Feedback / Suggestions

ಇತರೆ ಪ್ರಕರಣ: 2

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಅಬ್ದುಲ್ ಬಸೀರ್ ತಂದೆ ಅಬ್ದುಲ್ ಖಾದರ್, ವಾಸ: ನಂದಾವರ ಮನೆ, ಸಜೀಪ ಮುನ್ನೂರು ಗ್ರಾಮ, ಬಂಟ್ವಾಳತಾಲೂಕು ಎಂಬವರ ದೂರಿನಂತೆ ಅವರ ಮಗ ಹಿದಾಯತುಲ್ಲಾ (ಪ್ರಾಯ 30 ವರ್ಷ) ಎಂಬವರು ಪುತ್ತೂರಿನ ರಾಜಧಾನಿ ಚಿನ್ನದ ಮಳಿಗೆಯಲ್ಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ : 13.09.2021 ರಂದು ಸಜಿಪ ಮುನ್ನೂರು ಗ್ರಾಮದ ನಂದಾವರದ ತನ್ನ ಮನೆಯಿಂದ ಕೆಲಸಕ್ಕೆಂದು ಹೊರಟು ಹೋದವನು  ವಾಪಾಸು ಮನೆಗೆ ಬಾರದೇಯಿದ್ದು, ದಿನಾಂಕ : 13.09.2021 ರಂದು ರಾತ್ರಿ 8.00 ಗಂಟೆಯ ಬಳಿಕ ಯಾರ ಸಂಪರ್ಕಕ್ಕೂ ಸಿಗದೇ ಕಾಣೆಯಾಗಿರುವುದಾಗಿದೆ.  ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಅಕ್ರ:108/2021 ಕಲಂ: ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಗ್ರಾಮಾಂತರ  ಪೊಲೀಸ್ ಠಾಣೆ :ಪಿರ್ಯಾದಿದಾರರಾದ ವಿದ್ಯಾ, ಪ್ರಾಯ: 36 ವರ್ಷ, ಗಂಡ: ದಿ. ಲೋಕೇಶ್ ಗೌಡ, ವಾಸ: ಬಪ್ಪಳಿಗೆ ಗುಂಪಕಲ್ಲು ಮನೆ,ಪುತ್ತೂರು ಕಸಬಾ ಗ್ರಾಮ, ಪುತ್ತೂರು ತಾಲೂಕು  ಎಂಬವರ ದೂರಿನಂತೆ, ಸದ್ರಿಯವರ ತಮ್ಮ 32 ವರ್ಷ ಪ್ರಾಯದ ವಿನೋದ್‌ರವರು ಬಲ್ನಾಡು ಗ್ರಾಮದ ಉಜ್ರುಪಾದೆಯಲ್ಲಿ ವಾಸವಾಗಿದ್ದು, ಕಳೆದ ಒಂದು ವಾರದಿಂದ ಫಿರ್ಯಾದಿದಾರರ ತಮ್ಮ ವಿನೋದ್‌ರವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಯಾವುದೇ ದೂರವಾಣಿ ಕರೆಯನ್ನು ಸ್ವೀಕರಿಸದೇ ಇದ್ದು, ಈ ಬಗ್ಗೆ ಸಂಶಯಗೊಂಡ ಫಿರ್ಯಾದಿದಾರರು ಉಜ್ರುಪಾದೆಯ ವಿನೊಧ್‌ರವರ ಮನೆಗೆ ತೆರಳಿ ನೋಡಿದಾಗ ಮನೆಗೆ ಬೀಗ ಹಾಕಿದ್ದು, ಈ ಬಗ್ಗೆ ನೆರೆಕರೆಯವರಲ್ಲಿ ವಿಚಾರಿಸಿದಾಗ ವಿನೋದ್‌ರವರು ಮನೆಗೆ ಬಂದಿರುವುದಿಲ್ಲವಾಗಿದ್ದು ಇಲ್ಲಿಯವರೆಗೆ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಪುತ್ತೂರು ಗ್ರಾಮಾಂತರ  ಠಾಣಾ ಅಕ್ರ:82/2021, ಕಲo: ಮನುಷ್ಯ ಕಾಣೆ ಐಪಿಸಿ    ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಅಸ್ವಾಭಾವಿಕ ಮರಣ ಪ್ರಕರಣ: 2

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ   ಹೇಮಾವತಿ ಪ್ರಾಯ 56 ಗಂಡ ಡೋಂಬಯ್ಯ  ಗೌಡ ಬಂಟ್ವಾಳ ತಾಲೂಕು ನಾವೂರು  ಗ್ರಾಮ ಐಕುರಿ ಎಂಬವರ ದೂರಿನಂತೆ ದಿನಾಂಕ 15.09.2021 ರಂದು ಬೆಳಿಗ್ಗೆ 10.00 ಗಂಟೆಗೆ ಮನೆಯಿಂದ  ಕೆಲಸಕ್ಕೆಂದು ಹೊರಗೆ ಹೋದವರು ಮಧ್ಯಾಹ್ನ ಆದರೂ  ಊಟಕ್ಕೆ ಬಾರದೇ ಇದ್ದು ಸುಮಾರು ಮಧ್ಯಾಹ್ನ 2.00 ಗಂಟೆಗೆ ನೆರೆಯ ಜ್ಯೋತಿಕಿರಣ ರವರು ಕರೆ ಮಾಡಿ ನಿಮ್ಮ ಗಂಡ ನಮ್ಮ ಅಡಿಕೆ ತೋಟದಲ್ಲಿ  ಅಡಿಕೆ ಮರದಿಮದ ಬಿದ್ದುಕೊಂಡಿರುತ್ತಾರೆ ಎಂದು ತಿಳಿಸಿದ್ದು ಕೂಡಲೇ ಪಿರ್ಯಾದುದಾರರು ಬಂದು ನೋಡಿದಾಗ ಜ್ಯೋತಿಕಿರಣ ರವರ ಅಡಿಕೆ ತೋಟದಲ್ಲಿ ಒಂದು ಮರಕ್ಕೆ  ಹತ್ತಿ  ಅಡಿಕೆ ಮರವು   ಮಧ್ಯದಲ್ಲಿ ತುಂಡಾಗಿ  ಗಂಡ ಡೋಂಬಯ್ಯ ರವರು ನೆಲಕ್ಕೆ ಬಿದ್ದಿದ್ದು ಪಿರ್ಯಾದುದಾರರ ಗಂಡ ಅಡಿಕೆ ಮರ  ಹತ್ತಿ ಅಡಿಕೆ ತೆಗೆಯುತ್ತಿದ್ದ ಸಮಯ ಅಡಿಕೆ ಮರವು ಆಕಸ್ಮಿಕವಾಗಿ  ತುಂಡಾಗಿ ಅಡಿಕೆ ಮರ ಸಮೇತ ನೆಲಕ್ಕೆ ಬಿದ್ದು ಅವರಿಗಾದ ತೀವ್ರ ಒಳಗಾಯದಿಂದ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಯು ಡಿ ಆರ್ ನಂ 35/2021 ಕಲಂ 174 ಸಿ ಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವೇಣೂರು ಪೊಲೀಸ್ ಠಾಣೆ :ಪಿರ್ಯಾದಿದಾರರಾದ ವಿಶ್ವನಾಥ (48) ತಂದೆ: ಸಂಜೀವ ಪೂಜಾರಿ, ವಾಸ: ಬಲವುದಕಲ್ಲು ಮನೆ, ದರೆಗುಡ್ಡೆ ಗ್ರಾಮ  ಮೂಡಬಿದ್ರೆ ತಾಲೂಕು ಎಂಬವರ ದೂರಿನಂತೆ  ಅಕ್ಕ ಶ್ರೀಮತಿ ಶೋಭಾಳನ್ನು ಸುಮಾರು 25 ವರ್ಷದ ಹಿಂದೆ ಕೊಕ್ರಾಡಿಯ ದರ್ಖಾಸು ಮನೆ ವಾಸಿ ರಮೇಶ್ ಎಂಬುವರಿಗೆ ಹಿರಿಯರ ಪದ್ದತಿಯಂತೆ ಮದುವೆ ಮಾಡಿಕೊಟ್ಟಿದ್ದು,ಅವರಿಗೆ ಕಾವ್ಯಶ್ರೀ (22) ಮತ್ತು ಭವ್ಯಶ್ರೀ(21) ಎಂಬ ಎರಡು ಹೆಣ್ಣು ಮಕ್ಕಳಿರುವುದಾಗಿದೆ. ಶೋಭಾಳಿಗೆ ಸುಮಾರು ಒಂದು ವರ್ಷದಿಂದ ಮಾನಸಿಕ ಖಾಯಿಲೆ ಇದ್ದು, ದಿನಾಂಕ: 07.09.2021 ರಂದು ಬೆಳಿಗ್ಗೆ 06.00 ಗಂಟೆಗೆ ಪಿರ್ಯಾದಿದಾರರ  ಅಕ್ಕ ಶ್ರೀಮತಿ ಶೋಭಾ (49) ಎಂಬುವರು ಅವರ ಗಂಡನ ಮನೆಯಲ್ಲಿ ಅಡುಗೆ ಮಾಡಲು ಒಲೆಗೆ ಡಿಸೇಲ್ ಹಾಕಿ ಬೆಂಕಿ ಹಚ್ಚುತ್ತಿರುವಾಗ   ಆಕಸ್ಮಿಕವಾಗಿ ಬೆಂಕಿ ಅವಳ ಮೈಗೆ ತಾಗಿ  ಸುಟ್ಟು ಗಾಯಗೊಂಡವರನ್ನು ಅವರ ಗಂಡ ರಮೇಶ್ ರವರು ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ  ಚಿಕಿತ್ಸೆ  ಬಗ್ಗೆ ಅದೇ ದಿನ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿದ್ದು ಅಲ್ಲಿ  ಅವಳು ಚಿಕಿತ್ಸೆಯಲ್ಲಿರುತ್ತಾ  ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ;15.09.2021 ರಂದು ಬೆಳಿಗ್ಗೆ 07.05 ಗಂಟೆಗೆ ಮೃತಪಟ್ಟಿರುದಾಗಿದೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಯು ಡಿಆರ್ ನಂಬ್ರ: 23-2021 ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 16-09-2021 11:49 AM Updated By: Dakshina Kannada District Police


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : DAKSHINA KANNADA DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080