Feedback / Suggestions

ಅಪಘಾತ ಪ್ರಕರಣ: 3

 

ಬಂಟ್ವಾಳ  ಸಂಚಾರ  ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಶ್ರೀಮತಿ. ಜಯಶ್ರೀ, ಪ್ರಾಯ: 38 ವರ್ಷ , ಗಂಡ: ಜೊನ್ ಸುವಾರಿಸ್, ವಾಸ: ಶಾಂತಿಪಲ್ಕೆ ಮನೆ, ಮಣಿನಾಲ್ಕೂರು ಗ್ರಾಮ, ಸರಪಾಡಿ ಅಂಚೆ, ಬಂಟ್ವಾಳ ತಾಲೂಕು ರವರು ದಿನಾಂಕ 28-07-2021 ರಂದು ತನ್ನ ಗಂಡ ಜೋನ್ ಸುವಾರಿಸ್ ರವರ ಚಿಕಿತ್ಸೆಯ ಬಗ್ಗೆ ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಗೆ  ಪರಿಚಯದ ಸುನೀಲ್ ಫೆರ್ನಾಂಡೀಸ್ ರವರ ಬಾಬ್ತು KA-70-2821 ನೇ ಆಟೋರಿಕ್ಷಾದಲ್ಲಿ ಹೊರಟು ಬರುತ್ತಾ ಬಂಟ್ವಾಳ ತಾಲೂಕು ಸರಪಾಡಿ ಗ್ರಾಮದ ಪೆರಿಯಪಾದೆ ಎಂಬಲ್ಲಿ ತಲುಪಿದಾಗ ಆಟೋರಿಕ್ಷಾವನ್ನು ಅದರ ಚಾಲಕ ಸುನೀಲ್ ಫೆರ್ನಾಂಡೀಸ್ ರವರು ಇಳಿಜಾರು ಹಾಗೂ ತಿರುವು ರಸ್ತೆಯಲ್ಲಿ ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಆಟೋರಿಕ್ಷಾವು ಹತೋಟಿ ತಪ್ಪಿ ರಸ್ತೆಯ ಬಲ ಬದಿಗೆ ಮಗುಚಿ ಬಿದ್ದಿರುತ್ತದೆ. ಅಪಘಾತದಲ್ಲಿ ಪಿರ್ಯಾದಿದಾರರ ಬಲಕೈ, ಬಲ ಭುಜ,ಬೆನ್ನಿಗೆ ಗಾಯವಾಗಿರುತ್ತದೆ. ಅವರ ಗಂಡ ಜೋನ್ ಸುವಾರಿಸ್ ರವರಿಗೆ ಬಲಕೈಗೆ, ಮೈಗೆ ಗುದ್ದಿದ ಗಾಯ, ಇತರ ಪ್ರಯಾಣಿಕರಾದ ತಾರಾ ರವರಿಗೆ ತಲೆಗೆ ಕೈಕಾಳುಗಳಿಗೆ ರಕ್ತಗಾಯ, ಗಣೇಶ್ ಪೈ ಎಂಬವರ ತಲೆಗೆ ರಕ್ತಗಾಯ, ರಿಕ್ಷಾ ಚಾಲಕರ ಎರಡೂ ಕೈಗಳಿಗೆ, ಬಲಬದಿ ಸೊಂಟಕ್ಕೆ ಗುದ್ದಿದ ಗಾಯವಾಗಿರುತ್ತದೆ. ಗಾಯಗೊಂಡ ಗಾಯಾಳುಗಳು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದು, ಪಿರ್ಯಾದಿದಾರರ ಮಾವ ಪ್ರಾನ್ಸಿಸ್ ರವರು ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬಂಟ್ವಾಳ  ಸಂಚಾರ  ಪೊಲೀಸ್ ಠಾಣೆ. ಮೊ.ನಂ  68/2021ಕಲಂ 279,337,304[ಎ]  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ರೋಹಿತ್ ಪ್ರಾಯ: 17 ವರ್ಷ   ತಂದೆ : ಅಶೋಕ ಪೂಜಾರಿ , ವಾಸ: ಸಾಮೆತ್ತಡ್ಕ ಮನೆ, ಪುತ್ತೂರು ಕಸಬಾ  ಗ್ರಾಮ, ಬಂಟ್ವಾಳ ತಾಲೂಕು ರವರು ದಿನಾಂಕ 27-07-2021 ರಂದು ತನ್ನ ಸ್ನೇಹಿತರಾದ ಮೋಕ್ಷಿತ್ ಮತ್ತು ಸುದೀಪ್ ಪಿರೇರಾರವರೊಂದಿಗೆ ಬಂಟ್ವಾಳದ ಸರಕಾರಿ ಪಾಲಿಟೆಕ್ನಿಕ್  ಕಾಲೇಜಿಗೆ  ಪ್ರವೇಶ ಪತ್ರ ಸಲ್ಲಿಸಲು ಹೋಗುವರೇ ಬಿ.ಸಿ.ರೋಡಿನಿಂದ KA-19-A-8598ನೇ ಆಟೋರಿಕ್ಷಾದಲ್ಲಿ ಬಾಡಿಗೆಗೆ ಗೊತ್ತುಪಡಿಸಿ ಕುಳಿತು ಪ್ರಯಾಣಿಸಿಕೊಂಡು ಹೋಗುತ್ತಾ ಬಂಟ್ವಾಳ ತಾಲೂಕು ಬಂಟ್ವಾಳ ಕಸಬಾ ಗ್ರಾಮದ ಅರಬ್ಬಿ ಗುಡ್ಡೆ ಎಂಬಲ್ಲಿಗೆ ತಲುಪುತ್ತಿದ್ದಂತೆ ಆಟೋರಿಕ್ಷಾವನ್ನು ಚಡಾವು ರಸ್ತೆಯಲ್ಲಿ ಅತೀ ವೇಗ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಆಟೋರಿಕ್ಷಾವು ಮಗುಚಿ ಬಿದ್ದು ಅಪಘಾತವಾಗಿದ್ದು ಆಟೋರಿಕ್ಷಾದಲ್ಲಿದ್ದ ಮೋಕ್ಷಿತ್ ಎಂಬವರ ಬಲಕೋಲು ಕಾಲಿಗೆ, ಬಲ ಕಾಲಿನ ಹಿಮ್ಮಡಿಗೆ, ಬಲಕೈ ಮುಂಗೈಗೆ, ಬಲಕೈಯ ಮಧ್ಯದ ಬೆರಳಿಗೆ ಗುದ್ದಿದ ಹಾಗೂ ತರಚಿದ ಗಾಯವಾಗಿದ್ದುದಲ್ಲದೇ ಆಟೋರಿಕ್ಷಾ ಚಾಲಕ ಅಶೋಕರವರ ಎಡಕಾಲ ಮಣಿಗಂಟಿಗೆ ಗುದ್ದಿದ ಗಾಯವಾಗಿದ್ದು ಗಾಯಾಳು ಮೋಕ್ಷಿತ್ ರವರು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 69/2021  ಕಲಂ 279, 337  ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಳ್ಯ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಭವಾನಿಶಂಕರ್ ವಿ( 55) ತಂದೆ: ಸುಬ್ಬಣ್ಣ ಗೌಡ ವಾಸ: ಅಡ್ತಲೆ ಮನೆ, ಅರಂತೋಡು ಗ್ರಾಮ ಮತ್ತು ಅಂಚೆ ಸುಳ್ಯ ತಾಲೂಕು ರವರು ದಿನಾಂಕ: 28.07.2021 ರಂದು ಅವರ ಬಾಬ್ತು ಕಾರಿನಲ್ಲಿ ಸುಳ್ಯ ತಾಲೂಕು ತೋಡಿಕಾನ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಹೋಗುವರೇ ಸುಳ್ಯ ತಾಲೂಕು ತೋಡಿಕಾನ ಗ್ರಾಮದ ದೇವರ ಜಳಕದ ಗುಂಡಿಯ ಹತ್ತಿರ ತಲುಪುತ್ತಿದಂತೆ ಪಿರ್ಯಾದುದಾರರ ಕಾರಿನ ಮುಂದೆ ಹೋಗುತ್ತಿದ್ದ  ಬೈಕ್ ನಂಬ್ರ ಕೆಎ 41 ಇಜಿ 5566 ನೇ ದಕ್ಕೆ ಎದುರಿನಿಂದ ಬಂದ ಅಂದರೆ ತೋಡಿಕಾನ ಕಡೆಯಿಂದ ಅರಂತೋಡು ಕಡೆಗೆ ಬರುತ್ತಿದ್ದ ಕಾರ ನಂಬ್ರ ಕೆಎ 21 ಎನ್ 3806 ನೇದರ ಚಾಲಕ ಅನಂದ ಗೌಡ ಎಂಬಾತನು ಆತನ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಆತನ ತೀರ ಬಲಬದಿಗೆ ಚಾಲಾಯಿಸಿಕೊಂಡು ಬಂದು ಬೈಕ್ ಗೆ ಡಿಕ್ಕಿವುಂಡು ಮಾಡಿದ ಪರಿಣಾಮ ಬೈಕ್ ಸವಾರ ಕರುಣಾಕರ ಎಂಬಾತನು ಬೈಕ್ ಸಮೇತ ರಸ್ತೆಗೆ ಬಿದ್ದು ಬಲಕಾಲಿಗೆ ಮತ್ತು ಬಲಕೈಗೆ ರಕ್ತಗಾಯವಾದವರನ್ನು, ಪಿರ್ಯಾದುದಾರರು ಉಪಚರಿಸಿ ಚಿಕಿತ್ಸೆಯ ಬಗ್ಗೆ ಸುಳ್ಯ ಕೆವಿಜಿ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ. 52/2021  ಕಲಂ : 279, 337  IPC  ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

 

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಭವಾನಿ (39) ಗಂಡ: ನಾಗೇಶ ಭಂಡಾರಿ ವಾಸ: ಜೋಡುಸ್ಥಾನ ಮಮತಾ ನಿಲಯ ಮನೆ   ಧರ್ಮಸ್ಥಳ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ತಂಗಿ ಶ್ರೀಮತಿ ಬಿ ಎಸ್ ರೇಖಾ ಪ್ರಾಯ:37 ವರ್ಷ ಎಂಬವರು 15 ವರ್ಷಗಳ ಹಿಂದೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಎಂಬಲ್ಲಿ ಪುಟ್ಟರಾಜು ಎಂಬವರಿಗೆ ಮದುವೆ ಮಾಡಿಕೊಟ್ಟಿದ್ದು ಇಬ್ಬರು ಮಕ್ಕಳಿರುತ್ತಾರೆ. ರೇಖಾಳು  ಸುಮಾರು 7 ತಿಂಗಳಿನಿಂದ ಮಾನಸಿಕ ಖಿನ್ನತೆಯಿಂಧ ಇದ್ದವಳು ಒಂದು ತಿಂಗಳ ಹಿಂದೆ  ತನ್ನ ಗಂಡನ ಮನೆಯಿಂದ ತನ್ನ ಅಕ್ಕ ಭವಾನಿಯರ ಮಗಳ ಮದುವೆಗೆ ತನ್ನ ಮಕ್ಕಳೊಂದಿಗೆ ಪಿರ್ಯಾದುದಾರರ ಮನೆಗೆ ಬಂದವಳು ಪಿರ್ಯಾದುದಾರರ ಮನೆಯಲ್ಲಿಯೇ ಇದ್ದು ದಿನಾಂಕ;28-07-2021 ರಂಧು ಬೆಳಿಗ್ಗೆ 08.30 ಗಂಟೆಯಿಂದ 10.30 ಗಂಟೆಯ ಮದ್ಯದ ಅವಧಿಯಲ್ಲಿ  ಮನೆಯ ಕೋಣೆಯ ಮಾಡಿನ ಅಡ್ಡಕ್ಕೆ ಸೀರೆಯನ್ನು ಕಟ್ಟಿ ಅದರ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಮೃತರು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಈ ಕಾರಣಕ್ಕೆ ಮನನೊಂದು ಜೀವನದಲ್ಲಿ ಜಿಗುಪ್ಸೆ ಹೊಂದಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಯು ಡಿ ಆರ್  44/2021 ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 29-07-2021 11:56 AM Updated By: Dakshina Kannada District Police


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : DAKSHINA KANNADA DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080