ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

  • ಉಪ್ಪಿನಂಗಡಿ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅನಿಲ್ ಕುಮಾರ್ ಎಸ್ (32) ತಂದೆ:ಶತ್ರುಘ್ನ ವಾಸ:3930/1 ಅಣ್ಣಮ್ಮ ದೇವಸ್ಥಾನ 2ನೇ ಕ್ರಾಸ್ ಗಾಂಧಿನಗರ ಮೈಸೂರು ಎಂಬವರ ದೂರಿನಂತೆ ಫಿರ್ಯಾದಿದಾರರಾದ ಅನಿಲ್ ಕುಮಾರ್ ಎಸ್ ಪ್ರಾಯ 32 ವರ್ಷ ರವರು ಕೆ.ಎಸ್.ಆರ್.ಟಿ.ಸಿ ನಂಜನಗೂಡು ಘಟಕದಲ್ಲಿ ಚಾಲಕನಾಗಿ ಕರ್ತವ್ಯನಿರ್ವಹಿಸಿಕೊಂಡಿದ್ದು, ತನ್ನ ಬಾಬ್ತು ಕೆ.ಎಸ್.ಆರ್.ಟಿ.ಸಿ ಬಸ್ಸು ನಂ KA 10-F 0528 ನೇದರಲ್ಲಿ ನಿನ್ನೆ ದಿನಾಂಕ 10-09-2022 ರಂದು ನಂಜನಗೂಡಿನಿಂದ ಧರ್ಮಸ್ಥಳಕ್ಕೆ ಬಂದು ಸದ್ರಿ ಬಸ್ಸಿನಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಈ ದಿನ ದಿನಾಂಕ 11-09-2022 ರಂದು ಧರ್ಮಸ್ಥಳದಿಂದ ನಂಜನಗೂಡುಗೆ ಹೋಗಲು ಬೆಳಿಗ್ಗೆ 10:00 ಗಂಟೆಗೆ ಧರ್ಮಸ್ಥಳದಿಂದ ಹೊರಟು ರಾ.ಹೆದ್ದಾರಿ 75 ರ ಮಂಗಳೂರು-ಬೆಂಗಳೂರು ರಸ್ತೆಯ ಕಡಬ ತಾಲೂಕು ಶಿರಾಡಿ ಗ್ರಾಮದ ಶಿರಾಡಿ ಗಡಿ ದೇವಸ್ಥಾನದ ಸ್ವಲ್ಪ ಕೆಳಗಡೆ 11.00 ಗಂಟೆಗೆ ತಲುಪಿದಾಗ ಫಿರ್ಯಾದಿದಾರರ ಬಸ್ಸಿನ ಎದುರುಗಡೆಯಿಂದ ಅಂದರೆ ಹಾಸನ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಗ್ಯಾಸ್ ಟ್ಯಾಂಕರ್ ನಂಬ್ರ TS-07-UJ-8405 ನೇದನ್ನು ಅದರ ಚಾಲಕನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದ ಪರಿಣಾಮ ಫಿರ್ಯಾದಿದಾರರು ಚಲಾಯಿಸುತ್ತಿದ್ದ  ಕೆ.ಎಸ್.ಆರ್.ಟಿ.ಸಿ ಬಸ್ಸಿಗೆ ಢಿಕ್ಕಿಯಾಗಿ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿದ್ದ 05 ಮಂದಿ ಪ್ರಯಾಣಿಕರಿಗೆ ಸಾಮಾನ್ಯ ಸ್ವರೂಪದ ಗಾಯವುಂಟಾಗಿರುವುದ್ದಲ್ಲದೇ ಎರಡೂ ವಾಹನಗಳು ಜಖಂಗೊಂಡು ಗ್ಯಾಸ್ ಟ್ಯಾಂಕರ್ ಚಾಲಕ ಗಾಯಗೊಂಡಿರುವುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 95/2022 ಕಲಂ:279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

  • ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಹೊನ್ನಪ್ಪ ಪಿ.ಕೆ ಪ್ರಾಯ 65 ವರ್ಷ ತಂದೆ: ದಿ|| ಕುಕ್ಕ ಮಡಿವಾಳ ವಾಸ: ಮಲ್ಲಡ್ಕ ಕ್ರಾಸ್ ಮನೆ, ಅರಂತೋಡು ಅಂಚೆ ಮತ್ತು ಗ್ರಾಮ ಸುಳ್ಯ ಎಂಬವರ ದೂರಿನಂತೆ ಪಿರ್ಯಾದಿದಾರರಾದ ಹೊನ್ನಪ್ಪ ಪಿ.ಕೆ ರವರು ದಿನಾಂಕ 10.09.2022 ರಂದು ಬೆಳಿಗ್ಗೆ 07.30 ಗಂಟೆಗೆ ಹೆಂಡತಿ ಮತ್ತು ಮಗಳು, ಮೊಮ್ಮಕ್ಕಳೊಂದಿಗೆ ಕಾಸರಗೋಡಿನ ಮಲ್ಲ ದೇವಸ್ಥಾನಕ್ಕೆ ಹೋಗಿದ್ದು, ಮನೆಯಲ್ಲಿ ಪಿರ್ಯಾದಿದಾರರ ಮಗ ಕೇಶವ 33 ವರ್ಷ ಎಂಬಾತನು ಒಬ್ಬನೇ ಇದ್ದು ಈ ದಿನ ದಿನಾಂಕ 11.09.2022 ರಂದು ಬೆಳಿಗ್ಗೆ 09.00 ಗಂಟೆಗೆ ಪಿರ್ಯಾದಿದಾರರು ಮತ್ತು ಮನೆಯವರು ದೇವಸ್ಥಾನದಿಂದ ವಾಪಾಸು ಮನೆಗೆ ಬಂದು ನೋಡಿದಾಗ ಕೇಶವನು ಮನೆಯಲ್ಲಿ ಕಾಣಿಸದೇ ಇದ್ದು, ಮನೆಯ ಮೊದಲನೆ ಮಹಡಿಗೆ ಹೋಗಿ ನೋಡಿದಾಗ ಕೇಶವನು ಮನೆಯ ಬಾಲ್ಕನಿಯ ಮೇಲ್ಚಾವಣಿಯ ಹುಕ್ ಮತ್ತು ಆತನ ಕುತ್ತಿಗೆಗೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡಿದ್ದು, ಸ್ಥಳದಲ್ಲಿ ವಾಂತಿ ಮಾಡಿಕೊಂಡಿದ್ದು, ಅಲ್ಲದೇ ಯಾವುದೋ ವಿಷ ಪದಾರ್ಥ ಸೇವನೆ ಮಾಡಿದ ವಾಸನೆ ಬರುತ್ತಿತ್ತು ಅಲ್ಲದೇ  ಟೇಬಲ್ ಮೇಲೆ ಕೀಟನಾಶಕ ಔಷಧ ಕೂಡಾ ಕಂಡು ಬಂದಿದ್ದು, ಕೇಶವನು ವಿಷ ಪದಾರ್ಥವನ್ನು ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಸುಳ್ಯ ಪೊಲೀಸು ಠಾಣಾ ಯುಡಿಅರ್ ನಂಬ್ರ 38/2022 ಕಲಂ 174 ಸಿಅರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 12-09-2022 10:23 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080