ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಬಿಫಾತುಮ್ಮ ಪ್ರಾಯ 75 ಗಂಡ:ಅಬೂಬಕ್ಕರ್ವಾಸ:ಲೊರೆಟ್ಟೊಪದವು ಮನೆಬ-ಕಸಬಾ ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 29-08-2022 ರಂದು ತನ್ನ ತಮ್ಮನ ಹೆಂಡತಿ ಹಾಗೂ ಮೊಮ್ಮಗ ರವರೊಂದಿಗೆ ಅವರ ಅಳಿಯ ರವರ ಬಾಬ್ತು KA 19 D 3605 ನೇ ಆಟೋ ರಿಕ್ಷಾ ದಲ್ಲಿ ಮನೆಯಿಂದ ಹೊರಟು ಸಜೀಪದಲ್ಲಿರುವ ಸಂಭಂದಿಕರ ಮನೆಗೆ   ಹೋಗಿ ವಾಪಾಸು ಮನೆಗೆ ಬರುತ್ತಾ ಸಮಯ ಸುಮಾರು 17:45 ಗಂಟೆಗೆ ಬಂಟ್ವಾಳ ತಾಲೂಕು ಸಜಿಪ ಮುನ್ನೂರು ಗ್ರಾಮದ ಮಾರ್ನಬೈಲು ಎಂಬಲ್ಲಿಗೆ ತಲುಪಿದಾಗ ರಸ್ತೆಗೆ ನಾಯಿಯೊಂದು ಅಡ್ಡ ಬಂದಿದ್ದು ಆಟೋ ರಿಕ್ಷಾವನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬರುತ್ತಿದ್ದವನು ಒಮ್ಮೆಲೆ ಬ್ರೇಕ್ ಹಾಕಿದಾಗ ಚಾಲಕನ ನಿಯಂತ್ರಣ ತಪ್ಪಿ ಆಟೋ ರಿಕ್ಷಾವು ಬಲ ಭಾಗಕ್ಕೆ ಮಗುಚಿ ಬಿದ್ದು ಅಪಘಾತವಾಗಿದ್ದು, ಪರಿಣಾಮ ಅಪಘಾತದಲ್ಲಿ  ಫಿರ್ಯಾದಿದಾರರ ಎಡ ಕೋಲು ಕೈಗೆ, ಬಲ ಭುಜದ ತೋಳಿಗೆ ಗುದ್ದಿದ ಗಾಯವಾಗಿದ್ದು ಫಿರ್ಯಾದಿದಾರರ ತಮ್ಮನ ಹೆಂಡತಿ  ರವರಿಗೆ ಬಲ ಭುಜದ ತೋಳಿಗೆ ಗುದ್ದಿದ ಗಾಯವಾಗಿದ್ದು ಅಯಾನ್ ರವರಿಗೆ ಬಲ ತೊಡೆಗೆ ತರಚಿದ ಗಾಯವಾಗಿದ್ದು ರಿಕ್ಷಾ ಚಾಲಕ ಮಹಮ್ಮದ್ ಹನೀಫ್ ರವರಿಗೆ ತಲೆಯ ಬಲ ಭಾಗಕ್ಕೆ ಗುದ್ದಿದ ಗಾಯವಾಗಿದ್ದು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಫಿರ್ಯಾದಿದಾರರು ಮತ್ತು ತಮ್ಮನ ಹೆಂಡತಿ ಬಿಫಾತುಮ್ಮ ರವರು ಚಿಕಿತ್ಸೆ ಬಗ್ಗೆ ಒಳರೋಗಿಯಾಗಿ ದಾಖಲಾಗಿದ್ದು ಅಯಾನ್ ಮತ್ತು ಚಾಲಕ ಮಹಮ್ಮದ್ ಹನೀಫ್ ರವರು ಹೊರ ರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿದ್ದು. ಈ ಬಗ್ಗೆ ಬಂಟ್ವಾಳ ಸಂಚಾರ ಅ.ಕ್ರ 97/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 1

ಸುಬ್ರಹ್ಮಣ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಪುತ್ತು ಸಾಹೇಬ್  ಪ್ರಾಯ: 60 ವರ್ಷ, ತಂದೆ:ದಿ|| ಬಾಬು ಸಾಹೇಬ್ ವಾಸ: ನೆಲ್ಲಿಕಟ್ಟೆ  ಮನೆ, ಐವತ್ತೋಕ್ಲು  ಗ್ರಾಮ ಎಂಬವರ ದೂರಿನಂತೆ, ಸುಳ್ಯ  ತಾಲೂಕು   ಐವತ್ತೋಕ್ಲು ಗ್ರಾಮದ ಪಂಜ ಪೇಟೆಯಲ್ಲಿ ಶೂ ಬಜಾರ್ ಅಂಗಡಿಯನ್ನು ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದು. ಪಿರ್ಯಾದುದಾರರು ದಿನಾಂಕ:30-08-2022 ರಂದು ಎಂದಿನಂತೆ  ಅಂಗಡಿ ವ್ಯಾಪಾರಕ್ಕಾಗಿ ಅವರ ಬಾಬ್ತು ಸುಜುಕಿ ಆಕ್ಸಸ್-125  ಕಂಪನಿಯ ಮೋಟಾರು ಸೈಕಲ್ ನಂಬ್ರ ಕೆಎ 21 ವೈ 3354 ನೇದರಲ್ಲಿ ಬಂದಿದ್ದು ಮೋಟಾರ್ ಸೈಕಲ್ ನ್ನು ಅವರ ಅಂಗಡಿ ಬಳಿ ನಿಲ್ಲಿಸಿ ಅಂಗಡಿ ಒಳಗೆ ವ್ಯಾಪಾರಕ್ಕಾಗಿ ಹೋಗಿರುತ್ತಾರೆ. ಪಿರ್ಯಾದುದಾರರು ಸಂಜೆ 06:00 ಗಂಟೆಗೆ ಅಂಗಡಿ ವ್ಯಾಪಾರ ಮುಗಿಸಿಕೊಂಡು ಮನೆಗೆ ಹೊರಡಲು ಸ್ಕೂಟಿ ನಿಲ್ಲಿಸಿದಲ್ಲಿಗೆ ಬಂದು ನೋಡಿದಾಗ ಸದ್ರಿ ಮೋಟಾರು ಸ್ಕೂಟಿ ನಂಬ್ರ ಕೆಎ 21 ವೈ 3354 ನೇದು ಕಾಣೆಯಾಗಿರುತ್ತದೆ. ಸುಜುಕಿ  ಸ್ಕೂಟಿಯನ್ನು ಪಂಜದಲ್ಲಿ ಎಲ್ಲಾ ಕಡೆ ಹುಡುಕಾಡಿದರು  ಈ ತನಕ ಮೋಟಾರ್ ಸ್ಕೂಟಿ ಪತ್ತೆ ಆಗಿರುವುದಿಲ್ಲ,  ಸದ್ರಿ ಸ್ಕೂಟಿಯನ್ನು ಸಮಯ ಸುಮಾರು ಮದ್ಯಾಹ್ನ 01:00 ಗಂಟೆಯಿಂದ ಸಂಜೆ ಸುಮಾರು 06:00 ಗಂಟೆಯ ಮದ್ಯೆ ಯಾರೋ ಕಳ್ಳರು  ಸ್ಕೂಟಿಯನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್‌ ಠಾಣಾ ಅ.ಕ್ರ : 85/2022 ಕಲಂ-379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 31-08-2022 12:16 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080