ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಬೀರೇಶ್‌ ಪಾಠಕ್‌ ಪ್ರಾಯ 33 ವರ್ಷ ತಂದೆ: ಹರಿಕೇಶ್‌ ಪಾಠಕ್‌ ವಾಸ: ಭಾಗಿ ಪಟ್ಟಿ ಕುರ್ದ್‌ ಗ್ರಾಮ, ಕಟೆಯಾ ತಾಲೂಕು, ಗೋಪಾಲಗಂಜ್‌ ಜಿಲ್ಲೆ, ಬಿಹಾರ ಎಂಬವರ ದೂರಿನಂತೆ ದಿನಾಂಕ 09/02/2023 ರಂದು 15-30 ಗಂಟೆಗೆ ಆರೋಪಿ ಕಾರು ಚಾಲಕ ರಾಜೇಶ್ ಎಂಬವರು ಕೆಎ -19-ಎಂಎಫ್ 6144  ನೇ ನೋಂದಣಿ ನಂಬ್ರದ ಕಾರಿನಲ್ಲಿ ಶಿವಕುಮಾರ್, ದಿನೇಶ್, ಸೌಮ್ಯ,  ಮಗು ಅದೀಶ್ ರವರನ್ನು ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು  ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾಣಿಮಂಗಳೂರು ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಬಂಟ್ವಾಳ ತಾಲೂಕು ಬಿಳಿಯೂರು  ಗ್ರಾಮದ ಮೈರಕಟ್ಟೆ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್ ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಬೀರೇಶ್ ಪಾಠಕ್ ರವರು ಚಾಲಕರಾಗಿ, ಕ್ಲೀನರ್ ಅಂಕಿತ್ ರವರನ್ನು ಕುಳ್ಳಿರಿಸಿಕೊಂಡು  ಉಪ್ಪಿನಂಗಡಿ ಕಡೆಯಿಂದ ಪಾಣಿಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಕೆಎ-19-ಎಸಿ- 0190 ನೇ ನೋಂದಣಿ ನಂಬ್ರದ ಲಾರಿಗೆ ಮುಖಾಮುಖಿ ಅಪಘಾತವಾಗಿ, ಕಾರಿನಲ್ಲಿದ್ದ ಪ್ರಯಾಣಿಕರಾದ ಸೌಮ್ಯ ರವರಿಗೆ ಬಲಕಾಲಿಗೆ ಗಾಯಗಳಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆರೋಪಿ ಕಾರು ಚಾಲಕ, ಇತರ ಪ್ರಯಾಣಿಕರಾದ ಶಿವಕುಮಾರ್, ದಿನೇಶ್, ಮಗು ಅಧೀಶ್ ರವರಿಗೆ ಸಣ್ಣಪುಟ್ಟ ಗಾಯಗಳಾಗಿರುತ್ತವೆ. ಅಪಘಾತದಿಂದ ಎರಡು ವಾಹನಗಳು ಜಖಂಗೊಂಡಿರುತ್ತವೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 26/2023 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸೀತಾಲಕ್ಷ್ಮಿ,  ಪ್ರಾಯ-43 ವರ್ಷ , ಗಂಡ- ತ್ಯಾಗರಾಜ್‌  ವಾಸ- ದರ್ಖಾಸ್ತು ಮನೆ, ಐವರ್ನಾಡು  ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ಫಿರ್ಯಾದುದಾರರಾದ ತಾಯಿಯಾದ ಸುಮಾರು 78 ವರ್ಷ ಪ್ರಾಯದ ಮಾರಿಯಮ್ಮ ಎಂಬವರು ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದ ಕಣಿಯಾರು ಎಂಬಲ್ಲಿರುವ ಸಿ.ಆರ್.ಸಿ. ಕಾಲೊನಿಯಲ್ಲಿ ವಾಸವಾಗಿದ್ದರು. ದಿನಾಂಕ:- 09.02.2023ರಂದು ಫಿರ್ಯಾದುದಾರರು ತನ್ನ ಚಿಕ್ಕಮ್ಮನ ಮಗನಾದ ಮುರಳಿ ಎಂಬವನೊಂದಿಗೆ ಕಣಿಯಾರು ಸಿ.ಆರ್.ಸಿ.ಯಲ್ಲಿರುವ ನನ್ನ ತಾಯಿ ಮಾರಿಯಮ್ಮನವರ ಮನೆಗೆ ಬಂದಿರುತ್ತಾರೆ. ಆ ವೇಳೆ  ಮಾರಿಯಮ್ಮರವರು ಸುಳ್ಯದ ರೆಪ್ಕೋ ಬ್ಯಾಂಕಿಗೆ ತನ್ನನ್ನು ಕರೆದುಕೊಂಡು ಹೋಗುವಂತೆ ಮುರಳಿ ಎಂಬವನಲ್ಲಿ ಹೇಳಿರುತ್ತಾರೆ. ಅದರಂತೆ ಬೆಳಿಗ್ಗೆ ಸುಮಾರು 11.30 ಗಂಟೆಗೆ ಮುರಳಿಯು ಆತನ ಬಾಬ್ತು ಕೆಎ 21 ವೈ. 6888 ನೇ ಮೋಟಾರ್‌ ಸೈಕಲಿನಲ್ಲಿ ಫಿರ್ಯಾದುದಾರರ ತಾಯಿ ಮಾರಿಯಮ್ಮರವರನ್ನು ಹಿಂಬದಿ ಸವಾರರಾಗಿ ಕುಳ್ಳಿರಿಸಿಕೊಂಡು ಸದ್ರಿ ಮೋಟಾರ್‌ ಸೈಕಲನ್ನು ಸವಾರಿ ಮಾಡಿಕೊಂಡು ಕಣಿಯಾರಿನಿಂದ ಮಾಡಾವು ಮೂಲಕ ಸುಳ್ಯಕ್ಕೆ ಹೊರಟಿದ್ದು, ಫಿರ್ಯಾದುದಾರರು ಯೋಗರಾಜ್‌ ಎಂಬವರು ಸವಾರಿ ಮಾಡಿಕೊಂಡಿದ್ದ ಸ್ಕೂಟರಿನಲ್ಲಿ ಹಿಂಬದಿ ಸವಾರಳಾಗಿ ಕುಳಿತುಕೊಂಡು ಅವರ ಹಿಂದಿನಿಂದ ಹೋಗುತ್ತಿದ್ದು, ಬೆಳಿಗ್ಗೆ ಸುಮಾರು 11.35 ಗಂಟೆಗೆ  ಕಣಿಯಾರು- ಕೈಕಂಬ ಸಾರ್ವಜನಿಕ ರಸ್ತೆಯಲ್ಲಿರುವ ಅರ್ತ್ಯಡ್ಕ ಎಂಬಲ್ಲಿಗೆ ತಲುಪಿದಾಗ ಮುರಳಿಯು ಸದ್ರಿ ಮೋಟಾರ್‌ ಸೈಕಲನ್ನು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ ಮಾರಿಯಮ್ಮರವರು ಮೋಟಾರ್‌ ಸೈಕಲಿನಿಂದ  ಡಾಮಾರು ರಸ್ತೆಗೆ ಎಸೆಯಲ್ಪಟ್ಟಿರುತ್ತಾರೆ. ಕೂಡಲೇ ಫಿರ್ಯಾದುದಾರರು ಮಾರಿಯಮ್ಮರವರ  ಬಳಿಗೆ ತೆರಳಿ ಆರೈಕೆ  ಮಾಡಿ  ನೋಡಲಾಗಿ ಮಾರಿಯಮ್ಮರವರ ತಲೆಯಲ್ಲಿ ಗಾಯವಾಗಿ ರಕ್ತಸ್ರಾವವಾಗುತ್ತಿರುವುದು ಕಂಡು ಬಂದಿರುತ್ತದೆ. ಬಳಿಕ ಫಿರ್ಯಾದುದಾರರು ವಾಹನವೊಂದರಲ್ಲಿ ಮಾರಿಯಮ್ಮರವರನ್ನು ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮಧ್ಯಾಹ್ನ ಸುಮಾರು 12.15 ಗಂಟೆಗೆ  ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯವರು ಮಾರಿಯಮ್ಮರವರನ್ನು ಪರೀಕ್ಷಿಸಿ ಸದ್ರಿಯವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ CR.NO 12-2023 ಕಲಂ: 279,304(A) IPC ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಇತರೆ ಪ್ರಕರಣ: 1

  • ಬಂಟ್ವಾಳ ನಗರ ಪೊಲೀಸ್ ಠಾಣೆ : ದಿನಾಂಕ 09-02-2023 ರಂದು ಬೆಳಿಗ್ಗೆ ಸಮಯ ಸುಮಾರು 8.15 ಗಂಟೆಗೆ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯಲ್ಲಿ ರಿಚಾರ್ಡ್ ಪಿಂಟೋ ಎಂಬಾತನು ಅಪ್ರಾಪ್ತೆ ಬಾಲಕಿಯು ಶಾಲೆಗೆ ಹೋಗುವ ಸಮಯದಲ್ಲಿ ಹಿಂಬಾಲಿಸಿಕೊಂಡು ಹೋಗಿ ಕೈಯನ್ನು ಹಿಡಿದು ಅಪ್ಪಿಕೊಂಡು ಅಶ್ಲೀಲವಾಗಿ ವರ್ತಿಸಿ ನೊಂದ ಬಾಲಕಿಯ ಬಾಯಿಯನ್ನು ಗಟ್ಟಿಯಾಗಿ ಮುಚ್ಚಿ ಬೊಬ್ಬೆ ಹೊಡೆದರೆ ರೇಪ್ ಮಾಡುವುದಾಗಿ ಹೇಳಿ  ಗಟ್ಟಿಯಾಗಿ ಅಪ್ಪಿಕೊಂಡಿದ್ದು,  ನೊಂದ ಬಾಲಕಿಯು ಆರೋಪಿಯ ಕೈಯಿಂದ ತಪ್ಪಿಸಿಕೊಂಡು ಮನೆಗೆ ಹೋಗಿ ಹೆತ್ತವರಲ್ಲಿ ವಿಚಾರ ತಿಳಿಸಿದಂತೆ ನೊಂದ ಬಾಲಕಿಯ ಷೋಷಕರು ಠಾಣೆಗೆ ಬಂದು ನೀಡಿದ ದೂರಿನಂತೆ ಆರೋಪಿ ರಿಚಾರ್ಡ್ ಪಿಂಟೋ ಎಂಬವರ ವಿರುದ್ದ ಬಂಟ್ವಾಳ ನಗರ ಠಾಣಾ ಕಲಂ:354, 506 ಐಪಿಸಿ ಹಾಗೂ ಕಲಂ: 7, 8  ಪೋಕ್ಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 10-02-2023 10:25 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080