Feedback / Suggestions

ಕಳವು ಪ್ರಕರಣ: 2

ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ತಿರುಮಲೇಶ್ವರ ಭಟ್ ಪ್ರಾಯ 63 ತಂದೆ:ದಿ:ನಾರಾಯಣ ಭಟ್ ವಾಸ: ಕೊಂಕೋಡಿ  ಮನೆ, ಇಡ್ಕಿದು  ಗ್ರಾಮ ಮತ್ತು ಅಂಚೆ ಬಂಟ್ವಾಳ ತಾಲೂಕು  ಎಂಬವರ ದೂರಿನಂತೆ ದಿನಾಂಕ:17.01.2022 ರಂದು ಪಿರ್ಯಾಧಿದಾರರ ಬಾಬ್ತು ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಕೊಂಕೋಡಿ ಎಂಬಲ್ಲಿರುವ ತೋಟದಿಂದ ಹಣ್ಣು ಅಡಿಕೆಯನ್ನು ಹೆಕ್ಕಿ ಮನೆಗೆ ಕೊಂಡು ಹೋಗುವರೇ ಒಂದು ಚೀಲದಲ್ಲಿ ಸುಮಾರು 1,000 ಅಡಿಕೆಯನ್ನು ಇಟ್ಟಿದ್ದು. ಸಂಜೆ ಸುಮಾರು  5.45 ಗಂಟೆಗೆ ಪಿರ್ಯಾಧಿದಾರರು ತನ್ನ ತೋಟದ ಬಳಿ ಹೋಗಿ ಸದ್ರಿ  ಹಣ್ಣು ಅಡಿಕೆಯನ್ನು ಮನೆಗೆ ತೆಗೆದುಕೊಂಡು ಬರುವರೇ ನೋಡಲಾಗಿ ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಕೋಲ್ಪೆಯ  ದಿ. ಕುಂಡ ನಾಯ್ಕರ ಮಗ ಮೋಹನ ಎಂಬವನು ಪಿರ್ಯಾಧಿದಾರರು ತುಂಬಿಸಿ ಇಟ್ಟಿದ್ದ ಗೋಣಿ ಚೀಲದಿಂದ ಸುಮಾರು 500 ಹಣ್ಣು ಅಡಿಕೆಯನ್ನು ಬೇರೆ ಗೋಣಿ ಚೀಲಕ್ಕೆ ತುಂಬಿಸಿ ಕೊಂಡು ಹೋಗುವ ಸಮಯ ಪಿರ್ಯಾಧಿದಾರರು ಬೊಬ್ಬೆ ಹೊಡೆದರೂ ಆತನು ಕೇಳದೆ ಹಣ್ಣು ಅಡಿಕೆಯನ್ನು ಕೊಂಡು ಹೋಗಿರುತ್ತಾನೆ. ಆ ಸಮಯ ಆಸುಪಾಸಿನವರು ಬಂದು ನೋಡಿದಾಗ ಪಿರ್ಯಾಧಿದಾರರು ಹಣ್ಣು ಅಡಿಕೆ  ತುಂಬಿಸಿದ ಗೋಣಿ ಚೀಲದಲ್ಲಿ ಸುಮಾರು 500 ಹಣ್ಣು ಅಡಿಕೆ ಇದ್ದು  ಉಳಿದ ಹಣ್ಣು ಅಡಿಕೆಯನ್ನು ಮೋಹನ ನಾಯ್ಕ ಕಳವು ಮಾಡಿಕೊಂಡು ಹೋಗಿರುತ್ತಾನೆ. ಕಳುವಾದ ಹಣ್ಣು  ಅಡಿಕೆಯ ಅಂದಾಜು ಮೌಲ್ಯ 2000/- ಆಗಬಹುದು. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 13/2022  ಕಲಂ: 379 ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಧರ ನಾಯರಿ  ಪ್ರಾಯ: 34 ವರ್ಷ ತಂದೆ: ನೀಲಕಂಠ ನಾಯರಿ  ವಾಸ; ಶ್ರೀ ಮಾಸ್ತಿ ಕೃಪಾ ಮನೆ ಪಡು ಮನೆ ಕಿರಿಮಂಜೇಶ್ವರ ಗ್ರಾಮ ಬೈಂದೂರು ತಾಲೂಕು ಉಡುಪಿ ಜಿಲ್ಲೆ  ಎಂಬವರ ದೂರಿನಂತೆ ಪಿರ್ಯಾದಿದಾರರು ಹಾಗೂ ಅವರ ಪತ್ನಿ ಪೂರ್ಣಿಮಾ ಮತ್ತು ಸಂಬಂಧಿಕರಾದ ಗಂಗಾಧರವರೊಂದಿಗೆ ದಿನಾಂಕ: 17-01-2022 ರಂದು ರಾತ್ರಿ 8.45 ಗಂಟೆಯ ಸಮಯಕ್ಕೆ ಬೆಂಗಳೂರಿನಿಂದ ಬಸ್ಸಿನಲ್ಲಿ ಹೊರಟು 4.00 ಗಂಟೆಯ ಸಮಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತಲುಪಿ 4.45 ಗಂಟೆಯ ಸಮಯಕ್ಕೆ ಆಟೋ ರಿಕ್ಷಾದಲ್ಲಿ ನೇತ್ರಾವತಿ ಹೊಳೆಗೆ ಸ್ನಾನಕ್ಕೆ ಹೋದ ಸಮಯ ಚಿನ್ನಾಭರಣ ಹಾಗೂ ಮೊಬೈಲ್ ಗಳನ್ನು ಪಿರ್ಯಾದಿದಾರರ ಪತ್ನಿಯ ವ್ಯಾನಿಟಿ ಬ್ಯಾಗ್ ನಲ್ಲಿರಿಸಿ ಸ್ನಾನಕ್ಕೆ ಹೋಗಿ ವಾಪಾಸ್ಸು 5.00 ಗಂಟೆಯ ಸಮಯಕ್ಕೆ ಬಂದು ನೋಡಿದಾಗ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು , ಕಳವಾದ ಚಿನ್ನಾಭರಣಗಳ ಒಟ್ಟು ಅಂದಾಜು ಮೌಲ್ಯ 476000/- ಹಾಗೂ ಕಳವಾದ ಮೊಬೈಲ್ ನ ಅಂದಾಜು ಮೌಲ್ಯ ರೂ 4.000/- ಆಗಬಹುದು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ 08/2022  ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಅಸ್ವಾಭಾವಿಕ ಮರಣ ಪ್ರಕರಣ: 1

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶರ್ಮಿಳಾ ಬುರಾಲು ಮನೆ,ಕೊಯಿಲಾ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದು  ಪಿರ್ಯಾದುದಾರರು ಸುಮಾರು 15 ವರ್ಷಗಳ ಹಿಂದೆ ಮದುವೆ  ಆಗಿದ್ದು  ಇವರಿಗೆ ಮಕ್ಕಳಾಗಿರುವುದಿಲ್ಲ. ಇದರಿಂದ ಪಿರ್ಯಾದುದಾರರ  ಗಂಡ ವಿಪರೀತ ಮದ್ಯ ಸೇವನೆ ಮಾಡುತ್ತಿದ್ದರು. ಅಂತೆಯೆ ದಿನಾಂಕ  17.01.2022 ರಂದು ಸಾಯಂಕಾಲ ಪಿರ್ಯಾದುದಾರರ ಗಂಡ ಮೋಹನ ಪೂಜಾರಿ ರವರು ಕೂಲಿ ಕೆಲಸ ಮುಗಿಸಿ ಮನೆಗೆ  ಬಂದಿದ್ದು ಸಮಯ ಸುಮಾರು 09.00 ಗಂಟೆಗೆ  ಪಿರ್ಯಾದುದಾರರು  ಅಡುಗೆ ಕೊಣೆಯಲ್ಲಿ ಕೆಲಸ ಮಾಡುತ್ತಿದ್ದು  ಮೋಹನ ಪೂಜಾರಿಯವರು  ಯಾರಿಗೂ ಹೇಳದೆ ಮನೆಯಿಂದ ಹೋಗಿರುತ್ತಾರೆ. ಮರುದಿನ  ಮೋಹನ ಪೂಜಾರಿಯವರು ಬರದೆ ಇದ್ದು ಪಿರ್ಯಾದುಧಾರರು  ಮನೆಯ ಹತ್ತಿರದ ಸಂಬಂದಿ ಸೀತಾ ಪೂಜಾರಿ, ಸನತ್ ಪೂಜಾರಿ ಹಾಗೂ ಇತರರಿಗೆ ವಿಚಾರವನ್ನು ತಿಳಿಸಿದ್ದು  ಅವರು ಬಂದು ಹುಡುಕಾಡಿದಲ್ಲಿ ದಿನಾಂಕ 18.1.2022 ರಂದು  ಸುಮಾರು 08.30 ಗಂಟೆಗೆ  ಪಿರ್ಯಾದುದಾರರ ಮನೆಯಿಂದ  ಸುಮಾರು 100 ಮೀಟರ್ ದೂರದಲ್ಲಿರುವ ಆಲ್ಪೋನ್ಸ್ ರವರ ರಬ್ಬರ್ ತೋಟದ ಮದ್ಯದಲ್ಲಿರುವ  ಬಾವಿಯ ಪಕ್ಕ ಚಪ್ಪಲಿ, ಮೊಬೈಲ್ ಮತ್ತು ಟಾರ್ಚ್  ಇದ್ದು  ಅನುಮಾನಗೊಂಡು ಬಾವಿಯಲ್ಲಿ ಹುಡುಕಾಡಿದಲ್ಲಿ ಮೃತ ದೇಹ ಕಂಡು ಬಂದಿರುತ್ತದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಯುಡಿಆರ್ 05-2022 ಕಲಂ 174 ಸಿ ಆರ್ ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 19-01-2022 10:33 AM Updated By: Dakshina Kannada District Police


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : DAKSHINA KANNADA DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080