ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: ೦3

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಸುಮಲತಾ ಪ್ರಾಯ : 42 ವರ್ಷ, ಗಂಡ: ಉಮಾನಾಥ ವಾಸ: 1-26-1, ಬೆಂಜನಪದವು ಮನೆ, ಅಮ್ಮುಂಜೆ ಗ್ರಾಮ ಮತ್ತು ಅಂಚೆ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 20-05-2022 ರಂದು  ತನ್ನ ಬಾಬ್ತು KA-19-S-8848ನೇ ಮೋಟಾರ್ ಸೈಕಲಿನಲ್ಲಿ  ರಾತ್ರಿ ಬೆಂಜನಪದವವಿನಲ್ಲಿ  ಮೆಹಂದಿ ಕಾರ್ಯಕ್ರಮಕ್ಕೆ ಹೋಗಿ ಅಲ್ಲಿಂದ ವಾಪಾಸು ದಿನಾಂಕ 21-05-2022 ರಂದು ಪದೆಂಜಾರು ಮಾವನ ಮನೆ ಕಡೆಗೆ  ಬರುತ್ತಾ ಸಮಯ ಸುಮಾರು ಬೆಳಿಗ್ಗೆ 4:15 ಗಂಟೆಗೆ ಬಂಟ್ವಾಳ ತಾಲೂಕು ಪುದು ಗ್ರಾಮದ ಫರಂಗೀಪೇಟೆ ಎಂಬಲ್ಲಿಗೆ ತಲುಪಿದಾಗ ಮೋಟಾರ್ ಸೈಕಲನ್ನು ಉಮಾನಾಥರವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದ ಪರಿಣಾಮ ಮೋಟಾರ್ ಸೈಕಲ್ ಸ್ಕಿಡ್  ಆಗಿ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ತಲೆಗೆ, ಎಡಭುಜಕ್ಕೆ, ಎಡ ಎದೆಗೆ ಗುದ್ದಿದ ಗಾಯ, ಎಡಕಣ್ಣಿನ ಕೆಳಗಡೆ ತರಚಿದ ಗಾಯಗೊಂಡವರು ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ 56/2022 ಕಲಂ 279,337ಐಪಿಸಿ ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಳ್ಯ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಅನಂದ ಕೆ,ಎಂ (55) ತಂದೆ: ಮುತ್ತಪ್ಪ ಗೌಡ ಎನ್ ವಾಸ: ಕಾಯರ್ತೋಡಿ ಮನೆ, ಸುಳ್ಯ ಕಸಬಾ ಗ್ರಾಮ ಸುಳ್ಯ ತಾಲೂಕು ಎಂಬವರ ದೂರಿನಂತೆ ದಿನಾಂಕ 21.05.2022 ರಂದು 12:00 ಗಂಟೆಗೆ ಬಾಡಿಗೆ ನಿಮಿತ್ತ ತಮ್ಮ ಬಾಬ್ತು ಕೆಎ 21 ಸಿ 1854 ನೇ ಆಟೋರಿಕ್ಷಾದಲ್ಲಿ ಸುಳ್ಯ ಬಸ್ ನಿಲ್ದಾಣದಿಂದ ಪ್ರಯಾಣಿಕರಾದ ಮಂಜುಳ ಮತ್ತು ಮಗು ಪ್ರಾಪ್ತಿ ಯವರರನ್ನು ಕುಳಿರಿಸಿಕೊಂಡು, ಬೆಟ್ಟಂಪಾಡಿ ಕಡೆಗೆ ಹೋಗುವರೇ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಜ್ಯೋತಿ ಸರ್ಕಲ್ ಬಳಿಯಲ್ಲಿರುವ ಅಪೋಲೋ ಟಯರ್ ಅಂಗಡಿ ಬಳಿ ತಲುಪುತ್ತಿದ್ದಂತೆ, ಆಟೋರಿಕ್ಷಾದ ಎಡಬದಿಯಲ್ಲಿ ಕೆಎ 21 ಎಲ್ 4004 ನೇ ಮೋಟಾರ್ ಸೈಕಲ್ ಸವಾರ ಹಸೈನರ್ ಎಂಬಾತನು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಮೋಟಾರ್ ಸೈಕಲ್ ನ್ನು ಸವಾರಿ ಮಾಡಿಕೊಂಡು ಬಂದು ಪಿರ್ಯಾದುದಾರರ ಆಟೋರಿಕ್ಷಾಗೆ ಡಿಕ್ಕಿವುಂಟು ಮಾಡಿದ ಪರಿಣಾಮ ಆಟೋರಿಕ್ಷಾ ಪಲ್ಟಿಯಾಗಿ ಜಕ್ಕಂ ಆಗಿರುವುದಾಗಿ, ಹಾಗೂ ರಿಕ್ಷಾದಲ್ಲಿದ್ದ ಪ್ರಯಾಣಿಕಾದ ಮಂಜುಳ ಮತ್ತು ಪ್ರಾಪ್ತಿಗೆ ಗಾಯಾವಾಗಿದ್ದವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಯ ಬಗ್ಗೆ, ಪುತ್ತೂರು ಮಹಾವೀರ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ ಅ,ಕ್ರ 55/2022 ಕಲಂ: 279,337 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಡಬ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಮಂಜುನಾಥ  ಬಿ.ಆರ್‌ ಪ್ರಾಯ:27 ವರ್ಷ, ತಂದೆ: ರುಕ್ಮಯ್ಯ ಗೌಡ ವಾಸ: ಬಲ್ಯ ಗ್ರಾಮ ,ಕಡಬ ತಾಲೂಕು ಎಂಬವರ ದೂರಿನಂತೆ, ಹೊಸ್ಮಠ ದೇರಾಜೆ ಎಂಬಲ್ಲಿ ವೆಲ್ಡಿಂಗ್‌ ಶಾಫ್‌ ನಡೆಸಿಕೊಂಡಿದ್ದು ದಿನಾಂಕ:20.05.2022 ರಂದು ತನ್ನ ಬಾಬ್ತು ಕೆ.ಎ-21 ಯು-0506 ಮೋಟಾರ್‌ ಸೈಕಲ್‌ನಲ್ಲಿ ಕಡಬಕ್ಕೆ ಪೆಟ್ರೋಲ್‌ ಹಾಕಿಸುವರೇ ಹೋಗಿ ನಂತರ ಪೆಟ್ರೋಲ್‌ ಪಂಪ್‌ನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ವಾಪಾಸ್ಸು ಹೊಸ್ಮಠ ಕಡೆಗೆ ಕಡಬ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ಬರುತ್ತಿರುವಾಗ ಕಡಬ ತಾಲೂಕು ಕಳಾರ ಎಂಬಲ್ಲಿಗೆ ಸಮಯ ಸಂಜೆ 04.15 ಗಂಟೆಗೆ ತಲುಪಿದಾಗ ತನ್ನ ಎದುರುಗಡೆಯಲ್ಲಿ  ಹೋಗುತ್ತಿದ್ದ ಕೆ.ಎ-21 ಇ.ಸಿ-1705ನೇ ಮೊಟಾರ್‌ ಸೈಕಲ್‌ ಸವಾರನು ಯಾವುದೇ ಸೂಚನೆಯನ್ನು ನೀಡದೇ ಏಕಾಏಕಿಯಾಗಿ ರಸ್ತೆಯಲ್ಲಿ ಅಜಾಗರೂಕತೆಯಿಂದ ಬಲಕ್ಕೆ ತಿರುಗಿಸಿದ ಪರಿಣಾಮ ಹಿಂದಿನಿಂದ ಹೋಗುತ್ತಿದ್ದ ಪಿರ್ಯಾದುದಾರರು ಮೋಟಾರ್‌ ಸೈಕಲ್‌ ಮತ್ತು ಎದುರು ವಾಹನಕ್ಕೆ ಡಿಕ್ಕಿಯುಂಟಾದ ಪರಿಣಾಮ ಅಪಘಾತವಾಗಿ ಡಾಮಾರು ರಸ್ತೆಗೆ ಮೋಟಾರ್‌ ಸೈಕಲ್‌ ಸಮೇತ ಪಿರ್ಯಾದುದಾರರು ಮತ್ತು ಎದುರು ಹೋಗುತ್ತಿದ್ದ ವಾಹನ ಸವಾರ ಮತ್ತು ಸಹಸವಾರರು  ಬಿದ್ದಿದ್ದು ನಂತರ ಅಲ್ಲಿಯೇ ಇದ್ದ ಸಾರ್ವಜನಿಕರು ಗಾಯಾಳುಗಳನ್ನು ಉಪಚರಿಸಿದ್ದು  ಪಿರ್ಯಾದುದಾರರಿಗೆ ಬಲ ಕೈಗೆ ರಕ್ತಗಾಯ ಹಾಗೂ ನನ್ನ ಎಡಕೈ ,ಬಲಕಾಲಿಗೆ ,ಸೊಂಟಕ್ಕೆ ತರಚಿದ ಗಾಯವಾಗಿರುತ್ತದೆ ಎದುರು ಸವಾರ ಮತ್ತು ಸಹಸವಾರರಿಗೆ ಸಣ್ಣಪುಟ್ಟ ಗಾಯವಾಗಿರುತ್ತದೆ ನಂತರ ಪಿರ್ಯಾದುದಾರರನ್ನು ಅಲ್ಲಿಯೇ ಇದ್ದ ಹೊನ್ನಪ್ಪ ಗೌಡ ಮತ್ತು ಹರಿಯಪ್ಪನಾಯ್ಕ ರವರು ಕಡಬ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ನಂತರ ವೈದ್ಯರು ಹೆಚ್ಚಿನ ಚಿಕಿತ್ಸೆ ಬಗ್ಗೆ ತಿಳಿಸಿದಂತೆ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಓಳರೋಗಯಾಗಿ ದಾಖಲು ಮಾಡಿರುವುದಾಗಿರುವುದಾಗಿದೆ. ಈ ಕಡಬ ಠಾಣಾ ಅ.ಕ್ರ 47/2022 ಕಲಂ. .279.337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: ೦2

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಸುನೀಲ್ ಭಟ್ ಬಂಟ್ವಾಳ ಪ್ರಾಯ 36 ವರ್ಷ ತಂದೆ: ಗೋಪಿನಾಥ ಭಟ್ ವಾಸ: ಅಮೃತ ತ್ಯಾಗರಾಜ ರೋಡ ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ 21-05-2022 ರಂದು ಮಂಜೇಶ್ವರ ದೇವಸ್ಥಾನಕ್ಕೆ ಹೋಗಲು ತಾಯಿಯನ್ನು ಬರುವಂತೆ ಕೇಳಿಕೊಂಡಾಗ,  ಆಗ ತಾಯಿಯು ನನಗೆ ಹುಷಾರಿಲ್ಲ, ಕಾರಿನಲ್ಲಿ ಹೋದಾಗ ವಾಂತಿ ಬರುತ್ತದೆ, ನಿಮ್ಮೂಂದಿಗೆ ಬರುವುದಿಲ್ಲ ಮನೆಯಲ್ಲಿ ಇರುತ್ತೇನೆಂದು ತಿಳಿಸಿದಂತೆ ಬೆಳಿಗ್ಗೆ 10.00 ಗಂಟೆಗೆ ಪಿರ್ಯಾಧಿದಾರರು ಸಂಸಾರ ಸಮೇತ ಹೋಗಿರುತ್ತಾರೆ. ಮಧ್ಯಾಹ್ನ 1.28 ಗಂಟೆಗೆ ಮಂಜೇಶ್ವರ ದೇವಸ್ಥಾನದಲ್ಲಿ ಪೂಜಾ ಕಾರ್ಯಗಳನ್ನು ಮುಗಿಸಿ ಊಟ ಮಾಡುವ ಸಮಯ ಗೆಳಯ ನರಹರಿ ಭಟ್ ರವರು ಕರೆ ಮಾಡಿ ನಿಮ್ಮ ತಾಯಿ ಮಧ್ಯಾಹ್ನ 12.40 ಗಂಟೆಯ ಸಮಯಕ್ಕೆ ಗೂಡಿನಬಳಿ ನೇತ್ರಾವತಿ ನದಿ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ತಿಳಿಸಿರುತ್ತಾರೆ. ಅದರಂತೆ ಪಿರ್ಯಾಧಿದಾರರು ಬಂಟ್ವಾಳ ಸರಕಾರಿ ಆಸ್ವತ್ರೆಗೆ ಹೋಗಿ ಮೃತದೇಹವನ್ನು ಗುರುತಿಸಿರುತ್ತಾರೆ. ಕಳೆದ 5 ವರ್ಷಗಳ ಹಿಂದೆ ಪಿರ್ಯಾಧಿದಾರರ ತಮ್ಮ ಸುಧೀರ ರಸ್ತೆ ಅಪಘಾತದಲ್ಲಿ ಬಲಕೈಯನ್ನು ಕಳೆದುಕೊಂಡಿದ್ದರಿಂದ ತಾಯಿಯವರು ನೊಂದುಕೊಂಡಿದ್ದರು, ಇದೇ ವಿಚಾರದಲ್ಲಿ ವ್ಯಥೆಗೊಂಡು, ಮನನೊಂದು ನೇತ್ರಾವತಿ ನದಿ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 21-2022 ಕಲಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಫಿರ್ಯಾದುದಾರರಾದ  ನಟರಾಜ ಪ್ರಾಯ-33 ವರ್ಷ, ತಂದೆ-ಓಬಲಪ್ಪ  ವಾಸ- ಕೋಡಿ ಮನೆ, ಕಂಬಳತ್ತಡ್ಕ ಆರ್ಯಾಪು  ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ಅವರ ತಾಯಿ  ಶ್ರೀಮತಿ ದುರ್ಗಮ್ಮ (ಪ್ರಾಯ-64 ವರ್ಷ ) ಎಂಬವರು ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಕೋಡಿ ಮನೆ ಕಂಬಳತ್ತಡ್ಕ ಎಂಬಲ್ಲಿರುವ ತಮ್ಮ ಮನೆಯಲ್ಲಿ ಮನೆವಾರ್ತೆ ಕೆಲಸ ಮಾಡಿಕೊಂಡಿದ್ದು. ಫಿರ್ಯಾದುದಾರರು ಬೆಳಿಗ್ಗೆ ಸುಮಾರು  9.00 ಗಂಟೆಗೆ ಕೆಲಸದ ನಿಮಿತ್ತ ತನ್ನ ಮನೆಯಿಂದ ಹೊರಟು ಹೋದಾಗ ದುರ್ಗಮ್ಮರವರು ಮನೆಯಲ್ಲಿಯೇ ಇದ್ದರು. ಬಳಿಕ ಬೆಳಿಗ್ಗೆ ಸುಮಾರು 11.45 ಗಂಟೆಗೆ ಫಿರ್ಯಾದುದಾರರು ತನ್ನ ತಾಯಿಯವರ ಮೊಬೈಲ್‌ಗೆ ಕರೆ ಮಾಡಿ ಅವರೊಂದಿಗೆ ಮಾತನಾಡಿದ್ದು, ನಂತರ  ಮಧ್ಯಾಹ್ನ ಸುಮಾರು 2.00 ಗಂಟೆಗೆ ಫಿರ್ಯಾದುದಾರರು ತಮ್ಮ ಮನೆಗೆ ಬಂದಾಗ ದುರ್ಗಮ್ಮರವರು ಮನೆಯಲ್ಲಿ ಇಲ್ಲದೇ  ಇದ್ದು, ಆಸುಪಾಸು ಹುಡುಕಾಡಿದರೂ ಕಾಣದೇ ಇದ್ದಾಗ ನೆರೆಕರೆಯವರೊಂದಿಗೆ ಸೇರಿಕೊಂಡು ಹುಡುಕಿದಾಗ ಮಧ್ಯಾಹ್ನ ಸುಮಾರು 2.15 ಗಂಟೆಗೆ ಫಿರ್ಯಾದುದಾರರ ಮನೆಯ ಅಂಗಳದಲ್ಲಿರುವ ನೀರಿನ ಸಂಪಿನೊಳಗೆ ದುರ್ಗಮ್ಮರವರು ನೀರಿನಲ್ಲಿ ಮುಳುಗಿರುವುದು ಕಂಡು ಬಂದಿರುತ್ತದೆ. ಕೂಡಲೇ ಫಿರ್ಯಾದುದಾರರು ಮತ್ತು ಇತರರು ಸದ್ರಿಯವರನ್ನು ನೀರಿನಿಂದ ಮೇಲಕ್ಕೆತ್ತಿ ನೋಡಲಾಗಿ ಸದ್ರಿಯವರ ದೇಹದಲ್ಲಿ ಯಾವುದೇ ಚಲನೆ ಕಂಡು ಬರದೇ ಮೃತಪಟ್ಟಿರುವುದು ಕಂಡು ಬಂದಿರುತ್ತದೆ. ಸದ್ರಿ ದುರ್ಗಮ್ಮರವರು  ದಿನಾಂಕ;- 21.05.2022ರಂದು ಬೆಳಿಗ್ಗೆ 11.45 ಗಂಟೆಯಿಂದ ಮಧ್ಯಾಹ್ನ 2.00 ಗಂಟೆಯ ಮಧ್ಯೆ ಆಕಸ್ಮಿಕವಾಗಿ ತನ್ನ ಮನೆಯ ನೀರಿನ ಸಂಪಿಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ  ಠಾಣಾ ಯು.ಡಿಆರ್: 17/2022  ಕಲo: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 23-05-2022 12:09 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080