ಅಭಿಪ್ರಾಯ / ಸಲಹೆಗಳು

 ಅಪಘಾತ ಪ್ರಕರಣ: ೦2

 

ಸುಳ್ಯ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಸಿರಾಜ್ಜುದ್ದೀನ್ (37) ತಂದೆ: ಮಹಮ್ಮದ್ ವಾಸ: ಬಂಟ್ರಬೈಲು ಮನೆ, ಅಜ್ಜಾವರ ಗ್ರಾಮ ಸುಳ್ಯ ತಾಲೂಕು ಎಂಬವರ ದೂರಿನಂತೆ ಅವರ ಅಣ್ಣನ ಮಗ ಸಿನಾನ್ ಎ,ಬಿ (18) ಎಂಬಾತನು ಬಶೀರ್ ಎಂಬವರ ಬಾಬ್ತು ಮೋಟಾರ್ ಸೈಕಲ್ ನಂ ಕೆಎ 21 ಇಸಿ 1315 ನೇದನ್ನು ದಿನಾಂಕ 13.03.2022 ರಂದು ಸವಾರಿ ಮಾಡಿಕೊಂಡು ತನ್ನ ಸ್ನೇಹಿತನ ಮನೆಯಾದ ಜಾಲ್ಸೂರಿಗೆ ಹೋಗುತ್ತಿರುವರೇ ಸಮಯ ಸುಮಾರು 19:30 ಗಂಟೆಗೆ ಸುಳ್ಯ ತಾಲೂಕು ಜಾಲ್ಸೂರು ಗ್ರಾಮದ ಮಾವಿನ ಕಟ್ಟೆ ಎಂಬಲ್ಲಿ ತಲುಪುತ್ತಿದ್ದಂತೆ, ಮೋಟಾರ್ ಸೈಕಲ್ ಗೆ ದನವೊಂದು ಅಡ್ಡ ಬಂದ ಪರಿಣಾಮ ಸಿನಾನ್ ನು ಮೋಟಾರ್ ಸೈಕಲ್ ನ್ನು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಒಮ್ಮೆಲೇ ಬ್ರೇಕ್ ಹಾಕಿದ್ದರಿಂದ ನಿಯಂತ್ರಣ ತಪ್ಪಿ ಮೋಟಾರ್ ಸೈಕಲ್ ಸಮೇತ ಸಿನಾನ್ ರಸ್ತೆಗೆ ಬಿದ್ದು ಗಾಯಗೊಂಡವನನ್ನು ಅಲ್ಲೆ ಇದ್ದ ಪಿರ್ಯಾದುದಾರರ ಪರಿಚಯದ ವಿಜಯ್ ಎಂಬಾತನು ಮತ್ತು ಇತರರು ಚಿಕಿತ್ಸೆಯ ಬಗ್ಗೆ ಸಿನಾನ್ ನನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆತಂದಿರುವುದಾಗಿದ್ದು ನಂತರ ಪಿರ್ಯಾದುದಾರರು ವೈದ್ಯರ ಸಲಹೆಯಂತೆ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ ಅ.ಕ್ರ 31/2022 279, 337 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವೇಣೂರು ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಮಹಮ್ಮದ್  ಸಿದ್ದಿಕ್ , (30) ತಂದೆ: ಕೆ.ಹೈದಾರ್    ವಾಸ :ಕಾರಾಜೆ  ಮನೆ, ಸಜಿಪ  ಗ್ರಾಮ,ಬಂಟ್ವಾಳ  ತಾಲೂಕು ಎಂಬವರ ದೂರಿನಂತೆ ದಿನಾಂಕ:16-03-2022 ರಂದು  ಬೆಳಗ್ಗೆ   08:40 ಗಂಟೆಗೆ  ಬೆಳ್ತಂಗಡಿ  ತಾಲೂಕು   ಬಡಗಕಾರಂದೂರು   ಗ್ರಾಮದ  ಅಳದಂಗಡಿ  ಸೇತುವೆಯ  ಬಳಿ    ಎಂಬಲ್ಲಿ   ಗುರುವಾಯನಕೆರೆ-  ಕಾರ್ಕಳ     ರಸ್ತೆಯಲ್ಲಿ  ಕಾರು ನಂ ಕೆ ಎ 20 ಎಂ ಬಿ 6754  ನೇ  ದನ್ನು  ಅದರ  ಚಾಲಕ  ಗುರುವಾಯನಕೆರೆ ಕಡೆಯಿಂದ   ಕಾರ್ಕಳ  ರಸ್ತೆ   ಕಡೆಗೆ    ತಿರುವು  ರಸ್ತೆಯ  ಬಳಿ ದುಡುಕುತನ  ಮತ್ತು  ನಿರ್ಲಕ್ಷ್ಯತನದಿಂದ ಒಮ್ಮೆಲೆ   ರಸ್ತೆಯ   ರಾಂಗ್ ಸೈಡ್  ಗೆ   ಚಲಾಯಿಸಿ   ನಾರಾವಿ ಕಡೆಯಿಂದ   ಬರುತ್ತಿದ್ದ ಆಟೋ  ನಂ  ಕೆ ಎ 70. 1208    ನೇ ದಕ್ಕೆ  ರಭಸದಿಂದ   ಡಿಕ್ಕಿ  ಹೊಡೆದ  ಪರಿಣಾಮವಾಗಿ  ವಾಹನಗಳು   ಜಖಂ ಗೊಂಡು  ಆಟೋ ರಿಕ್ಷಾ  ಚಾಲಕ  ಶೌಕತ್ ಆಲಿ ಹಾಗೂ ನಾಸಿರ್  , ಫಯಾಜ್  ರವರುಗಳಿಗೆ  ತಲೆಗೆ, ಮುಖಕ್ಕೆ,  ಕೈಕಾಲುಗಳಿಗೆ  ಗಾಯಗಳಾಗಿ   ಬದ್ಯಾರು  ಎಲ್. ಎಂ  ಪಿಂಟೋ  ಆಸ್ಪತ್ರೆಯಲ್ಲಿ   ಪ್ರಥಮ  ಚಿಕಿತ್ಸೆ  ಪಡೆದು  ನಂತರ ಹೆಚ್ಚಿನ  ಚಿಕಿತ್ಸೆ ಬಗ್ಗೆ  ಮಂಗಳೂರು ಎ.ಜೆ. ಆಸ್ಪತ್ರೆಗೆ  ದಾಖಲಾಗಿರುವುದಾಗಿದೆ.   ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 18-2022 ಕಲಂ 279,337 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: ೦1

ವೇಣೂರು ಪೊಲೀಸ್ ಠಾಣೆ : ಪಿರ್ಯಾದಿದಾರರಾದ ವಿಜಯ  ಶೆಟ್ಟಿ   (49), ತಂದೆ; ದಿ| ಸಂಜೀವ ಶೆಟ್ಟಿ   ವಾಸ; ಪೊನ್ನೆದ ಗುತ್ತು  ಮನೆ,   ಮುಂಡ್ಕೂರು  ಗ್ರಾಮ ಕಾರ್ಕಳ  ತಾಲೂಕು ಎಂಬವರ ದೂರಿನಂತೆ ಅವರ    ಹೆಂಡತಿಯ  ತಮ್ಮ  ಸಂತೋಷ್ ಶೆಟ್ಟಿ  ಎಂಬಾತನು    ವಿದೇಶದಲ್ಲಿ  ಉದ್ಯೋಗದಲ್ಲಿದ್ದು  ಸುಮಾರು  4 ವರ್ಷಗಳ ಹಿಂದೆ ಮನೆಯಲ್ಲಿಯೇ  ಇದ್ದು ತನ್ನ  ಹೆಂಡತಿಯು  ಗಂಡ ಹಾಗೂ  ಅತ್ತೆಯೊಂದಿಗೆ   ಗಲಾಟೆ  ಮಾಡಿ   ತವರು  ಮನೆಗೆ ಹೋಗಿದ್ದು  ಇತ್ತಿಚೆಗೆ    ತನ್ನ  ಹೆಂಡತಿಗೆ ಡಿವೋರ್ಸ್    ನೀಡಿದ್ದು    ತನ್ನ   ಯಾವುದೋ ವಯಕ್ತಿಯ   ಕಾರಣಗಳಿಂದ  ಮನನೊಂದು  ದಿನಾಂಕ:  16.03.2022 ರ ಬೆಳಗ್ಗೆ  10:00 ಗಂಟೆಯ    ಮದ್ಯ   ಕಾಲದಲ್ಲಿ  ಬೆಳ್ತಂಗಡಿ  ತಾಲೂಕು   ಕಾಶಿಪಟ್ಣ  ಗ್ರಾಮದ  ಕೇಳ  ಎಂಬಲ್ಲಿ  ನಿರ್ಜನ  ಪ್ರದೇಶದಲ್ಲಿ   ಮೃತ  ಪಟ್ಟಿರುವುದಾಗಿದೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಯು ಡಿಆರ್ ನಂಬ್ರ: 06-2022 ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 17-03-2022 11:24 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080