ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

ವಿಟ್ಲ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ನರಸಪ್ಪ ಪ್ರಾಯ 37 ವರ್ಷ ತಂದೆ ಬಟ್ಯ ಪೂಜಾರಿ ವಾಸ ಪುಣಿಚತ್ತಾರ ಬೈಲು ಮಾಣಿಲ ಗ್ರಾಮ  ಎಂಬವರ ದೂರಿನಂತೆ  ದಿನಾಂಕ  24.11.2021 ರಂದು ಖಾಸಗಿ ಕೆಲಸದ ನಿಮಿತ ವಿಟ್ಲಕ್ಕೆ ಬರುವರೇ ತನ್ನ ಬಾಬ್ತು ಆಲ್ಟೋ ಕಾರು ನಂಬ್ರ ಕೆಎ 53.ಎನ್ 2787 ನೇಯದನ್ನು ಚಲಾಯಿಸಿಕೊಂಡು ಕುದ್ದುಪದವು-ಮಾಣಿಲ ಸಾರ್ವಜನಿಕ ಡಾಂಬರು ರಸ್ತೆಯಲ್ಲಿ ಮಾಣಿಲ ಕಡೆಯಿಂದ ವಿಟ್ಲ ಕಡೆಗೆ ಬರುತ್ತಿರುವ ಸಮಯ ಮಧ್ಯಾಹ್ನ ಸುಮಾರು 3.15 ಗಂಟೆಗೆ ಬಂಟ್ವಾಳ ತಾಲೂಕು ಮಾಣಿಲ ಗ್ರಾಮದ ಮುರುವ ಕ್ರಾಸ್ ಬಳಿಗೆ ತಲುಪಿದಾಗ ಮಾಣಿಲ ಕಡೆಯಿಂದ ಬಂದ ಮೋಟಾರ್ ಸೈಕಲ್ ಸವಾರ ಅಜಾಗರೂಕತೆ ಹಾಗೂ ನಿರ್ಲಷತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರು ಚಲಾಹಿಸಿಕೊಂಡು ಹೋಗುತ್ತಿದ್ದ ಆಲ್ಟೋ ಕಾರನ್ನು ಓವರ್ ಟೇಕ್ ಮಾಡಿ ಕುದ್ದುಪದವು ಕಡೆಯಿಂದ ಮಾಣಿಲ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿದ್ದ ಬುಲೆಟ್ ಬೈಕ್ ಗೆ ಎದುರಿನಿಂದ ಸೈಡಿಗೆ ಡಿಕ್ಕಿನುಂಟು ಮಾಡಿದ ಪರಿಣಾಮ ಬುಲೆಟ್ ಬೈಕ್ ಸವಾರ ಬೈಕ್ ಸಮೇತ ರಸ್ತೆಗೆ ಎಸೆಯಲ್ಟಟ್ಟಿದ್ದು ಅಪಘಾತಪಡಿಸಿದ ಮೋಟಾರ್ ಸೈಕಲ್ ಸವಾರನು ಅಪಘಾತದ ಬಳಿಕ ಮೋಟಾರ್ ಸೈಕಲ್ ನ್ನು ನಿಲ್ಲಿಸದೆ ಗಾಯಗೊಂಡವರನ್ನು ಉಪಚರಿಸಿದೆ ಮೋಟಾರ್ ಸೈಕಲ್ ಸಮೇತ್‌ ಸ್ಥಳದಿಂದ ಪರಾರಿಯಾಗಿರುವುದಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 152/2021  ಕಲಂ:279,337   ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಕೆ.ಎಮ್. ಅಬ್ದುಲ್ ಕರೀಂ ಪ್ರಾಯ 48  ವರ್ಷ ತಂದೆ:ಕೆ.ಎಮ್. ಅಹಮ್ಮದ್ ಕುಂಞಿ  ವಾಸ:ಗೇರುಕಟ್ಟೆ ಮನೆ,ಕಳಿಯ ಗ್ರಾಮ,ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ:26-11-2021 ರಂದು ಉಸ್ಮಾನ್ ಹಾಜಿ ಎಂಬುವವರು ಗೇರುಕಟ್ಟೆ ಯಿಂದ ಜಾರಿಗೆಬೈಲು ಕಡೆಗೆ ತನ್ನ ಬಾಬ್ತು ಓಮ್ನಿ ಕಾರು ನಂಬ್ರ ಕೆಎ19 ಎಮ್ ಎ 4077 ನೇ ದನ್ನು ಚಲಾಯಿಸಿಕೊಂಡು ಹೋಗುತ್ತಿರುವ ಸಮಯ ಸುಮಾರು ಮಧ್ಯಾಹ್ನ 3-15 ಗಂಟೆಗೆ ಬೆಳ್ತಂಗಡಿ ತಾಲೂಕು ಕಳಿಯ ಗ್ರಾಮದ ನಾಳ ಮಾಯಿಲೋಡಿ ಎಂಬಲ್ಲಿಗೆ ತಲುಪುತ್ತಿದ್ದಂತೆ ವಿರುದ್ದ ದಿಕ್ಕಿನಿಂದ ಅಂದರೆ ಜಾರಿಗೆ ಬೈಲು ಕಡೆಯಿಂದ ಗೇರುಕಟ್ಟೆ ಕಡೆಗೆ ಕೆಎ19 ಎಮ್ ಸಿ 0796 ನೇ ಕಾರನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಓಮ್ನಿ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಚಾಲಕ ಉಸ್ಮಾನ್ ಹಾಜಿರವರಿಗೆ ಎಡಕಾಲಿನ ಕೋಲು ಕಾಲಿಗೆ, ಬಲಕಾಲಿನ ಮಂಡಿಗೆ ಗುದ್ದಿದ ರೀತಿಯ ರಕ್ತಗಾಯ ಹಾಗೂ ಕಾರಿನಲ್ಲಿದ್ದ ಆಸಿಯಮ್ಮ ಎಂಬವರಿಗೆ ಮುಖಕ್ಕೆ ತರಚಿದ ಹಾಗೂ ಬಲಭುಜಕ್ಕೆ ಗುದ್ದಿದ ರೀತಿಯ ಗಾಯಗಳಾಗಿದ್ದು ಗಾಯಾಳುಗಳು ಗುರುವಾಯನಕೆರೆ ಅಭಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಈ ಪೈಕಿ ಉಸ್ಮಾನ್ ಹಾಜಿರವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಕಡೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 85/2021, ಕಲಂ; 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 2

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಎಂ ಸುದರ್ಶನ್ ಕುಮಾರ್ (44) ತಂದೆ: ಎಂ ತಿರುಮಲೇಶ್ವರ ಭಟ್ ವಾಸ: ಮುಳಿಯ ಮನೆ, ಅಳಿಕೆ ಅಂಚೆ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ  ಬಿಸಿರೋಡ್ ನಲ್ಲಿ ಶ್ರೀನಿವಾಸ ಕಾಂಪ್ಲೆಕ್ಸ್ ನಲ್ಲಿ 2ನೇ ಮಹಡಿಯಲ್ಲಿ ವಕೀಲ ವೃತ್ತಿ ಮಾಡಿಕೊಂಡಿದ್ದು. ಪಿರ್ಯಾದಿದಾರರು ದಿನಾಂಕ:26-11-2021 ರಂದು  ಬೆಳಿಗ್ಗೆ 8.45 ಗಂಟೆಗೆ  ಕಛೇರಿಗೆ ಬಂದಾಗ ಯಾರೋ ಕಳ್ಳರು ಕಛೇರಿಯ ಒಂದು ಭಾಗದ ಶಟರಿನ ಬೀಗವನ್ನು ತುಂಡರಿಸಿ ನಂತರ ಕಛೇರಿಯಲ್ಲಿ ಇರುವ ಪ್ಯಾಬ್ರಿಕೇಷನ್ ನನ್ನು ತುಂಡರಿಸಿ ಕಛೇರಿಯ ಒಳಗೆ ನುಗ್ಗಿ ಡ್ರವರ್ ನಲ್ಲಿ ಇದ್ದ ಅಂದಾಜು ರೂ.3000/- ಹಣವನ್ನು ಕದ್ದುಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 136/2021  ಕಲಂ: 457, 380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುಂಜಾಲಕಟ್ಟೆ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಮೈಮುನಾ (41), ಗಂಡ: ಕೆ.ಎಸ್. ಮಹಮ್ಮದ್ ಹನೀಫ್, ವಾಸ: ಕೊಲ್ಯ ಮನೆ, ತಣ್ಣೀರುಪಂಥ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಬೆಳ್ತಂಗಡಿ ತಾಲೂಕು ತಣ್ಣೀರುಪಂಥ ಗ್ರಾಮದ ಕೊಲ್ಯ ಎಂಬಲ್ಲಿರುವ ಫಿರ್ಯಾದಿದಾರರ ವಾಸ್ತವ್ಯದ ಮನೆಯ ಅಂಗಳದಲ್ಲಿರುವ ಸೋಲಾರ್ ಶೀಟ್‌ನಡಿಯಲ್ಲಿ ಒಣ ಹಾಕಿದ್ದ ಸುಮಾರು 4 ಕ್ವಿಂಟಾಲ್ ಅಡಿಕೆಯನ್ನು ದಿನಾಂಕ: 24-11-2021 ರಂದು ಸಂಜೆ 4.30 ಗಂಟೆಯಿಂದ ದಿನಾಂಕ: 25-11-2021 ರಂದು ಸಂಜೆ 4.00 ಗಂಟೆಯ ಮಧ್ಯಕಾಲದಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತಿನ ಮೌಲ್ಯ ರೂಪಾಯಿ ಒಂದು ಲಕ್ಷದ ಐವತ್ತು ಸಾವಿರ ಆಗಬಹುದು. ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 86/2021 ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಅಸ್ವಾಭಾವಿಕ ಮರಣ ಪ್ರಕರಣ: 3

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಲಿಂಗಪ್ಪ (60) ತಂದೆ: ಕರಿಯಪ್ಪ ಮೂಲ್ಯ ವಾಸ: ಕಾರಾಜೆ ಮನೆ, ಸಜಿಪಮೂಡ ಗ್ರಾಮ ಮತ್ತು ಅಂಚೆ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಅವರ ಮಗಳು ದಿನಾಂಕ 26.11.2021 ರಂದು ಸುಮಾರು 5.30 ಗಂಟೆಗೆ ಹಲ್ಲು ಉಜ್ಜುತ್ತಾ ತೋಟದ ಕಡೆ ಹೋದವಳು  ಸುಮಾರು ಹೊತ್ತಾದರೂ ವಾಪಾಸು ಬರದೇ ಇದ್ದಾಗ ಮಗ ಯಶ್ವಿತ್ ಹುಡುಕಾಡುತ್ತಾ ಹೋದಾಗ ತೋಟದ ಬಾವಿಯಲ್ಲಿ ರಶ್ಮಿತಾಳ ಒಂದು ಚಪ್ಪಲಿ ಕಾಣುತ್ತಿದ್ದು, ಕೂಡಲೇ ಪಿರ್ಯಾದಿದಾರರು ಸಂಬಂಧಿಕರಾದ ಶಿವನಾಂದ ಹಾಗೂ ಭವಿಷ್ ನನ್ನು ಕರೆದುಕೊಂಡು ತೋಟಕ್ಕೆ ಹೋಗಿ ಬಾವಿಗೆ ಇಳಿದು ಹುಡುಕಾಡಿದ್ದು, ರಶ್ಮಿತಾಳ ಚೂಡಿದಾರವು ಕೈಗೆ ಸಿಕ್ಕಿದ್ದು, ಅದನ್ನು ಹಿಡಿದು ಮೇಲಕ್ಕೆತ್ತಿ ರಿಕ್ಷಾವೊಂದರಲ್ಲಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 42-2021 ಕಲಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ನಗರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಪ್ರಕಾಶ್ (41) ತಂದೆ:ದಿ|| ಪೂವಪ್ಪ ಮೂಲ್ಯ ವಾಸ:ಪೊಡಿಕಲ್ ಮನೆ, ಕೊಡ್ಮಾಣ್ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ  ಪಿರ್ಯಾಧಿದಾರರ ಮಾವನವರಾದ ನಾರಾಯಣ ಕುಲಾಲ್ (62) ರವರು ಟೈಲರಿಂಗ್ ವೃತ್ತಿಯನ್ನು ಮಾಡಿಕೊಂಡಿದ್ದು ದಿನಾಂಕ:25.11.2021 ರಂದು ಬೆಳಿಗ್ಗೆ 9.30 ಗಂಟೆಗೆ ಮನೆಯಿಂದ ಕೆಲಸದ ಬಗ್ಗೆ ಹೋದವರು ಸಂಜೆಯಾದರೂ ಮನೆಗೆ ಬಾರದೆ ಇದ್ದು ಈ ಬಗ್ಗೆ ಊರೆಲ್ಲ ವಿಚಾರಿಸಿ ಮಾವನವರ ಪತ್ತೆಯ ಬಗ್ಗೆ ನೇತ್ರಾವತಿ ನದಿಯ ಕಿನಾರೆಯಲ್ಲಿ ಹುಡುಕಾಡುತ್ತಿರುವಾಗ ದಿನಾಂಕ: 26.11.2021 ರಂದು ಅಪರಾಹ್ನ 3.00 ಗಂಟೆಯ ವೇಳೆಗೆ ನೇತ್ರಾವತಿಯ ಹಳೆ ಸೇತುವೆ ಬಳಿ ಒಂದು ಮೃತ ದೇಹವು ಸೇತುವೆಯ ಪಿಲ್ಲರ್ ಬುಡದಲ್ಲಿ ಕವಚಿ ಬಿದ್ದ ಸ್ಥಿತಿಯಲ್ಲಿದ್ದು ಆ ಮೃತ ದೇಹವನ್ನು ಎತ್ತಿ ನೋಡಲಾಗಿ ಅದು ಪಿರ್ಯಾದುದಾರರ ಮಾವನವರ ಮೃತದೇಹವಾಗಿರುತ್ತದೆ. ಪಿರ್ಯಾದುದಾರರ ಮಾವನವರು ಯಾವುದೋ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ:25.11.2021 ರಂದು 9.30 ಗಂಟೆಯಿಂದ ದಿನಾಂಕ: 26.11.2021 ರಂದು ಅಪರಾಹ್ನ 3.00 ಗಂಟೆಯ ಮಧ್ಯೆ ನೇತ್ರಾವತಿ ನದಿ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 43-2021 ಕಲಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮಂಜುಳಾ (36) ಗಂಡ: ನವೀನಕುಮಾರ, ಪಾಲಡ್ಕ ಮನೆ  ಉಬರಡ್ಕ ಮಿತ್ತೂರು ಗ್ರಾಮ, ಸುಳ್ಯ ತಾಲ್ಲೂಕು ಎಂಬವರ ದೂರಿನಂತೆ ಅವರ ಗಂಡ ನವೀನ್ ಕುಮಾರ್ (45) ತಂದೆ: ಕೃಷ್ಣ ಬೆಳ್ಚಾಪಾಡ ಎಂಬಾತನು ವಿಪರೀತ ಮದ್ಯ ಸೇವನೆ ಮಾಡುವ ಚಟವನ್ನು ಹೊಂದಿದ್ದು, ದಿನಾಂಕ: 25.11.2021 ರಂದು ಮದ್ಯಪಾನ ಮಾಡಿ ತಮ್ಮ ಮನೆಯಾದ ಸುಳ್ಯ ತಾಲೂಕು ಉಬರಡ್ಕ ಮಿತ್ತೂರು ಗ್ರಾಮದ ಪಾಲಡ್ಕ ಎಂಬಲ್ಲಿ ಸಮಯ ಸುಮಾರು  21:00 ಗಂಟೆಗೆ ಮನೆಯ ಅಡ್ಡಕ್ಕೆ ಮತ್ತು ಕುತ್ತಿಗೆಗೆ ಸೀರೆಯಿಂದ ನೇಣು ಬಿಗಿದುಕೊಂಡು ನೇತಾಡುತ್ತ ಸ್ಥಿತಿಯಲ್ಲಿದ್ದವನ್ನು ಚಿಕಿತ್ಸೆಯ ಬಗ್ಗೆ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಅಲ್ಲಿನ ವೈದ್ಯರು ನವೀನ್ ಕುಮಾರನು ಪರೀಕ್ಷಿಸಿ  23:15 ಗಂಟೆಗೆ ಮೃತ ಪಟ್ಟಿರುವುದಾಗಿ ದೃಡಪಡಿಸಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಯುಡಿ ಆರ್ ಸಂಖ್ಯೆ 50/2021 ಕಲಂ 174 ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ

ಇತ್ತೀಚಿನ ನವೀಕರಣ​ : 27-11-2021 11:12 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080