ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 03

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಜಗದೀಶ್ ಪ್ರಾಯ;53 ವರ್ಷ ತಂದೆ: ದಿ|| ಬಿ  ಸೋಮಯ್ಯ ವಾಸ: ಮಯ್ಯರ ಬೈಲು ಮನೆ ಬಿ ಮೂಡ ಗ್ರಾಮ, ಮತ್ತು  ಅಂಚೆ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ: 17.11.2022 ರಂದು ತನ್ನ ಬಾಬ್ತು ಮೋಟರ್ ಸೈಕಲ್ ನಲ್ಲಿ  ದಾಸಕೊಡಿಯಿಂದ ಪುರುಷರಕೊಡಿ ಎಂಬಲ್ಲಿಗೆ  KA -19-AB-7041 ನೇ ಈಚರ್ ಲಾರಿಯ ಜೊತೆಯಲ್ಲಿ ಹೋಗುತ್ತಿದ್ದ ಸಮಯ 18.30 ಗಂಟೆಗೆ ಬಂಟ್ವಾಳ ತಾಲೂಕು ಬರಿಮಾರು ಗ್ರಾಮದ ಪುರುಷರಕೋಡಿ ಎಂಬಲ್ಲಿಗೆ ತಲುಪುತ್ತಿದ್ದಂತೆ, ಪಿರ್ಯಾದಿದಾರರ ಮುಂದಿನಿಂದ ಚಲಾಯಿಸಿಕೊಂಡು ಹೋಗುತ್ತಿದ್ದ KA -19-AB-7041 ನೇ ಈಚರ್ ಲಾರಿಯನ್ನು ಅದರ ಚಾಲಕ ಲಾರೆನ್ಸ್ ಪಿಂಟೋ ಎಂಬವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ಎಡ ಬದಿಗೆ ಚಲಾಯಿಸಿದ ಪರಿಣಾಮ ಇಂಟರ್ ಲಾಕ್ ತುಂಬಿದ ಲಾರಿ  ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಹೊಂಡಕ್ಕೆ ಬಿದ್ದು ಅಪಘಾತವಾಗಿದ್ದು, ಅಪಘಾತದಲ್ಲಿ  ಲಾರಿ ಚಾಲಕ ಲಾರೆನ್ಸ್ ಪಿಂಟೋ ರವರಿಗೆ  ಬಲ ಭಾಗ ಪಕ್ಕೆಲುಬಿಗೆ ಗುದ್ದಿದ ನೋವಾಗಿದ್ದು, ಸಹ ಪ್ರಯಾಣಿಕರಾದ ಅಂಕಿತ್ ಕುಮಾರ್ ರವರಿಗೆ ಎಡಮೊಣ ಕಾಲಿಗೆ  ಗುದ್ದಿದ ಮತ್ತು ತರಚಿದ ಗಾಯವಾಗಿರುತ್ತದೆ. ರಾಮ್ ಪ್ರವೀಶ್ ಕುಮಾರ್ ರವರಿಗೆ  ಎಡಕೋಲು ಕಾಲಿಗೆ  ಗುದ್ದಿದ  ಹಾಗೂ ರಕ್ತಗಾಯ ದೇಹದ ಆನೇಕ ಭಾಗಗಳಲ್ಲಿ ಗುದ್ದಿದ ಹಾಗೂ ತರಚಿದ ಗಾಯಗಳಾಗಿದ್ದು, ಕೂಡಲೇ ಪಿರ್ಯಾದಿದಾರರು ವಾಹನವೊಂದರಲ್ಲಿ  ಮಂಗಳೂರಿನ ಕೆ ಎಂ ಸಿ ಅತ್ತಾವರ  ಆಸ್ಪತ್ರೆಗೆ  ಕರೆದುಕೊಂಡು ಹೋದಾಗ  ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ  ಲಾರೆನ್ಸ್ ಪಿಂಟೋ ಮತ್ತು  ಅಂಕಿತ್ ಕುಮಾರ್ ರವರನ್ನು ಒಳರೋಗಿಯಾಗಿ ದಾಖಲಿಸಿಕೊಂಡು. ರಾಮ್ ಪ್ರವೀಶ್ ಕುಮಾರ್ ರವರಿಗೆ  ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ  ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದ್ದು ಅದರಂತೆ ಪಿರ್ಯಾದಿದಾರರು  ರಾಮ್ ಪ್ರವೀಶ್ ಕುಮಾರ್ ರವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ  ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ  ಕರೆದುಕೊಂಡು ಹೋದಾಗ ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ಚಿಕಿತ್ಸೆ ಬಗ್ಗೆ ಒಳರೋಗಿಯಾಗಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ 143/2022 ಕಲಂ279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಮಹಮ್ಮದ್ ಹುಸೈನ್ ಪ್ರಾಯ; 22 ವರ್ಷ ತಂದೆ: ಅಬ್ದುಲ್ ಸಲೀಂ ವಾಸ: ನಂದಾವರ ಕೋಟೆ  ಮನೆ ಸಜೀಪಮುನ್ನೂರು ಗ್ರಾಮ, ಮತ್ತು  ಅಂಚೆ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 17-11-2022 ರಂದು KA-70-H-2927 ನೇ ಸ್ಕೂಟರ್ನಲ್ಲಿ ಸವಾರನಾಗಿ ತನ್ನ ಸ್ನೇಹಿತ ಉಮ್ಮರ್ ಫಾರೂಕ್ ರವರನ್ನು ಸಹ ಸವಾರನಾಗಿ ಕುಳ್ಳಿರಿಸಿಕೊಂಡು ಮಂಗಳೂರಿಗೆ ಹೋಗಿ ವಾಪಾಸು ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮನೆ ಕಡೆಗೆ ಬರುತ್ತಾ ಸಮಯ ರಾತ್ರಿ 7:30 ಗಂಟೆಗೆ ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಬ್ರಹ್ಮರಕೋಟ್ಲು ಎಂಬಲ್ಲಿಗೆ ತಲುಪುತ್ತಿದಂತೆ ಬಿ ಸಿ ರೋಡು ಕಡೆಯಿಂದ KA-19-MC-6063 ನೇ ಕಾರನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ವಾಹನವೊಂದನ್ನು ಓವರ್ಟೇಕ್ ಮಾಡಿಕೊಂಡು ತೀರಾ ಬಲಬದಿಗೆ ಚಲಾಯಿಸಿಕೊಂಡು ಹೋಗಿ ಪಿರ್ಯಾಧಿದಾರರು ಸವಾರಿ ಮಾಡಿಕೊಂಡು ಬರುತ್ತಿದ್ದ ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾಧಿಗೆ ಮತ್ತು ಸಹ ಸವಾರನಿಗೆ ಗಾಯ ನೋವುಗಳಾಗಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಹೋಗಿದ್ದು ಅಲ್ಲಿನ ವೈದ್ಯರು ಪಿರ್ಯಾಧಿಯವರಿಗೆ ಹೊರ ರೋಗಿಯಾಗಿ ಚಿಕಿತ್ಸೆ ನೀಡಿ ಉಮ್ಮರ್ ಫಾರೂಕ್ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿಗೆ ಹೋಗುವಂತೆ ಸಲಹೆ ನೀಡಿದ್ದು ಉಮ್ಮರ್ ಫಾರೂಕ್ ರವರು ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ 144/2022 ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ನಬಿಸಾಬ್ ಜಹಾಂಗಿರಬಾದಷಾ ನದಾಫ ಪ್ರಾಯ; 34  ವರ್ಷ ತಂದೆ: ಜಹಾಂಗಿರಬಾದಷಾ ನದಾಫ ವಾಸ: ಉಮ್ರಾಣಿ ಮನೆ ಮತ್ತು ಗ್ರಾಮ, ಚಡಚಣ ತಾಲೂಕು , ವಿಜಯಪುರ ಜಿಲ್ಲೆ ಎಂಬವರ ದೂರಿನಂತೆ ದಿನಾಂಕ: 17.11.2022 ರಂದು ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋದಲ್ಲಿ ಬಸ್ ನಿಲ್ಲಿಸಿ  ಡಿಪೋದಿಂದ  ರೈಸ್ ಮಿಲ್ ಗಾಂದೇವಾಡಿ ಎಂಬಲ್ಲಿಗೆ ನಡೆದುಕೊಂಡು ಹೋಗುತ್ತಾ ಸಮಯ 19.30 ಗಂಟೆಗೆ  ಬಂಟ್ವಾಳ ತಾಲೂಕಿನ ಬಿ ಮೂಡ ಗ್ರಾಮದ  ತಲಪಾಡಿ ಬಸ್ ಡಿಪೋ ಎದುರುಗಡೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ  ಏಕಮುಖ ರಸ್ತೆಯಲ್ಲಿ  ಬ್ರಹ್ಮರಕೋಟ್ಲು ಕಡೆಯಿಂದ  ಏಕಮುಖ ರಸ್ತೆಯಲ್ಲಿ ಕೈಕಂಬ ಕಡೆಗೆ ಮೋಟರ್ ಸೈಕಲೊಂದನ್ನು ಅದರ ಸವಾರನು  ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯ ಕಚ್ಚಾ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ  ಪಾದಚಾರಿಯೊಬ್ಬರಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಪಾದಚಾರಿ ಎಸೆಯಲ್ಪಟ್ಟು ರಸ್ತೆಗೆ ಬಿದ್ದರು, ಕೂಡಲೇ  ಪಿರ್ಯಾದಿದಾರರು ಮತ್ತು ಸಾರ್ವಜನಿಕರು ಪಾದಚಾರಿಯನ್ನು ಎಬ್ಬಿಸಿ ಉಪಚರಿಸಿ ನೋಡಲಾಗಿ  ಪಿರ್ಯಾದಿದಾರರ ಪರಿಚಯದ  ಮಹಿತಾಬ್ ಗೈಬುಸಾಬ್ ನದಾಫ್ ಆಗಿದ್ದು , ಅಪಘಾತದಲ್ಲಿ ಮಹಿತಾಬ್  ಗೈಬುಸಾಬ್ ನದಾಫ್ ರವರಿಗೆ ಬಲಕಾಲು  ಮಣಿಗಂಟಿಗೆ  ಹಾಗೂ ಕೋಲು ಕಾಲಿಗೆ  ಮತ್ತು  ಬಲ ಕೋಲು  ಕೈಗೆ ಗುದ್ದಿದ ಹಾಗೂ ತರಚಿದ ಗಾಯವಾಗಿರುತ್ತದೆ. ಪಿರ್ಯಾದಿದಾರರು ಮತ್ತು KA 05 JP 9009 ನೇ  ಮೋಟರ್ ಸೈಕಲ್ ಸವಾರ ಶಾಕೀಲ್ ರವರು ಗಾಯಾಳುವನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ  ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ  ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು ಅದರಂತೆ ಆಂಬುಲೆನ್ಸ್ ವಾಹನದಲ್ಲಿ  ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ  ಚಿಕಿತ್ಸೆ ಬಗ್ಗೆ ಒಳರೋಗಿಯಾಗಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ145/2022 ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 19-11-2022 01:42 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080