ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಜಗದೀಶ (51) ವರ್ಷ.ತಂದೆ: ದಿ|| ಜಾರಪ್ಪ ಪೂಜಾರಿ.ವಾಸ: ಸಣ್ಣಬೈಲು  ಮನೆ,ಇರಾ ಗ್ರಾಮ ಮತ್ತು ಅಂಚೆ, ಬಂಟ್ವಾಳ  ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 15-10-2022 ರಂದು ತನ್ನ ಬಾಬ್ತು ಆಟೋರಿಕ್ಷಾದಲ್ಲಿ ಮೆಲ್ಕಾರ್ ಕಡೆಯಿಂದ ಮಂಚಿ ಕಡೆಗೆ ಹೋಗುತ್ತ ಸಮಯ ಸುಮಾರು ಮಧ್ಯಾಹ್ನ 12:00 ಗಂಟೆಗೆ ಬಂಟ್ವಾಳ ತಾಲೂಕು ಸಜಿಪಮೂಡ ಗ್ರಾಮದ ಕಾರಾಜೆ ಎಂಬಲ್ಲಿಗೆ ತಲುಪುತ್ತಿದಂತೆ ಪಣೋಲಿಬೈಲು ಕಡೆಯಿಂದ KA-19-ML-4986 ಕಾರನ್ನು ಅದರ ಚಾಲಕ ಅಬ್ದುಲ್ ಖಾದರ್ ರವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮುಂದಿನಿಂದ ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-19-EL-2144 ಸ್ಕೂಟರಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಸ್ಕೂಟರ್ ಸವಾರ ಎಸೆಯಲ್ಪಟ್ಟು ರಸ್ತೆಗೆ ಬಿದ್ದಿದ್ದು, ಪಿರ್ಯಾದಿದಾರರು ನೋಡಲಾಗಿ ಅವರಿಗೆ ಪರಿಚಯದ ಹರೀಶ್ ಎಂಬವರಾಗಿದ್ದು ಬಲ ಕಾಲು ಮೊಣಗಂಟಿಗೆ ಗುದ್ದಿದ ಹಾಗೂ ತರಚಿದ ಗಾಯ, ಎಡ ಕೈಗೆ ಗುದ್ದಿದ ಹಾಗೂ ತರಚಿದ ಗಾಯ, ಹಣೆಗೆ ಗುದ್ದಿದ ಹಾಗೂ ತರಚಿದ ಗಾಯ, ಹೊಟ್ಟೆಗೆ ಗುದ್ದಿದ ನೋವಾದವರನ್ನು ಪಿರ್ಯಾದಿದಾರರು ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಗಾಯಾಳು ಹರೀಶ್ ರವರು ಕಲ್ಲಡ್ಕ ಪುಷ್ಪರಾಜ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಅ.ಕ್ರ 118/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಉಮೇಶ್‌ (42), ತಂದೆ: ಮೊಂಟ, ರೆಂಕೆದಗುತ್ತು ಮನೆ, ಬೆಳ್ತಂಗಡಿ ಕಸ್ಬಾ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ಮತ್ತು ಅವರ ಪತ್ನಿ ಮೋಹಿನಿಯವರೊಂದಿಗೆ ದಿನಾಂಕ:14-10-2022 ರಂದು ಸಂಜೆ 6.00 ಗಂಟೆಗೆ ಬೆಳ್ತಂಗಡಿ ತಾಲೂಕು ಕಸ್ಬಾ ಗ್ರಾಮದ ದೇವಿ ಪ್ರಸಾದ್‌ ಹೋಟೆಲ್‌ ಬೆಳ್ತಂಗಡಿ ಇದರ ಮುಂಬಾಗದ ರಸ್ತೆ ಬದಿಯಲ್ಲಿ ರಸ್ತೆ ದಾಟಲು ನಿಂತುಕೊಂಡಿರುವ  ಸಮಯ ಬೆಳ್ತಂಗಡಿ ಕಡೆಯಿಂದ ಗುರುವಾಯನಕೆರೆ ಕಡೆಗೆ ಕೆಎ 70 ಎಸ್‌ 2390 ನೇ ಮೋಟಾರು ಸೈಕಲ್‌ನ್ನು ಅದರ ಸವಾರ ದುಡುಕುತನದಿಂದ ತೀರ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಮತ್ತು ಅವರ ಪತ್ನಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ಬಲಕೋಲು ಕಾಲಿಗೆ ಮೂಳೆ ಮುರಿತದ ಗಾಯ, ಬಲಕಣ್ಣಿನ ಹುಬ್ಬಿನ ಬಳಿ ರಕ್ತಗಾಯ, ಅವರ ಪತ್ನಿ ಮೋಹಿನಿಯವರಿಗೆ ಬಲ ಕೈ ತಟ್ಟಿಗೆ ರಕ್ತಗಾಯ, ಎಡ ಕೈ ಭುಜದ ಬಳಿ ಗುದ್ದಿದ ನಮೋನೆಯ ಗಾಯವಾಗಿರುತ್ತದೆ, ಗಾಯಳುಗಳು ಉಜಿರೆ ಬೆನಕ ಆಸ್ಪತೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ .ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 123/2022 ಕಲಂ; 279,337, 338 ಭಾದಂಸಂ. & ಆರ್‌ ಆರ್‌ ರೂಲ್‌ 7  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

  • ಬಂಟ್ವಾಳ ನಗರ ಪೊಲೀಸ್ ಠಾಣೆ  ದಿನಾಂಕ:15-10-2022 ರಂದು ಬೆಳಿಗ್ಗೆ 4.45 ಗಂಟೆಗೆ : ಕಲೈಮಾರ್.ಪಿ,  ಪಿಎಸ್ಐ-1 (ತನಿಖೆ) ಬಂಟ್ವಾಳ ನಗರ ಪೊಲೀಸ್ ಠಾಣೆ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಮಾಣಿ ಕಡೆಯಿಂದ ಕೇರಳ ಕಡೆಗೆ ಅಕ್ರಮವಾಗಿ ದನ ಸಾಗಾಟ ಮಾಡುವುದಾಗಿ ಬಂದ ಮಾಹಿತಿಯಂತೆ ಕಲ್ಲಡ್ಕ ಕಡೆಯಿಂದ ದಾಸಕೋಡಿ ಕಡೆಗೆ ಹೋಗುತ್ತಿದ್ದಂತೆ ಗೋಳ್ತಮಜಲು ಗ್ರಾಮದ ಪೂರ್ಲಿಪ್ಪಾಡಿ ಎಂಬಲ್ಲಿ ತಲುಪಿದಾಗ ರಸ್ತೆಬದಿಯಲ್ಲಿ 5.15 ಗಂಟೆಗೆ ಇಬ್ಬರು ವ್ಯಕ್ತಿಗಳು ನಿಂತುಕೊಂಡಿದ್ದು, ಅವರ ಬಳಿ ಎರಡು ಜಾನುವಾರುಗಳಿದ್ದು, ಜೀಪನ್ನು ನಿಲ್ಲಿಸುತ್ತಿದ್ದಂತೆ ಅವರಲ್ಲಿ ಒಬ್ಬಾತನು ಓಡಿಹೋಗಿದ್ದು, ಇನ್ನೋರ್ವನನ್ನು ಹಿಡಿದು ವಿಚಾರಿಸಿದಾಗ ಸಮರ್ಪಕವಾದ ಮಾಹಿತಿಯನ್ನು ನೀಡದೇ ಇದ್ದು, ಆತನ ಹೆಸರು ಮಹಮ್ಮದ್ ಇಸ್ಮಾಯಿಲ್ ಎಂಬುದಾಗಿಯೂ ಓಡಿಹೋದವನು ಸತ್ತಾರ್ ಎಂಬುದಾಗಿ ತಿಳಿಸಿದ್ದು, ಅಲ್ಲಿದ್ದ ಜಾನುವಾರು ಬಗ್ಗೆ ಪ್ರಶ್ನಿಸಲಾಗಿ ಸತ್ತಿಕಲ್ಲು ನಿವಾಸಿ ರಿಫಾಝ್ ಎಂಬಾತನು ಆತನ ಬಾಬ್ತು ಓಮ್ನಿ ವಾಹನ ಸಂಖ್ಯೆಕೆಎ 21 ಎನ್ 6763 ದರಲ್ಲಿ ಎಲ್ಲಿಂದಲೋ ತಂದು ಇಳಿಸಿ ಹೋಗಿದ್ದು, ಅದನ್ನು ವಧೆ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದನು. ಸದ್ರಿ ಜಾನವಾರುಗಳನ್ನು ವಧೆ/ಸಾಗಾಟ ಮಾಡಲು ದಾಖಲೆ ಪತ್ರಗಳನ್ನು ಕೇಳಲಾಗಿ ಯಾವುದೂ ಇರುವುದಿಲ್ಲ. ಸದ್ರಿ ಜಾನುವಾರುಗಳನ್ನು ಪರಿಶೀಲಿಸಲಾಗಿ 1) ಕಪ್ಪು ಬಣ್ಣದ ದನ -1 ಇದ್ದು, ಅದರ ಅಂದಾಜು ಮೌಲ್ಯ ರೂ.1000/- ಮತ್ತು 2) ಕಪ್ಪು ಬಣ್ಣದ ಹೆಣ್ಣು ಕರು -1 ಇದ್ದು, ಅದರ ಅಂದಾಜುಮೌಲ್ಯ ರೂ.500/-ಆಗಬಹುದು. ಸದ್ರಿ ಸ್ಥಳದಲ್ಲಿದ್ದ ದ್ವಿಚಕ್ರ ವಾಹನವನ್ನು ಪ್ರಶ್ನಿಸಿದಾಗ ಓಮ್ನಿವಾಹನದಲ್ಲಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಸಮಯ ಮಹಮ್ಮದ್ ಇಸ್ಮಾಯಿಲ್ ಮತ್ತು ಇನ್ನೊಬ್ಬ ಬೆಂಗಾವಲು ಆಗಿ ಬಂದಿರುವ ಮಹಮ್ಮದ್ಇಸ್ಮಾಯಿಲ್ ಗೆ ಸೇರಿದ ಸಿಲ್ವರ್ ಬಣ್ಣದ ಕೆಎ 21 ಎಕ್ಸ್ 8281 ನಂಬ್ರದ ಹೊಂಡಾ ಕಂಪೆನಿಯ ಆಕ್ಟಿವಾ ಆಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ:94/2022 ಕಲಂ: 4, 5, 7, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧ ಕಾಯ್ದೆ ಮತ್ತು ಸಂರಕ್ಷಣಾ ಅಧಿನಿಯಮ 2020 ಮತ್ತು ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

  • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸೋಮು ಪ್ರಾಯ:50 ವರ್ಷ ಗಂಡ:ಬಾಬು ಮುಗೇರ   ವಾಸ: ಕುರುಂಜ ಮನೆ ಶಿಬಾಜೆ  ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರಿಗೆ ದಿನಾಂಕ: 11-10-2022 ರಂದು ಅಂಗಡಿಯಲ್ಲಿದ್ದ ಸಮಯ ಸಾರ್ವಜನಿಕರೊಬ್ಬರು ದೂರವಾಣಿ ಕರೆ ಮಾಡಿ ಧರ್ಮಸ್ಥಳ ಗ್ರಾಮದ ಕಲ್ಲೇರಿ ಎಂಬಲ್ಲಿ ಅಪರಿಚಿತ ಗಂಡಸೊಬ್ಬರು ಬಿದ್ದುಕೊಂಡಿರುವ ಬಗ್ಗೆ ತಿಳಿಸಿದ್ದು ಅದರಂತೆ ಪಿರ್ಯಾದಿದಾರರು  ಕಲ್ಲೇರಿಗೆ ಬಂದು ಅಸ್ವಸ್ಥರಾಗಿ ಬಿದ್ದುಕೊಂಡ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಬಳಿಕ  108 ಅಂಬ್ಯುಲೆನ್ಸ್‌ ಗೆ ಕರೆ ಮಾಡಿ ಚಿಕಿತ್ಸೆ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ  ಕಳುಹಿಸಿದ್ದು ಅಲ್ಲಿನ ವೈಧ್ಯರು ಪರಿಕ್ಷೀಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿನ ವೈಧ್ಯರು ಪರಿಕ್ಷೀಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡು ಚಿಕಿತ್ಸೆಯಲ್ಲಿದ್ದವರು ದಿನಾಂಕ:14-10-2022 ರಂದು ಸಂಜೆ 4:17 ಗಂಟೆಗೆ ಮೃತಪಟ್ಟಿರುವುದಾಗಿದೆ.ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಕಲಂ: 174 ಸಿ ಆರ್ ಪಿ ಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 17-10-2022 10:19 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080