ಅಭಿಪ್ರಾಯ / ಸಲಹೆಗಳು

 

ಅಪಘಾತ ಪ್ರಕರಣ: 1

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ತೌಸೀಫ್‌ ರಹಿಮಾನ್‌, ಪ್ರಾಯ 35 ವರ್ಷ, ಗಂಡ: ಅಬ್ದುಲ್‌ ಹಮೀದ್‌ ವಾಸ: 5-191(2), ಹಂಡೇಲು ಮನೆ, ಮೂಡಬಿದ್ರೆ, ಪುತ್ತಿಗೆ ಗ್ರಾಮ, ಬಡಗ ಮೀಜಾರು ಅಂಚೆ, ಮಂಗಳೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 06-08-2022 ರಂದು 09-45 ಗಂಟೆಗೆ ಆರೋಪಿ ಸ್ಕೂಟರ್‌ ಸವಾರ ಮಹಮ್ಮದ್‌ ಶರೀಫ್‌ ಎಂಬವರು KA-21-EA-7858ನೇ ನೋಂದಣಿ ನಂಬ್ರದ ಸ್ಕೂಟರನ್ನು ಉಪ್ಪಿನಂಗಡಿ-ಗುರುವಾಯನಕೆರೆ ರಾಜ್ಯ ಹೆದ್ದಾರಿಯಲ್ಲಿ ಉಪ್ಪಿನಂಗಡಿ ಕಡೆಯಿಂದ ಗುರುವಾಯನಕೆರೆ ಕಡೆಗೆ ಚಲಾಯಿಸಿಕೊಂಡು ಹೋಗಿ, ಬೆಳ್ತಂಗಡಿ ತಾಲೂಕು ಇಳಂತಿಲ  ಗ್ರಾಮದ ಮಾಣಿಮಾರು ಎಂಬಲ್ಲಿ ಹೆಚ್‌.ಎಂ.ಹಾಲ್‌ ಬಳಿ, ಮೀನು ಅಂಗಡಿಯ ಕಡೆಗೆ ಹೋಗಲು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಗೆ ಅಡ್ಡಲಾಗಿ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ತೌಸೀಫ್‌ ರಹಿಮಾನ್‌ ರವರು  ಮೂಡಬಿದ್ರೆ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-70-M-1732 ನೇ ನೋಂದಣಿ ನಂಬ್ರದ ಕಾರಿಗೆ ಸ್ಕೂಟರ್‌ ಅಪಘಾತವಾಗಿ ವಾಹನಗಳು ಜಖಂಗೊಡು, ಸ್ಕೂಟರ್‌ ಸವಾರ ಮಹಮ್ಮದ್‌ ಶರೀಫ್‌ ರವರಿಗೆ ಬಲಕಾಲಿಗೆ ಗಾಯವಾಗಿ,  ಗಾಯಾಳುವನ್ನು ಪಿರ್ಯಾದುದಾರರು ಪುತ್ತೂರು ಹಿತ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ:  127/2022  ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಾಣೆ ಪ್ರಕರಣ: 1

  • ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ದೇವರಾಜನಾಯ್ಕ ಪ್ರಾಯ: 24 ವರ್ಷತಂದೆ: ಶಂಕರನಾಯ್ಕ ವಾಸ: ಜಜುರಾಯನಹಳ್ಳಿ, ಪಾವಗಡ ತಾಲೂಕು ತುಮಕೂರು ಜಿಲ್ಲೆ ಎಂಬವರ ದೂರಿನಂತೆ ಕಳೆದ ಒಂದು ತಿಂಗಳಿನಿಂದ ಬಂಟ್ವಾಳ ರೈಲ್ವೇ ಸ್ಟೇಷನ್ ಪ ಕ್ಕದಲ್ಲಿ ರೈಲ್ವೇ ವಿದ್ಯುದಿಕರಣ ಕಾಮಗಾರಿಯನ್ನು ಮಾಡಿಕೊಂಡಿದ್ದು, ಜೊತೆಯಲ್ಲಿ ಕೆಲಸಕ್ಕೆ ಛತ್ತೀಸ್ ಮೂಲದ ಕೆಲಸಗಾರರು ಇರುತ್ತಾರೆ. ಅವರಲ್ಲಿ ಆನಂದ ಕಶ್ಯಪ ಎಂಬಾತನು ದಿನಾಂಕ:05-08-2022 ರಂದು ಸಾಯಂಕಾಲ 5.30 ಗಂಟೆಗೆ ನೇತ್ರಾವತಿ ನದಿ ತೀರದ ಬಳಿ ನೀರಿಗೆ ಇಳಿದು ನೀರಿಗೆ ಬಿದ್ದು ಬೊಬ್ಬೆ ಹೊಡೆದಾಗ ಆತನೊಂದಿಗೆ ಇದ್ದ ಇತರ ಕೆಲಸಗಾರರು ಓಡಿ ಹೋಗಿ ನೋಡಿದಾಗ ಆತನು ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಕಾಣೆಯಾಗಿರುತ್ತಾನೆ. ನೇತ್ರಾವತಿ ನದಿ ತೀರದಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ.  ಈ ಬಗ್ಗೆ ಬಂಟ್ವಾಳ ನಗರ ಠಾಣಾಅ.ಕ್ರ:74/2022 ಕಲಂ: ಮನುಷ್ಯಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 08-08-2022 10:26 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080