Feedback / Suggestions

ಅಪಘಾತ ಪ್ರಕರಣ: 1

ಪುತ್ತೂರು ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಅಲ್ಲಾಸಾಬ್‌ ರಾಜಾಸಾಬ್‌, ಪ್ರಾಯ 38 ವರ್ಷ, ತಂದೆ: ರಾಜಾಸಾಬ್‌, ವಾಸ: ಜಾಲಿಹಾಳ್, ಬಾದಾಮಿ ತಾಲೂಕು, ಬಾಗಲಕೋಟೆ ಜಿಲ್ಲೆ ಎಂಬವರ ದೂರಿನಂತೆ ದಿನಾಂಕ 03-01-2022 ರಂದು 18-40 ಗಂಟೆಗೆ ಆರೋಪಿ ಶರಣ್‌ ಶೆಣೈ ಎಂಬವರು  KA-21-R-1006ನೇ ನೋಂದಣಿ ನಂಬ್ರದ ಬೈಕನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಉಪ್ಪಿನಂಗಡಿ ಕಡೆಯಿಂದ ಬಿ.ಸಿ.ರೋಡ್‌ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು 34 ನೇ ನೆಕ್ಕಿಲಾಡಿ ಗ್ರಾಮದ ಬೊಳ್ಳಾರು ಎಂಬಲ್ಲಿ ಕಾರೊಂದನ್ನು ಓವರ್‌ಟೇಕ್‌ ಮಾಡಿ, ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್‌ ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ಚಾಲಕರಾಗಿ, ಈಶ್ವರಪ್ಪರವರು ನಿರ್ವಾಹಕರಾಗಿ,  ಬಿ.ಸಿ.ರೋಡ್‌ ಕಡೆಯಿಂದ ಸುಬ್ರಹ್ಮಣ್ಯ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-F-0009ನೇ ನೋಂದಣಿ ನಂಬ್ರದ ಕೆ.ಎಸ್‌.ಆರ್‌ಟಿ.ಸಿ. ಬಸ್ಸಿನ ಬಲಭಾಗದ ಮಧ್ಯದ ಬಾಡಿಗೆ ಬೈಕಿನ ಹ್ಯಾಂಡಲ್‌ ಮತ್ತು ಮಿರರ್‌ ತಾಗಿ ಅಪಘಾತವಾಗಿ ಉಜ್ಜಿಕೊಂಡು ಹೋಗಿ, ಬೈಕ್‌ ಸವಾರನ ಹತೋಟಿ ತಪ್ಪಿ ರಸ್ತೆಗೆ ಬಿದ್ದು, ಸವಾರನಿಗೆ ಕಾಲಿಗೆ ಮತ್ತು ತಲೆಗೆ ಗಾಯಗಳಾಗಿ ಚಿಕಿತ್ಸೆ ಬಗ್ಗೆ ಮಂಗಳೂರು ಎ.ಜೆ. ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  02/2022 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಲತೇಶ ಪ್ರಾಯ;28 ವರ್ಷ ತಂದೆ:ಲಿಂಗಯ್ಯ ಶೆಟ್ಟಿಗಾರ್ ವಾಸ; ಪರಾರಿ ಮನೆ ಕಲ್ಮಂಜ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಧರ್ಮಸ್ಥಳ ನೇತ್ರಾವತಿ ಸ್ನಾನ ಘಟ್ಟದ ಕಛೆರಿಯಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ;04-01-2022 ರಂದು ನೇತ್ರಾವತಿ ಸ್ನಾನ ಘಟ್ಟದ  ಕಛೇರಿಯಲ್ಲಿ ಇರುವ ಸಮಯ ಸುಮಾರು 11.00 ಗಂಟೆಯ ಹೊತ್ತಿಗೆ  ನೇತ್ರಾವತಿ ಸೇತುವೆಯ ದಡದ ಸಮೀಪ ಪ್ರಾಯ;23-24 ವರ್ಷ ಪ್ರಾಯದ ಗಂಡಸಿನ ಮೃತ ದೇಹವು ಯಾವುದೋ ಬಟ್ಟೆಯಿಂದ ಕುತ್ತಿಗೆಗೆ ನೇಣುಬಿಗಿದು ಕಾಟು ಮರದ ಕೊಂಬೆಗೆ ಕಟ್ಟಿ ನೇತ್ತಾಡುತ್ತಿರುವುದು ಕಂಡುಬರುತ್ತಿರುವುದಾಗಿ ಯಾತ್ರಾರ್ಥಿಗಳು ಪಿರ್ಯಾದುದಾರರಿಗೆ ತಿಳಿಸದಂತೆ ಪಿರ್ಯಾದುದಾರರು ಹೋಗಿ ನೋಡಲಾಗಿ ಮೃತ ದೇಹವು ನೇತಾಡಿಕೊಂಡಿದ್ದು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಯು ಡಿ ಆರ್ 02/2022 ಕಲಂ: 174 ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಳ್ಯ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಬಾಲಚಂದ್ರ, ಪ್ರಾಯ: 59 ವರ್ಷ ತಂದೆ: ಮಾಣಿ, ವಾಸ: ಮುಳ್ಯ ಹೊಸಗದ್ದೆ ಮನೆ, ಅಜ್ಜಾವರ ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ಮಗ ತೀರ್ಥಕುಮಾರ್, ಪ್ರಾಯ: 34 ವರ್ಷ ಎಂಬವರು ಕೂಲಿ ಕೆಲಸ ಮಾಡಿಕೊಂಡಿದ್ದವರು, ವಿಪರೀತ ಮದ್ಯಪಾನ ಮಾಡುವ ಚಟವನ್ನು ಹೊಂದಿದವರಾಗಿದ್ದು, ದಿನಾಂಕ: 03.01.2022 ರಂದು 17:00 ಗಂಟೆಗೆ ಪಿರ್ಯಾದಿದಾರರು ಅವರ ಪರಿಚಯದವರ ಮನೆಯ ಗೃಹಪ್ರವೇಶಕ್ಕೆ ಹೋಗಿ ವಾಪಾಸು 23:00 ಗಂಟೆಗೆ ವಾಪಾಸು ಮನೆಗೆ ಬಂದಾಗ ತೀರ್ಥಕುಮಾರನು ಮನೆಯಲ್ಲಿ ಕಾಣದೇ ಇದ್ದು ಪಿರ್ಯಾಧಿದಾರರ ಅವರ ತಾಯಿ ಮನೆಗೆ ಹೋಗಿರಬಹುದೆಂದು ತಿಳಿದುಕೊಂಡು ದಿನಾಂಕ 04.01.2022 ರಂದು ಪಿರ್ಯಾದಿದಾರರು ಅವರ ತಾಯಿಯಲ್ಲಿ ವಿಚಾರಿಸಿದಾಗ  ತೀರ್ಥಕುಮಾರನು ಅಲ್ಲಿಗೆ ಹೋಗದೇ ಇದ್ದು ಪಿರ್ಯಾದಿದಾರರು ಮತ್ತು ಮನೆಯವರು ಮನೆಯ ಸುತ್ತಾಮುತ್ತಾ ಹುಡುಕಾಡಿದಾಗ ಮನೆಯ ಬಳಿ ಇರುವ ಗುಡ್ಡೆಯ ಗೇರು ಮರದ ಕೊಂಬೆಗೆ ನೈಲಾನ್ ಹಗ್ಗದಿಂದ ತನ್ನ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಯುಡಿಆರ್ ನಂ 01/2022 ಕಲಂ: 174 ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 05-01-2022 12:15 PM Updated By: Dakshina Kannada District Police


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : DAKSHINA KANNADA DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080