ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

ಕಡಬ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಪ್ರವೀಣ್ ಕುಮಾರ್ ತಂದೆ ಶರಣಪ್ಪ  ವಾಸ ; ಹನುಮನಾಳ ಕುಷ್ಟಗಿ ತಾಲೂಕು ಕೊಪ್ಪಳ ಜಿಲ್ಲೆ ರವರು ದಿನಾಂಕ:06.10.2021 ರಂದು KA-01-AF-6164 ಕಾರನ್ನು ಮಂಗಳೂರಿನಿಂದ ಶಿವಸಾಯಿ ಕೃಷ್ಣ ಹಾಗೂ ಅವರ ಕುಟುಂಬದವರು ಧರ್ಮಸ್ಥಳ ಹಾಗೂ ಸುಬ್ರಹ್ಮಣ್ಯ ಕಡೆಗಳಿಗೆ ಪಿರ್ಯಾದುದಾರರ ಕಾರನ್ನು ಬಾಡಿಗೆ ಮಾಡಿಕೊಂಡು ಬಂದಿದ್ದು.  ಸುಬ್ರಹ್ಮಣ್ಯ – ಕಡಬ ಮಾರ್ಗವಾಗಿ ಮಂಗಳೂರಿಗೆ ಹೋಗುತ್ತ  ಕಡಬ ತಾಲೂಕು ಐತ್ತೂರು ಗ್ರಾಮದ ಭ್ರಾಂತಿಕಟ್ಟೆ ಎಂಬಲ್ಲಿ ರಸ್ತೆಯ ಎಡಬದಿಯಲ್ಲಿ ಪಿರ್ಯಾದುದಾರರು ಕಾರನ್ನು ಚಲಾಯಿಸಿಕೊಂಡು ಬರುತ್ತಿರುವಾಗ ಕಡಬ ಕಡೆಯಿಂದ ಒಂದು ಮೋಟಾರ್ ಸೈಕಲ್ ಸವಾರನು ತೀರ ನಿರ್ಲಕ್ಷತನ ಹಾಗೂ ಅಜಾಗರುಕತೆಯಿಂದ ಆತನ ರಸ್ತೆಯ ತೀರ ಬಲಬದಿಗೆ ಸವಾರಿ ಮಾಡಿಕೊಂಡು ಬಂದು ಪಿರ್ಯಾದುದಾರರ ಕಾರಿಗೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ರಸ್ತೆಯ ಬದಿಯ ಚರಂಡಿಗೆ ಎಸೆಯಲ್ಪಟ್ಟಿದು ಸವಾರನು ಮಾರ್ಗಕ್ಕೆ ಬಿದ್ದಿದು  ನಂತರ ಪಿರ್ಯಾದುದಾರರು ಕಾರನ್ನು ನಿಲ್ಲಿಸಿ ಪ್ರಯಾಣಿಕರೊಂದಿಗೆ ಇಳಿದು ಮೋಟಾರ್ ಸೈಕಲ್ ನ್ನು ನೋಡಲಾಗಿ KA-21-W-7525 ಮೋಟಾರ್ ಸೈಕಲ್ ಆಗಿದ್ದು ಸವಾರನಿಗೆ ಕಾಲು ಮತ್ತು ತಲೆಗೆ ಗಾಯವಾಗಿದ್ದು ಕೂಡಲೇ ಅಲ್ಲಿ  ಸೇರಿದ ಸಾರ್ವಜನಿಕರು ಸವಾರನನ್ನು ಕಡಬ ಕಡೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿರುತ್ತಾರೆ. ಈ ಬಗ್ಗೆ ಕಡಬ ಠಾಣಾ ಅ.ಕ್ರ 85/2021 ಕಲಂ. 279.337 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಬೆಳ್ಳಾರೆ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಕೇಶವ  ಪ್ರಾಯ (42) ತಂದೆ  ದಿ. ಕುಂಞಣ್ಣ ಆಚಾರಿ  ವಾಸ  ಮರ್ದೂರಡ್ಕ ಮನೆ  ಎಡಮಂಗಲ ಗ್ರಾಮ ಕಡಬ  ತಾಲ್ಲೂಕು ದ ಕ ಜಿಲ್ಲೆ ರವರು ದಿನಾಂಕ 05.10.2021 ರಂದು ಮೋಟಾರ್  ಸೈಕಲ್ ನಂಬರ್ ಕೆಎ 21 ಇಬಿ 1478 ನೇಯದನ್ನು  ಸವಾರಿ ಮಾಡಿಕೊಂಡು ಮರ್ದೂರಡ್ಕ ಎಂಬಲ್ಲಿ  ತಲುಪಿದಾಗ ಎದುರುಗಡೆಯಿಂದ ಅಂದರೆ  ಎಡಮಂಗಲ  ಕಡೆಯಿಂದ ಮರ್ದೂರಡ್ಕ  ಕಡೆಗೆ ಆಟೋ ರಿಕ್ಷಾ ನಂಬರ್ ಕೆಎ 21 ಎಬಿ  7101ನೇಯದನ್ನು   ಅದರ  ಚಾಲಕ ರೋಹಿತ್ ರವರು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲ್ ಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿ ದಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ  ಬಲಕಾಲಿನ ಮೊಣಗಂಟಿನ ಕೆಳಗೆ ಕೋಲು ಕಾಲಿಗೆ ಗುದ್ದಿದ ಹಾಗೂ ರಕ್ತಗಾಯ ಮತ್ತು ಬಲ ಕೈಗೆ ತರಚಿದ ಹಾಗೂ ಗುದ್ದಿದ ನಮೂನೆಯ ಗಾಯಗಳಾಗಿ ಚಿಕಿತ್ಸೆಯ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ  ಈ ಬಗ್ಗೆ ಬೆಳ್ಳಾರೆ ಪೋಲಿಸ್ ಠಾಣೆ 49/2021 ಕಲಂ 279  337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ವೀರಭದ್ರಯ್ಯ ಹಿರೇಮಠ, ಪ್ರಾಯ 53 ವರ್ಷ, ತಂದೆ: ಮಡಿವಾಳಯ್ಯ ಹಿರೇಮಠ, ವಾಸ:  ಸುರಭಿ ಕಾಂಪ್ಲೆಕ್ಸ್‌, ದುರ್ಗಾಪರಮೇಶ್ವರಿ ದೇವಸ್ಥಾನದ ಎದುರುಗಡೆ, ಚಿತ್ರಾಪುರ, ಕುಳಾಯಿ, ಮಂಗಳೂರು ರವರು ನೀಡಿದ ದೂರಿನಂತೆ ದಿನಾಂಕ 05-10-2021 ರಂದು ಆರೋಪಿ ಲಾರಿ ಚಾಲಕ ರುದ್ರಯ್ಯ ವಿರಕ್ತಮಠ ಎಂಬವರು VRL ಕಂಪೆನಿಯ  KA-25-C-6489 ನೇ ನೋಂದಣಿ ನಂಬ್ರದ ಲಾರಿಯನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ನೀರಕಟ್ಟೆ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಚಾಲಕನ ಹತೋಟಿ ತಪ್ಪಿ ಪಲ್ಟಿಯಾಗಿ ಲಾರಿಯಲ್ಲಿದ್ದ ಸರಕುಗಳಿಗೆ ಜಖಂ ಆಗಿದ್ದು, ಲಾರಿಯಲ್ಲಿದ್ದ ಸರಕುಗಳನ್ನು ಮಳೆಯ ಕಾರಣಕ್ಕೆ ಬೇರೆ ಲಾರಿಯಲ್ಲಿ ಸಾಗಾಟ ಮಾಡಿದ್ದು, ಅಪಘಾತದಿಂದ ಲಾರಿಯ ಚಾಲಕರಿಗಾಗಲೀ, ಬೇರೆ ಸಾರ್ವಜನಿಕರಿಗಾಗಲೀ ಗಾಯಗಳಾಗಿರುವುದಿಲ್ಲ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  121/2021 ಕಲಂ: 279  ಐಪಿಸಿ  ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ: 1

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಪ್ರವೀಣ್ ಪ್ರಾಯ 28 ವರ್ಷ ತಂದೆ:ಬಾಬು ಕುಲಾಲ್ ವಾಸ:ಚಂದ್ರಿಗೆ ಮನೆ, ಕಳ್ಳಿಗೆ ಗ್ರಾಮ ಮತ್ತು ಅಂಚೆ ಬಂಟ್ವಾಳ ತಾಲೂಕು ರವರು ಕೆಎ 70 ಇ 3326 ನೇ ಟಿವಿಎಸ್ ಜುಪಿಟರ್ ಸ್ಕೂಟರ್ ವಾಹನವನ್ನು ಹೊಂದಿದ್ದು, ದಿನಾಂಕ:02.10.2021 ರಾತ್ರಿ 8-00 ಗಂಟೆಗೆ ಕೆಲಸ ಮುಗಿಸಿ ಸ್ಕೂಟರ್ ನ್ನು ನಿಲ್ಲಿಸುವ ಪಿರ್ಯಾದುದಾರರ ಮನೆಯ ಹತ್ತಿರ ನಿರ್ಮಿಸಿದ್ದ ಶೆಡ್ ನಲ್ಲಿ ಮೋಟಾರ್ ಸೈಕಲ್ ನಿಲ್ಲಿಸಿ ಹೋಗಿದ್ದು ದಿನಾಂಕ: 03.10.2021 ಬೆಳಿಗ್ಗೆ 8-00 ಗಂಟೆಗೆ ಬಂದು ನೋಡಲಾಗಿ ಸದ್ರಿ ಜುಪಿಟರ್ ಸ್ಕೂಟರ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ:114/2021 ಕಲಂ:  379 ಐಪಿಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 07-10-2021 07:49 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080