Feedback / Suggestions

ಅಪಘಾತ ಪ್ರಕರಣ: 2

 

ಬೆಳ್ಳಾರೆ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಪಿ. ಶಿವರಾಮ್ ಭಟ್ ಪ್ರಾಯ 58 ವರ್ಷ, ತಂದೆ: ದಿ: ಸುಬ್ರಹ್ಮಣ್ಯ ಭಟ್, ವಾಸ: ಬಿರ್ಣಕಜೆ ಮನೆ, ಕೊಳ್ತಿಗೆ ಗ್ರಾಮ, ಪೆರ್ಲಂಪಾಡಿ ಅಂಚೆ, ಪುತ್ತೂರು ತಾಲೂಕು ರವರು ದಿನಾಂಕ 28.08.2022 ರಂದು ರಾತ್ರಿ 8-30 ಗಂಟೆಗೆ ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯ ಷಣ್ಮುಖದೇವ ಭಜನಾ ಮಂದಿರದಲ್ಲಿ ನಡೆಯಲಿರುವ ಗಣೇಶೋತ್ಸವ ಕಾರ್ಯಕ್ರಮದ ಪೂರ್ವ ತಯಾರಿ ಕೆಲಸದ ಕುರಿತು ಕಾರು ನಂಬ್ರ ಕೆಎ-21-ಜೆಡ್-0125 ನೇಯದರಲ್ಲಿ ಮನೆಯಿಂದ ಪೆರ್ಲಂಪಾಡಿ ಎಂಬಲ್ಲಿಗೆ ಹೋಗಿ ಅಲ್ಲಿ ಪೂರ್ವ ತಯಾರಿ ಕೆಲಸದಲ್ಲಿದ್ದು ರಾತ್ರಿ ಸಮಯ 9-30 ಗಂಟೆಗೆ ಮೋಟಾರು ಸೈಕಲ್ ಸವಾರ ಮಹೇಶ್ ಕೆಎ-21-ಆರ್-7453 ನೇಯದರಲ್ಲಿ ಸಹಸವಾರನನ್ನಾಗಿ ನಾರಾಯಣ ರವರನ್ನು ಕುಳ್ಳಿರಿಸಿಕೊಂಡು ಅಮ್ಚಿನಡ್ಕ-ನೆಟ್ಟಾರು ರಸ್ತೆಯಲ್ಲಿ ಅಮ್ಚಿನಡ್ಕ ಕಡೆಯಿಂದ ಪೆರ್ಲಂಪಾಡಿ ಕಡೆಗೆ ಮೋಟಾರು ಸೈಕಲನ್ನು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಷಣ್ಮುಖದೇವ ಭಜನಾ ಮಂದಿರದ ಎದುರುಗಡೆ ತಲುಪುತ್ತಿದ್ದಂತೆ ರಸ್ತೆಯಲ್ಲಿ ಒಮ್ಮೇಲೆ ದನವೊಂದು ಅಡ್ಡ ಬಂದು ಮೋಟಾರು ಸೈಕಲ್ ದನಕ್ಕೆ ಢಿಕ್ಕಿ ಹೊಡೆದ ಪರಿಣಾಮ  ಸವಾರ ಮತ್ತು ಸಹಸವಾರ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಸವಾರ ಮಹೇಶ್ ರವರಿಗೆ ಗಲ್ಲಕ್ಕೆ, ಕೈ ಮತ್ತು ಕಾಲುಗಳಿಗೆ ಅಲ್ಲಲ್ಲಿ ಗಾಯಗಳಾಗಿದ್ದು ಮತ್ತು ಸಹಸವಾರ ನಾರಾಯಣ ರವರಿಗೆ ಮುಖಕ್ಕೆ, ಹಣೆ ಮತ್ತು ಕೈಗಳಿಗೆ ಗಾಯಗಳಾಗಿದ್ದು, ಸವಾರ ಮತ್ತು ಸಹಸವಾರ ಚಿಕಿತ್ಸೆಯ ಬಗ್ಗೆ ಪುತ್ತೂರಿನ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿರುವುದಾಗಿದೆ ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ ಅಕ್ರ 69/2022 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಅಶ್ರಫ್ ಕಲ್ಲೇರಿ, ಪ್ರಾಯ 40 ವರ್ಷ, ವಾಸ: ಅಬೂಬಕ್ಕರ್, ವಾಸ: ಬಸ್ತಿಬಳಿ ಮನೆ, ತಣ್ಣೀರುಪಂಥ ಅಂಚೆ ಮತ್ತು ಗ್ರಾಮ, ಬೆಳ್ತಂಗಡಿ ತಾಲೂಕು ದಿನಾಂಕ 29-08-2022 ರಂದು 09:00 ಗಂಟೆಗೆ ಆರೋಪಿ ಟಿಪ್ಪರ್ ಲಾರಿ ಚಾಲಕ ನಾಗರಾಜ ಎಂಬವರು KA-21-B-9867 ನೇ ನೋಂದಣಿ ನಂಬ್ರದ ಲಾರಿಯನ್ನು ಉಪ್ಪಿನಂಗಡಿ-ಗುರುವಾಯನಕೆರೆ ರಾಜ್ಯ ಹೆದ್ದಾರಿಯಲ್ಲಿ ಉಪ್ಪಿನಂಗಡಿ ಕಡೆಯಿಂದ ಗುರುವಾಯನಕೆರೆ ಕಡೆಗೆ ಚಲಾಯಿಸಿಕೊಂಡು ಹೋಗಿ, ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಹುಣಸೆಕಟ್ಟೆ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್‌ ಸೈಡಿಗೆ ಚಲಾಯಿಸಿದ ಪರಿಣಾಮ, ಮಹಮ್ಮದ್  ಸಫ್ವಾನ್ (18ವ) ಎಂಬವರು  ಗುರುವಾಯನಕೆರೆ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-19-EC-5186 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲಿಗೆ  ಲಾರಿ ಅಪಘಾತವಾಗಿ ಮಹಮ್ಮದ್  ಸಫ್ವಾನ್ ರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕಳುಹಿಸಿದಾಗ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 138/2022 ಕಲಂ: 279, 304(ಎ) ಐಪಿಸಿ ಮತ್ತು ಕಲಂ:  134(ಎ) ಐಎಂವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

 

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಫಾತಿಮಾ, ಪ್ರಾಯ: 42 ವರ್ಷ,   ಗಂಡ: ರಜಾಫ್ ಸಾಹೇಬ್,      ವಾಸ: 181, ನೆಲ್ಲಾಲ್ ಮನೆ,  ಪುದುವೆಟ್ಟು ಗ್ರಾಮ, ಬೆಳ್ತಂಗಡಿ ತಾಲೂಕು ರವರ ಗಂಡ ಮೃತ ರಜಾಫ್‌ ಸಾಹೇಬ್‌, ಪ್ರಾಯ: 60 ವರ್ಷ ಎಂಬವರು ಸುಮಾರು 15 ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಇದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರೂ ಅವರು ಕೆಲವೊಮ್ಮೆ ಯಾರಲ್ಲಿಯೂ ಹೇಳದೇ ತೋಟದಲ್ಲಿ ನಡೆದುಕೊಂಡು ಹೋಗುತ್ತಿದ್ದು, ಇದೇ ರೀತಿ ದಿನಾಂಕ: 28.08.2022 ರಂದು ರಾತ್ರಿ 9.00 ಗಂಟೆಗೆ ಪಿರ್ಯಾದಿದಾರರು ಮೃತ ರಜಾಫ್‌ ಸಾಹೇಬ್‌ ಎಂಬವರಿಗೆ ಊಟ ನೀಡಿ ಮಾತ್ರೆಗಳನ್ನು ನುಂಗಿಸಿದ್ದು, ಬಳಿಕ ಅವರು ಮಲಗುವ ಕೋಣೆಯಲ್ಲಿ ಹೋಗಿ ಮಲಗಿದ್ದು, ಬಳಿಕ ಪಿರ್ಯಾದಿದಾರರು ಮತ್ತು ಮಕ್ಕಳು ರಾತ್ರಿ 10.30 ಗಂಟೆಗೆ ಊಟ ಮಾಡಿ ಮಲಗಿದ್ದು, ರಾತ್ರಿ 10.30 ಗಂಟೆಯಿಂದ ದಿನಾಂಕ: 29.08.2022 ರಂದು  ಬೆಳಿಗ್ಗೆ 05.30 ಗಂಟೆಯ ಮಧ್ಯದ ಅವದಿಯಲ್ಲಿ ಮನೆಯಲ್ಲಿ ಯಾರಲ್ಲಿಯೂ ಹೇಳದೇ ನಿದ್ದೆಯ ಮಂಪರಿನಲ್ಲಿ ಎದ್ದುಕೊಂಡು ತೋಟದಲ್ಲಿ ಹೋದವರು ಪಿರ್ಯಾದಿದಾರರ ಮನೆಯ ಬಳಿ ಇರುವ ಬೆಳ್ತಂಗಡಿ ತಾಲೂಕು ಪುದುವೆಟ್ಟು ಗ್ರಾಮದ ನೆಲ್ಲಾಲ್ ಎಂಬಲ್ಲಿರುವ ಮೊಯಿದ್ದೀನ್ ಸಾಹೇಬ್ ಎಂಬವರ ಬಾಬ್ತು ತಡೆಗೋಡೆ ಇರದ ಕೆರೆಗೆ ಆಕಸ್ಮಿಕವಾಗಿ ಕಾಲುಜಾರಿ ಕೆರೆಯ ನೀರಿಗೆ ಬಿದ್ದು, ಈಜು ಬಾರದೇ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿದ್ದು, ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣಾ ಯು ಡಿ ಆರ್ 49/2022 ಕಲಂ: 174 ಸಿಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವೇಣೂರು ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಜಯಂತಿ (32) ಗಂಡ:  ವಿಶ್ವನಾಥ ಪೂಜಾರಿ  ವಾಸ:ಡೆಪ್ಪುನಿ  ಮನೆ,ನಾಲ್ಕೂರು  ಗ್ರಾಮ, ಬೆಳ್ತಂಗಡಿ  ತಾಲೂಕು ರವರ ಗಂಡ  ವಿಶ್ವನಾಥ ಪೂಜಾರಿ (47) ಎಂಬಾತನು  ದಿನಾಂಕ: 27/28-08-2022 ರಂದು   ಬೆಳ್ತಂಗಡಿ  ತಾಲೂಕು  ಬಡಗಕಾರಂದೂರು  ಗ್ರಾಮದ ಅಳದಂಗಡಿ ಪೆಟ್ರೋಲ್ ಬಂಕ್ ಬಳಿ  ಇರುವ ವಿಶ್ವನಾಥ  ರವರ  ಚಿಕನ್  ಸ್ಟಾಲ್  ಬಳಿ   ಬಿದ್ದು ತಲೆಗೆ ಗಂಭೀರ  ಗಾಯಗೊಂಡು  ಮಂಗಳೂರು  ವೆನ್ಲಾಕ್ ಆಸ್ಪತ್ರೆಯಲ್ಲಿ  ಚಿಕಿತ್ಸೆಗೆ  ದಾಖಲಾದವರು  ಚಿಕಿತ್ಸೆ  ಫಲಕಾರಿಯಾಗದೇ ದಿನಾಂಕ: 29-08-2022 ರಂದು   ಬೆಳಿಗ್ಗೆ  11:06 ಗಂಟೆಗ   ಮೃತಪಟ್ಟಿರುತ್ತಾರೆ   ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಯು ಡಿಆರ್ ನಂಬ್ರ: 20-2022 ಕಲಂ:174 ಸಿ ಆರ್ ಪಿ ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 30-08-2022 12:53 PM Updated By: Dakshina Kannada District Police


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : DAKSHINA KANNADA DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080