ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸುಜಿತ್ ಕುಮಾರ್ ಪ್ರಾಯ : 31 ವರ್ಷ, ತಂದೆ: ರಾಮಪ್ಪ ಪೂಜಾರಿ ವಾಸ: ಬೇಂಕ್ಯೆ  ಮನೆ, ಸಜಿಪ ಮೂಡ ಗ್ರಾಮ ಮತ್ತು ಅಂಚೆ,  ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 09-05-2022 ರಂದು ಪಿರ್ಯಾದಿದಾರರು ಹಾಗೂ ಅವರ ಅಣ್ಣ ಸುನೀಲ್ ಕುಮಾರ್ ರೊಂದಿಗೆ ಮನೆ ಕಡೆಗೆ ನಡೆದುಕೊಂಡು ಹೋಗುತ್ತಾ ಸಮಯ ಸುಮಾರು 21:15 ಗಂಟೆಗೆ ಬಂಟ್ವಾಳ ತಾಲೂಕು ಸಜಿಪಮೂಡ ಗ್ರಾಮದ ಬೇಂಕ್ಯ ಸುಭಾಷ್ ನಗರ ಎಂಬಲ್ಲಿ ಮೇಲ್ಕಾರ್-ಮುಡಿಪು ರಸ್ತೆಯಲ್ಲಿ ದಾಟುತ್ತಾ ರಸ್ತೆ ಬದಿಗೆ ತಲುಪುತ್ತಿದ್ದಂತೆ ಮೇಲ್ಕಾರ್ ಕಡೆಯಿಂದ KA-19-EZ-9028 ನೇ ಸ್ಕೂಟರನ್ನು ಅದರ ಸವಾರ ವಿಶ್ವನಾಥ ಅಂಚನ್ ಎಂಬವರು ಪೂರ್ಣೇಶ್ ಎಂಬವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಸುನೀಲ್ ಕುಮಾರ್ ರವರಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಸುನೀಲ್ ಕುಮಾರ್ ರವರು ಎಸೆಯಲ್ಪಟ್ಟು ರಸ್ತೆಗೆ ಬಿದ್ದು ತಲೆಗೆ ದೇಹಕ್ಕೆ ಮೈಕೈಗೆ ತೀವ್ರ ಸ್ವರೂಪದ ಗಾಯಗಳಾಗಿರುವುದಲ್ಲದೇ, ಸ್ಕೂಟರ್ ಸವಾರ ವಿಶ್ವನಾಥ ಅಂಚನ್ ಹಾಗೂ ಸಹಸವಾರ ಪೂರ್ಣೇಶ್ ರವರಿಗೂ ಗಾಯವಾಗಿರುತ್ತದೆ. ಗಾಯಗೊಂಡ ಸುನೀಲ್ ಕುಮಾರ್ ರವರನ್ನು ಚಿಕಿತ್ಸೆಯ ಬಗ್ಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ..ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ 52/2022 ಕಲಂ 279,337,304(A) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ವೇಣೂರು ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶ್ರೀನಾಥ್   (27), ತಂದೆ: ಕೊರಗಪ್ಪ ಪೂಜಾರಿ  ವಾಸ: ಕಲ್ಪಿಳ ಮನೆ, ಸುಲ್ಕೇರಿ  ಮೊಗ್ರು  ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ಸಾರಾಂಶವೇನೆಂದರೆ  ದಿನಾಂಕ: 09-05-2022 ರಂದು  ಮಧ್ಯಾಹ್ನ ಸುಮಾರು  12:30 ಗಂಟೆಗೆ  ಬೆಳ್ತಂಗಡಿ  ತಾಲೂಕು ಬಡಗಕಾರಂದೂರು  ಗ್ರಾಮದ  ಅಳದಂಗಡಿ ಎಂಬಲ್ಲಿ ಕಾರ್ಕಳ-  ಗುರುವಾಯನಕೆರೆ ಸಾರ್ವಜನಿಕ  ರಸ್ತೆಯಲ್ಲಿ  ಮೋಟಾರ್  ಸೈಕಲ್  ನಂಬ್ರ   ಕೆಎ.19 ಇ ಎಸ್ .2550 ನೇ ದನ್ನು ಅದರ  ಸವಾರ  ಅಬ್ದುಲ್  ಆಜೀಜ್    ಎಂಬಾತರು ಬೆಳ್ತಂಗಡಿ  ಕಡೆಯಿಂದ ದುಡುಕುತನ  ಹಾಗೂ  ನಿರ್ಲಕ್ಷತನದಿಂದ   ರಸ್ತೆಯ  ತೀರಾ ಎಡಬದಿಗೆ  ಚಲಾಯಿಸಿ ಕರ್ನಾಟಕ ಬ್ಯಾಂಕ್ ಮಣ್ಣು ರಸ್ತೆಯಲ್ಲಿ   ನಡೆದುಕೊಂಡು ಬರುತ್ತಿದ್ದ  ದೇವದಾಸ್  ರವರಿಗೆ  ಡಿಕ್ಕಿ ಹೊಡೆದ ಪರಿಣಾಮ ದೇವದಾಸ್ ರವರು  ರಸ್ತೆಗೆ  ಬಿದ್ದು  ತಲೆಗೆ  ರಕ್ತ ಗಾಯ, ಹಾಗೂ ಬಲಕೈಗೆ , ಭುಜದ  ಬಳಿ  ಮತ್ತು  ಬೆನ್ನಿಗೆ ತರಚಿದ   ಗಾಯಗಳಾಗಿ ಮಂಗಳೂರು   ಫಾದರ್  ಮುಲ್ಲರ್ಸ್  ಆಸ್ಪತ್ರೆಯಲ್ಲಿ  ಚಿಕಿತ್ಸೆ ಬಗ್ಗೆ  ದಾಖಲಾಗಿರುವುದಾಗಿದೆ. ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 28-2022 ಕಲಂ:279,337 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ಳಾರೆ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ನವೀನ್‌ ಕುಮಾರ್‌ ಎ.ವಿ ಪ್ರಾಯ 39 ವರ್ಷ, ತಂದೆ: ದಿ ವಿಷ್ಣು ಭಟ್‌ ಎ, ವಾಸ: ದೇರಾಜೆ ಮನೆ, ಐವರ್ನಾಡು ಗ್ರಾಮ, ಸುಳ್ಯ ತಾಲೂಕು, ದ.ಕ.  ಎಂಬವರ ದೂರಿನಂತೆ ಪಿರ್ಯಾದಿದಾರರು ಮಹೀಂದ್ರಾ ಜೀತೋ ವಾಹನ ನಂಬ್ರ ಕೆಎ-21-ಸಿ-1746 ನೇಯದರಲ್ಲಿ ಚಾಲಕರಾಗಿ ಬೆಳ್ಳಾರೆ ಪೇಟೆಯಲ್ಲಿ ಬಾಡಿಗೆ ಮಾಡುತ್ತಿದ್ದು, ನಿನ್ನೆ ದಿನಾಂಕ 09.05.2022 ರಂದು ಎಂದಿನಂತೆ ಸಂಜೆ ಬೆಳ್ಳಾರೆ ಪೇಟೆಯಿಂದ ಬಾಡಿಗೆ ಮುಗಿಸಿಕೊಂಡು ಮನೆ ಕಡೆಗೆ ಹೊರಟು ಸುಳ್ಯ-ಬೆಳ್ಳಾರೆ ರಸ್ತೆಯಲ್ಲಿ ಜೀತೋ ವಾಹನವನ್ನು ಚಲಾಯಿಸಿಕೊಂಡು ಹೋಗುತ್ತಾ ಸಮಯ ಸುಮಾರು 15-45 ಗಂಟೆಗೆ ಸುಳ್ಯ ತಾಲೂಕು ಐವರ್ನಾಡು ಗ್ರಾಮದ ಮರ್ವತ್ತಡ್ಕ ಎಂಬಲ್ಲಿಗೆ ತಲುಪಿದಾಗ ಎದುರುಗಡೆಯಿಂದ ಅಂದರೆ ಸುಳ್ಯ ಕಡೆಯಿಂದ ಬೆಳ್ಳಾರೆ ಕಡೆಗೆ ಆರೋಪಿತ ದೇವಿಪ್ರಸಾದ್‌ ಎಂಬವರು ಕಾರು ನಂಬ್ರ ಕೆಎ-21-ಪಿ-8746 ನೇಯದನ್ನು ಅಜಗಾರೂಕತೆ ಮತ್ತು ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಮಹೀಂದ್ರಾ ಜೀತೋ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಾರು ಮತ್ತು ಜೀತೋ ವಾಹನ ಜಖಂಗೊಂಡು ಫಿರ್ಯಾದಿದಾರರಿಗೆ ಎಡಕಾಲಿಗೆ ಗುದ್ದಿದ ಮತ್ತು ರಕ್ತಗಾಯ, ಬಲಕಾಲಿಗೆ ಅಲ್ಲಲ್ಲಿ ಗುದ್ದಿದ ಮತ್ತು ತರಚಿದ ಗಾಯ, ಎದೆಯ ಬಲಭಾಗ ಮತ್ತು ಕುತ್ತಿಗೆಗೆ ಗುದ್ದಿದ ಗಾಯ, ಬಲಕೈಗೆ ಅಲ್ಲಲ್ಲಿ ತರಚಿದ ಗಾಯಗಳಾಗಿ ಚಿಕಿತ್ಸೆಯ ಬಗ್ಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ಹೋಗಿದ್ದು, ಅಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಯ ಸುಳ್ಯ ಕೆವಿ.ಜಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ. ಅ.ಕ್ರ: 41/2022 ಕಲಂ 279,  337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಕಡಬ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸೈಜು   (32) ತಂದೆ: ಶಾಜಿ ಟಿ ಕೆ ವಾಸ: ಎಲ್ಯ ಮನೆ, ಕುಟ್ರುಪ್ಪಾಡಿ ಗ್ರಾಮ ,ಕಡಬ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು ಮತ್ತು ಅವರ ಮಾವ ಫ್ರಾನ್ಸಿಸ್ ಅತ್ತೆ ಆಲೀಸ್ ರವರು ಒಟ್ಟಿಗೆ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡಿಕೊಂಡಿದ್ದು  ದಿನಾಂಕ:08.05.2022 ರಂದು ಟ್ಯಾಪಿಂಗ್ ಕೆಲಸ ಮುಗಿಸಿ  ಪನ್ಯದಿಂದ  ಪಿರ್ಯಾದುದಾರರ ಮಾವ ಹಾಗೂ ಫ್ರಾನ್ಸಿಸ್ ಹಾಗೂ   ಆಲೀಸ್ ಎಂಬುವರನ್ನು ಸಹ ಸವಾರಳಾಗಿ ಕುಳ್ಳಿರಿಸಿಕೊಂಡು  KA.21.H.4239 ನೇ ಮೋಟಾರ್ ಸೈಕಲ್ ನಲ್ಲಿ  ಪನ್ಯ ಕಡೆಯಿಂದ ಮಾರ್ದಳ ಕಡೆಗೆ  ಮೋಟಾರ್ ಸೈಕಲ್ ನ್ನು ಚಲಾಯಿಸಿಕೊಂಡು ಹೋಗುತ್ತಿರುವ ಸಮಯ ಸುಮಾರು 12-30 ಗಂಟೆಗೆ ಕಡಬ ತಾಲೂಕು 102 ನೇ ನೆಕ್ಕಿಲಾಡಿ  ಗ್ರಾಮದ ಬೊಳ್ಳುರು ಕ್ರಾಸ್ ಬಳಿ ಇಂಡಿಕೇಟರ್ ಹಾಕಿ ಬಲಕ್ಕೆ ಕೋರಿಯರ್ ರಸ್ತೆ ಕಡೆಗೆ   ತಿರುಗಿಸುತ್ತಿರುವ ಸಮಯ ಹಿಂದಿನಿಂದ  ಅಂದರೆ ಕಡಬ ಕಡೆಯಿಂದ ಒರ್ವ ಮೋಟಾರ್ ಸೈಕಲ್  ಸವಾರನು ತೀರಾ ನಿರ್ಲಕ್ಷತನದಿಂದ ಹಾಗೂ ಅಜಾಗರುಕತೆಯಿಂದ  ಚಲಾಯಿಸಿಕೊಂಡು ಬಂದು ಫ್ರಾನ್ಸಿಸ್ ರವರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿ ಹೋಡೆದ ಪರಿಣಾಮ  ಎರಡು ಮೋಟಾರ್ ಸೈಕಲ್ ಗಳು ರಸ್ತೆಗೆ ಬಿದ್ದಿದ್ದು ನಂತರ  ಈ ಸಮಯ ಹಿಂದಿನಿಂದ ಬರುತ್ತಿದ್ದ  ಪಿರ್ಯಾದುದಾರರು ತನ್ನ ಮೋಟಾರ್ ಸೈಕಲ್ ನ್ನು ನಿಲ್ಲಿಸಿ ಹತ್ತಿರ ಹೋಗಿ ನೋಡಲಾಗಿ ಫ್ರಾನ್ಸಿಸ್ ರವರಿಗೆ  ಗುದದ್ವಾರದ ಬಳಿ ರಕ್ತ ಗಾಯ ಹಾಗೂ  ಹೊಟೆಯ ಕೆಳಭಾಗ ಗುದ್ದಿದ  ಗಾಯ   ಹಿಂಬದಿ ಸವಾರಳಾದ ಆಲೀಸ್ ಎಂಬುವರಿಗೆ ಕೈ ಕಾಲು ಸೊಂಟಕ್ಕೆ ತರಚಿದ ಗಾಯವಾಗಿದ್ದು ನಂತರ ಅಪಘಾತ ಉಂಟು ಮಾಡಿದ ಮೋಟಾರ್ ಸೈಕಲ್ ನ್ನು ನೋಡಲಾಗಿ KA.21.EB.8468 ನೇದಗಿದ್ದು ಅದರ ಸವಾರನ ಹೆಸರು   ಜೀವನ್ ಎಂಬುದಾಗಿ ತಿಳಿದಿದ್ದು  ನಂತರ ಗಾಯಾಳುಗಳನ್ನು ಒಂದು ಆಟೋ ರಿಕ್ಷಾದಲ್ಲಿ ಕಡಬ ಸರಕಾರಿ ಅಸ್ವತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೋಡಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಪುತ್ತೂರು ಮಹಾವೀರ  ಅಸ್ವತ್ರೆಗೆ ಹೋಗಿ  ನಂತರ ಫ್ರಾನ್ಸಿಸ್ ರವರು ಹೃದಯ ಸಂಬಂಧಿ ಖಾಯಿಲೆ ಇರುವುದರಿಂದ  ಮಂಗಳೂರಿನ KMC ಅಸ್ವತ್ರೆಗೆ ಕರೆದುಕೊಂಡು ಹೋಗಿ ಒಳ ರೋಗಿಯಾಗಿ ದಾಖಲು ಮಾಡಿರುವುದಾಗಿರುತ್ತದೆ.ಈ ಬಗ್ಗೆ ಕಡಬ ಠಾಣಾ ಅ.ಕ್ರ 46/2022 ಕಲಂ. .279.337 IPC    ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 12-05-2022 12:09 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080