಹಲಸಿನ ಮರದ ಕೊಂಬೆಯಲ್ಲಿ ಫಿರ್ಯಾದಿದಾರರ ಗಂಡ ಜಗದೀಶ್ ರಾವ್ರವರ ಮೃತದೇಹವು ನೇತಾಡುತ್ತಿರುವ ಬಗ್ಗೆ ತಿಳಿಸಿದ್ದು, ಅದರಂತೆ ಫಿರ್ಯಾದುದಾರರು ಹೋಗಿ ನೋಡಿದ್ದು, ಮೃತ ದೇಹವು ಜಗದೀಶ್ ರಾವ್ ರವರದೇ ಆಗಿದ್ದು, ಜಗದೀಶ್ ರಾವ್ ರವರು ತುಂಬಾ ಕೈ ಸಾಲ ಮಾಡಿಕೊಂಡಿದ್ದು, ಅಲ್ಲದೇ ಎಸ್ ಎಲ್ ವಿ ಪೈನಾನ್ಸ್ ಉಜಿರೆಯಲ್ಲಿ ಪಿರ್ಯಾದುದಾರರ ಬಾಬ್ತು ಚಿನ್ನವನ್ನು ಅಡವಿಟ್ಟು ಸುಮಾರು 15 ಲಕ್ಷ ಸಾಲ ಮಾಡಿರುತ್ತಾರೆ. ಈ ಬಗ್ಗೆ ಮನನೊಂದು ಹಲಸಿನ ಮರದ ಕೊಂಬೆಗೆ ಹಗ್ಗ ಕಟ್ಟಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಯುಡಿಆರ್ ನಂ:40/2021 ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.