Feedback / Suggestions

ಅಪಘಾತ ಪ್ರಕರಣ: 3

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಕಿಶೋರ್ ಪೂಜಾರಿ ಪ್ರಾಯ : 41 ವರ್ಷ, ತಂದೆ: ದಿ|| ದೇಜಪ್ಪ ವಾಸ: ಕಿನ್ನಿಬೆಟ್ಟು ಮನೆ  ಮತ್ತು ಅಂಚೆ,  ಅಮ್ಟಾಡಿ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 13-5-2022 ರಂದು ತನ್ನ ಬಾಬ್ತು ಸ್ಕೂಟರಿನಲ್ಲಿ ಅಮ್ಟಾಡಿ ಗ್ರಾಮದ ಬಡಾಜೆ ಎಂಬಲ್ಲಿ ಯಕ್ಷಗಾನ ನೋಡಿ ವಾಪಾಸು ಮನೆ ಕಡೆಗೆ ಬರುತ್ತಾ ಸಮಯ ಸುಮಾರು 22:00 ಗಂಟೆಗೆ ಬಂಟ್ವಾಳ ತಾಲೂಕು ಅಮ್ಟಾಡಿ ಗ್ರಾಮದ ಕೆಂಪು ಗುಡ್ಡೆ ಎಂಬಲ್ಲಿಗೆ ತಲುಪಿದಾಗ ಪಿರ್ಯಾದಿದಾರರ ಮುಂದಿನಿಂದ ಹೋಗುತ್ತಿದ್ದ KA-19-EL-9023 ನೇ ಸ್ಕೂಟರಿಗೆ ಬಂಟ್ವಾಳ ಕಡೆಯಿಂದ ಬರುತ್ತಿದ್ದ KA-19-MG-4736 ನೇ ಕಾರನ್ನು ಅದರ ಸವಾರ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ಸ್ಕೂಟರ್ ಸವಾರ ನಿತೇಶ್ ಶೆಟ್ಟಿಯವರಿಗೆ ಮೈಕೈಗೆ ತರಚಿದ ಗಾಯವಾಗಿದ್ದವರು ಮಂಗಳೂರು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಹೊರರೋಗಿಯಾಗಿಯೂ,  ಸಹಸವಾರ ಮುರಳೀಧರ ಶೆಟ್ಟಿಯವರ ಬಲತೊಡೆ, ಬಲ ಕಾಲಿನ ಪಾದಕ್ಕೆ, ಬಲ ಸೊಂಟಕ್ಕೆ ಗುದ್ದಿದ ಹಾಗೂ ರಕ್ತಗಾಯವಾಗಿದ್ದವರು ಚಿಕಿತ್ಸೆ ಬಗ್ಗೆ ಒಳರೋಗಿಯಾಗಿ ದಾಖಲಾಗಿರುವುದಾಗಿದೆ..ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ 53/2022 ಕಲಂ 279,337ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುಂಜಾಲಕಟ್ಟೆ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರಮ್ಲ ಪ್ರಾಯ 48 ವರ್ಷ ತಂದೆ: ಅಹಮ್ಮದ್ ಬ್ಯಾರಿ ವಾಸ: ಸಬರಬೈಲು ಮನೆ, ಸೋಣಂದೂರು ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ: 13.05.2022 ರಂದು ವಾಮದಪದವು ಪಾಲೆದಮರ ಎಂಬಲ್ಲಿರುವ  ತನ್ನ ಸಂಬಂದಿಕರ ಮನೆಗೆ ಹೋದವರು ವಾಪಾಸು ಮನೆಗೆ ಹೋಗುವ ಸಲುವಾಗಿ 13.45 ಗಂಟೆಗೆ ಬಂಟ್ವಾಳ ತಾಲೂಕು ಚೆನೈತ್ತೋಡಿ ಗ್ರಾಮದ ವಾಮದಪದವು ಪಾಲೆದಮರ ಎಂಬಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ತನ್ನ ಸ್ಕೂಟರ್‌ ಹತ್ತಿರ ಬರುತ್ತಿರುವಾಗ  ಫಿರ್ಯಾಧಿದಾರರ ಸಂಬಂಧಿ  ಅಬೂಬಕ್ಕರ್‌ ಯು.ಪಿ ರವರ ಮಗ ಕೆ ಐದ್ರೋಸ್ ಮಹಮ್ಮದ್ ಅಪ್ರೀನ್ ಎಂಬಾತನು ರಸ್ತೆ ದಾಟಲು ನಿಂತುಕೊಂಡಿದ್ದು, ಅದೇ ಸಮಯಕ್ಕೆ ಸ್ಕೂಟರ್‌ KA19HA8168 ನೇದನ್ನು ಅದರ ಸವಾರ ಅಬ್ದುಲ್‌ ಖಾದರ್‌ ಎಂಬಾತನು ಕುದ್ಕೋಳಿ ಕಡೆಯಿಂದ ವಾಮದಪದವು ಕಡೆಗೆ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು  ರಸ್ತೆ ಬದಿಯ ಕಚ್ಚಾ ಮಣ್ಣು ರಸ್ತೆಯಲ್ಲಿ ನಿಂತುಕೊಂಡಿದ್ದ ಕೆ ಐದ್ರೊಸ್‌ ಮಹಮ್ಮದ್‌ ಅಪ್ರೀನ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆತ ಅಲ್ಲಿಯೇ ಕುಸಿದು  ಬಿದ್ದಿದ್ದು ಫಿರ್ಯಾಧಿದಾರರು ಹಾಗೂ ಇತರರು ಆತನನ್ನು ಮೇಲಕ್ಕೆತ್ತಿ ಉಪಚರಿಸಿ ಆರೈಕೆ ಮಾಡಿದ್ದು, ಅಪಘಾತದಿಂದ ಕೆ ಐದ್ರೊಸ್‌ ಮಹಮ್ಮದ್‌ ಅಪ್ರೀನ್‌ನ  ಬಲಕೈಯ ಭುಜದ ಬಳಿ ಗುದ್ದಿದ ರೀತಿಯಲ್ಲಿ ಗಾಯವಾಗಿದ್ದು, ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 32/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರಾಝೀಯಾ ಯಂ, ಪ್ರಾಯ: 24 ವರ್ಷ, ಗಂಡ: ಮಹಮ್ಮದ್ ಅಶ್ರಫ್ ಐ, ವಾಸ: ಅಡ್ಕಾರು ಮನೆ, ಜಾಲ್ಸೂರು ಗ್ರಾಮ, ಸುಳ್ಯ ಎಂಬವರ ದೂರಿನಂತೆ ದಿನಾಂಕ: 14.05.2022 ರಂದು ಪಿರ್ಯಾದಿದಾರರು ಮತ್ತು ಅವರ ಗಂಡ ಮಹಮ್ಮದ್‌ ಅಶ್ರಪ್‌ ಎಂಬವರೊಂದಿಗೆ ಮೋಟಾರ್‌ ಸೈಕಲ್‌ ನಂಬ್ರ KA21EB6924 ನೇದರಲ್ಲಿ ಸುಳ್ಯದಿಂದ ಪುತ್ತೂರು ಕಡೆಗೆ ಮಾಣಿ - ಮೈಸೂರು ಹೆದ್ದಾರಿಯಲ್ಲಿ ಹೋಗುತ್ತಾ ಸಮಯ ಸುಮಾರು 14:00 ಗಂಟೆಗೆ ಸುಳ್ಯ ತಾಲೂಕು ಜಾಲ್ಸೂರು ಗ್ರಾಮದ ಮಾವಿನಕಟ್ಟೆ ಎಂಬಲ್ಲಿಗೆ ತಲುಪುತ್ತಿದ್ದಂತೆ ಪಿರ್ಯಾದಿದಾರರು ಪ್ರಯಾಣಿಸುತ್ತಿದ್ದ  ಮೋಟಾರ್‌ ಸೈಕಲಿನ ಹಿಂದಿನಿಂದ ಬರುತ್ತಿದ್ದ ಕೆಂಪುಕಲ್ಲು ಸಾಗಾಟ ಮಾಡುವ ವಾಹನದ ಚಾಲಕ ತನ್ನ ಬಾಬ್ತು ವಾಹನವನ್ನು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಮತ್ತು ಅವರ ಗಂಡ ಪ್ರಯಾಣಿಸುತ್ತಿದ್ದ ಮೋಟಾರ್‌ ಸೈಕಲ್‌ನ್ನು ಓವರ್‌ಟೇಕ್‌ ಮಾಡಲು ಪ್ರಯತ್ನಿಸಿ ಮೋಟಾರ್‌ ಸೈಕಲಿಗೆ ಡಿಕ್ಕಿಯುಂಟು ಮಾಡಿದ ಪರಿಣಾಮ ಪಿರ್ಯಾದಿದಾರರು ಮತ್ತು ಅವರ ಗಂಡ ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಎಸೆಯಲ್ಪಟ್ಟು, ಪಿರ್ಯಾದಿದಾರರ ತಲೆಗೆ ಗುದ್ದಿದ ಗಾಯ ಹಾಗೂ ಶರೀರದ ಇತರ ಕಡೆಗಳಿಗೆ ತರಚಿದ ಗಾಯ ಮತ್ತು ಪಿರ್ಯಾದಿದಾರರ ಗಂಡನ ಎಡಕೈ ಮುಂಗೈಗೆ, ಬಲಕಣ್ಣಿನ ಬಳಿ ರಕ್ತಗಾಯ ಹಾಗೂ ಕಾಲುಗಳಿಗೆ ತರಚಿದ ಗಾಯಗಳಾಗಿದ್ದು, ಸದ್ರಿಯವರನ್ನು ಅಲ್ಲಿ ಸೇರಿದ ಸ್ಥಳೀಯರು ಉಪಚರಿಸಿ ಚಿಕಿತ್ಸೆಯ ಬಗ್ಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಅಲ್ಲಿನ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಸುಳ್ಯ ಕೆ.ವಿಜಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು,.ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಅ.ಕ್ರ 52/2022 ಕಲಂ: 279, 337 ಐಪಿಸಿ ಮತ್ತು ಕಲಂ: 134(A) & (B) IMV Act ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

  • ಧರ್ಮಸ್ಥಳ ಪೊಲೀಸ್ ಠಾಣೆ : ದಿನಾಂಕ: 14-05-2022 ರಂದು  ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ .ಕ್ರ 37-2022  ಕಲಂ : 341, 323 ಐ ಪಿ ಸಿ ಮತ್ತು 3 (1) (r) (s), 3(2) (va) ಎಸ್ ಸಿ ಎಸ್ ಟಿ ಆಕ್ಟ್ 2015  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ಳಾರೆ ಪೊಲೀಸ್ ಠಾಣೆ : ದಿನಾಂಕ  14.05.2022 ರಂದು ಬೆಳ್ಳಾರೆ ಪೊಲೀಸ್ ಠಾಣೆ 43/2022 5,7,12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧ್ಯಾದೇಶ 2020ಯಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 16-05-2022 10:29 AM Updated By: Dakshina Kannada District Police


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : DAKSHINA KANNADA DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080