ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶೇಖರ ಪೂಜಾರಿ ಪ್ರಾಯ 35 ವರ್ಷ, ತಂದೆ: ನಾರ್ಣಪ್ಪ ಪೂಜಾರಿ, ವಾಸ: ಅರ್ತಿದಡ್ಕ ಮನೆ, ಸಣ್ಣಂಪಾಡಿ, ಗೋಳಿತೊಟ್ಟು ಅಂಚೆ & ಗ್ರಾಮ, ಕಡಬ ತಾಲೂಕು ಎಂಬವರ ದೂರಿನಂತೆ ದಿನಾಂಕ 05-09-2022 ರಂದು 11:00 ಗಂಟೆಗೆ ಆರೋಪಿ lpg ಟ್ಯಾಂಕರ್‌ ಚಾಲಕ ರಾಮರಾಜ್‌ ಎಂಬವರು  tn-46-k-1699 ನೇ ನೋಂದಣಿ ನಂಬ್ರದ ಲಾರಿಯನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ,  ಕಡಬ ತಾಲೂಕಿನ ಗೋಳಿತೊಟ್ಟು ಗ್ರಾಮದ ಕಾಂಚನ ಕ್ರಾಸ್‌ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಹೆದ್ದಾರಿಯ ತೀರಾ ಬದಿಗೆ ಚಲಾಯಿಸಿದ ಪರಿಣಾಮ, ಹೆದ್ದಾರಿಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದುದಾರರ ಅಣ್ಣ ಗೋಪಾಲ ಪೂಜಾರಿ ರವರಿಗೆ  ಅಪಘಾತವಾಗಿ, ಗೋಪಾಲ ಪೂಜಾರಿಯವರಿಗೆ ತಲೆಗೆ, ಕೈಗಳಿಗೆ ಹಾಗೂ ಎರಡೂ ಕಾಲುಗಳಿಗೆ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದು, ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 144/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಬಾಲಕೃಷ್ಣ ಗೌಡ ಎನ್  ತಂದೆ ಲಿಂಗಪ್ಪ ಗೌಡ ವಾಸ: ದಿರಕ್ಷ ಕಂಪೌಂಡ್, ನಾಗುರಿ ಗುಡ್ಡೆತೋಟ ಮನೆ. ಮಂಗಳೂರು ಎಂಬವರ ದೂರಿನಂತೆ ಪಿರ್ಯಾದುದಾರರು ಶಂಭೂರು ಗ್ರಾಮದಲ್ಲಿರುವ  ಎ ಎಂ ಆರ್ ಪವರ್ ಪ್ರೈ.ಲಿ ನಲ್ಲಿ ಸ್ಟೋರ್ ಇನ್ ಚಾರ್ಜ್ ಆಗಿ ಕೆಲಸ ನಿರ್ವಹಿಸುತ್ತಿದ್ದು ಕಂಪನಿಯಲ್ಲಿ  ಮೆಷಿನ್ ಗಳಿಗೆ ಬಳಸಿ ನಿರುಪ್ತಯುಕ್ತವಾದ ಹಿತ್ತಾಳೆಯ ಬೇರಿಂಗ್ ಹಾಗೂ ಇತರ ಸ್ವತ್ತುಗಳನ್ನು  ಸ್ಟೋರ್ ರೂಂ ನ ಹೊರಗಡೆ ಮರದ ಪೆಟ್ಟಿಗೆಯಲ್ಲಿ ತುಂಬಿಸಿ ದಿನಾಂಕ 05.6.2016 ರಂದು ಸಂಜೆ 03.00 ಗಂಟೆಗೆ ಇಟ್ಟಿದ್ದು . ದಿನಾಂಕ 23.7.2022 ರಂದು ಬೆಳಿಗ್ಗೆ 10.00 ಗಂಟೆಗೆ ಹಿತ್ತಾಳೆಯ ಬೇರಿಂಗ್ ಪರಿಶೀಲಿಸಲು ಪಿರ್ಯಾದುದಾರರು  ಹೋದಾಗ ಅಂದಾಜು 500 ಕಿಲೋ ದಷ್ಟು ಕಳ್ಳತನವಾಗಿರುವುದು ಕಂಡು ಬಂದಿದ್ದು. ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು  ಇದರ ಅಂದಾಜು ಮೌಲ್ಯ ಸುಮಾರು 2 ಲಕ್ಷ ಆಗಬಹುದು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಅ,ಕ್ರ  68-2022 .ಕಲಂ   379 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಕ್ರಮ ಪ್ರವೇಶ ಪ್ರಕರಣ: 1

  • ವೇಣೂರು ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಅನ್ನಮ್ಮ, ಪ್ರಾಯ 57 ವರ್ಷ, ಗಂಡ: ಫ್ರಾನ್ಸಿಸ್, ವಾಸ:  ಮಿಯಲಾಜೆ ಮನೆ, ಬಜಿರೆ ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ಫಿರ್ಯಾದಿದಾರರಿಗೂ ಆರೋಪಿತರಿಗೂ ಜಾಗದ ವಿಚಾರದಲ್ಲಿ ತಕರಾರು ಇದ್ದು, ದಿನಾಂಕ: 07.09.2022 ರಂದು ಬೆಳಗ್ಗಿನ ಜಾವ 2.30 ಗಂಟೆಗೆ ಫಿರ್ಯಾದಿದಾರರ ಮನೆಯ ನಾಯಿ ಬೊಗಳುತ್ತಿದ್ದಾಗ ಬಾಗಿಲು ತೆರೆದು ನೋಡಲಾಗಿ, ಆರೋಪಿತರು ಫಿರ್ಯಾದಿದಾರರ ಜಮೀನಿಗೆ ಅಕ್ರಮ ಪ್ರವೇಶ ಮಾಡಿ, ದುರುದ್ದೇಶಪೂರ್ವಕವಾಗಿ ಫಿರ್ಯಾದಿದಾರರ ಮನೆಯ ಕುಡಿಯುವ ನೀರಿನ ಬಾವಿಗೆ ಯಾವುದೋ ವಿಷ ಪದಾರ್ಥ ಸುರಿಯುತ್ತಿದ್ದು, ಫಿರ್ಯಾದಿದಾರರು ಹಾಗೂ ಅವರ ಮಕ್ಕಳು ಬೊಬ್ಬೆ ಹಾಕಿದಾಗ ಆರೋಪಿತರು ಅಲ್ಲಿಂದ ತೆರಳಿದ್ದು, ಈ ಬಗ್ಗೆ ವೇಣೂರು ಪೊಲೀಸ್  ಠಾಣಾ ಅ.ಕ್ರ: 53/2022 ಕಲಂ: 447, 277 ಜೊತೆಗೆ 34 ಐಪಿಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

  • ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪ್ರಮೋದ್ ಪ್ರಾಯ: 42 ವರ್ಷ ತಂದೆ; ಧರ್ಣಪ್ಪ ಗೌಡ   ವಾಸ; ಹಳೆಕ್ಕಿ ಮನೆ ಕೊಯ್ಯೂರು ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರ  ತೋಟದಲ್ಲಿ ಕೆಲಸ ಮಾಡಿಕೊಂಡಿರುವ ರಾಜ ಮತ್ತು ಅವರ ಹೆಂಡತಿ  ಕಮಲ ಎಂಬವರು ಪಿರ್ಯಾದುರಾರರ ತೋಟದಲ್ಲಿರುವ ಶೆಡ್ ನಲ್ಲಿ ವಾಸವಾಗಿದ್ದು ದಿನಾಂಕ:06-09-2022 ರಂದು  ಮದ್ಯಾಹ್ನ 2.00 ಗಂಟೆಗೆ ರಾಜ್ ನು ಪಿರ್ಯಾದುದಾರರ ತಂದೆಯವರಲ್ಲಿ 1,000/- ರೂಪಾಯಿ  ಹಣವನ್ನು ತೆಗೆದುಕೊಂಡು  ಹೋದವರು ರಾತ್ರಿ 9.30 ಗಂಟೆ ಸಮಯಕ್ಕೆ  ಪಿರ್ಯಾದುದಾರರು ಮನೆಯಲ್ಲಿ ಇರುವ ಸಮಯ  ರಾಜ ನು ವಾಸ್ತವ್ಯ ಇರುವ  ಶೆಡ್ ನ ಬಳಿಯಿಂದ ಜೋರಾಗಿ ಬೊಬ್ಬೆ ಹೊಡೆದು ನನ್ನ ಹೆಂಡತಿ ನೇಣು ಹಾಕಿಕೊಂಡಿದ್ದಾಳೆ ಆಂಬ್ಯುಲೆನ್ಸ್  ಗೆ ಪೋನ್ ಮಾಡಿ ಅಣ್ಣ ಎಂದು ಕಿರುಚಿದ್ದು  ಪಿರ್ಯಾದುದಾರರು ಕೂಡಲೇ ಆಂಬ್ಯುಲೆನ್ಸ್ ಗೆ  ಕರೆಮಾಡಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣಾ ಯು ಡಿ ಆರ್ 39/2022 ಕಲಂ;174 (3)(iv) CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 08-09-2022 06:45 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080