ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ನವೀನ  ಎ ಎಸ್ (36) ತಂದೆ: ಶೇಷಪ್ಪ ಗೌಡ ವಾಸ: ಅಳಿಕೆ ಮನೆ, ಅರಂತೋಡು ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ತನ್ನ ಬಾಬ್ತು ಮೋಟಾರ್ ಸೈಕಲ್ ನಲ್ಲಿ ದಿನಾಂಕ 27.08.2021 ರಂದು  ಓಡಾಬೈ ಯಿಂದ ಸುಳ್ಯ ಪೇಟೆಗೆ ಬರುವರೇ, ಸುಮಯ ಸುಮಾರು 12:15 ಗಂಟೆಗೆ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಸರ್ಕಾರಿ ಆಸ್ಪತ್ರೆಯ ಬಳಿ ತಲುಪುತ್ತಿದ್ದಂತೆ, ಪಿರ್ಯಾದುದಾರರ ಮುಂಬದಿಯಲ್ಲಿ ಚಲಾಯಿಸುತ್ತಿದ್ದ, ಕೆಎ 22 ಎಂಡಿ 0009 ಕಾರು ಚಾಲಕ ಪ್ರವೀಣ್ ಕುಮಾರ್ ಎಂಬಾತನು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಒಮ್ಮೆಲೆ ತನ್ನ ಬಲಬದಿಗೆ ತಿರುಗಿಸಿದ ಪರಿಣಾಮ ಆತನ ಹಿಂಬದಿಯಲ್ಲಿ ಸವಾರಿ ಮಾಡಿಕೊಂಡು ಬರುತ್ತಿದ್ದ, ಕೆಎ 21 ಇಎ 3874 ನೇದರ ಮೋಟಾರ್ ಸೈಕಲ್ ಸವಾರ ರಾಕೇಶ್ ಎಂಬಾತನು ಕಾರಿಗೆ ಡಿಕ್ಕಿವುಂಟು ಮಾಡಿ, ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ, ರಾಕೇಶನಿಗೆ ಮೂಗಿಗೆ, ಎಡ ಕೆನ್ನೆಗೆ, ಎಡಬದಿ ಕೈಗೆ, ಬಲಬದಿ ಕೆನ್ನೆಗೆ, ರಕ್ತಗಾಯವಾದವನನ್ನು ಪಿರ್ಯಾದುದಾರರು ಉಪಚರಸಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ನಂತರ ಹೆಚ್ಚಿನ ಚಿಕಿತ್ಸೆಗೆ  ಕೆ.ವಿ.ಜಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಮಂಗಳೂರು ಕೆ, ಎಂ,ಸಿ ಆಸ್ಪತ್ರೆಗೆ ದಾಖಲಿಸುವಂತೆ ತಿಳಿಸಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ ಅ,ಕ್ರ 63/2021 ಕಲಂ 279.337 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

ಧರ್ಮಸ್ಥಳ ಪೊಲೀಸ್ ಠಾಣೆ : ದಿನಾಂಕ:28-08-2021 ರಂದು 11.00 ಸಮಯಕ್ಕೆ ಧರ್ಮಸ್ಥಳ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಕೃಷ್ಣಕಾಂತ ಪಾಟೀಲ್  ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಬೆಳ್ತಂಗಡಿ ತಾಲೂಕು ಮುಂಡಾಜೆ ಗ್ರಾಮದ ದೇವಿನಗರ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಗಳನ್ನು ಜೊತೆಯಲ್ಲಿ ಕರೆದುಕೊಂಡು 11-45 ಗಂಟೆಗೆ ಸೋಮಂತ್ತಡ್ಕದಿಂದ ಪಂಚರುಗಳನ್ನು ಕರೆದುಕೊಂಡು ಬೆಳ್ತಂಗಡಿ ತಾಲೂಕು ಮುಂಡಾಜೆ ಗ್ರಾಮದ ದೇವಿನಗರ ಎಂಬಲ್ಲಿಗೆ 12.00 ಗಂಟೆಗೆ ತಲುಪಿದಾಗ ಓರ್ವ ವ್ಯಕ್ತಿಯು ಸಂಶಾಯಸ್ಪದವಾಗಿ ಕೈಯಲ್ಲಿ ಒಂದು ಪ್ಲಾಸ್ಟಿಕ್  ಚೀಲ ಹಿಡಿದುಕೊಂಡು   ನಿಂತಿರುವುದು ಕಂಡುಬಂದಿದ್ದು ಜೀಪನ್ನು ಅಲ್ಲಿ ನಿಲ್ಲಿಸಿದಾಗ ಸಂಶಾಸ್ಪದವಾಗಿ ನಿಂತಿದ್ದ  ಆ ವ್ಯಕ್ತಿಯು ಕೈಲ್ಲಿದ್ದ ಪ್ಲಾಸ್ಟಿಕ್  ಚೀಲವನ್ನು  ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು, ಸದ್ರಿ ಪ್ಲಾಸ್ಟಿಕ್  ಚೀಲವನ್ನು  ಪಂಚರ ಸಮಕ್ಷಮ ಪರಿಶೀಲಿಸಲಾಗಿ 180 ಎಮ್ ಎಲ್ ನ   ಇಂಗ್ಲೀಷ್ನಲ್ಲಿ MYSORE LANCER  ಎಂದು ಬರೆದಿರುವ ಮದ್ಯ ತುಂಬಿದ  ಟೆಟ್ರಾ ಪ್ಯಾಕೇಟ್   -40 ಇದರ ಅಂದಾಜು ಮೌಲ್ಯ ರೂ 2,806/- ಆಗಬಹುದು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ 49/2021 ಕಲಂ: 32,34 ಕರ್ನಾಟಕ ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

 

ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶಂಕರ, ಪ್ರಾಯ: 39 ವರ್ಷ, ತಂದೆ: ದಿ: ಸಂಜೀವ  ಸಮಗಾರ, ವಾಸ:  ಶಾಂತಿ ನಿವಾಸ, ಕಕ್ಯಾನ ಮನೆ, ಲಾಯಿ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಅವರ ಅಣ್ಣ ಸಂತೋಷ್ ಕುಮಾರ್ (45) ಎಂಬವರು ದಿನಾಂಕ: 28-08-2021 ರಂದು ಬೆಳಿಗ್ಗೆ 08-00 ಗಂಟೆಯಿಂದ ಬೆಳಿಗ್ಗೆ 11-00 ಗಂಟೆಯ ಮದ್ಯದ ಅವಧಿಯಲ್ಲಿ ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ಆದರ್ಶ ನಗರ ಎಂಬಲ್ಲಿನ ಸಾರ್ವಜನಿಕ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಠಾಣಾ ಯು ಡಿಆರ್ ನಂಬ್ರ: 26-2021  ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ವೇಣೂರು ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ರಮೇಶ್ ಎನ್ (37) ತಂದೆ; ದಿ.ನಾರಾಯಣ ನಾಯ್ಕ್, ವಾಸ: ಪಡ್ಡೋಡಿ ಮನೆ ನಾಲ್ಕೂರು  ಗ್ರಾಮ , ಬೆಳ್ತಂಗಡಿ  ತಾಲೂಕು ಎಂಬವರ ದೂರಿನಂತೆ ತನ್ನ ತಾಯಿ ಶ್ರೀಮತಿ ಜಯಂತಿ ರವರು ದಿನಾಂಕ: 28.08.2021 ರಂದು ಸಮಯ 14..00  ಗಂಟೆ ಸುಮಾರಿಗೆ ಮನೆಯವರೆಲ್ಲರೂ ಊಟ ಮಾಡಿ  ಮಲಗಿದ್ದು,ಸಮಯ ಸುಮಾರು 17.00 ಗಂಟೆಗೆ ಎದ್ದು ನೋಡಿದಾಗ ಪಿರ್ಯಾದಿದಾರರ ತಾಯಿಯವರು ಕಾಣದೇ ಇರುವುದರಿಂದ ಹುಡುಕಾಡಿದಲ್ಲಿ ಹಳೆಯ ಮನೆಯ ಹಿಂಭಾಗದ ಕೊಟ್ಟಿಗೆಯ ಮೂಲೆಯಲ್ಲಿ ವಿದ್ಯುತ್ ವೈಯರ್ ನಿಂದ ಕುತ್ತಿಗೆಗೆ ಸಿಮೆಂಟ್ ಕಂಬದ ತುಂಡಿಗೆ ನೇಣು ಬಿಗಿದು ನೇತಾಡಿಕೊಂಡಿದನ್ನು ಕಂಡು ಜೀವ ಇರಬಹುದೆಂದು ಪಿರ್ಯಾದಿದಾರರು ಮತ್ತು ಅವರ ಹೆಂಡತಿ ಸೇರಿ ನೇಣಿನಿಂದ ಕೆಳಗೆ ಇಳಿಸಿ ನೋಡಿದಾಗ ಪಿರ್ಯಾದಿದಾರರ ತಾಯಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಯು ಡಿಆರ್ ನಂಬ್ರ: 22-2021 ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 29-08-2021 12:58 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080