ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

 

ಪುತ್ತೂರು ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಮಹಮ್ಮದ್‌ ಸಿರಾಜ್‌, ಪ್ರಾಯ 33 ವರ್ಷ, ತಂದೆ: ಅಬ್ದುಲ್‌ ರಹಿಮಾನ್‌, ವಾಸ: ಮಣಿಯ ಮನೆ, ಮುಕ್ವೆ,  ನರಿಮೊಗರು ಗ್ರಾಮ & ಅಂಚೆ, ಪುತ್ತೂರು ತಾಲೂಕು ರವರು ನೀಡಿದ ದೂರೇನೆಂದರೆ ದಿನಾಂಕ 14-02-2021 ರಂದು ಆರೋಪಿ ಮೋಟಾರ್‌ ಸೈಕಲ್‌ ಸವಾರ ಖಲಂದರ್‌ ಶಾಫಿ ಎಂಬವರು  KA-21-K-7892 ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲ್‌ನ್ನು ಸುಬ್ರಹ್ಮಣ್ಯ-ಪುತ್ತೂರು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಮುಕ್ವೆ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಕೊಂಡು ಹೋಗಿ ಪುತ್ತೂರು ತಾಲೂಕು ಕೆಮ್ಮಿಂಜೆ ಗ್ರಾಮದ ಕಾಡುಮನೆ ಎಂಬಲ್ಲಿ ತಿರುವು ರಸ್ತೆಯಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಅದರಲ್ಲಿ ಸಹಸವಾರೆಯಾಗಿದ್ದ ಫಾತಿಮತ್‌ ಜೊಹರಾರವರು ರಸ್ತೆಗೆ ಬಿದ್ದು, ತಲೆಗೆ ಗಾಯಗೊಂಡವರನ್ನು  ಚಿಕಿತ್ಸೆ ಬಗ್ಗೆ ಮಂಗಳೂರು ಫಸ್ಟ್‌ ನ್ಯೂರೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಿರ್ಯಾದುದಾರರು ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  33/2021 ಕಲಂ: 279, 337 ಐಪಿಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಮಂಜಪ್ಪ ಹೆಚ್‌,ಅರ್ ಪ್ರಾಯ 35 ವರ್ಷ ತಂದೆ: ರಾಮಚಂದ್ರಪ್ಪ ಹೆಚ್‌ ವಾಸ: ಹಂಪನೂರು ಗ್ರಾಮ ಮತ್ತು ಅಂಚೆ ಬರಮ ಸಾಗರ ಹೋಬಳಿ ಚಿತ್ರದುರ್ಗ ಹಾಲಿ ವಾಸ: ಪಿಡಬ್ಲ್ಯೂಡಿ ಕ್ವಾರ್ಟಸ್ ನೆಲ್ಲಿಕಟ್ಟೆ ಪುತ್ತೂರು ರವರು ದಿನಾಂಕ 15.02.2021 ರಂದು ಬಲ್ನಾಡು ಶಾಲೆಗೆ ತನ್ನ ಬಾಬ್ತು ಮೋಟಾರ್ ಸೈಕಲ್ ನಂಬ್ರ ಕೆಎ-21-ಈಎ-0933 ನೇದರಲ್ಲಿ  ಪುತ್ತೂರು ಕಡೆಯಿಂದ ಬಲ್ನಾಡು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಹೋಗುತ್ತಿದ್ದ ಸಮಯ ಪುತ್ತೂರು ತಾಲೂಕು ಬಲ್ನಾಡು ಗ್ರಾಮದ ಪಳ್ಳತ್ತಾರು ತಾನ-ಯಾನ ಬಸ್‌ ನಿಲ್ದಾಣದ ಬಳಿ ತಲುಪಿದಾಗ ಸುಂಕದ ಮೂಲೆ ಒಳರಸ್ತೆಯಿಂದ ಪಿಕಪ್ ವಾಹನ ನಂಬ್ರ ಕೆಎ-21-ಎ-6277 ನೇದನ್ನು ಅದರ ಚಾಲಕ ಇರ್ಷಾದ್ ಎಂಬವರು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರು ಚಲಾಯಿಸುತ್ತಿದ್ದ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದುದರಿಂದ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದವರನ್ನು  ಪಿಕಪ್ ಚಾಲಕರು ಮತ್ತು ಅಲ್ಲೇ ಹೋಗುತ್ತಿದ್ದ ನಾರಾಯಣ ನಾಯ್ಕ್‌ ರವರು ಎಬ್ಬಿಸಿ ಉಪಚರಿಸಿ ನೋಡಲಾಗಿ ಎಡಕೈ ಮೊಣಗಂಟಿಗೆ ಗುದ್ದಿದ ಗಾಯ ಹಾಗೂ ಇತರ ಕಡೆಗಳಿಗೆ ಗುದ್ದಿದ ಮತ್ತು ತರಚಿದ ಗಾಯವಾದವರನ್ನು ಚಿಕಿತ್ಸೆ ಬಗ್ಗೆ ಅದೇ ಪಿಕಪ್‌ನಲ್ಲಿ ಪುತ್ತೂರು ಮಹಾವೀರ ಆಸ್ಪತ್ರೆಗೆ ಕರೆ ತಂದಲ್ಲಿ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿದ್ದಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆ ಆ.ಕ್ರ 15/21 ಕಲಂ: 279,337  ಐ.ಪಿ.ಸಿ  ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವೇಣೂರು ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಇಬ್ರಾಹಿಂ ( 33) ತಂದೆ: ಯೂಸುಪ್ ಶಾಪಿವಾಸ: ಗೋಳಿಯಂಗಡಿ ಮನೆ  ,ಕುಕ್ಕೇಡಿ   ಗ್ರಾಮ  ಬೆಳ್ತಂಗಡಿ ತಾಲೂಕು ರವರು ದಿನಾಂಕ: 15-02-2021 ರಂದು ಸಂಜೆ ಅಗತ್ಯ  ಕೆಲಸದ ಬಗ್ಗೆ  ಅವರ ಬಾಬ್ತು ದ್ವಿ ಚಕ್ರ ವಾಹನದಲ್ಲಿ ಆಸೀಪ್ ರವರನ್ನು ಹಿಂಬದಿ ಸವಾರರನ್ನಾಗಿ ಕೂರಿಸಿಕೊಂಡು ಗೊಳಿಯಂಗಡಿಯಿಂದ ಗುರುವಾಯನಕೆರೆಗೆ ಹೋಗುವರೇ ಮೂಡುಬಿದ್ರೆ- ಗುರುವಾಯನಕೆರೆ  ಹೆದ್ದಾರಿ  ರಸ್ತೆಯಲ್ಲಿ ಹೋಗುತ್ತಾ  ಬೆಳ್ತಂಗಡಿ   ತಾಲೂಕು  ಕುಕ್ಕೇಡಿ  ಗ್ರಾಮದ ಕುಂಡದಬೆಟ್ಟು ಮಸೀದಿ ಬಳಿ ತಲುಪುವಾಗ್ಗೆ ಪಿರ್ಯಾದಿದಾರರ ಎದುರಿನಿಂದ ಪರಿಚಯದ ಮಹಮ್ಮದ್ ಸಾದೀಕ್ ರವರು ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಕೆಎ 70 ಇ 4821  ನೇ ದ್ವಿ ಚಕ್ರ ಈ ವಾಹನಕ್ಕೆ ಗುರುವಾಯನಕೆರೆ ಕಡೆಯಿಂದ  ಚಲಾಯಿಸಿಕೊಂಡು ಬರುತ್ತಿದ್ದ  ಕೆಎ 19 350 ನೇ ಟ್ಯಾಂಕರ್ ನ್ನು  ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ  ಚಲಾಯಿಸಿಕೊಂಡು ರಸ್ತೆಯ ಬಲಬದಿಗೆ ಬಂದು ಮಹಮ್ಮದ್ ಸಾದೀಕ್ ರವರು ಚಲಾಯಿಸಿಕೊಂಡು ಹೋಗುತ್ತಿದ್ದ   ದ್ವಿ ಚಕ್ರ  ವಾಹನಕ್ಕೆ ಡಿಕ್ಕಿ  ಹೊಡೆದ   ಪರಿಣಾಮವಾಗಿ  ದ್ವಿ ಚಕ್ರ ವಾಹನ ಸಮೇತ ಮಹಮ್ಮದ್ ಸಾದಿಕ್ ರವರು  ರಸ್ತೆಗೆ ಬಿದ್ದಿದ್ದು ಹೊಟ್ಟೆ ಮತ್ತು ಸೊಂಟಕ್ಕೆ ತೀವ್ರ ಜಖಂ ಗೊಂಡ ಗುದ್ದಿದ್ದ ಗಾಯ ಆಗಿದ್ದು  ಆತನನ್ನು  ಉಪಚರಿಸಿ ಕೂಡಲೇ  108 ನೇ ಅಂಬ್ಯುಲೆನ್ಸ್ ನ್ನು ಮೂಡುಬಿದ್ರೆ ಆಳ್ವಾಸ್ ಆಸ್ಪತ್ರೆಗೆ ಕರೆದುಕೊಂಡು  ಬಂದಾಗ ವೈದ್ಯರು ಪರೀಕ್ಷಿಸಿ  ಮಹಮ್ಮದ್ ಸಾದೀಕ್  ಮೃತಪಟ್ಟಿರುವ ಬಗ್ಗೆ ತಿಳಿಸಿರುವುದಾಗಿದೆ.  ಈ ಬಗ್ಗೆ ವೇಣೂರು ಠಾಣಾ ಅ.ಕ್ರ : 09-2021 ಕಲಂ : 279, 304 (ಎ) ಐ ಪಿ ಸಿ  ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಬೇಬಿ ಪ್ರಾಯ 31 ವರ್ಷ ತಂದೆ  ಬಾಬು ಪರನೀರು ಮನೆ ನಾವೂರು ಗ್ರಾಮ ಬಂಟ್ವಾಳ ತಾಲೂಕು  ರವರ ತಮ್ಮ ಹರೀಶ್ ( ಪ್ರಾಯ 29 ವರ್ಷ ) ರವರು ತೆಂಗಿನ ಕಾಯಿ ಕೀಳುವ ಕೆಲಸಕ್ಕೆ ಹೋಗುತ್ತಿದ್ದು ದಿನಾಂಕ 14.02.2021 ರಂದು ಮೃತ ಹರೀಶನು ತೆಂಗಿನ ಕಾಯಿ ಕೀಳಲೆಂದು  ಕಾವಳಪಡೂರು ಗ್ರಾಮ ಪಚ್ಚಾಜೆ ಗಂಗಯ್ಯ ಎಂಬುವರ ಮನೆಗೆ ಹೋಗಿದ್ದು  ಸಮಯ 11.45 ಗಂಟೆಗೆ ತೆಂಗಿನ ಕಾಯಿ ತೆಗೆಯುವ ಸಮಯ ಆಕಸ್ಮಿಕವಾಗಿ  ಕೈ ಜಾರಿ ಮೇಲಿನಿಂದ ಕೆಳಗೆ ಬಿದ್ದು ಗಾಯಗೊಂಡಿದ್ದವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ  ಹೆಚ್ಚಿನ ಚಿಕಿತ್ಸೆ ಬಗ್ಗೆ  ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ  ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದು  ಅದರಂತೆ ವೆನ್ಲಾಕ್ ಆಸ್ಪತ್ರೆಯ  ತುರ್ತು ಚಿಕಿತ್ಸಾ ಘಟಕದಲ್ಲಿ  ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದವನು  ದಿನಾಂಕ 14.02.2021 ರ ರಾತ್ರಿ  11.45 ಗಂಟೆಗೆ ಚಿಕಿತ್ಸೆ ಫಲಕಾರಿಯಾದಗೇ ಮೃತಪಟ್ಟಿರುವುದಾಗಿದೆ . ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಯುಡಿಆರ್ ನಂ 06/2021 ಕಲಂ 174   ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವೇಣೂರು ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಸುಕೇಶ್ (28)  ತಂದೆ: ಸುಂದರ ಶೆಟ್ಟಿ   ವಾಸ: ಕುತ್ಯಾರು ಮನೆ ಸುಲ್ಕೇರಿ ಗ್ರಾಮ ಮತ್ತು ಅಂಚೆ ಬೆಳ್ತಂಗಡಿ ತಾಲೂಕು ರವರ ತಂದೆ ಸುಂದರ ಶೆಟ್ಟಿ (60) ರವರು  ದಿನಾಂಕ: 15.02.2021 ರಂದು ಬೆಳಗ್ಗಿನಿಂದ ಅವರ ಜಮೀನಿನಲ್ಲಿರುವ ಮರದಿಂದ ಕರಿಮೆಣಸು ಕೊಯ್ಯುವ ಕೆಲಸವನ್ನು ಮಾಡಿಕೊಂಡಿದ್ದವರು.  ಮದ್ಯಾಹ್ನ 12.15 ಗಂಟೆಗೆ ಮನೆಯ ಸಮೀಪದ ಮರದಿಂದ ಕರಿಮೆಣಸು ಕೊಯ್ಯುವ ವೇಳೆ ಆಕಸ್ಮಿಕವಾಗಿ ಮರದಿಂದ ಕೆಳಗೆ ಬಿದ್ದಿದ್ದು, ಪರಿಣಾಮ ಬೆನ್ನಿಗೆ ಮತ್ತು ಸೊಂಟಕ್ಕೆ ಹಾಗೂ ಕಣ್ಣಿನ ಬಳಿಗೆ  ಗಾಯಗೊಂಡವರನ್ನು ಫಿರ್ಯಾದಿದಾರರು , ಅವರ ನೆರೆಯ ಜಗನ್ನಾಥ ಮತ್ತು ಬಾಲಕೃಷ್ಣ ಎಂಬವರು ಸೇರಿ  ಸುಂದರ ಶೆಟ್ಟಿರವರನ್ನು ಬದ್ಯಾರು ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿ ವೈದ್ಯರು ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಅಲ್ಲಿಂದ ಅಂಬುಲೆನ್ಸ್ ನಲ್ಲಿ ಮಂಗಳೂರು ಎ ಜೆ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿ ಪರೀಕ್ಷಿಸಿದ ವೈದ್ಯರು ಸುಂದರ ಶೆಟ್ಟಿರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.  ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಯು ಡಿಆರ್ ನಂಬ್ರ: 06-2021 ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 16-02-2021 01:26 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080