ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಕರೀಂ ಬಿ.ಎಸ್ (46) ತಂದೆ:ಸಾಧುಮೋನು ವಾಸ: ಬೊಳ್ಳಾಯಿ ಮನೆ, ಸಜಿಪಮೂಡ ಗ್ರಾಮ, ನಗ್ರಿ ಅಂಚೆ, ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾಧಿದಾರರು ದಿನಾಂಕ 01-06-2022 ರಂದು ಕೆಎ-70 -0074 ನೇ ನಂಬ್ರದ ಟ್ಯಾಂಕರನ್ನು ಬೆಳ್ತಂಗಡಿ ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಬರುತ್ತಾ ಸಮಯ ಸುಮಾರು 15-15 ಗಂಟೆಗೆ ಬಂಟ್ವಾಳ ತಾಲೂಕು ಬಿ. ಕಸಬಾ ಗ್ರಾಮದ ಚಂಡ್ತಿಮಾರ್ ಎಂಬಲ್ಲಿಗೆ ತಲುಪಿದಾಗ ಬಂಟ್ವಾಳ ಕಡೆಯಿಂದ ಕೆಎ-70-ಎಂ-1740 ನೆ ಕಾರನ್ನು ಅದರ ಚಾಲಕ ರೋಷನ್ ಸೆಲ್ವ ಸೇರಾ ರವರು ದುಡುಕುತನ ಹಾಗು ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್ ಸೈಡಿಗೆ ಚಲಾಯಿಸಿಕೊಂಡು ಬಂದು ಟ್ಯಾಂಕರಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಕಾರು ಚಾಲಕ ರೋಷನ್ ಸೆಲ್ವ ಸೇರಾ ರವರು ಗಂಭೀರ ರಕ್ತಗಾಯಗೊಂಡಿದ್ದು, ಗಾಯಾಳುವನ್ನು ಚಿಕಿತ್ಸೆ ಬಗ್ಗೆ ಮಂಗಳೂರು ಎ.ಜೆ.ಆಸ್ಪತ್ರೆಗೆ ಸಾಗಿಸಿದ್ದು ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಅ.ಕ್ರ 63/2021 ಕಲಂ: 279, 304 (A) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಹಲ್ಲೆ ಪ್ರಕರಣ: 1

  • ಸುಬ್ರಮಣ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸುಬ್ರಹ್ಮಣ್ಯ ಪ್ರಾಯ: 56 ವರ್ಷ, .   ತಂದೆ: ವಡಿವೇಲು ವಾಸ: ಕುಂಬಾರಕೇರಿ  ಮನೆ, ದೇವಚಳ್ಳ  ಗ್ರಾಮ, ಸುಳ್ಯ ಎಂಬವರ ದೂರಿನಂತೆ ಪಿರ್ಯಾದಿದಾರರು ಸುಳ್ಯ ತಾಲೂಕು ದೇವಚಳ್ಳ ಗ್ರಾಮದ ಕುಂಬಾರಕೇರಿ ಮನೆ ಎಂಬಲ್ಲಿ ಟ್ಯಾಪಿಂಗ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದು, ದಿನಾಂಕ: 31-05-2022 ರಂದು ಎಂದಿನಂತೆ ಟ್ಯಾಪಿಂಗ್ ಕೆಲಸ ಮುಗಿಸಿಕೊಂಡು ಮನೆಯಲ್ಲಿ ಊಟ ಮಾಡಿಕೊಂಡು ಸುಮಾರು ಮದ್ಯಾಹ್ನ 3:00 ಗಂಟೆಗೆ ಮನೆಯಿಂದ ಕಂದ್ರಪ್ಪಾಡಿ ಪೇಟೆ ಕಡೆಗೆ ಹೊರಡುವಾಗ ಪಿರ್ಯಾದಿದಾರರ ತಂಗಿ ಮಗ ಮಂಜುನಾಥನು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಕೈಯಿಂದ ಹಲ್ಲೆ ನಡೆಸಿದ್ದು, ಆಗ ಪಿರ್ಯಾದಿದಾರರು ಬೊಬ್ಬೆ ಹಾಕಿದಾಗ ಅವರ ಹೆಂಡತಿ ಬಂದದ್ದನ್ನು ನೋಡಿ ಅಲ್ಲಿಂದ ಹೋಗಿರುತ್ತಾನೆ. ಬಳಿಕ ಪಿರ್ಯಾದಿದಾರರನ್ನು ಅವರ ಹೆಂಡತಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯಾಧಿಕಾರಿಯವರು ಪಿರ್ಯಾದಿದಾರರನ್ನು ಪರೀಕ್ಷಿಸಿ ಹೊರರೋಗಿಯನ್ನಾಗಿ ದಾಖಲಿಸಿ ಚಿಕಿತ್ಸೆ ನೀಡಿದ್ದು,.ಈ ಬಗ್ಗೆ ಸುಬ್ರಮಣ್ಯ ಪೊಲೀಸ್ ಠಾಣಾ ಅ.ಕ್ರ   ನಂಬ್ರ  : 59/2022  ಕಲಂ:   341, 323 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 4

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಬಂಟ್ವಾಳ ಗ್ರಾಮಾಂತರ ಠಾಣಾ ಪಿ,ಎಸ್,ಐ ಹರೀಶ್‌ ಎಂ. ಆರ್‌  ರವರು ದಿನಾಂಕ; 01-06-2022 6.30 ಗಂಟೆಗೆ ರಂದು ಸಿಬ್ಬಂದಿಗಳೊಂದಿಗೆ ಶಂಭೂರು ಗ್ರಾಮದ ಶೇಡಿಗುರಿ ಎಂಬಲ್ಲಿಗೆ ತೆರಳಿ ಶೇಡಿಗುರಿ ಸಾರ್ವಜನಿಕ ಬಸ್‌ ತಂಗುದಾಣದ ಬಳಿ ಪ್ರಯಾಣಿಕರು ಕುಳಿತುಕೊಳ್ಳುವ  ಬೆಂಚಿನಲ್ಲಿ ಆರೋಪಿಯಾದ ಜಯಂತ ಎಂಬಾತನು  ಯಾವುದೇ ಪರವಾನಿಗೆ ಇಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಮಧ್ಯ ಸೇವನೆ ಮಾಡುತ್ತಿದ್ದಾಗ ಸದರಿ ಅಮಲು ಪದಾರ್ಥದ ಸಹಿತ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ   39/2022 ಕಲಂ 32(3) ಮತ್ತು 15(ಎ) ಕರ್ನಾಟಕ ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ತಂಗಡಿ ಪೊಲೀಸ್ ಠಾಣೆ : ದಿನಾಂಕ 01.06.2022 ರಂದು ಸಮಯ ಸುಮಾರು 16-00 ಗಂಟೆಗೆ ನಂದ ಕುಮಾರ್  ಎಂ ಎಂ, ಪಿಎಸ್ಐ, ಬೆಳ್ತಂಗಡಿ ಪೊಲೀಸ್ ಠಾಣೆರವರು ಠಾಣಾ ಸಿಬ್ಬಂದಿಗಳೊಂದಿಗೆ ಬೆಳ್ತಂಗಡಿ ತಾಲೂಕು ಇಂದಬೆಟ್ಟು ಗ್ರಾಮದ ಕೆಳಗಿನ ಇಂದಬೆಟ್ಟು ಎಂಬಲ್ಲಿ ರಸ್ತೆಯ ಬದಿಯಲ್ಲಿರುವ ಶೇಂದಿ ಅಂಗಡಿಯ ಬದಿ ಯಲ್ಲಿ ಸಾರ್ವಜನಿಕ ಸ್ಥಳದಲ್ಲಿ 2 ಜನ ಆರೋಪಿಗಳು ಸಂಬಂದ ಪಟ್ಟ ಇಲಾಖೆಯಿಂದ ಪರವಾಣಿಗೆ ಪಡೆಯದೇ ಮದ್ಯಪಾನ ಸೇವಿಸುತ್ತಿದ್ದದ್ದನ್ನು ಹಾಗೂ ಸೇವಿಸಲು ಅನುವು ಮಾಡಿ ಕೊಟ್ಟಿದ್ದನ್ನು ಪತ್ತೆ ಹಚ್ಚಿ ರಾಮಣ್ಣ  ಪೂಜಾರಿ, ವಿ.ಜೆ ಸೇವಿಯರ್, ಎಂಬವರುಗಳನ್ನು ಹಾಗೂ ಕುಡಿಯುತ್ತಿದ್ದ ಮದ್ಯ  ಸ್ವಾಧೀನಪಡಿಸಿಕೊಂಡು ಬೆಳ್ತಂಗಡಿ ಠಾಣೆಯಲ್ಲಿ ಅ.ಕ್ರ  34/2022 ಕಲಂ: 15(A), 32(3) KE Act         ಯಂತೆ ಪ್ರಕರಣ ದಾಖಲಿಸಿರುತ್ತಾರೆ.

 

  • ಬೆಳ್ತಂಗಡಿ ಪೊಲೀಸ್ ಠಾಣೆ : ದಿನಾಂಕ 01.06.2022 ರಂದು ಬೆಳ್ತಂಗಡಿ ತಾಲೂಕು ತಹಶೀಲ್ದಾರರು ಮತ್ತು ತಾಲೂಕು ಆಹಾರ ನಿರೀಕ್ಷಕರು 17.30 ಗಂಟೆಗೆ ಬೆಳ್ತಂಗಡಿ ತಾಲೂಕು ಕಳಿಯ ಗ್ರಾಮದ ಗೇರುಕಟ್ಟೆ ಎಂಬಲ್ಲಿಯ ಎಸ್ ವಿ ಟ್ರೇಡರ್ಸ್ ನ ಮುಂಬಾಗ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನ ಸಂಖ್ಯೆ KA 20 AA 7479 ನೇ ಟಾಟಾ ಕಂಪನಿಯ ಈಚರ್ ವಾಹನವನ್ನು ಪರಿಶೀಲಿಸಲಾಗಿ ವಾಹನದ ಒಳಗಡೆ ಪ್ಲಾಸ್ಟಿಕ್ ಗೊಣಿ ಚೀಲದಲ್ಲಿ ಅಕ್ಕಿ ತುಂಬಿಸಿರುವುದು ಕಂಡುಬಂದಿದ್ದು ಸದ್ರಿ ಅಕ್ಕಿಯನ್ನು ಪರಿಶೀಲಿಸಿದಾಗ 2022 ನೆ ಮೇ ತಿಂಗಳ ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಪಡಿತರ ಚೀಟಿದಾರರ ವಿತರಣೆಗಾಗಿ ನ್ಯಾಯ ಬೆಲೆಯ ಅಂಗಡಿಗಳಿಗೆ ಸರಬರಾಜು ನೀಡಿರುವ ಅಕ್ಕಿಗೆ ಹೋಲಿಕೆ ಇರುವುದು ಕಂಡುಬಂದಿದ್ದು,  ವಾಹನದ ಚಾಲಕ ರಮೇಶ್ ರವರನ್ನು ವಿಚಾರಿಸಲಾಗಿ ಕಳಿಯ ಗ್ರಾಮದಲ್ಲಿನ ಅಂಗಡಿಗಳಿಂದ ತಂದಿರುವುದಾಗಿ ತಿಳಿಸಿರುತ್ತಾರೆ. 24 ಪ್ಲಾಸ್ಟಿಕ್ ಗೊಣಿ ಚೀಲಗಳಲ್ಲಿ  ತಲಾ 50ಕೆಜಿ ಯಂತೆ ತುಂಬಿದ ಒಟ್ಟು 12 ಕ್ವಿಂಟಾಲ್ ಅಕ್ಕಿ ಪತ್ತೆಯಾಗಿರುತ್ತದೆ. ಸರಕಾರವು ಪಡಿತರ ಚೀಟಿದಾರರಿಗೆ ಉಚಿತವಾಗಿ ವಿತರಿಸುವ ಅನ್ನ ಭಾಗ್ಯ ಯೋಜನೆಯ ಅಕ್ಕಿಯಾಗಿದ್ದು, ಸದ್ರಿ ಅಕ್ಕಿಯನ್ನು ಅಕ್ರಮವಾಗಿ ಹೆಚ್ಚಿನ ಬೆಲೆಗೆ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಉದ್ದೇಶ ಹೊಂದಿರುವುದು ಕಂಡುಬಂದಿದ್ದು ಈ ಬಗ್ಗೆ ಯಾವುದೇ ಅಧೀಕೃತ ದಾಖಲಾತಿಗಳು ಇಲ್ಲದೇ ಇರುವುದರಿಂದ ಚಾಲಕ ರಮೇಶ್ ಮತ್ತು ಇತರರು ಭಾಗಿಯಾಗಿರುವುದು ಕಂಡುಬರುತ್ತದೆ. ವಶಪಡಿಸಿಕೊಂಡ ಅಕ್ಕಿಯ ಮೌಲ್ಯ 18000/- ರೂ ಹಾಗೂ ವಶಪಡಿಸಿಕೊಂಡ ವಾಹನದ ಮೌಲ್ಯ 12,00,000/- ರೂ ಆಗಬಹುದು. ಸೊತ್ತುಗಳ ಒಟ್ಟು ಮೌಲ್ಯ 12,18,000/- ರೂ ಆಗಿರುತ್ತದೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಅ ಕ್ರ ನಂ: 35/2022   ಕಲಂ: 3,7 ಅವಶ್ಯಕ ವಸ್ತಗಳ ಕಾಯ್ದೆ 1955 ಜೊತೆಗೆ ಕಲಂ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ನಗರ ಪೊಲೀಸ್ ಠಾಣೆ : ದಿನಾಂಕ: 01.06.2022 ರಂದು ಸಮಯ 19.30 ಗಂಟೆಗೆ ಪುತ್ತೂರು ನಗರ ಠಾಣಾ ಪಿಎಸ್ಐ ರಾಜೇಶ್ ಕೆ.ವಿ ರವರು ಠಾಣಾ ಸಿಬ್ಬಂದಿಗಳೊಂದಿಗೆ ಕೋಡಿಂಬಾಡಿ ಅನುಗ್ರಹ ಸ್ಟೋರ್ ಎಂಬಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಅಮಲು ಪದಾರ್ಥ ಸೇವನೆ ಮಾಡುತ್ತಿದ್ದ ಶಶಿಧರ ಕೆ. ಎಂಬಾತನನ್ನು ಆತ ಸೇವಿಸುತ್ತಿದ್ದ ಮದ್ಯದೊಂದಿಗೆ ವಶಕ್ಕೆ ಪಡೆದು ಪುತ್ತೂರು ನಗರ ಠಾಣೆಯಲ್ಲಿ ಅ.ಕ್ರ: 42/2022 ಕಲಂ: 15(A), 32(3) KE Act   ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 02-06-2022 11:58 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080