ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

ಬಂಟ್ವಾಳ  ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಭೋಜ ಮೂಲ್ಯ, ಪ್ರಾಯ 56 ವರ್ಷ,ತಂದೆ: ದಿ|| ರಾಮ ಮೂಲ್ಯ, ವಾಸ: ಅಂತರಗುತ್ತು ಮನೆ, ಅಮ್ಟೂರು ಗ್ರಾಮ , ಕರಿಂಗಾಣ ಅಂಚೆ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 06-02-2022 ರಂದು ತನ್ನ ಬಾಬ್ತು KA-19-AA-8434ನೇ ಆಟೋರಿಕ್ಷಾದಲ್ಲಿ ಪರಿಚಯದ ದೇವಕಿ ಎಂಬವರನ್ನು ಕುಳ್ಳಿರಿಸಿಕೊಂಡು ಕಲ್ಲಡ್ಕದಿಂದ ಕಜೆ ಕಡೆಗೆ ಕೆ.ಸಿ.ರೋಡ್ ಅಮ್ಟೂರು ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಸಮಯ ಸುಮಾರು ಬೆಳಿಗ್ಗೆ 10:45 ಗಂಟೆಗೆ ಬಂಟ್ವಾಳ ತಾಲೂಕು ಅಮ್ಟೂರು ಗ್ರಾಮದ ಸುಬ್ಬಕೋಡಿ ಎಂಬಲ್ಲಿಗೆ ತಲುಪಿದಾಗ ಅಮ್ಟೂರು ಕಡೆಯಿಂದ KA-19-MH-3256 ನೇ ಕಾರನ್ನು ಅದರ ಚಾಲಕ ಯುವರಾಜ್ ಎಂಬವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಎರಡೂ ವಾಹನಗಳು ಜಖಂಗೊಂಡಿದ್ದು ಅಪಘಾತದಲ್ಲಿ ಪಿರ್ಯಾದಿದಾರರ ಎಡಮುಖಕ್ಕೆ, ತುಟಿಗೆ, ಗಲ್ಲಕ್ಕೆ, ಎಡಕೈ ತಟ್ಟಿಗೆ ಸಣ್ಣಪುಟ್ಟ ತರಚಿದ ಗಾಯವಾಗಿದ್ದು, ಆಟೋರಿಕ್ಷಾದಲ್ಲಿದ್ದ ದೇವಕಿಯವರ ಬಲ ಹಣೆಗೆ ತೀವ್ರ ಸ್ವರೂಪದ ರಕ್ತಗಾಯಗೊಂಡವರನ್ನು ಅಂಬುಲೆನ್ಸ್ ನಲ್ಲಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬಂಟ್ವಾಳ  ಸಂಚಾರ  ಪೊಲೀಸ್ ಠಾಣೆ. ಅ.ಕ್ರ 17/2021 ಕಲಂ: 279,337,304(A) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಡಬ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ನಾರಾಯಣ  ಪ್ರಾಯ(32),ತಂದೆ: ಕುಶಾಲಪ್ಪ ಗೌಡ ,ವಾಸ: ಆರ್ತಿಲ  ಮನೆ, ಕಡಬ  ಗ್ರಾಮ ಕಡಬ ತಾಲೂಕು ಎಂಬವರ ದೂರಿನಂತೆ ದಿನಾಂಕ 06-02-2022 ರಂದು ನೆಲ್ಯಾಡಿಯಲ್ಲಿ ಕೆಲಸ ಮುಗಿಸಿಕೊಂಡು ತನ್ನ  ಬಾಬ್ತು ಮೋಟಾರ್ ಸೈಕಲ್ ನಲ್ಲಿ ಸಮಯ 11-00 ಗಂಟೆಗೆ ಕಡಬ ಗ್ರಾಮದ ಕಳಾರ ಎಂಬಲ್ಲಿ ತಲುಪಿದಾಗ ಪಿರ್ಯಾದುದಾರರ ಎದುರಿನಿಂದ  ಅಂದರೆ ಕಡಬ ಕಡೆಯಿಂದ ಹೊಸ್ಮಠ ಕಡೆಗೆ ಬರುತ್ತಿದ್ದ ಮೋಟಾರ್ ಸೈಕಲ್ ಸವಾರನು ತೀರಾ ಅಜಾಗರುಕತೆ ಹಾಗೂ ನಿರ್ಲಕ್ಷತನದಿಂದ ತೀರಾ ಬಲಬದಿಗೆ ಮೋಟಾರ್ ಸೈಕಲ್ ಚಲಾಯಿಸಿಕೊಂಡು ಬಂದು  ಪಿರ್ಯಾದುದಾರರ ಎದುರಿನಿಂದ ಹೋಗುತ್ತಿದ್ದ KA-21-U-2080 ಮೋಟಾರ್ ಸೈಕಲ್ ಗೆ ಡಿಕ್ಕಿ ಉಂಟು ಮಾಡಿದ ಪರಿಣಾಮ ಮೊಟಾರ್ ಸೈಕಲ್ ಸವಾರರಿಬ್ಬರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಎಸೆಯಲ್ಪಟ್ಟಿದ್ದು ನಂತರ ಪಿರ್ಯಾದುದಾರರು ತನ್ನ ಮೋಟಾರ್ ಸೈಕಲ್ ನ್ನು ನಿಲ್ಲಿಸಿ ಹತ್ತಿರ ಹೋಗಿ ನೋಡಲಾಗಿ ಪಿರ್ಯಾದುದಾರರ ತಮ್ಮನಾದ ನಾಗೇಶ್ ರವರಾಗಿದ್ದು ನಂತರ ಡಿಕ್ಕಿಉಂಟು ಮಾಡಿದ ಮೋಟಾರ್ ಸೈಕಲ್ ನ್ನು ನೋಡಲಾಗಿ KA-21-E-6176 ಸುರೇಶ್ ಎಂಬುದಾಗಿ ತಿಳಿದಿದ್ದು ಈ ಅಪಘತದಿಂದ  ಗಾಯಗೊಂಡ ಇಬ್ಬರು ಮೋಟಾರ್ ಸೈಕಲ್ ಸವಾರರನ್ನು ಪಿರ್ಯಾದುದಾರರು ಹಾಗೂ ಅಲ್ಲೆ ಹತ್ತಿರದಲ್ಲಿ ಇದ್ದ  ಲೋಕೆಶ್ ಗಣೇಶ್ ಎಂಬುವರು ಸೇರಿಕೊಂಡು ಒಂದು ಖಾಸಗಿ ವಾಹನದಲ್ಲಿ  ಕಡಬ ಸರಕಾರಿ ಅಸ್ವತ್ರೆಯಲ್ಲಿ ಒಳರೋಗಿಯಾಗಿ ದಾಖಾಲಿಸಿದ್ದು ವೈದ್ಯರು  ನಾಗೇಶ್ ನ್ನು ಪರಿಕ್ಷಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಪುತ್ತೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು  ಅದರಂತೆ ಪಿರ್ಯಾದುದಾರರ 108 ಅಂಬ್ಯಲೆನ್ಸ್ ನಲ್ಲಿ ಪುತ್ತೂರು ಮಹಾವೀರ ಆಸ್ವತ್ರೆಗೆ ಗಾಯಗೊಂಡ ನಾಗೇಶ್ ನನ್ನು  ಒಳಾರೋಗಿಯಾಗಿ ದಾಖಾಲು ಮಾಡಿದ್ದು ಈ ಅಪಘತದ ಸಮಯ ನಾಗೇಶ್ ಎಂಬುವರಿಗೆ  ಬಲಕಾಲಿನ ಪಾದಕ್ಕೆ ಎಡಕಾಲಿನ ಮಣಿಗಂಟಿಗೆ ಹಾಗೂ ಬಲ ಕೈಯ ಕಿರುಬೆರಳಿಗೆ ರಕ್ತ ಗಾಯ ಹಾಗೂ ಸೊಂಟಕ್ಕೆ ಗುದ್ದಿದ ನೋವುಉಂಟಾಗಿರುತ್ತದೆ.  ಈ ಬಗ್ಗೆ ಕಡಬ ಠಾಣಾ ಅ.ಕ್ರ 12/2022 ಕಲಂ. 279,337   ಐಪಿಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಶ್ರೀನಿವಾಸ ನಾಯ್ಕ ಪ್ರಾಯ:36 ವರ್ಷ ತಂದೆ:ದಿ.ಕುಕ್ಕ ನಾಯ್ಕ ವಾಸ: ಬಾಸಮೆ ಮನೆ ಮಾಚಾರು ಉಜಿರೆ ಗ್ರಾಮ ಮತ್ತು ಅಂಚೆ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ: 05-02-2022 ರಂದು ಪಿರ್ಯಾದುದಾರರು ಅವರ ಬಾಬ್ತು KA 70 H 8298 ನೇ ದ್ವಿ ಚಕ್ರ ವಾಹನವನ್ನು ಮಲೆಬೆಟ್ಟು ಕಡೆಯಿಂದ ಕೊಯ್ಯುರು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಸುಮಾರು ಬೆಳಿಗ್ಗೆ 8:30 ಗಂಟೆಗೆ ಬೆಳ್ತಂಗಡಿ ತಾಲೂಕು ಕೊಯ್ಯೂರು ಗ್ರಾಮದ  ಮಲೆಬೆಟ್ಟು ಕೊಯ್ಯೂರು ಕಸಬಾ ಶಾಲೆಯ ಬಳಿ ತಲುಪುತ್ತಿದ್ದಂತೆ ವಿರುದ್ದ ದಿಕ್ಕಿನಿಂದ ಅಂದರೆ ಕೊಯ್ಯೂರು ಕಡೆಯಿಂದ ಮಲೆಬೆಟ್ಟು ಕಡೆಗೆ KA 21 W 9824 ನೇ ಮೋಟಾರ್ ಸೈಕಲ್ ನ್ನು ಅದರ ಸವಾರ ಹರ್ಷಿತ್ ರವರು ದುಡುಕುತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ದ್ವಿ ಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ಅಪಘಾತ ನಡೆಸಿದ ಮೋಟಾರ್ ಸೈಕಲ್ ಸವಾರ ಹರ್ಷಿತ್ ವಾಹನ ಸಮೇತ ರಸ್ತೆಗೆ ಬಿದ್ದುದರಿಂದ ಪಿರ್ಯಾದುದಾರರಿಗೆ ಎಡಕೈ ಯ ಹೆಬ್ಬೆರಳಿಗೆ, ಎಡ ಮೊಣಕಾಲಿಗೆ ಗುದ್ದಿದ ತರಚಿದ ಗಾಯ ಹಾಗೂ ಹರ್ಷಿತ್ ರವರಿಗೆ ಎಡಕಾಲಿನ ಪಾದ, ಮಣಿಗಂಟಿಗೆ, ಹೊಟ್ಟೆಗೆ ಗುದ್ದಿದ ಗಾಯಗೊಂಡು ಇಬ್ಬರೂ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಪಿರ್ಯಾದುದಾರರು ಉಜಿರೆ ಎಸ್ ಡಿ ಎಮ್ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 20/2022 ಕಲಂ; 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 07-02-2022 10:46 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080