Feedback / Suggestions

ಅಪಘಾತ ಪ್ರಕರಣ: 3

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮಹಮ್ಮದ್ ಅಸೈನಾರ್,  ಪ್ರಾಯ 28 ವರ್ಷ. ತಂದೆ: ಮಹಮ್ಮದ್ ವಾಸ: 1-4/2ಎ, ಸಣ್ಣಕುಕ್ಕು ಮನೆ, ನೀರಪಾದೆ ಅಂಚೆ, ಬಾಳ್ತಿಲ ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 10-08-2022 ರಂದು ಪಿರ್ಯಾದಿದಾರರು ಕೆಲಸ ಮುಗಿಸಿ ತನ್ನ ಹೆಂಡತಿ ಅಕ್ಕನ ಮನೆಯಾದ ಪರ್ಲಡ್ಕ ಎಂಬಲ್ಲಿಗೆ ಹೋಗಲು ಆಟೋರಿಕ್ಷಾವೊಂದರಲ್ಲಿ ನಾಡಾಜೆ ತನಕ ಹೋಗಿ ಅಲ್ಲಿ ಮತ್ತೊಂದು ಆಟೋರಿಕ್ಷಾಕ್ಕಾಗಿ ಕಾಯುತ್ತಿದ್ದ ಸಮಯ ಸುಮಾರು 19:50 ಗಂಟೆಗೆ ಬಂಟ್ವಾಳ ತಾಲೂಕು ಮಂಚಿ ಗ್ರಾಮದ ನಾಡಾಜೆ ಎಂಬಲ್ಲಿ ಬೋಳಂತೂರು ಕಡೆಯಿಂದ ಮುಡಿಪು ಕಡೆಗೆ KA-03-N-6581 ನೇ ಕಾರನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ತೀರಾ ಬಲಬದಿಗೆ ಚಲಾಯಿಸಿಕೊಂಡು ಹೋಗಿ ಮುಡಿಪು ಕಡೆಯಿಂದ ಕುಡ್ತಮೊಗೇರು ಕಡೆಗೆ ಬರುತ್ತಿದ್ದ KA-21-J-6766 ನೇ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಮೋಟಾರ್ ಸೈಕಲ್ ಸವಾರ  ಮೊಹಮ್ಮದ್ ಮುಸ್ತಾಫ್ ರವರು ಮೋಟಾರ್ ಸೈಕಲ್ ಸಮೇತ ಎಸೆಯಲ್ಪಟ್ಟು ರಸ್ತೆಗೆ ಬಿದ್ದು ಎಡಕಾಲಿನ ಮೊಣಗಂಟಿಗೆ, ಬಲಕೈಗೆ, ಹಣೆಗೆ ಗುದ್ದಿದ  ರಕ್ತಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ದೇರಳಕಟ್ಟೆಯ ಕಣಚೂರು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಅ.ಕ್ರ 88/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ವೇಣೂರು ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪೂವಪ್ಪ ಮೂಲ್ಯ   (63), ತಂದೆ: ಡೊಂಬಯ್ಯ ಮೂಲ್ಯ ವಾಸ: ನಲಿಕೆದ ಕೋಡಿ ಮನೆ, ಪಿಲಾತಬೆಟ್ಟು ಗ್ರಾಮ, ಬಂಟ್ವಾಳ  ತಾಲೂಕು ಎಂಬವರ ದೂರಿನಂತೆ ದಿನಾಂಕ 10-08-2022 ರಂದು 17:30  ಗಂಟೆಗೆ  ಬೆಳ್ತಂಗಡಿ  ತಾಲೂಕು  ಬಜಿರೆ    ಗ್ರಾಮದ   ಜಾರಿಗೆದಡಿ  ಎಂಬಲ್ಲಿ ಮೂರ್ಜೆ- ವೇಣೂರು  ಸಾರ್ವಜನಿಕ ಡಾಮಾರು   ರಸ್ತೆಯಲ್ಲಿ  ಕಾರು  ನಂ   KA  19 ML  4950  ನೇದನ್ನು   ಅದರ  ಚಾಲಕ  ವೇಣೂರು ಕಡೆಯಿಂದ ದುಡುಕುತನ  ಹಾಗೂ  ನಿರ್ಲಕ್ಷತನದಿಂದ   ರಸ್ತೆಯ  ತೀರ  ಬಲ ಬದಿಗೆ   ಚಲಾಯಿಸಿ  ಮೂರ್ಜೆ  ಕಡೆಯಿಂದ ಬರುತ್ತಿದ್ದ    ಬೈಕ್  ನಂಬ್ರ  KA 19 ET 2881   ನೇ  ದಕ್ಕೆ  ರಭಸದಿಂದ  ಡಿಕ್ಕಿ ಹೊಡೆದ  ಪರಿಣಾಮ   ಬೈಕ್  ಸವಾರ   ಬೈಕ್ ನೊಂದಿಗೆ  ರಸ್ತೆಗೆ ಬಿದ್ದು  ಬಲ  ಮೊಣಗಂಟಿಗೆ  ಗುದ್ದಿದ ಮತ್ತು  ರಕ್ತಗಾಯ ಹಾಗೂ ಸೊಂಟಕ್ಕೆ ಗುದ್ದಿದ  ಗಾಯಗಳಾಗಿ ಚಿಕಿತ್ಸೆಗೆ ಉಜಿರೆ ಎಸ್ ಡಿ ಎಂ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 48-2022 ಕಲಂ:279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಫಿರ್ಯಾದಿದಾರರು ರಾಮಣ್ಣ @ ಕೆ ರಾಮ ಪಾಟಾಳಿ  ,ಪ್ರಾಯ 65 ವರ್ಷ, ತಂದೆ, ಮಾನ ಪಾಟಾಳಿ,ವಾಸ.ಕೆಳಂದೂರು ಮನೆ ಪಡುವನ್ನೂರು ಗ್ರಾಮ ಪುತ್ತೂರು ಎಂಬವರ ದೂರಿನಂತೆ ಫಿರ್ಯಾದುದಾರರವರು ದಿನಾಂಕ 10.08.2022 ರಂದು ರಾತ್ರಿ  ಫಿರ್ಯಾದಿದಾರರು ಈಶ್ವರಮಂಗಲ ಕಡೆಯಿಂದ ಕಾವು ಕಡೆಗೆ ಹಾದು ಹೋಗುವ ಸಾರ್ವಜನಿಕ ಡಾಮಾರು ರಸ್ತೆಯ ಎಡಬದಿಯ ಕಚ್ಚಾ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಾ ಸಮಯ ಸುಮಾರು ರಾತ್ರಿ 8.00 ಗಂಟೆಗೆ ಪುತ್ತೂರು ತಾಲೂಕು ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲದ ಶ್ರೀ ದುರ್ಗಾ ಹೊಟೇಲಿನ ಬಳಿಗೆ ತಲುಪಿದಾಗ,  ಈಶ್ವರಮಂಗಲ ಕಡೆಯಿಂದ ಕಾವು ಕಡೆಗೆ ಯಾವುದೋ ವಾಹನವನ್ನು ಅದರ ಚಾಲಕನು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕಚ್ಚಾ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ   ಫಿರ್ಯಾದಿದಾರರ ಹಿಂಬದಿಗೆ ಡಿಕ್ಕಿ ಹೊಡೆದಿರುತ್ತಾನೆ, ಈ ಅಪಘಾತದಿಂದ ಫಿರ್ಯಾದಿದಾರರ ಎಡ ಕಾಲಿನ ಪಾದದ ಬಳಿ ರಕ್ತಗಾಯ ಉಂಟಾಗಿದ್ದು,ಬಳಿಕ ಅಲ್ಲಿ ಸೇರಿದ್ದ ಸಾರ್ವಜನಿಕರು ಫಿರ್ಯಾದಿದಾರರನ್ನು ಚಿಕಿತ್ಸೆ ಬಗ್ಗೆ  ಪುತ್ತೂರು ಸರಕಾರಿ  ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬಂದು,ಅಲ್ಲಿನ ವೈದ್ಯಾಧಿಕಾರಿಯವರು ಫಿರ್ಯಾದಿದಾರರಿಗೆ ಚಿಕಿತ್ಸೆ ನೀಡಿ  ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಫಿರ್ಯಾದಿದಾರರಿಗೆ ಅಪಘಾತಪಡಿಸಿದ ವಾಹನದ ಚಾಲಕನು ಅಪಘಾತ ಸ್ಥಳದಲ್ಲಿ ವಾಹನವನ್ನು ನಿಲ್ಲಿಸದೇ ವಾಹನದೊಂದಿಗೆ ಪರಾರಿಯಾಗಿದ್ದು,ಈ ಬಗ್ಗೆ ಪುತ್ತೂರು ಗ್ರಾಮಾಂತರ  ಠಾಣಾ :ಅ.ಕ್ರ 83/2022  ಕಲo:279,337ಐಪಿಸಿ ಕಲಂ 134(ಎ&ಬಿ) ಐ.ಎಮ್.ವಿ ಆಕ್ಟ್ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 1

  • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀ ರಾಮಣ್ಣಗೌಡ ಪ್ರಾಯ 73 ವರ್ಷ ತಂದೆ:ಬಾಳಪ್ಪಗೌಢ ವಾಸ:ಕೊಂಗಲಾಯ ಮನೆ, ಅನಂತಾಡಿ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾಧಿದಾರರಿಗೂ ಹಾಗೂ ಅವರ ಅಣ್ಣ ದಿ|| ಕೊಗ್ಗಣ್ಣಗೌಡರ ಮಕ್ಕಳಾದ ಪ್ರಶಾಂತ್‌ ಕೆ ಮತ್ತು ಪುಷ್ಪರಾಜರವರಿಗೂ ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದ ಕೊಂಗಲಾಯಿ ಎಂಬಲ್ಲಿರುವ ಜಮೀನಿಗೆ ಸಂಬಂದಿಸಿದಂತೆ ಗುರುತಿನ ಸಮಸ್ಯಯಿದ್ದು ಬಂಟ್ವಾಳ ಸರ್ವೇ ಇಲಾಖೆಯವರು ಬಂದು ಸರ್ವೇ ಮಾಡಿದ್ದು. ಅದರಂತೆ ದಿನಾಂಕ:11-08-2022 ರಂದು ಬೆಳಿಗ್ಗೆ ಪಿರ್ಯಾಧಿದಾರರು ತನ್ನ ಮಗ ಶಶಿಕಾಂತನೊಂದಿಗೆ ಹೋಗಿ ಸಮಯ ಸುಮಾರು 11.30 ಗಂಟೆಗೆ ಆಪಾದಿತ ಪ್ರಶಾಂತ ಪಿರ್ಯಾಧಿದಾರರು ಬೇಲಿ ಹಾಕುತ್ತಿದ್ದ ಸ್ಥಳಕ್ಕೆ ಬಂದು ಪಿರ್ಯಾಧಿಯನ್ನುದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ,ಬೇಲಿಯನ್ನು ಕಿತ್ತು ಬಿಸಾಡಿ ಪಿರ್ಯಾಧಿದಾರರು ಮುಂದೆ ಹೊಗದಂತೆ ತಡೆದು ನಿಲ್ಲಿಸಿ, ಕೈಯಿಂದ ಹೊಡೆದು ದೂಡಿ ಹಾಕಿದ ಪರಿಣಾಮ ಪಿರ್ಯಾಧಿಯ ಸೊಂಟದ ಭಾಗಕ್ಕೆ ಗುದ್ದಿದ ಗಾಯವಾಗಿರುತ್ತದೆ. ಆಪಾದಿತ ತನ್ನ ಕೈಯಲ್ಲಿದ್ದ ಕತ್ತಿಯಿಂದ ಪಿರ್ಯಾಧಿಗೆ ಕಡಿಯಲು ಬಂದಾಗ ಪಿರ್ಯಾಧಿದಾರರು ಅಲ್ಲಿಂದ ಓಡಿ ತಪ್ಪಿಸಿಕೊಂಡಿದ್ದು. ನಂತರ ಪಿರ್ಯಾಧಿ ಹಾಗೂ ಅವರ ಮಗ ಶಶಿಕಾಂತನಿಗೆ ಇನ್ನೂ ಮುಂದಕ್ಕೆ ಈ ಜಮೀನಿಗೆ ಬಂದರೆ ಕೊಂದು ಹಾಕುವುದಾಗಿ ಬೆದರಿಕೆ ಹಾಕಿರುತ್ತಾನೆ ಹಲ್ಲೆಗೊಳಗಾದ ಪಿರ್ಯಾಧಿದಾರರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 130/2022 ಕಲಂ : 341,504,323,506 ಬಾಧಂಸಂ  ಯಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 12-08-2022 10:49 AM Updated By: Dakshina Kannada District Police


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : DAKSHINA KANNADA DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080