Feedback / Suggestions

ಅಪಘಾತ ಪ್ರಕರಣ: 2

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಜಯಲಕ್ಷ್ಮಿ , ಪ್ರಾಯ 33 ವರ್ಷ.ಗಂಡ: ದಿ||ಅಶೋಕ ವಾಸ: ಉಪ್ಪುಗುಡ್ಡೆ ಮನೆ, ಪಾಣೆಮಂಗಳೂರು ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ: 11-08-2022 ರಂದು ಪಾಣೆಮಂಗಳೂರಿನ ಅಜ್ಜಿ ಮನೆಯಿಂದ  ಬೊಳಂಗಡಿಯ  ಮನೆಗೆ  ಪಿರ್ಯಾದಿದಾರರು, ಅವರ ತಾಯಿ ಶ್ರೀಮತಿ ಆಶಾಲತಾ, ಮತ್ತು ಅವರ ಅಣ್ಣನ ಮಗ ವರುಣ ರವರು  ಪಿರ್ಯಾದಿದಾರರ ಪರಿಚಯದ ಸುರೇಶ್ ರವರ KA-70-2374 ನೇ ಆಟೋರಿಕ್ಷಾದಲ್ಲಿ  ಪ್ರಯಾಣಿಸಿ ಬಂದು ಬಂಟ್ವಾಳ ತಾಲೂಕು ಪಾಣೆಮಂಗಳೂರು ಗ್ರಾಮದ ಬೊಳಂಗಡಿ  ಎಂಬಲ್ಲಿ   ಆಟೋರಿಕ್ಷಾದಿಂದ ಇಳಿದು ಶ್ರೀಮತಿ ಆಶಾಲತಾರವರು ಆಟೋರಿಕ್ಷಾದ ಹಿಂಬದಿ ನಿಂತುಕೊಂಡಿದ್ದ  ಸಮಯ ಸುಮಾರು 19:00 ಗಂಟೆಗೆ ಆಟೋರಿಕ್ಷಾ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಹಿಂದಕ್ಕೆ ( ರಿವರ್ಸ್ ) ಚಲಾಯಿಸಿದ ಪರಿಣಾಮ  ಶ್ರೀಮತಿ ಆಶಾಲತಾರವರಿಗೆ ತಾಗಿ ಅಪಘಾತವಾಗಿದ್ದು ಅಪಘಾತದಲ್ಲಿ  ಎಡಕೋಲು ಕಾಲಿಗೆ ಗುದ್ದಿದ ಗಾಯವಾಗಿದ್ದು ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಅ.ಕ್ರ 90/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರಮೇಶ (36) ತಂದೆ ಕುಂಞಣ್ಣ  ಶೆಟ್ಟಿ, ವಾಸ: ಆರ್ಕದೊಟ್ಟು ಮನೆ, ಮೂಡುಪಡಕೋಡಿ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ:12-08-2022 ರಂದು ಪಿರ್ಯಾದಿದಾರರು ತನ್ನ ಬಾಬ್ತು  ಕೆಎ70ಹೆಚ್‌ 5902ನೇ ಮೋಟಾರು ಸೈಕಲನ್ನು  ಉಜಿರೆ ಕಡೆಯಿಂದ ಗುರುವಾಯನಕೆರೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದಾಗ  ಸಮಯ ಸುಮಾರು 18-00 ಗಂಟೆಗೆ  ಬೆಳ್ತಂಗಡಿ ತಾಲೂಕು ಬೆಳ್ತಂಗಡಿ ಕಸಬಾ ಗ್ರಾಮದ  ಹಳೇಕೋಟೆ ವಾಣಿ ಕಾಲೇಜಿನ  ಬಳಿ ತಲುಪಿದಾಗ ಗುರುವಾಯನಕರೆಕೆರೆ ಕಡೆಯಿಂದ ಉಜಿರೆ ಕಡೆಗೆ ಮೋಟಾರು ಸೈಕಲ್‌ ಕೆಎ 21ಕ್ಯೂ8510ನೇದನ್ನು ಅದರ  ಸವಾರ  ದುಡುಕುತನದಿಂದ ಸವಾರಿ ಮಾಡಿಕೊಂಡು  ಬಂದು  ಪಿರ್ಯಾದಿದಾರರ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು  ಮೋಟಾರು ಸೈಕಲ್‌ ಸಮೇತ ರಸ್ತೆಗೆ ಬಿದ್ದು ಬಲಕಾಲಿನ ಪಾದಕ್ಕೆ ಗುದ್ದಿದ ಸ್ವರೂಪದ ಗಾಯಗೊಂಡಿದ್ದು ಚಿಕಿತ್ಸೆಯ ಬಗ್ಗೆ ಗುರುವಾಯನಕೆರೆ ಅಭಯ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ:  107/2022 ಕಲಂ: 279 337 ಭಾ.ದ.ಸಂ  &  ಕಲಂ 134(ಬಿ) ಜೊತೆಗೆ 187 ಐಎಂವಿ ಆಕ್ಟ್‌  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

  • ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪೂರ್ಣಿಮಾ ಜೆ ಗಂಡ:ಗಣೇಶ್ ಎಂ ವಿಳಾಸ:ಪಂಚಾಯತ್ ಅಭಿವೃದ್ದಿ ಅಧಿಕಾರಿ ಗ್ರಾಮ ಪಂಚಾಯತ್ ಕಣಿಯೂರು ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ದಿನಾಂಕ: 12.08.2022 ರಂದು ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಬೊಳ್ಳಾರ ಮಜಲು  ಮತ್ತು ಪೇರಡಾಲು ಎಂಬಲ್ಲಿ ಅಳವಡಿಸಿದ ಎರಡು ಸೋಲಾರು ಬೀದಿ ದೀಪಗಳು ದಿನಾಂಕ: 12.08.2022 ರಂದು   ರಾತ್ರಿ 10.00 ಗಂಟೆಯಿಂದ   ದಿನಾಂಕ:13.08.2022 ರಂದು  ಬೆಳಿಗ್ಗೆ  06.00 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು. ಕಳವಾದ ಸೊತ್ತುಗಳ ಅಂದಾಜು ಮೌಲ್ಯ 60.000/- ಆಗಿರುತ್ತದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 89/2022 ಕಲಂ: 379 ಭಾದಂಸಂ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

  • ವೇಣೂರು ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಗಿರಿಜಾ ( 50) ತಂದೆ: ದಿ| ಪೂವ ವಾಸ:ಪರ್ಜಾಲು  ಮನೆ, ದರ್ಖಾಸು  ಹೊಸಂಗಡಿ  ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಫಿರ್ಯಾದಿದಾರರ ಮಗ ಅಶೋಕ(24 ವರ್ಷ) ಎಂಬಾತನು ಕೂಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ: 15.08.2022 ರಂದು  ಮಧ್ಯಾಹ್ನ  ಸುಮಾರು 15.30 ಗಂಟೆಗೆ ಕೆಲಸ ಮುಗಿಸಿ  ಅಮಲು ಪದಾರ್ಥ ಸೇವಿಸಿಕೊಂಡು ಮನೆಗೆ ಬಂದಿದ್ದು ಊಟ ಮಾಡಿ, ತಾನು ರಾತ್ರಿ ಬರುತ್ತೇನೆಂದು ಹೇಳಿ ವಾಪಾಸು ಪೇಟೆಗೆ ಹೋದವನು, ರಾತ್ರಿಯಾದರೂ ಮನೆಗೆ ಬಂದಿರುವುದಿಲ್ಲ. ದಿನಾಂಕ: 16.08.2022 ರಂದು  ಬೆಳಿಗ್ಗೆ 6.00 ಗಂಟೆಗೆ ನನ್ನ ಮಗಳು ಗೀತಾ ನೀರು ತರಲು ಮನೆಯೆದುರು ನಳ್ಳಿ ಬಳಿ ಹೋದಾಗ ಎದುರಿನ ಮರದ ಗೆಲ್ಲಿಗೆ ಮಗ ಅಶೋಕನು ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಯು ಡಿಆರ್ ನಂಬ್ರ: 18-2022 ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶಿವಪ್ಪ ಮಡಿವಾಳ ಪ್ರಾಯ 69 ವರ್ಷ ತಂದೆ:ದಿ|| ತನಿಯ ವಾಸ:ದೂಜಮೂಲೆ ಮನೆ ರಾಮನಗರ ಉಪ್ಪಿನಂಗಡಿ ಕಸಬಾ ಗ್ರಾಮ ಪುತ್ತೂರು ಎಂಬವರ ದೂರಿನಂತೆ ಪುತ್ತೂರು ತಾಲೂಕು ಉಪ್ಪಿನಂಗಡಿ ಕಸ್ಬಾ ಗ್ರಾಮದ ದೂಜಮೂಲೆ ರಾಮನಗರ ಎಂಬಲ್ಲಿ ದಿನಾಂಕ:16.08.2022ರಂದು ಬೆಳಿಗ್ಗೆ 09.30 ಗಂಟೆಯಿಂದ 11.45 ಗಂಟೆಯ ಮದ್ಯೆದ ಅವಧಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಮಯ ಮನೆಯ ಮೇಲ್ಚಾವಣಿಯಲ್ಲಿರುವ ಶೀಟು ಹಾಕಿದ ಮಾಡಿಗೆ ಅಳವಡಿಸಿದ ಕಬ್ಬಿಣದ ಅಡ್ಡಕ್ಕೆ ಹಾಗೂ ಕುತ್ತಿಗೆಗೆ ನೈಲಾನ್ ಶಾಲಿನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಯುಡಿಆರ್ ನಂಬ್ರ 18/2022 ಕಲಂ:174 CRPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 17-08-2022 10:40 AM Updated By: Dakshina Kannada District Police


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : DAKSHINA KANNADA DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080