ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

ಸುಬ್ರಹ್ಮಣ್ಯ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ರವೀಂದ್ರ ಅರ್ಬಿತ್ತಾಯ, ಪ್ರಾಯ: 49 ವರ್ಷ,ತಂದೆ: ದಿ|| ಹರಿದಾಸ ಅರ್ಬಿತ್ತಾಯ,  ವಾಸ:ನೂಚಿಲ ಮನೆ, ಸುಬ್ರಹ್ಮಣ್ಯ ಗ್ರಾಮ,  ಕಡಬ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ಮತ್ತು ಅವರ ಅಣ್ಣ ರಾಮಚಂದ್ರರು ದಿನಂಪ್ರತಿಯಂತೆ  ಕುಲ್ಕುಂದದ ಸೋಮಶೇಖರವರ ಮನೆಯಲ್ಲಿ ಶೆಟ್ಲ್ ಕಾಕ್ ಆಟ ಆಡುವರೇ ಪಿರ್ಯಾದಿದಾರರ ಅಣ್ಣನ ಬಾಬ್ತು ದ್ವಿಚಕ್ರ ವಾಹನ ಕೆಎ 21 ಯು 2228 ನೇದರಲ್ಲಿ  ದಿನಾಂಕ: 16-10-2021 ರಂದು ಬೆಳಿಗ್ಗೆ 5:45 ಗಂಟೆಗೆ ಮನೆಯಿಂದ ಹೊರಟ ಸಮಯ ಪಿರ್ಯಾದಿಯ ಅಣ್ಣ ರಾಮಚಂದ್ರ ನು ದ್ವಿಚಕ್ರ ವಾಹನವನ್ನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದು, ಸಮಯ ಸುಮಾರು 5:55 ಗಂಟೆಗೆ ಕಡಬ ತಾಲೂಕು ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ಎಂಬಲ್ಲಿಗೆ ತಲುಪಿದಾಗ ಬಲಗಡೆಯಿಂದ ಕಾಡುಪ್ರಾಣಿಯೊಂದು ದ್ವಿಚಕ್ರ ವಾಹನಕ್ಕೆ ಅಡ್ಡಲಾಗಿ ಬಂದು ಪಿರ್ಯಾದಿದಾರರ ಅಣ್ಣ ರಾಮಚಂದ್ರನು ಬ್ರೇಕು ಹಾಕಿದಾಗ ವಾಹನ ನಿಯಂತ್ರಣ ಕಳೆದುಕೊಂಡು ರಸ್ತೆಯ ಎಡಬದಿಗೆ ಬಿದ್ದಿದ್ದು, ಇಬ್ಬರೂ ವಾಹನದಿಂದ ಎಸೆಯಲ್ಪಟ್ಟು, ರಸ್ತೆಗೆ ಎಸೆಯಲ್ಪಟ್ಟ ರಭಸದಲ್ಲಿ ಪಿರ್ಯಾದಿದಾರರ ಅಣ್ಣ ರಾಮಚಂದ್ರನಿಗೆ ತೆಲೆಗೆ ಉಂಟಾದ ತೀವ್ರ ಗಾಯದಿಂದ ರಕ್ತ ಸೋರಿಕೆಯಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಈ ಬಗ್ಗೆ ಸುಬ್ರಹ್ಮಣ್ಯ  ಪೊಲೀಸ್ ಠಾಣೆ ಅ,ಕ್ರ 68/2021 ಕಲಂ;  279, 337, 304(A)  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ: 2

ವಿಟ್ಲ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ನಿಶಾನ ಪ್ರಾಯ 17 ವರ್ಷ ತಂದೆ:ಲಿಂಗಪ್ಪ ಪೂಜಾರಿ ವಾಸ:ಕರಿಂಕ ಮನೆ, ನೆಟ್ಲಮುಡ್ನೂರು   ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಅವರ ತಾಯಿ ಶ್ರೀಮತಿ ಅರುಣಾ (39) ರವರಿಗೆ ಇತ್ತೀಚೆಗೆ ಅಂದರೆ ಸುಮಾರು ಒಂದು ತಿಂಗಳ ಹಿಂದೆ ಅಸ್ತಮಾ ಖಾಯಿಲೆ ಪ್ರಾರಂಭವಾಗಿ ಅದಕ್ಕೆ ಮಾಣಿಯ ಖಾಸಗಿ ವೈದ್ಯರಿಂದ ಔಷಧಿ ಮಾಡುತ್ತಿದ್ದರು ಆದರೂ ಅವರಿಗೆ ಯಾವುದೇ ಪ್ರಯೋಜನೆವಿರಲಿಲ್ಲ ದಿನಾಂಕ:16-10-2021 ರಂದು ಅವರಿಗೆ ಅಸ್ತಮಾ ಖಾಯಿಲೆ ತೀವೃಗೊಂಡು ಅವರನ್ನು ಪಿರ್ಯಾಧಿಯ ತಂದೆಯ ತಮ್ಮ ಕೆ ತಿಮ್ಮಪ್ಪ ಸುವರ್ಣ ರವರು ಚಿಕಿತ್ಸೆಯ ಬಗ್ಗೆ ಮಾಣಿ ಸರಕಾರಿ ಆಸ್ಪತ್ರೆಗೆ ಅವರ ಬಾಬ್ತು ಕಾರಿನಲ್ಲಿ ಲಿಂಗಪ್ಪ ಪೂಜಾರಿ ಕರೆದುಕೊಂಡು ಹೋದಾಗ ಅಲ್ಲಿನ ವೈದೈರು ಪರೀಕ್ಷಿಸಿ ಮದ್ಯಾಹ್ನ ಸುಮಾರು 1-40 ಗಂಟೆಗೆ ದಾರಿ ಮಧ್ಯ ಅಸ್ತಮಾ ಖಾಯಿಲೆ ತೀವೃಗೊಂಡು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ವಿಟ್ಲ ಠಾಣಾ ಯು ಡಿ ಅರ್ ನಂಬ್ರ 31/2021  ಕಲಂ 174 ಸಿ ಅರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಳ್ಯ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಶ್ರೀಮತಿ ಮಮತ (25) ಗಂಡ: ರಘು ವಾಸ: HN No 434.KM ಬಡಾವಣೆ,ಪಿರಿಯಾಪಟ್ಟಣ ಟೌನ್, ಪಿರಿಯಾಪಟ್ಟಣ ತಾಲೂಕು, ಮೈಸೂರು ಜಿಲ್ಲೆ, ಎಂಬವರ ದೂರಿನಂತೆ ಅವರ ಗಂಡ ರಘು (33) ಎಂಬಾತನು ಟಿ,ಬಿ ಖಾಯಿಲೆಯಿಂಧ ಬಳಲುತ್ತಿದ್ದು,  ಸುಳ್ಯ ಕೆವಿಜಿ ಆಸ್ಪತ್ರೆಯಲ್ಲಿ ಮತ್ತು ಮೈಸೂರಿನಲ್ಲಿ ಚಿಕಿತ್ಸೆ ಪಡೆದುಕೊಂಡು ಬಂದಿರುತ್ತಾರೆ,ಅವರ ತಾಯಿ ಸುಶೀಲರವರು ಸೊಂಟ,ಬೆನ್ನು ನೋವಿನಿಂದ ಸುಳ್ಯ  ಕೆವಿಜಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾದವರನ್ನು ಪಿರ್ಯಾದುದಾರರು ಆರೈಕೆ ಮಾಡಿಕೊಂಡಿರುತ್ತಾರೆ, ದಿನಾಂಕ 16.10.2021 ರಘುರವರು ಅವರ ತಾಯಿಯನ್ನು ನೋಡಲೆಂದು ತಮ್ಮ ಮನೆಯಿಂದ ಕೆಎಸ್ ಆರ್ ಟಿಸಿ ಬಸ್ ನಲ್ಲಿ  ಹೊರಟು ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ತಲುಪಿದಾಗ ಅಲ್ಲಿಯೇ ಸುಸ್ತಾಗಿ ಕೆಳಗೆ ಬಿದ್ದದವರನ್ನು ಚಿಕಿತ್ಸೆಯ ಬಗ್ಗೆ ಅಲ್ಲಿನ ಸ್ಥಳಿಯರು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ, ನಂತರ ಪಿರ್ಯಾದುದಾರರು ಸುಳ್ಯ ಸರ್ಕಾರಿ ಆಸ್ಪತ್ರೆಗೆ  ಹೋದಲ್ಲಿ ವೈದ್ಯರು ಸಲಹೆಯಂತೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಸುಳ್ಯ ಕೆವಿಜಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು  ರಘು ರವರನ್ನು ಪರೀಕ್ಷಿಸಿ ಸಮಯ ಸುಮಾರು 13:57 ಗಂಟೆಗೆ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ ಯುಡಿಆರ್ ನಂಬ್ರ 45/2021 ಕಲಂ: 174 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 18-10-2021 11:03 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080