ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮಂಜುನಾಥ ಆಚಾರಿ, ಪ್ರಾಯ 39 ವರ್ಷ, ತಂದೆ: ಕೃಷ್ಣ ಆಚಾರಿ, ವಾಸ: ಸರಪನಕಟ್ಟೆ, ಎಳ್ಳಾವಾಡಿ ಕಾವೂರು ಗ್ರಾಮ, ಭಟ್ಕಳ ತಾಲೂಕು, ಉತ್ತರ ಕನ್ನಡ ಜಿಲ್ಲೆ ಎಂಬವರ ದೂರಿನಂತೆ ದಿನಾಂಕ 06-12-2022 ರಂದು 13:30 ಗಂಟೆಗೆ ಆರೋಪಿ  ಸ್ಕೂಟರ್‌ ಸವಾರ ಶ್ರೀಚರಣ್‌ ಎಂಬವರು  KA-21-Y-4438 ನೇ ನೋಂದಣಿ ನಂಬ್ರದ ಸ್ಕೂಟರಿನಲ್ಲಿ ದೀಪಕ್‌ ಎಂಬವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಪುತ್ತೂರು ತಾಲೂಕು ಕಬಕ ಗ್ರಾಮದ ನೆಹರೂನಗರ ಎಂಬಲ್ಲಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬಲಭಾಗದಿಂದ ಎಡಭಾಗದಲ್ಲಿದ್ದ ಕಾಲೇಜು ಕಡೆಗೆ ಹೋಗುವ ರಸ್ತೆ ಕಡೆಗೆ ಹೋಗಲು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಹೆದ್ದಾರಿಗೆ ಅಡ್ಡಲಾಗಿ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ಚಾಲಕರಾಗಿ ಕುಂದಾಪುರ ಕಡೆಯಿಂದ ಮೈಸೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-19-F-3363 ನೇ ನೋಂದಣಿ ನಂಬ್ರದ KSRTC ಬಸ್ಸಿನ ಮುಂಭಾಗಕ್ಕೆ ಸ್ಕೂಟರ್‌ ಅಪಘಾತವಾಗಿ ಸ್ಕೂಟರ್‌ ಸವಾರ ಮತ್ತು  ಸಹಸವಾರನಿಗೆ ಗಾಯಗಳಾಗಿ ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಗೆ ಕಳುಹಿಸಲಾಗಿದೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 185/2022 ಕಲಂ: 279, 337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅರುನ್‌ಕುಮಾರ್‌ ಪುತ್ತಿಲ, ಪ್ರಾಯ 50 ವರ್ಷ, ತಂದೆ: ದಿ. ಎಂ ಕೃಷ್ಣಯ್ಯ, ವಾಸ: ಪುತ್ತಿಲ ಮನೆ, ನರಿಮೊಗರು ಅಂಚೆ, ಮುಂಡೂರು ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 06-12-2022 ರಂದು 16:00 ಗಂಟೆಗೆ ಆರೋಪಿ ಕಾರು ಚಾಲಕ ವಸಂತಕುಮಾರ್‌ ಎಂಬವರು  KA-19-MD-2378 ನೇ ನೋಂದಣಿ ನಂಬ್ರದ ಕಾರಿನಲ್ಲಿ ಅವರ ತಾಯಿ ಪಿ.ಕೆ ಕುಮಾರಿ ಎಂಬವರನ್ನು ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಚಲಾಯಿಸಿಕೊಂಡು ಹೋಗಿ ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ಕರ್ವೆಲು ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ರಸ್ತೆ ಬದಿಯ ಗುಂಡಿಗೆ ಬಿದ್ದು, ಪಿ.ಕೆ ಕುಮಾರಿ ರವರ ತಲೆಗೆ ಗಾಯವಾಗಿ ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಫಸ್ಟ್‌ ನ್ಯೂರೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಕಾರು ಚಾಲಕ ವಸಂತಕುಮಾರ್‌ ರವರಿಗೆ ಸಣ್ಣ ಪುಟ್ಟ ಗಾಯವಾಗಿರುತ್ತದೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 186/2022 ಕಲಂ: 279, 337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಕಿರಣ್ ಕುಮಾರ್ ಕೆ. ಪ್ರಾಯ: 42 ವರ್ಷ ತಂದೆ: ದಿ| ವಿಠಲ ಭಂಡಾರಿ ಮನೆ ನಂಬ್ರ: 3-204/ಎ ಖಜಾನೆಮೂಲೆ ಮನೆ, ಆರ್ಯಾಪು ಗ್ರಾಮ ಮತ್ತು ಅಂಚೆ ಪುತ್ತೂರು ಎಂಬವರ ದೂರಿನಂತೆ ದಿನಾಂಕ:05-12-2022 ರಂದು ಸಂಪ್ಯ ಪೊಲೀಸ್ ಠಾಣೆಯ ಕಡೆಯಿಂದ ಸಂಪ್ಯ ಮಸೀದಿಯ ಕಡೆಗೆ ಮೈಸೂರು-ಮಾಣಿ ಹೆದ್ದಾರಿಯಲ್ಲಿ ಫಿರ್ಯಾದಿದಾರರ ಬಲ ಬದಿಯ ಕಚ್ಚಾ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಾ ರಾತ್ರಿ ಸುಮಾರು 7.45 ಗಂಟೆಗೆ ಸಂಪ್ಯದ ಮಹಮ್ಮದ್ ಹನೀಫ್ ರವರ ಎಳನೀರು ಸ್ಟಾಲ್ ನ ಬಳಿಯಲ್ಲಿ ರಸ್ತೆಯನ್ನು ದಾಟಲು ನಿಂತಿದ್ದಾಗ ಪುತ್ತೂರು ಕಡೆಯಿಂದ ಕುಂಬ್ರ ಕಡೆಗೆ  ಸ್ಕೂಟರೊಂದನ್ನು ಅದರ ಸವಾರೆಯೊಬ್ಬರು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡ ಬದಿಗೆ ಕಚ್ಚಾ ಮಣ್ಣು ರಸ್ತೆಗೆ ಚಲಾಯಿಸಿದ ಪರಿಣಾಮ ಸದ್ರಿ ಸ್ಕೂಟರ್ ಕಚ್ಚಾ ಮಣ್ಣುರಸ್ತೆಯಲ್ಲಿ ನಿಂತಿದ್ದ ಫಿರ್ಯಾದುದಾರರ ಚಿಕ್ಕಪ್ಪ ಧನಂಜಯ ಭಂಡಾರಿಯವರಿಗೆ ಢಿಕ್ಕಿಯಾಗಿದ್ದು, ಈ ಅಪಘಾತದ ಪರಿಣಾಮ ಧನಂಜಯ ಭಂಡಾರಿಯವರು ಡಾಮಾರು ರಸ್ತೆಗೆ ಎಸೆಯಲ್ಪಟ್ಟಿದ್ದಲ್ಲದೇ ಅಪಘಾತ ಉಂಟು ಮಾಡಿದ ಸ್ಕೂಟರ್ ಕೂಡಾ ಅದರ ಸವಾರೆಯೊಂದಿಗೆ ಮಗುಚಿ ಬಿದ್ದಿರುತ್ತದೆ. ಫಿರ್ಯಾದುದಾರರು ಧನಂಜಯ ಭಂಡಾರಿಯವರನ್ನು ಆರೈಕೆ ಮಾಡಿ ನೋಡಲಾಗಿ ಸದ್ರಿಯವರ ತಲೆ, ಬಲ ಕೈ, ಬಲ ಕಾಲಿನಲ್ಲಿ ರಕ್ತಗಾಯ ಉಂಟಾಗಿರುವುದು ಕಂಡು ಬಂದಿದ್ದು, ಸ್ಕೂಟರ್ ಸವಾರೆಗೂ ಸ್ವಲ್ಪ ಗಾಯವಾಗಿರುವುದು ಕಂಡು ಬಂದಿರುತ್ತದೆ.  ಸ್ಕೂಟರ್ ಸವಾರೆಯ  ಹೆಸರು  ಸವಿತಾ ರೈ  ಎಂಬುದಾಗಿ ತಿಳಿದು ಬಂದಿದ್ದು, ಸದ್ರಿಯವರು ಸವಾರಿ ಮಾಡುತ್ತಿದ್ದ ಸ್ಕೂಟರ್ ಜಖಂಗೊಂಡಿದ್ದು, ಸ್ಕೂಟರ್ ನಂಬ್ರ ನೋಡಲಾಗಿ ಅದು   KA 21 W 5522 ಆಗಿರುತ್ತದೆ. ಬಳಿಕ ಫಿರ್ಯಾದುದಾರರು ಚಿಕ್ಕಪ್ಪ ಧನಂಜಯ ಭಂಡಾರಿಯವರನ್ನು ಕಾರೊಂದರಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋದಾಗ ಸದ್ರಿ ಆಸ್ಪತ್ರೆಯ ವೈದ್ಯಾಧಿಕಾರಿಯವರು ಧನಂಜಯ ಭಂಡಾರಿಯವರಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು, ಅದರಂತೆ ಫಿರ್ಯಾದುದಾರರು ಮತ್ತು ಇತರರು ಧನಂಜಯ ಭಂಡಾರಿಯವರನ್ನು ಮಂಗಳೂರು ಸರಕಾರಿ ವೆನ್ಲಾಕ್  ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಸದ್ರಿ ಆಸ್ಪತ್ರೆಯಲ್ಲಿ ಧನಂಜಯ ಭಂಡಾರಿಯವರನ್ನು ಒಳರೋಗಿಯಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ CR...NO 107/2022 ಕಲಂ: 279,337 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶ್ರೀಮತಿ ಸುಜಾತಾ ಎಂ, ಪಿ (41) ಗಂಡ: ಶಶಿಧರ ವಾಸ: ನೀರಬಿದಿರೆ ಮನೆ, ದುಗ್ಗಲಡ್ಕ ಅಂಚೆ, ಸುಳ್ಯ ಕಸಬಾ ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಕುರುಂಜಿ ಭಾಗ್‌ ನಲ್ಲಿರುವ ಕೆ.ವಿ.ಜಿ. ಆಸ್ಪತ್ರೆಯಲ್ಲಿ ವಾರ್ಡ್‌ ಬಾಯ್‌ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 05.12.2022 ರಂದು ಎಂದಿನಂತೆ ಕೆಲಸಕ್ಕೆ ಕೆ,ವಿ,ಜಿ ಆಸ್ಪತ್ರೆಗೆ ಬಂದವರು ಮದ್ಯಾಹ್ನ ಊಟ ಮಾಡಲು ಸಾಂಬಾರು ತರಲು ಅವರ ಜೊತೆ ಕೆಲಸ ಮಾಡುವ ರತ್ನವತಿರವರೊಂದಿಗೆ ಕೆ.ವಿ.ಜಿ ಜಂಕ್ಷನ್‌ ನಲ್ಲಿರುವ ಗೂಡಂಗಡಿಗೆ ಹೋಗಿ ಸಾಂಬಾರು ತೆಗೆದುಕೊಂಡು ವಾಪಾಸ್‌ ಕೆ.ವಿ.ಜಿ ಆಸ್ಪತ್ರೆಗೆಂದು ಬರುವರೇ ಸುಳ್ಯ ಕಸಬಾ ಗ್ರಾಮದ ಕೆ.ವಿ.ಜಿ ಜಂಕ್ಷನ್‌ ನಲ್ಲಿರುವ ನಂದ ಸ್ಟೋರ್‌ ಅಂಗಡಿಯ ಎದುರು ರಸ್ತೆ ದಾಟಲು ರಸ್ತೆ ಬದಿ ನಿಂತಿದ್ದ ಸಮಯ ಸುಮಾರು 13:15 ಗಂಟೆಗೆ ಎನ್.ಎಂ.ಸಿ ಕಡೆಯಿಂದ ಸುಳ್ಯ ಕಡೆಗೆ ಮೋಟಾರ್‌ ಸೈಕಲ್‌ ವೊಂದನ್ನು ಅದರ ಸವಾರರು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ  ಸವಾರಿ ಮಾಡಿಕೊಂಡು ಆತನ ತೀರ ಎಡಬದಿಗೆ ಬಂದು ರಸ್ತೆ ಬದಿ ನಿಂತಿದ್ದ ಪಿರ್ಯಾದಿದಾರರಿಗೆ ಡಿಕ್ಕಿವುಂಟು ಮಾಡಿದರು. ಪರಿಣಾಮ ಪಿರ್ಯಾದುದಾರರು ರಸ್ತೆಗೆ ಬಿದ್ದವರನ್ನು, ಪಿರ್ಯಾದುದಾರರ ಜೊತೆಯಿದ್ದ ರತ್ನವತಿ ಮತ್ತು ಅಪಘಾತಪಡಿಸಿದ ಮೋಟಾರ್‌ ಸೈಕಲ್‌ ಸವಾರ ಹಾಗೂ ಇತರರು ಉಪಚರಿಸಿ ನೋಡಲಾಗಿ ಪಿರ್ಯಾದುದಾರರ ಬಲ ಕೋಲು ಕಾಲಿಗೆ ರಕ್ತವಾಗಿದ್ದವರನ್ನು ಚಿಕಿತ್ಸೆಯ ಬಗ್ಗೆ ಆಟೋ  ರಿಕ್ಷಾವೊಂದರಲ್ಲಿ ಕೆ.ವಿ.ಜಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಪಿರ್ಯಾದು ದಾರರನ್ನು ಚಿಕಿತ್ಸೆಯ ಬಗ್ಗೆ ಒಳರೋಗಿಯಾಗಿ ದಾಖಲಿಸಿ ಕೊಂಡಿರುತ್ತಾರೆ. ಅಪಘಾತ ಉಂಟು ಮಾಡಿದ ಮೋಟಾರ್‌ ಸೈಕಲ್‌ ನಂಬ್ರ ಕೆಎ 21 ಇ 8745 ಆಗಿದ್ದು ಸವಾರನ ಹೆಸರು ಚಿರಾಗ್‌ ಎಂಬುದಾಗಿ ತಿಳಿದಿರುತ್ತದೆ. ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ ಅ.ಕ್ರ 145/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

  • ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ವೀಣಾ ಪ್ರಸಾದ್‌ (41) ಗಂಡ: ಎಂ,ಎಸ್‌ ಪ್ರಸಾದ್‌ ವಾಸ: ಮಿತ್ತಮಜಲು ಮನೆ, ಸೋಣಂಗೇರೆ ಅಂಚೆ, ಜಾಲ್ಸೂರು ಗ್ರಾಮ, ಸುಳ್ಯ ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ 06.12.2022 ರಂದು ಸುಳ್ಯ ತಾಲೂಕು ಜಾಲ್ಸೂರು ಗ್ರಾಮದ ಮಿತ್ತಮಜಲು ಎಂಬಲ್ಲಿರುವ ತಮ್ಮ ಮನೆಯ ಹಿಂಬದಿಯ ಗೋಡೌನ್‌  ಬದಿಯಲ್ಲಿ ಬೆಳಿಗ್ಗೆ ಸಮಯ 11:00 ಗಂಟೆಗೆ ಕೆಲಸಗಾರರಿಂದ ತಮ್ಮ ಬಾಬ್ತು ಅಡಿಕೆ ತೋಟದಲ್ಲಿ ಅಡಿಕೆ ಕೊಯ್ಲು ಮಾಡಿಸಿ  10 ಚೀಲ ಹಣ್ಣಾಡಿಕೆಯನ್ನು ಇಟ್ಟಿದ್ದು, ಸಂಜೆ ಸುಮಾರು 5:00 ಗಂಟೆಗೆ ಗೋಡೌನ್‌ ಬದಿಯಲ್ಲಿ ಇಟ್ಟಿದ ಅಡಿಕೆ ಚೀಲವನ್ನು ನೋಡಲು ಹೋದಾಗ  ಅದರಲ್ಲಿ ಒಂದು ಚೀಲ ಕಳವಾಗಿರುವುದು ಕಂಡು ಬಂದಿದ್ದು, ಈ ಬಗ್ಗೆಪಿರ್ಯಾದುದಾರರು ಅವರ  ಗಂಡನಿಗೆ ವಿಚಾರ ತಿಳಿಸಿದ್ದು,  ಕಳವಾದ ಚೀಲದಲ್ಲಿ 800 ಹಣ್ಣಡಿಕೆ ಇದ್ದು ಅದರ ತೂಕ 30 ಕೆಜಿ ಆಗಿದ್ದು,  ಇದರ ಅಂದಾಜು ಮಾಲ್ಯ 4000/- ರೂ ಆಗಬುಹುದು. ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ ಅ.ಕ್ರ 146/2022 ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

  • ಸುಬ್ರಮಣ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ವೆಂಕಟೇಶ್ ಹೆಚ್ ಎಲ್ ಪ್ರಾಯ: 47 ವರ್ಷ, , ತಂದೆ:ದಿ||ಲಕ್ಷ್ಮಿ ನಾರಾಯಣ ಹೆಚ್ ಎನ್ , ವಾಸ: ಕಲ್ಲಪಣೆ  ಮನೆ, ಸುಬ್ರಹ್ಮಣ್ಯ  ಗ್ರಾಮ, ಕಡಬ  ಎಂಬವರ ದೂರಿನಂತೆ ದಿನಾಂಕ 06-12-2022 ರಂದು ಮಧ್ಯಾಹ್ನ 2.30 ಗಂಟೆಗೆ ಕಡಬ ತಾಲೂಕು ಸುಬ್ರಹ್ಮಣ್ಯ ಗ್ರಾಮದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಭೋಜನಾ ಹಾಲ್‌ ಬಳಿ ಅನಾರೋಗ್ಯದಿಂದ ಚೆನ್ನರಾಯ ಪಟ್ಟಣ ಮೂಲದ ಭಾಗ್ಯಮ್ಮ (60 ವರ್ಷ) ಎಂಬವರು ನರಳಾಡುತ್ತಿದ್ದವರನ್ನು ಪಿರ್ಯಾದಿದಾರರು  ಕಂಡು ಚಿಕಿತ್ಸೆ ಬಗ್ಗೆ 108 ಆಂಬ್ಯುಲೆನ್ಸ್‌ಗೆ ಕರೆ ಮಾಡಿಸಿ ಬರಮಾಡಿಕೊಂಡು ಸದ್ರಿ ಭಾಗ್ಯಮ್ಮ ರವರನ್ನು ಚಿಕಿತ್ಸೆ ಬಗ್ಗೆ ಕಡಬ ಸರಕಾರಿ ಆಸ್ಪತ್ರೆಗೆ ಕೊಂಡು ಹೋಗುವ ದಾರಿ ಮಧ್ಯೆಯೇ ಮೃತಪಟ್ಟಿದ್ದು, ಕಡಬ ಸರಕಾರಿ ಆಸ್ಪತ್ರೆಗೆ ಮಧ್ಯಾಹ್ನ 3.45 ಗಂಟೆಗೆ ತಲುಪಿದಾಗ ಅಲ್ಲಿಯ ವೈದ್ಯಾಧಿಕಾರಿಯವರು ಪರೀಕ್ಷಿಸಿ ಸದ್ರಿ ಮಹಿಳೆಯು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.ಈ ಬಗ್ಗೆ ಸುಬ್ರಮಣ್ಯ ಪೊಲೀಸ್ ಠಾಣಾ ಯುಡಿಆರ್ ನಂಬ್ರ : 23/2022ಕಲಂ   , 174 ಸಿಆರ್ ಪಿಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 07-12-2022 10:51 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080