ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರವಿಕುಮಾರ್ ಕೆ, ಬಿ (40) ತಂದೆ: ಬಾಲಕೃಷ್ಣ ಆಚಾರ್ಯ ವಾಸ: ಕಲ್ಲುಗುಂಡಿ ಜನತಾ ಕಾಲೋನಿ ಸಂಪಾಜೆ ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರ ಚಿಕ್ಕಪ್ಪ ಚಂದ್ರಶೇಖರ (50) ತಂದೆ: ದಿ, ರಾಮಚಾರಿ ಎಂಬವರು ದಿನಾಂಕ 27.05.2021 ರಂದು ಪಿರ್ಯಾದುದಾರರ ಮನೆಯಿಂದ ಕೆಲಸಕ್ಕೆ ಹೋಗಿದ್ದು ವಾಪಸ್ ಮನೆಗೆ ಬರುವರೇ ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಕಲ್ಲುಗುಂಡಿ ಸೊಸೈಟಿಯ ಬಳಿ ರಸ್ತೆದಾಟುತ್ತಿರುವ ಸಮಯ ಸುಮಾರು 18:30 ಗಂಟೆಗೆ ಮಡೆಕೇರಿ ಕಡೆಯಿಂದ ಸುಳ್ಯ ಕಡೆಗೆ ಕೆಎ 11 ಬಿ 9881 ದೋಸ್ತ್ ಟೆಂಪೋ ಅದರ ಚಾಲಕ ಶಶಾಂಕ್ ಎಂಬಾತನು  ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಟೆಂಪೋ ವನ್ನು ಆತನ ತೀರ ಬಲಬದಿಗೆ ಚಲಾಯಿಸಿಕೊಂಡು ಬಂದು ಚಂದ್ರಶೇಖರ ರವರಿಗೆ ಡಿಕ್ಕಿವುಂಟು ಮಾಡಿದ ಪರಿಣಾಮ ತಲೆಗೆ ಹಾಗೂ ಬಲಕೈಗೆ ಗಂಭೀರ ಗಾಯವಾಗಿದ್ದು, ಪಿರ್ಯಾದುದಾರು ಮತ್ತು ಇತರರು ಅವರನ್ನು ಆಂಬ್ಯುಲೇನ್ಸ್ ವೊಂದರಲ್ಲಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಪರೀಕ್ಷಿಸಿದ ವೈದ್ಯರು ಸಮಯ ಸುಮಾರು 20:35 ಗಂಟೆಗೆ ಚಂದ್ರಶೇಖರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ. ಅ.ಕ್ರ 38/2021 ಕಲಂ 279, 304(ಎ) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 2

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ವೀರಪ್ಪ ಗೌಡ ಪ್ರಾಯ:65 ವರ್ಷ ತಂದೆ; ದಿ/ ಅಣ್ಣು ಗೌಡ ವಾಸ; ಜೋಡುಸ್ಥಾನ ಮನೆ ಧರ್ಮಸ್ಥಳ ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದುದಾರರ ಅಳಿಯ ಶ್ರೀಧರ ಗೌಡ (42) ಎಂಬವರು  ದಿನಾಂಕ;27-05-2021 ರಂದು  ಬೆಳಿಗ್ಗೆ 7.00 ಗಂಟೆಗೆ ಗಾರೆ ಕೆಲಸಕ್ಕೆಂದು ಮನೆಯಿಂದ  ಹೋಗಿದ್ದು ಸಂಜೆ 6.00 ಗಂಟೆ ಸಮಯಕ್ಕೆ ಪಿರ್ಯಾದುದಾರರ ಮಗ ಪ್ರಶಾಂತನು ದೂರವಾಣಿ ಕರೆಮಾಡಿ ಬಾವ ಶ್ರೀಧರನು ಮದ್ಯಾಹ್ನ 3.00 ಗಂಟೆ ಸಮಯಕ್ಕೆ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಲೀಲಾಧರ, ಯತೀಶ್, ವಸಂತರವರೊಂದಿಗೆ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಕೂಡಿಗೆ ಎಂಬಲ್ಲಿರುವ ನೇತ್ರಾವತಿ ನದಿಗೆ ಸೇರುವ ಕೂಡಿಗೆ ಹೊಳೆಯಲ್ಲಿ ಸ್ನಾನ ಮಾಡುತ್ತಿರುವಾಗ ಆಕಸ್ಮಿಕವಾಗಿ ನೀರಿನ ಸೆಳೆತಕ್ಕೆ ಸಿಕ್ಕಿ ನೀರಿನಲ್ಲಿ ಮುಳುಗಿ ಹೋಗಿರುತ್ತಾರೆಂದು ತಿಳಿಸಿದಂತೆ ಪಿರ್ಯಾದುದಾರರು ಅಲ್ಲಿಗೆ ಬಂದಿದ್ದು ಆ ಸಮಯ ಅಲ್ಲಿ ಸೇರಿರುವ ಜನರು ಶ್ರೀಧರನನ್ನು ನೀರಿನಲ್ಲಿ ಹುಡುಕುತ್ತಿದ್ದರು. ಸಂಜೆ ಸುಮಾರು 6.45 ಗಂಟೆ ಸಮಯಕ್ಕೆ  ಅಳಿಯ ಶ್ರೀಧರನ ಮೃತ ದೇಹವು ನೀರಿನಲ್ಲಿ ದೂರೆಕಿರುತ್ತದೆ. ಪಿರ್ಯಾದುದಾರರ ಅಳಿಯನು ಕೂಡಿಗೆ ಹೊಳೆಯಲ್ಲಿ ತನ್ನ ಸ್ನೇಹಿತರೊಂದಿಗೆ ಸ್ನಾನ ಮಾಡುತ್ತಿರುವ ಸಮಯ ಆಕಸ್ಮಿಕವಾಗಿ ನೀರಿನ ಸೆಳೆತಕ್ಕೆ ಸಿಕ್ಕಿ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಯುಡಿಆರ್ ನಂ:36/2021 ಕಲಂ:174  ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸೇವಂತ್, 31 ವರ್ಷ, ತಂದೆ: ಚಂದ್ರಶೇಖರ.ಕೆ, ವಾಸ: ಅಲಗಿನಡ್ಕ ಮನೆ, ಅಮರಪಡ್ನೂರು ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ಸುಳ್ಯ ತಾಲೂಕು ಅಮರಪಡ್ನೂರು ಗ್ರಾಮದ ಅಲಗಿನಡ್ಕ ಎಂಬಲ್ಲಿನ ವಾಸಿ ಚಂದ್ರಶೇಖರ.ಕೆ ಪ್ರಾಯ 54 ವರ್ಷ, ತಂದೆ: ಹರಿಯಪ್ಪ ಗೌಡ ಎಂಬವರು ಮಧ್ಯಾಹ್ನ 12-00 ಗಂಟೆಯಿಂದ 13-30 ಗಂಟೆಯ ಮಧ್ಯೆ ಅಲಗಿನಡ್ಕ ಎಂಬಲ್ಲಿರುವ ಅವರ ಬಾಬ್ತು ತೋಟದಲ್ಲಿದ್ದ ಕೊಕ್ಕೋ ಮರದ ರೆಂಬೆಗೆ ನೈಲಾನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ  ಬೆಳ್ಳಾರೆ ಪೊಲೀಸ್ ಠಾಣಾ  ಅಕ್ರ 15/2021  ಕಲಂ 174 ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 28-05-2021 11:02 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080