Feedback / Suggestions

ಅಪಘಾತ ಪ್ರಕರಣ: 2

  • ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ K.ವಸಂತ  ಪ್ರಾಯ( 38) ತಂದೆ:  ಐತ್ತಪ್ಪ  ಪೂಜಾರಿ ವಾಸ:  ಕುಕ್ಕುದಡ್ಕ ಮನೆ,ವಿಟ್ಲ ಕಸಬ ಗ್ರಾಮ. ಬಂಟ್ವಾಳ  ಎಂಬವರ ದೂರಿನಂತೆ ದಿನಾಂಕ:05.01.2023 ರಂದು  ಸಂಜೆ  17.30 ಗಂಟೆಗೆ  ವಿಟ್ಲ ರಿಕ್ಷಾ ಪಾರ್ಕ್‌ ನಲ್ಲಿರುವ ಸಮಯ  ತನ್ನ  ಪರಿಚಯದ  ಸೇರಾಜೆ ನಿವಾಸಿ ರೋರ್ಬಟ್‌ ಲೋಬೋ ಎಂಬವರು ಸೇರಾಜೆಗೆ ಹೋಗುವರೇ ಅವರ ಮಗಳು ರೊಲ್ವಿಟಾಳೊಂದಿಗೆ ಪಿರ್ಯಾಧಿದಾರರ ರಿಕ್ಷಾದಲ್ಲಿ ಕೆಎ-70-2758ನೇದರಲ್ಲಿ ವಿಟ್ಲದಿಂದ ಹೊರಟು ಸೇರಾಜೆ  ನೀರಕಣಿ ಮಾರ್ಗವಾಗಿ ಸಾಗುತ್ತಾ  ಬಂಟ್ವಾಳ ತಾಲೂಕು ಜೋಗಿ ಮಠ ಕ್ರಾಸ್‌ ಎಂಬಲ್ಲಿಗೆ ಸಮಯ ಸಂಜೆ 17.45 ಗಂಟೆಗೆ ತಲುಪಿದಾಗ ಜೋಗಿಮಠ ರಸ್ತೆಯಿಂದ ಕೆಎ-19-MB-638ನೇ ಕಾರೊಂದನ್ನು ಅದರ ಚಾಲಕಿ ಶ್ರೀಮತಿ ಗಾಯತ್ರಿ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರ ಆಟೋ ರಿಕ್ಷಾಕ್ಕೆ ಡಿಕ್ಕಿವುಂಟು ಮಾಡಿದ ಪರಿಣಾಮ ರಿಕ್ಷಾ ಚರಂಡಿಗೆ ಬಿದ್ದಿದು ಪರಿಣಾಮ ಪಿರ್ಯಾಧಿಗೆ ತರಚಿದ ಗಾಯವಾಗಿದ್ದು, ರಿಕ್ಷಾ ಪ್ರಯಾಣಿಕರಾದ ರೊರ್ಬಟ್‌ ಲೋಬೋರವರ ಎಡ ಕಾಲಿಗೆ, ಸೊಂಟದ ಎಡ  ಬಾಗಕ್ಕೆ ಗುದ್ದಿದ ಗಾಯ ಮತ್ತು ರೋಲ್ವಿಟಾಳಿಗೆ ಸೊಂಟಕ್ಕೆ ಗುದ್ದಿದ ಗಾಯವಾಗಿರುತ್ತದೆ.  ಅಪಘಾತದಿಂದ ಪಿರ್ಯಾಧಿಯ ರಿಕ್ಷಾ ಜಖಂಗೊಂಡಿರುತ್ತದೆ. ಪಿರ್ಯಾಧಿ ಗಾಯಳುಗಳನ್ನು ಚಿಕಿತ್ಸೆ ಬಗ್ಗೆ ಒಂದು ವಾಹನದಲ್ಲಿ ವಿಟ್ಲ ಬೆನಕ ಆಸ್ಪತ್ರಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯಾಧಿಕಾರಿಯವರು ಪ್ರಥಮ ಚಿಕಿತ್ಸೆ ನೀಡಿ  ಹೆಚ್ಚಿನ ಚಿಕಿತ್ಸೆ ಬಗ್ಗೆ  ಮೇಲ್ದದರ್ಜೆ  ಆಸ್ಪತ್ರೆಗೆ  ಕರೆದುಕೊಂಡು ಹೋಗುವಂತೆ  ತಿಳಿಸಿದ  ಮೇರೆಗೆ ಗಾಯಾಳುಗಳನ್ನು ಪುತ್ತೂರು ಹಿತಾ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ  ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿ  ಚಿಕಿತ್ಸೆ ನೀಡಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 005/2023  ಕಲಂ: 279 ,337 ಬಾಧಂಸಂ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ವಿಶ್ವನಾಥ ಕಾಮತ್(65)‌ ತಂದೆ: ದಿ. ಗಣಪತಿ ಕಾಮತ್‌ ವಾಸ: ಕಾಮತ್ ಕಂಪೌಂಡ್‌, ಹಾರಾಡಿ, ಪುತ್ತೂರು ಕಸಬಾ ಗ್ರಾಮ, ಪುತ್ತೂರು ಎಂಬವರ ದೂರಿನಂತೆ ದಿನಾಂಕ 05-01-2023 ರಂದು 18:50 ಗಂಟೆಗೆ ಆರೋಪಿ ಮೋಟಾರ್ ಸೈಕಲ್ ಸವಾರ  ಎಂಬವರು KA-21-X-0632 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲ್‌ನ್ನು ಉಪ್ಪಿನಂಗಡಿ - ಪುತ್ತೂರು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಉಪ್ಪಿನಂಗಡಿ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗಿ  ಪುತ್ತೂರು ತಾಲೂಕು ಪುತ್ತೂರು ಕಸ್ಬಾ ಗ್ರಾಮದ ಹಾರಾಡಿ ರೈಲ್ವೆ ಬ್ರಿಡ್ಜ್ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಮೋಟಾರ್ ಸೈಕಲ್‌ ಸ್ಕೀಡ್‌ ಆಗಿ, ಸವಾರನ ಹತೋಟಿ ತಪ್ಪಿ, ರಸ್ತೆಯ ಎಡಬದಿಯ ಮಣ್ಣು ರಸ್ತೆಯಲ್ಲಿ ಉಪ್ಪಿನಂಗಡಿ ಕಡೆಯಿಂದ ಪುತ್ತೂರು ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದುದಾರರಿಗಿ ಮೋಟಾರ್‌ ಸೈಕಲ್‌ ಅಪಘಾತವಾಗಿ, ಪಿರ್ಯಾದುದಾರರು ರಸ್ತೆಗೆ ಬಿದ್ದು, ಬಲಕಾಲಿನ ತೊಡೆಗೆ ಗುದ್ದಿದ ಗಾಯವಾಗಿ  ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.  ಆರೋಪಿ ಮೋಟಾರ್ ಸೈಕಲ್‌ ಸವಾರನಿಗೆ ಸಣ್ಣ-ಪುಟ್ಟ ಗುದ್ದಿದ ಗಾಯವಾಗಿದ್ದು ಯಾವುದೇ ಚಿಕಿತ್ಸೆ ಪಡೆದಿರುವುದಿಲ್ಲ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 03/2023 ಕಲಂ: 279, 337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

  • ಸುಬ್ರಹ್ಮಣ್ಯ ಪೊಲೀಸ್ ಠಾಣೆ : ದಿನಾಂಕ: 06-01-2023ರಂದು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ  ಕಲಂ: 354(ಬಿ),506 ಐಪಿಸಿ, ಕಲಂ:12 ಪೋಕ್ಸೋ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 07-01-2023 10:42 AM Updated By: Dakshina Kannada District Police


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : DAKSHINA KANNADA DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080