Feedback / Suggestions

ಅಪಘಾತ ಪ್ರಕರಣ: ೦1

ಪುತ್ತೂರು ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ವಿಶ್ವನಾಥ ನಾಯ್ಕ ಪ್ರಾಯ 63 ವರ್ಷ, ತಂದೆ: ದಿ|| ಮೋಹನ ನಾಯ್ಕ, ವಾಸ: ಮೋಹನ್ಸ್‌ ಕಂಪೌಂಡ್‌, ನೆಹರೂನಗರ ಅಂಚೆ, ಕಬಕ ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 13-01-2023 ರಂದು 08:20 ಗಂಟೆಗೆ ಆರೋಪಿ ಮೋಟಾರ್‌ ಸೈಕಲ್‌ ಸವಾರ ಶಮಂತ್‌  ಎಂಬವರು KA-21-EC-5381 ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲನ್ನು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರು ಕಡೆಯಿಂದ ಕಬಕ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಕಬಕ ಗ್ರಾಮದ ಮಂಜಲ್ಪಡ್ಪು ಬಸ್‌ ನಿಲ್ದಾಣ ಬಳಿ ವಿವೇಕಾನಂದ ಲಾ ಕಾಲೇಜ್‌ ಎದುರು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ವಿಶ್ವನಾಥ ನಾಯ್ಕ್‌  ರವರು KA-21-W-3328ನೇ  ನೊಂದಣಿ ನಂಬ್ರದ ಸ್ಕೂಟರನ್ನು ದೂಮಾವತಿ ರಸ್ತೆ ಕಡೆಯಿಂದ ಚಲಾಯಿಸಿಕೊಂಡು ಬಂದು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಚಲಾಯಿಸಲು ನಿಲ್ಲಿಸಿದ್ದ ಸ್ಕೂಟರಿಗೆ ಮೋಟಾರ್‌ ಸೈಕಲ್‌ ಅಪಘಾತವಾಗಿ ಪಿರ್ಯಾದುದಾರರು ಸ್ಕೂಟರ್‌ ಸಮೇತ ರಸ್ತೆಗೆ ಬಿದ್ದು, ಪಿರ್ಯಾದುದಾರರ ಬಲಕಾಲಿನ ಪಾದಕ್ಕೆ, ಬಲ ಕೈ ಕಿರುಬೆರಳಿಗೆ ಗುದ್ದಿದ ಹಾಗೂ ರಕ್ತಗಾಯವಾಗಿ  ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ.  ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 06/2023 ಕಲಂ: 279, 337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: ೦2

 

ಉಪ್ಪಿನಂಗಡಿ  ಪೊಲೀಸ್ ಠಾಣೆ : ಪಿರ್ಯಾದಿದಾರರಾದ ನಿಶಾಂತ್ ಶೆಟ್ಟಿ ಪ್ರಾಯ 16 ವರ್ಷ,  ತಂದೆ: ಕಿಶೋರ್ ಕುಮಾರ್,   ವಾಸ: ಸಮೃದ್ದಿ ಮನೆ, ಮಲರಾಯ ದೈವಸ್ಥಾನದ ಹತ್ತಿರ   ಚಿಲಿಂಬಿ ಮಂಗಳೂರು, ಎಂಬವರ ದೂರಿನಂತೆ ಪಿರ್ಯಾದಿದಾರರ ತಂದೆ ಕಿಶೋರ್ ಕುಮಾರ್ ರವರು ಚಾಲಕ ವೃತ್ತಿಮಾಡಿಕೊಂಡಿದ್ದು, ಅವರು ಸುಮಾರು 4 ವರ್ಷಗಳಿಂದ ಮಂಗಳೂರಿನ ಶ್ರೀ ಆದಿನಾಥೇಶ್ವರ ರೋಡ್ ಲೈನ್ಸ್ ಟ್ಯಾಂಕರ್ ಕಂಪೆನಿಯಲ್ಲಿ  ಚಾಲಕರಾಗಿದ್ದು, ದಿನಾಂಕ 09-01-2023 ರಂದು ರಾತ್ರಿ ವೇಳೆ ಕೆಎ 19 ಎಬಿ 4811 ನೇ ನಂಬ್ರದ ಟ್ಯಾಂಕರ್ ಗೆ ಲೋಡ್ ಮಾಡಿಕೊಂಡು ಮಂಗಳೂರಿನಿಂದ ಬೆಂಗಳೂರಿಗೆ ಹೋಗಿದ್ದವರು ದಿನಾಂಕ 12-01-2023 ರಂದು ಬೆಂಗಳೂರಿನಿಂದ ವಾಪಾಸು ಬರುತ್ತಿರುವಾಗ ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಬೊಳ್ಳಾರ ಎಂಬಲ್ಲಿಗೆ ತಲುಪಿದಾಗ ಸಮಯ ಸಂಜೆ ಸುಮಾರು 5.00 ಗಂಟೆಗೆ ಹಠಾತ್ತಾಗಿ ಕುಸಿದು ಕುಳಿತಿದ್ದು, ಅವರನ್ನು ಚಿಕಿತ್ಸೆಯ ಬಗ್ಗೆ ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಗೆ ಕೊಂಡುಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮೇಲ್ದರ್ಜೆಯ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು, ಅದರಂತೆ ಅಂಬ್ಯುಲೆನ್ಸ್ ನಲ್ಲಿ ಮಂಗಳೂರಿನ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಪಿರ್ಯಾದಿದಾರರ ತಂದೆಯವರು ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಯುಡಿಆರ್ ನಂಬ್ರ 04/2023 ಕಲಂ:174   ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಬಂಟ್ವಾಳ ನಗರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಬಾಲರಾಜ್ ಪ್ರಾಯ 30 ವರ್ಷ ತಂದೆ: ದಿ ಲಕ್ಷಣ ಪೂಜಾರಿ ವಾಸ: ಗಾಣದಪಾಳು ಮನೆ ಬರಿಮಾರು ಗ್ರಾಮ ಬಂಟ್ವಾಳ ತಾಲೂಕು   ಎಂಬವರ ದೂರಿನಂತೆ ಸದ್ರಿಯವರ  ಅಜ್ಜನಾದ ಮೋನಪ್ಪ ಪೂಜಾರಿ ಪ್ರಾಯ 65 ವರ್ಷ ಇವರು ಅಜೆಕಲ್ ಮನೆ ಅಮ್ಟಾಡಿ ಗ್ರಾಮ ಬಂಟ್ವಾಳ ತಾಲೂಕು ಎಂಬಲ್ಲಿ ವಾಸವಾಗಿರುತ್ತಾರೆ. ಸುಮಾರು 10 ವರ್ಷಗಳಿಂದ ಸರಿಯಾಗಿ ಮನೆಗೆ ಹೋಗದೇ ಬಂಟ್ವಾಳ ಪೇಟೆ ಆಸುಪಾಸಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಬಂದ ಹಣದಿಂದ ವಿಪರೀತ ಮಧ್ಯಪಾನ ಮಾಡಿ ರಾತ್ರಿ ಸಮಯ ರಸ್ತೆಯ ಬದಿಯ ಅಂಗಡಿಗಳಲ್ಲಿ ಮಲಗುತ್ತಿದ್ದರು. ಹಾಗೂ ಹಗಲು ಸಮಯ ಲೆವಿನ್ ಇಂಡಸ್ಟೀಜ್ ರವರ ಬಾಬ್ತು ಕೆಲಸಗಾರರ ಕಟ್ಟಡದ ಜಗುಲಿಯಲ್ಲಿ ವಿಶ್ರಾಂತಿ ಪಡಯುತ್ತಿದ್ದರು. ದಿನಾಂಕ 13-01-2023 ರಂದು ಬೆಳಿಗ್ಗೆ 12.30 ಗಂಟೆಗೆ ಫಿರ್ಯಾದಿದಾರರ ಪರಿಚಯದ ವಿಕ್ರಮ್ ರವರು ಕರೆ ಮಾಡಿ ಅಮ್ಟಾಡಿ ಗ್ರಾಮದ ಅಜೆಕಲ್ ಎಂಬಲ್ಲಿರುವ ಲೆವಿನಾ ರೋಡ್ರಿಗಸ್ ರವರ ಜಮೀನಿನಲ್ಲಿ ಕುತ್ತಿಗೆಗೆ ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 02-2023 ಕಲಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 14-01-2023 11:51 AM Updated By: Dakshina Kannada District Police


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : DAKSHINA KANNADA DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080