ಅಭಿಪ್ರಾಯ / ಸಲಹೆಗಳು

 

ಅಪಘಾತ ಪ್ರಕರಣ: 2

ಕಡಬ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಲೋಲಾಕ್ಷ :32 ವರ್ಷ ತಂದೆ: ದೇವಣ್ಣಗೌಡ ವಾಸ:ಕುದ್ದ ಮನೆ, ಕಳಂಜ ಗ್ರಾಮ ಕಾರ್ಯತ್ತಡ್ಕ ಪೋಸ್ಟ,ಕಡಬ ತಾಲೂಕು ಎಂಬವರ ದೂರಿನಂತೆ ದಿನಾಂಕ 16.07.2022 ರಂದು ಖಾಸಗಿ ಕೆಲಸದ ನಿಮಿತ್ತ KA-01 MG-9058 ನೇ ಕಾರು ವಾಹನದಲ್ಲಿ ಕಡಬ ದಿಂದ ಕಾಂಞಗಾಡ್ ಎಂಬಲ್ಲಿಗೆ ಹೋಗುವರೇ ಕಡಬ-ಪಂಜ ರಸ್ತೆಯಲ್ಲಿ ಹೋಗುತ್ತಿದ್ದು ಸಮಯ ಬೆಳಿಗ್ಗೆ 07:00 ಗಂಟೆಗೆ ಕಡಬ ತಾಲೂಕು ಕೋಡಿಂಬಾಳ ಗ್ರಾಮದ ಕೋಡಿಂಬಾಳ ಎಂಬಲ್ಲಿಗೆ ತಲುಪಿದಾಗ ಅದೇ ರಸ್ತೆಯಲ್ಲಿ ಎದುರಿನಿಂದ ಬರುತ್ತಿದ್ದ KA-51 C-3635 ನೇಯ ಖಾಸಗಿ ಬಸ್‌ ಚಾಲಕನಾದ ಆರೋಪಿತನು ಬಸ್ಸನ್ನು ತೀರಾ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರು ಚಲಾಯಿಸುತಿದ್ದ ಕಾರು ವಾಹನಕ್ಕೆ ಅಪಘಾತವನ್ನುಂಟು ಮಾಡಿದ ಪರಿಣಾಮ ಅಪಘಾತದಲ್ಲಿ ಕಾರು ವಾಹನ ಬಲಬದಿ ಮತ್ತು ಮುಂಭಾಗ ಸಂಪೂರ್ಣ ಜಖಂ ಗೊಂಡಿರುತ್ತದೆ ಅಪಘಾತದಲ್ಲಿ ಪಿರ್ಯಾದುದಾರರಿಗೆ ಸಣ್ಣಪುಟ್ಟ ಗಾಯವಾಗಿದ್ದು ಕಡಬ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಅ.ಕ್ರ 61/2022 ಕಲಂ: 279.337 ಐಪಿಸಿ.ಯಂತೆ ಪ್ರಕರಣ ದಾಖಲಾಗಿರುತ್ತದೆ.

ಬೆಳ್ಳಾರೆ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಡಾ: ಅಮಿತ್ ಕುಮಾರ್ ಟಿ. ಪ್ರಾಯ 35 ವರ್ಷ, ತಂದೆ: ರಾಮನಾರಾಯಣ, ವಾಸ: ಪೇರಡ್ಕ ಮನೆ, ಅಲೆಟ್ಟಿ ಗ್ರಾಮ, ಸಳ್ಯ ತಾಲೂಕು ರವರು ಕೊಳ್ತಿಗೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿದ್ದು, ದಿನಾಂಕ 15.07.2022 ರಂದು ಬೆಳಿಗ್ಗೆ ತನ್ನ ಬಾಬ್ತು ಕಾರು ನಂಬ್ರ ಕೆಎ-21-ಪಿ-7452 ನೇಯದರಲ್ಲಿ ಕರ್ತವ್ಯದ ಬಗ್ಗೆ ಮನೆಯಿಂದ ಹೊರಟು ಅಮ್ಚಿನಡ್ಕ ಕಡೆಯಿಂದ ಪೆರ್ಲಂಪಾಡಿ ಕಡೆಗೆ ಬರುತ್ತಾ ಸಮಯ ಸುಮಾರು ಬೆಳಿಗ್ಗೆ 9-00 ಗಂಟೆಗೆ ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಕುಂಟಿಕಾನ ಎಂಬಲ್ಲಿಗೆ ತಲುಪಿದಾಗ ಫಿರ್ಯಾದಿದಾರರ ಎದುರುಗಡೆಯಿಂದ ಅಂದರೆ ಪೆರ್ಲಂಪಾಡಿ ಕಡೆಯಿಂದ ಆಮ್ಚಿನಡ್ಕ ಕಡೆಗೆ ಬರುತ್ತಿದ್ದ ಆಟೋ ರಿಕ್ಷಾ ನಂಬ್ರ ಕೆಎ-21-ಸಿ-0068 ನೇಯದನ್ನು ಅದರ ಚಾಲಕನು ಅಜಗಾರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರು ಚಲಾಯಿಸುತ್ತಿದ್ದ ಕಾರು ನಂಬ್ರ ಕೆಎ-21-ಪಿ-7452 ನೇಯದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಆಟೋ ರಿಕ್ಷಾ ಮುಂದಕ್ಕೆ ಹೋಗಿ ಮಗುಚಿ ಬಿದ್ದು ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಅಬ್ದುಲ್ ಜಯೀದ್ ಮತ್ತು ಹಂಝ ಎಂಬುವರಿಗೆ ಗಾಯಗಳಾಗಿ ಚಿಕಿತ್ಸೆಯ ಬಗ್ಗೆ ಪುತ್ತೂರು ಕಡೆಗೆ ಹೋಗಿದ್ದು, ಆಪಘಾತದಿಂದ ಫಿರ್ಯಾದಿದಾರರ ಕಾರಿನ ಬಲಬದಿಯ ಮುಂಭಾಗ ಮತ್ತು ಟಯರ್  ಜಖಂಗೊಂಡಿರುತ್ತದೆ.  ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ. 59/2022 ಕಲಂ 279,  337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 2

 

ಪುತ್ತೂರು ನಗರ ಪೊಲೀಸ್ ಠಾಣೆ:  ದಿನಾಂಕ: 16.07.2022 ರಂದು ಸಾಯಂಕಾಲ ಸುಮಾರು 18.00 ಗಂಟೆಯಷ್ಟರಲ್ಲಿ ಪಿರ್ಯಾದಿದಾರರಾದ ಪುತ್ತೂರು ನಗರ ಠಾಣೆ ಪೊಲೀಸ್‌ ಉಪನಿರೀಕ್ಷಕರಾದ ಶ್ರೀ ರಾಜೇಶ್ ಕೆ ವಿ ರವರು ಠಾಣೆಯಲ್ಲಿದ್ದ ಸಮಯ ಬಾತ್ಮಿದಾರರಿಂದ ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಸಂತ ಫಿಲೋಮಿನಾ ಕಾಲೇಜಿನ ಬಳಿ ಇರುವ ಬಸ್ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ವ್ಯಕ್ತಿ ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿರುವುದಾಗಿ ಮಾಹಿತಿ ಮೇರೆಗೆ ಠಾಣಾ ಸಿಬ್ಬಂದಿಗಳೊಂದಿಗೆ  ಮಾಹಿತಿ ಬಂದ ಸ್ಥಳವಾದ ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಸಂತ ಫಿಲೋಮಿನಾ ಕಾಲೇಜಿನ ಬಳಿ ಇರುವ ಬಸ್ ನಿಲ್ದಾಣದ ಬಳಿ ಸಮಯ ಸುಮಾರು 18.45 ಗಂಟೆಗೆ ತಲುಪಿದಾಗ ಆರೋಪಿತನಾದ ಮೋಬಿನ್ ಜೋರ್ಜ್ ಪ್ರಾಯ: 20 ವರ್ಷ ತಂದೆ: ಜೋರ್ಜ್ ವಾಸ: ಪರಾಯಿಲ್ ವೀಡು ಆಲಮ್ಮಕು ಮನೆ ಕಾಟಕ್ಕಾಡು ಗ್ರಾಮ ವೆಲ್ಲನಾಡ್ ತಾಲೂಕು ತಿರುವನಂತಪುರಂ ಜಿಲ್ಲೆ ಕೇರಳ ರಾಜ್ಯ ಎಂಬಾತನು ಗಾಂಜಾ  ಇಟ್ಟುಕೊಂಡು ನಿಂತಿರುವುದು ಕಂಡು ಬಂದಿರುತ್ತದೆ . ಸದ್ರಿ ಆರೋಪಿತನನ್ನು  ವಿಚಾರಿಸಿ 550 ಗ್ರಾಂ ತೂಕದ ಗಾಂಜಾ  ಮತ್ತು 01 ಮೊಬೈಲ್ ಪೋನ್ ಹಾಗೂ ನಗದು 500/-ರೂಗಳನ್ನು ಪಂಚರ ಸಮಕ್ಷಮ ಸ್ಥಳ ಪಂಚನಾಮೆ ಮಾಡಿ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಸ್ವಾದೀನಪಡಿಸಿಕೊಂಡ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 10,050/- ರೂ ಆಗಬಹುದು, ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ   ಅ.ಕ್ರ: 64/2022 ಕಲಂ: 8© r/w  20 (b) (ii) , B  NDPS Act ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ನಗರ ಪೊಲೀಸ್ ಠಾಣೆ : ದಿನಾಂಕ 15-07-2022 ರಂದು ಸಾಯಂಕಾಲ  ರಾಜೇಶ್ ಕೆವಿ ಪೊಲೀಸ್ ಉಪನಿರೀಕ್ಷಕರು ಪುತ್ತೂರು ನಗರ ಠಾಣೆಯವರು  ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ 18:30 ಗಂಟೆಗೆ ಪುತ್ತೂರು ಕಸ್ಬಾ ಗ್ರಾಮದ ನಂದಿಲ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಐದು ಜನರು   ಸಾರ್ವಜನಿಕರನ್ನುದ್ದೇಶಿಸಿ ಹೀನಾಯವಾಗಿ ಮಾತನಾಡುತ್ತಾ ತೊಂದರೆ ಉಂಟು ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪ್ರಕಾರ ಪಿರ್ಯಾದಿದಾರರು ಸಿಬ್ಬಂದಿಗಳೊಂದಿಗೆ ಸಮಯ ಸುಮಾರು 19:00 ಗಂಟೆಗೆ ಪುತ್ತೂರು ತಾಲೂಕು ಪುತ್ತೂರು ಕಸ್ಬಾ ಗ್ರಾಮದ ನಂದಿಲ ಎಂಬಲ್ಲಿ ತಲುಪಿ ನೋಡಿದಾಗ  ಸಾರ್ವಜನಿಕ ಸ್ಥಳದಲ್ಲಿ ಐದು ಜನ ಅನುಚಿತವಾಗಿ ವರ್ತಿಸುತ್ತಾ ಸಾರ್ವಜನಿಕರಿಗೆ ಮುಜುಗರವಾದ ರೀತಿಯಲ್ಲಿ ವರ್ತಿಸುತ್ತಿರುವುದು ಕಂಡು ಬಂತು ಅವರುಗಳನ್ನು ವಿಚಾರಿಸಲಾಗಿ ಅವರುಗಳು ಯಾವುದೋ ಮಾದಕ ವಸ್ತುವನ್ನು ಸೇವನೆ ಮಾಡಿದ ಬಗ್ಗೆ ಸಂಶಯ ಕಂಡು ಬಂದಿರುವುದರಿಂದ ಅವರನ್ನು ವಶಕ್ಕೆ ಪಡೆದು  ಅವರ ಹೆಸರು ವಿಳಾಸ ಕೇಳಲಾಗಿ 1) ಕನಿಷ್ಕ ಶೆಟ್ಟಿ ಪ್ರಾಯ: 25 ವರ್ಷ ತಂದೆ: ನಂದಕಿರಣ ಶೆಟ್ಟಿ ವಾಸ: ಕನಿಷ್ಕ ನಿವಾಸ ಪರ್ಪುಂಜ ಮನೆ ಒಳಮೊಗರು ಗ್ರಾಮ ಪುತ್ತೂರು ತಾಲೂಕು, 2) ಪ್ರಜ್ವಲ ಪ್ರಾಯ: 28 ವರ್ಷ ತಂದೆ: ಎಂ ಕೃಷ್ಣ ವಾಸ: ಸಿಂಗಾಣಿ ಮನೆ ಕರ್ಕುಂಜ ಬಪ್ಪಳಿಗೆ ಅಂಚೆ ಪುತ್ತೂರು ಕಸಬಾ ಗ್ರಾಮ ಪುತ್ತೂರು ತಾಲೂಕು, 3) ಹಿತೇಶ್ ನಾಯ್ಕ್ ಪ್ರಾಯ: 19 ವರ್ಷ ತಂದೆ: ಸುರೇಶ ನಾಯ್ಕ್ ವಾಸ: ದ್ವಾರಕಾ ಮನೆ ಕೊಡಿಪ್ಪಾಡಿ ಅಂಚೆ ಮತ್ತು ಗ್ರಾಮ ಪುತ್ತೂರು ತಾಲೂಕು 4) ನವನೀತ್ ಎಸ್ ಬಿ ಪ್ರಾಯ: 23 ವರ್ಷ ತಂದೆ: ಸುಧಾಕರ ವಾಸ: ನಂದಿಲ ಮನೆ ಹಾರಾಡಿ ಅಂಚೆ ಪುತ್ತೂರು ಕಸಬಾ ಗ್ರಾಮ ಪುತ್ತೂರು ತಾಲೂಕು ಮತ್ತು 5) ಕಿಶನ್ ಕುಮಾರ್ ಪ್ರಾಯ: 24 ವರ್ಷ ತಂದೆ: ಹರೀಶ ವಾಸ: ಶಿವ ಪಾರ್ವತಿ ಮಂದಿರ ಎದುರು ಮನೆ ಬನ್ನೂರು ಅಂಚೆ ಮತ್ತು ಗ್ರಾಮ ಪುತ್ತೂರು ತಾಲೂಕು ಎಂಬುದಾಗಿ ತಿಳಿಸಿದ್ದು, ಸದ್ರಿಯವರು  ಮಾದಕ ವಸ್ತುವಾದ ಗಾಂಜಾ ಸೇವನೆ ಮಾಡಿದವರೆಂದು ಸಂಶಯ ಬಂದ ಮೇರೆಗೆ ಆಪಾದಿತರನ್ನು ಠಾಣೆಗೆ ತಂದು  ವೈದ್ಯಕೀಯ ಪರೀಕ್ಷೆಗೊಳಡಿಸಲು ವೈದ್ಯಾಧಿಕಾರಿಯವರು ಕೆಎಸ್‌ ಹೆಗ್ಡೆ ಆಸ್ಪತ್ರೆ ದೇರಳ ಕಟ್ಟೆ ಮಂಗಳೂರು ಇಲ್ಲಿಗೆ  ಕೋರಿಕೆ ಪತ್ರದೊಂದಿಗೆ ಕಳುಹಿಸಿಕೊಟ್ಟು, ಆಪಾದಿತರುಗಳನ್ನು DEPARTMENT OF FORENSIC MEDICINE AND TOXICOLOGY K.S HEGDE ಯ ಆಸ್ಪತ್ರೆಯ ವೈದ್ಯಾಧಿಕಾರಿಯವರುಗಳು ಪರೀಕ್ಷೆಗೊಳಪಡಿಸಿದಾಗ ಇವರೆಲ್ಲರೂ   ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವುದರಿಂದ ಸೂಕ್ತ ಕಾನೂನು ಕ್ರಮ ಕೈಗೊಂಡಿರುವುದಾಗಿದೆ. ಈ ಬಗ್ಗೆ ಪುತ್ತೂರು ನಗರ ಠಾಣಾ   ಅ.ಕ್ರ: 63/2022 ಕಲಂ: 27(ಬಿ)  ಎನ್.ಡಿ.ಪಿ.ಎಸ್ ಆಕ್ಟ್      ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 18-07-2022 02:13 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080