ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 02

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ನಿಜಾಂವುದ್ದಿನ್ ಪ್ರಾಯ 31 ವರ್ಷ ತಂದೆ ಮಹಮ್ಮದ್ ಎಮ್,  ವಾಸ ಮಾಡಾವು ಮನೆ ಕೆಯ್ಯೂರು ಗ್ರಾಮ ಪುತ್ತೂರು ತಾಲೂಕು  ಎಂಬವರ ದೂರಿನಂತೆ ದಿನಾಂಕ 05.11.2022 ರಂದು KA.09.F.4882 ನಂಬ್ರದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದು ಅದರಲ್ಲಿಯೇ ಪಿರ್ಯಾದಿದಾರರಿಗೆ ಪರಿಚಯದ ಸುಲೈಮಾನ್ ರವರು ಪ್ರಯಾಣಿಸುತ್ತಿದ್ದು,  ಸದ್ರಿಯವರು ಬಸ್ಸಿನ ಹಿಂಬದಿಯ ಸೀಟಿನಲ್ಲಿ ಕುಳಿತ್ತಿದ್ದು, ಬಸ್ಸು 10.50 ಗಂಟೆಗೆ ಕುಂಬ್ರ ಬಳಿ ತಲುಪಿದಾಗ ಬಸ್ಸ್ ನಿಲ್ದಾಣ ಬರುವ ಮೊದಲೇ ನಿರ್ವಾಹಕರು ಕುಂಬ್ರದಲ್ಲಿ ಇಳಿಯುವವರು ಬನ್ನಿ ಎಂದೂ ಜೋರಾಗಿ ಹೇಳುತ್ತಾ ವಿಶಲ್ ಹಾಕಿದ್ದು,ಪ್ರಯಾಣಿಕರಾಗಿದ್ದ ಸುಮಾರು 50 ವರ್ಷ ಪ್ರಾಯದ ಸುಲೈಮಾನ ಬೈರತ್ತಿಕೆರೆರವರು ಹಿಂಬದಿಯ ಬಾಗಿಲನ ಬಳಿ ನಿಂತ್ತಿದ್ದು. ಬಸ್ಸ್ ಸ್ಟಾಪ್ ಗೆ ಸ್ವಲ್ಪ ದೂರು ಇದ್ದು ಬಸ್ಸ ಚಾಲಕನು ಬಸ್ಸನ್ನು ಚಲಾಯಿಸುತ್ತಿದ್ದರಿಂದ ಸುಲೈಮಾನ್ ಬೈರತ್ತಿಕೆರೆ ರವರು ಆಯಾ ತಪ್ಪಿ ರಸ್ತೆಗೆ ಬಿದ್ದಿರುತ್ತಾರೆ ಕೂಡಲೇ ಚಾಲಕನು ಸ್ವಲ್ಪ ಮುಂದೆ ಹೋಗಿ ಬಸ್ಸನ್ನು ನಿಲ್ಲಿಸಿರುತ್ತಾರೆ. ಫಿರ್ಯಾದಿದಾರರು ಮತ್ತು ಬಸ್ಸಿನಲ್ಲಿದ್ದವರು ಬಸ್ಸಿನಿಂದ ಇಳಿದು ಕೆಳಗೆ ಬಿದ್ದ ಸುಲೈಮಾನ್ ಬೈರತ್ತಿಕೆರೆರವರನ್ನು ಬಂದು ನೋಡಲಾಗಿ ಅವರ ತಲೆಗೆ ರಕ್ತ ಗಾಯವಾಗಿದ್ದು ಕೂಡಲೇ ಫಿರ್ಯಾದಿದಾರರು ಮತ್ತು ನಿರ್ವಾಹಕರು ಸುಲೈಮಾನ್ ಬೈರತ್ತಿಕೆರೆರವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈಧ್ಯರು ಪರೀಕ್ಷಿಸಿ  ಹೆಚ್ಚಿನ  ಚಿಕಿತ್ಸೆ ಬಗ್ಗೆ ಮಂಗಳೂರಿಗೆ ಕೊಂಡುಹೋಗುವಂತೆ, ಸೂಚಿಸಿದಂತೆ ಕೂಡಲೇ ಅವರನ್ನು ಅಂಬುಲೇನ್ಸ್ ನಲ್ಲಿ ಮಂಗಳೂರಿನ ಯುನಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈಧ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಅ.ಕ್ರ 100/2022 ಕಲಂ: 337 IPC ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಧನುಷ್,  ಪ್ರಾಯ: 23 ತಂದೆ: ಬಿ ಗಣೇಶ್ ಕುಮಾರ್ವಾಸ: # 1-169/1 ಅಂತರ ಶ್ರೀರಾಮ ನಗರ ಮನೆನರಿಕೊಂಬು ಗ್ರಾಮ ಮತ್ತು ಅಂಚೆ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ. ದಿನಾಂಕ 05-11-2022 ರಂದು ಪಿರ್ಯಾದುದಾರರು ಅಗತ್ಯ ಕೆಲಸದ ನಿಮಿತ್ತ ಮೋಟಾರ್‌ ಸೈಕಲ್‌ನಲ್ಲಿ ಕೈಕಂಬಕ್ಕೆ ಹೋಗಿ ವಾಪಸು ಮನೆ ಕಡೆ ಬರುವ ಸಮಯ 19:00 ಗಂಟೆಗೆ ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಬಿ ಸಿ ರೋಡ್‌ ಎಂಬಲ್ಲಿ ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯ ಕಚ್ಚಾ ರಸ್ತೆಯಿಂದ KA-19-HK-6911 ನೇ ಮೋಟಾರ್‌ ಸೈಕಲ್‌ ಸವಾರ ಒಮ್ಮೇಲೆ ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನೆಡೆದುಕೊಂಡು ಬರುತ್ತಿದ್ದ ಪಾದಚಾರಿ ಮಹಿಳೆಯೊಬ್ಬರಿಗೆ ಡಿಕ್ಕಿ ಹೊಡೆದು ಅಫಘಾತಪಡಿಸಿದ ಪರಿಣಾಮ ಪಾದಚಾರಿ ಮಹಿಳೆ ಹೇಮವತಿ ರಸ್ತೆಗೆ ಬಿದ್ದು ಸೊಂಟಕ್ಕೆ ಗುದ್ದಿದ ನೋವಾಗಿದ್ದು , ಬಿ ಸಿ ರೋಡು ಸೋಮಾಯಾಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ದೇರಳಕಟ್ಟೆ ಕೆ ಎಸ್‌ ಹೆಗ್ಡೆ ಆಸ್ಪತ್ರೆಯಲ್ಲಿ  ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 137/2022 ಕಲಂ: 279, 337, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 09-11-2022 07:51 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080