ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

  • ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಗಿರಿಯಪ್ಪ ಗೌಡ (64) ತಂದೆ: ಕೃಷ್ಣಪ್ಪ ಗೌಡ ವಾಸ: ಕೊನಡ್ಕ ಮನೆ, ಕಲ್ಮಕಾರು ಗ್ರಾಮ ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರ ಮಗ ಹಿತೇಶ್ (27) ಎಂಬಾತನು ದಿನಾಂಕ 21.06.2022 ರಂದು ಸುಳ್ಯದಿಂದ ಪುತ್ತೂರು ಕಡೆಗೆ ತನ್ನ ಬಾಬ್ತು ಮೋಟಾರ್ ಸೈಕಲ್ ನಂಬ್ರ ಕೆಎ 19 ಇಕೆ 0114 ನೇದರಲ್ಲಿ ಹೋಗುತ್ತಿರುವರೇ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಜ್ಯೋತಿ ಸರ್ಕಲ್ ಎಂಬಲ್ಲಿ ಸಮಯ ಸುಮಾರು 16;00 ಗಂಟೆಗೆ ತಲುಪುತ್ತಿದಂತೆ ರಸ್ತೆಯ ಎಡಬದಿಗೆ ನಿಲ್ಲಿಸಿದ ಕಾರು ನಂಬ್ರ ಕೆಎ 03 ಎಂಜಿ 8282 ನೇದರ ಕಾರು ಚಾಲಕ ಉದಯಕುಮಾರ ಎಂಬಾತನು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಒಮ್ಮೇಲೇ ಕಾರನ್ನು ಡಾಮಾರು ರಸ್ತೆ ತಿರುಗಿಸಿದ ಪರಿಣಾಮ ಮೋಟಾರವ ಸೈಕಲ್ ಗೆ ಡಿಕ್ಕಿವುಂಟಾಗಿ ಹಿತೇಶ್ ಮೋಟಾರ್ ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು, ಮೂಗಿಗೆ ಮತ್ತು ಹಲ್ಲಿಗೆ ರಕ್ತಗಾಯವಾಗಿದ್ದವನ್ನು ಅಲೇ ಇದ್ದ ವಿವೇಕ್ ಎಂಬವರು ಚಿಕಿತ್ಸೆಯ ಬಗ್ಗೆ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಸುಳ್ಯ ಕೆ,ವಿ,ಜಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ ಅ.ಕ್ರ 76/2022 ಕಲಂ: 279, 337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕೊಲೆ ಪ್ರಕರಣ: 1

  • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸಂಜೀವ ಡಿ ಪ್ರಾಯ; 39 ವರ್ಷ ತಂದೆ; ಅಣ್ಣು ವಾಸ:ದೇವಿನಗರ ಮನೆ, ಅನಂತಾಡಿ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ:27-06-2022 ರಂದು ಮದ್ಯಾಹ್ನ 2.50 ಗಂಟೆಯಿಂದ 3.00 ಗಂಟೆಯ ಮದ್ಯೆ ಸಮಯದಲ್ಲಿ ಬಂಟ್ವಾಳ ತಾಲೂಕು ನೆಟ್ಲಮುಡ್ನೂರು ಗ್ರಾಮದ ಗಣೇಶ್‌ ನಗರದ ಜನಪ್ರೀಯಾ ಹಾಲ್‌ನ ಮುಂಭಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಆರೋಪಿ ಅಟೋ ರಿಕ್ಷಾ ನಂಬ್ರ 21-ಬಿ-6071ನೇದರ ಚಾಲಕ ಶ್ರೀಧರ ಎಂಬಾತನು ಮೃತೆ ಶಕುಂತಳನ್ನು ಕೊಲೆ ಮಾಡುವ ಉದ್ದೇಶದಿಂದ ಶಕುಂತಾಳರವರ ಮುಖ, ಕೈ ,ಹೊಟ್ಟೆ ತಲೆಯ ಭಾಗ ಹಾಗೂ ದೇಹದ ಇತರೆ ಕಡೆಗಳಿಗೆ ಚೂರಿಯಿಂದ ತಿವಿದು ಗಾಯಗೊಳಿಸಿದ್ದು, ಆಕೆಯನ್ನು ಅಂಬುಲೆನ್ಸ ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮದ್ಯಾಹ್ನ 3.30 ಗಂಟೆಗೆ ವೈದೈರು ಪರೀಕ್ಷಿಸಿ ಮೃತಪಟ್ಟಿರುವ ಬಗ್ಗೆ ಧೃಡಪಡಿಸಿರುವುದಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣಾ ಅ ಕ್ರ 107/2022 ಕಲಂ:302 ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

  • ಪುತ್ತೂರು ಗ್ರಾಮಾಂತರ  ಪೊಲೀಸ್ ಠಾಣೆ : ದಿನಾಂಕ 27.06.2022  ರಂದು ಪುತ್ತೂರು ಗ್ರಾಮಾಂತರ  ಠಾಣೆಯಲ್ಲಿ ಅ.ಕ್ರ : 73/2022  ಕಲo: 324, 354(A),323, 504,506,34) ಐಪಿಸಿ, ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

  • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಕುಸುಮಾ ಪ್ರಾಯ.45 ವರ್ಷ ಗಂಡ ಚನಿಯಪ್ಪ ಬಿ ವಾಸ.ಡೊಂಬಟೆ ಬರಿ ಮನೆ ನಿಡ್ಪಳ್ಳಿ ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರವರ ಗಂಡ ಚನಿಯಪ್ಪ ಬಿ ಎಂಬುವರು ರೆಂಜದಲ್ಲಿ ಟೈಲರಿಂಗ್ ಕೆಲಸ ಮಾಡಿಕೊಂಡಿದ್ದು, ದಿನಾಂಕ 27.06.2022 ರಂದು ಬೆಳಗಿನ ಜಾವ ಸಮಯ ಸುಮಾರು 04.45 ಗಂಟೆಗೆ ಮನೆಯಲ್ಲಿ ಮಲಗಿದ್ದ  ಫಿರ್ಯಾದಿದಾರರ ಗಂಡ ಚನಿಯಪ್ಪರವರು ಏಕಾಏಕಿ ಅಸ್ವಸ್ತಗೊಂಡಿದ್ದು,ಆ ವೇಳೆ ಫಿರ್ಯಾದಿದಾರರು ಮತ್ತು ಮಗ ಅಭಿಲಾಷ್ ಡಿ.ಸಿ ರವರು ಚನಿಯಪ್ಪರವರನ್ನು ಆರೈಕೆ ಮಾಡಿದರು ಚೇತರಿಸಿಕೊಳ್ಳದೇ ಇದ್ದು ಮಾತು ಕೂಡ ಆಡದೇ ಇದ್ದುದರಿಂದ ಜೀಪೊಂದರಲ್ಲಿ ಸದ್ರಿರವರನ್ನು ಚಿಕಿತ್ಸೆಯ ಬಗ್ಗೆ ಪುತ್ತೂರು ಸರ್ಕಾರಿ ಅಸ್ಪತ್ರೆ ಗೆ ಕರೆದುಕೊಂಡು ಹೋಗಿದ್ದು, ಸದ್ರಿ ಆಸ್ಪತ್ರೆಯಲ್ಲಿ ಬೆಳ್ಳಿಗ್ಗೆ 06.50 ಗಂಟೆಗೆ  ಪರೀಕ್ಷಿಸಿದ ವೈಧ್ಯಾಧಿಕಾರಿಯವರು ಚನಿಯಪ್ಪ ಬಿ ರವರು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ  ಠಾಣಾ ಯು.ಡಿ.ಆರ್  : 22/2022  ಕಲo: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಕಡಬ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ತಂಗಚ್ಚನ್  ಪ್ರಾಯ: 68 ವರ್ಷ, ತಂದೆ: ಸ್ಯಾಮುವೇಲ್ ವಾಸ: ಚೆರುವಿಳ ಮನೆ ನಾಕೂರು. ಕೋಡಿಂಬಾಳ ಗ್ರಾಮ  ಕಡಬ ಎಂಬವರ ದೂರಿನಂತೆ ಪಿರ್ಯಾದುದಾರರ ತಮ್ಮನಾದ ತೋಮಸ್‌ ಎಂಬಾತನು ಕೋಡಿಂಬಾಳ ಗ್ರಾಮದ ಕೋಡೆಂಕೇರಿ ಎಂಬಲ್ಲಿನ ನಿವಾಸಿಯಾಗಿರುತ್ತಾನೆ ತೋಮಸ್‌ ಕುಡಿತದ ಚಟವುಳ್ಳವನಾಗಿದ್ದು ದಿನಾಂಕ:27.06.2022 ರಂದು ತೋಮಸ್‌ ಎಂಬಾತನು ಪಿರ್ಯಾದುದಾರರ ಮನೆಗೆ ಬಂದು ನಂತರ ಆತನ ಮನೆಯಾದ ಕೋಡಿಂಬಾಳ ಗ್ರಾಮದ ಕೋಡೆಂಕೇರಿ ಎಂಬಲ್ಲಿಗೆ ಹೋಗಿದ್ದು ತೋಮಸ್‌ ಎಂಬಾತನು ದಿನಾಂಕ:27.06.2022 ರಂದು ತನ್ನ ಮನೆಯ ಪಕ್ಕದಲ್ಲಿದ್ದ ಬಿಜು ಎಂಬವರ ಮನೆಯ ಮುಂಬಾಗದಲ್ಲಿದ್ದ ತೆಂಗಿನ ಮರದಿಂದ ಅಲ್ಯೂಮಿನಿಯಂ ತೋಟಿಯಿಂದ ತೆಂಗಿನ ಕಾಯಿ ತೆಗೆಯುವ ಸಮಯ ಅಲ್ಯೂಮಿನಿಯಂ ತೋಟಿ ತೆಂಗಿನ ಮರದ ಪಕ್ಕದಲ್ಲಿದ್ದ ವಿದ್ಯುತ್‌ ಲೈನಿಗೆ ತಾಗಿ ಅಲ್ಯಮೀನಿಯಂ ತೋಟೆಯಿಂದ ವಿದ್ಯುತ್‌ ತೋಮಸ್‌ರವರಿಗೆ ತಾಗಿ ತೋಮಸ್‌ ಎಂಬಾತನು ಮೃತಪಟ್ಟಿರುವುದಾಗಿರುತ್ತದೆ. ಈ ಬಗ್ಗೆ ಕಡಬ ಠಾಣಾ UDR ನಂಬ್ರ: 19/2022 ಕಲಂ : 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 28-06-2022 12:05 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080